Indian Railways: ರೈಲಿನಲ್ಲಿ ಪ್ರಯಾಣಿಸುವಾಗ ಆತಂಕ ಇಲ್ಲದಂತೆ ಮಲಗಲು ಹೊಸ ಸೇವೆ ಆರಂಭ

| Updated By: Srinivas Mata

Updated on: Jun 03, 2022 | 7:09 PM

ಪ್ರಯಾಣಿಕರು ಇಳಿದುಕೊಳ್ಳಬೇಕಾದ ಗಮ್ಯ ಬರುವ ಮೊದಲಿಗೆ ಎಚ್ಚರಿಸುವಂಥ ಗ್ರಾಹಕ ಸೇವೆಯೊಂದನ್ನು ರೈಲ್ವೆಯಲ್ಲಿ ಆರಂಭಿಸಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Indian Railways: ರೈಲಿನಲ್ಲಿ ಪ್ರಯಾಣಿಸುವಾಗ ಆತಂಕ ಇಲ್ಲದಂತೆ ಮಲಗಲು ಹೊಸ ಸೇವೆ ಆರಂಭ
ಸಾಂದರ್ಭಿಕ ಚಿತ್ರ
Follow us on

ಪ್ರಯಾಣಿಕರು ಈಗ ಎಲ್ಲಿ ತಾವಿಳಿಯಬೇಕಾದ ನಿಲ್ದಾಣವನ್ನು ತಪ್ಪಿಸಿಕೊಳ್ಳಬೇಕಾಗುತ್ತದೋ ಎಂಬ ಆತಂಕವಿಲ್ಲದೆ ರೈಲಿನಲ್ಲಿ ಮಲಗಲು ಸಾಧ್ಯ ಆಗುತ್ತದೆ. ದೂರದ ಪ್ರಯಾಣಿಕರಿಗೆ ಎಚ್ಚರಿಸುವ ಅಲರ್ಟ್ ಸೌಲಭ್ಯವನ್ನು ರೈಲ್ವೆ (Indian Railways) ಆರಂಭಿಸಿದೆ. ಇದರ ಅಡಿಯಲ್ಲಿ, ತಲುಪಬೇಕಾದ ನಿಲ್ದಾಣ ಆಗಮನದ 20 ನಿಮಿಷಗಳ ಮೊದಲು ಪ್ರಯಾಣಿಕರಿಗೆ ಅದರ ಬಗ್ಗೆ ತಿಳಿಸಲಾಗುತ್ತದೆ. ತನ್ನ ಪ್ರಯಾಣಿಕರ ಸೇವೆಗಳಿಗೆ ಮತ್ತೊಂದು ಸೇರ್ಪಡೆಯಾಗಿ, ಭಾರತೀಯ ರೈಲ್ವೆಯು ತಲುಪಬೇಕಾದ ಸ್ಥಳದ ಅಲರ್ಟ್ ವೇಕಪ್ ಅಲಾರ್ಮ್ ಸೌಲಭ್ಯವನ್ನು ಪರಿಚಯಿಸಿದೆ. ಅನೇಕ ಬಾರಿ ಪ್ರಯಾಣದ ಸಮಯದಲ್ಲಿ, ನಿದ್ರೆ ಅಥವಾ ಇನ್ನಾವುದೇ ಕಾರಣದಿಂದ ಪ್ರಯಾಣಿಕರು ಇಳಿಯಬೇಕಾದ ನಿಲ್ದಾಣದಿಂದ ಮುಂದೆ ಹೋಗಿಬಿಡುತ್ತಾರೆ. ಒಂದೋ ಹಿಂದೆ ಉಳಿಯುತ್ತದೆ ಅಥವಾ ತಪ್ಪಿಹೋಗುತ್ತದೆ. ರಾತ್ರಿ ಪ್ರಯಾಣದಲ್ಲಿ ಇದು ಹೆಚ್ಚು ಸಂಭವಿಸುತ್ತದೆ. ಆದ್ದರಿಂದ ರೈಲ್ವೆ ಇಲಾಖೆಯು ಇದೀಗ ಡೆಸ್ಟಿನೇಶನ್ ಅಲರ್ಟ್ ವೇಕಪ್ ಅಲಾರ್ಮ್ ಸೌಲಭ್ಯವನ್ನು ಪ್ರಾರಂಭಿಸಿದೆ.

ವಾಸ್ತವವಾಗಿ ಐವಿಆರ್​ಎಸ್ ಮೂಲಕ ಸಂಖ್ಯೆ 139ರ ವಿಚಾರಣೆ ಸೇವೆಯಲ್ಲಿ ರೈಲ್ವೇ ಪರವಾಗಿ ಎಚ್ಚರಿಕೆ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಯಾಣಿಕರು ವಿಚಾರಣಾ ವ್ಯವಸ್ಥೆ ಸಂಖ್ಯೆ 139ರಲ್ಲಿ ಎಚ್ಚರಿಕೆಯ ಸೌಲಭ್ಯವನ್ನು ಕೇಳಬಹುದು. ಈ ಸೌಲಭ್ಯವನ್ನು ತೆಗೆದುಕೊಳ್ಳುವ ಪ್ರಯಾಣಿಕರಿಗೆ 20 ನಿಮಿಷಗಳ ಮುಂಚಿತವಾಗಿ ಕರೆ ಮಾಡಲಾಗುತ್ತದೆ ಮತ್ತು ಅವರ ಗಮ್ಯಸ್ಥಾನದ ನಿಲ್ದಾಣದ ಬಗ್ಗೆ ತಿಳಿಸಲಾಗುತ್ತದೆ.

ಇದು ಗಮ್ಯಸ್ಥಾನದ ಎಚ್ಚರಿಕೆ ಪ್ರಕ್ರಿಯೆ

ರೈಲ್ವೆಯ ಪ್ರಕಾರ, ಇದಕ್ಕಾಗಿ ಪ್ರಯಾಣಿಕರು ಮೊದಲು IRCTC ಪಾಲುದಾರ ಉದ್ಯಮ IRCTC ಮೊಬೈಲ್ ಸಂಖ್ಯೆ 139ಗೆ ಕರೆ ಅಥವಾ ಸಂದೇಶವನ್ನು ಕಳುಹಿಸಬೇಕಾಗುತ್ತದೆ. ಕರೆ ಸ್ವೀಕರಿಸಿದಾಗ ಭಾಷೆಯನ್ನು ಆಯ್ಕೆ ಮಾಡಬೇಕು. ಅದರ ನಂತರ, ಗಮ್ಯಸ್ಥಾನದ ಎಚ್ಚರಿಕೆಗಾಗಿ ಮೊದಲು 7 ಸಂಖ್ಯೆಗಳನ್ನು ಮತ್ತು ನಂತರ 2 ಸಂಖ್ಯೆಗಳನ್ನು ಒತ್ತಬೇಕಾಗುತ್ತದೆ. ಇದರ ನಂತರ, ಪ್ರಯಾಣಿಕರಿಂದ 10-ಅಂಕಿಯ PNR ಸಂಖ್ಯೆಯನ್ನು ಕೇಳಲಾಗುತ್ತದೆ. ಆ ಮೇಲೆ PNR ಸಂಖ್ಯೆಯನ್ನು ಡಯಲ್ ಮಾಡಿದ ನಂತರ, ಖಚಿತಪಡಿಸಲು 1 ಅನ್ನು ಡಯಲ್ ಮಾಡಬೇಕು. ಈ ಪ್ರಕ್ರಿಯೆಯ ನಂತರ, ಸಿಸ್ಟಂ PNR ಸಂಖ್ಯೆಯನ್ನು ಪರಿಶೀಲಿಸುತ್ತದೆ ಮತ್ತು ಗಮ್ಯಸ್ಥಾನದ ನಿಲ್ದಾಣಕ್ಕಾಗಿ ಎಚ್ಚರಗೊಳ್ಳುವ ಎಚ್ಚರಿಕೆಯನ್ನು ನೀಡುತ್ತದೆ. ಇದರ ನಂತರ, ದೃಢೀಕರಣದ ಎಸ್ಸೆಮ್ಮೆಸ್ ಮೊಬೈಲ್‌ಗೆ ಬರುತ್ತದೆ.

ಇಷ್ಟು ಶುಲ್ಕ ತೆರಬೇಕು

ಇದರ ಅಡಿಯಲ್ಲಿ ಗಮ್ಯಸ್ಥಾನದ ನಿಲ್ದಾಣದ ಆಗಮನಕ್ಕೆ 20 ನಿಮಿಷಗಳ ಮೊದಲು ಮೊಬೈಲ್‌ನಲ್ಲಿ ಎಚ್ಚರಿಕೆಯ ಕರೆ ಬರುತ್ತದೆ. ಈ ಸೌಲಭ್ಯವನ್ನು ಪಡೆಯಲು, ಪ್ರಯಾಣಿಕರಿಗೆ ಪ್ರತಿ ಎಚ್ಚರಿಕೆಗೆ 3 ರೂಪಾಯಿಗಳ ಎಸ್ಸೆಮ್ಮೆಸ್ ಶುಲ್ಕವನ್ನು ವಿಧಿಸಲಾಗುತ್ತದೆ. ಸದ್ಯಕ್ಕೆ, ಐಆರ್​ಸಿಟಿಸಿ ಈ ಸೌಲಭ್ಯವನ್ನು ರಾತ್ರಿ 11 ರಿಂದ ಬೆಳಗ್ಗೆ 7 ರವರೆಗೆ ಲಭ್ಯವಾಗುವಂತೆ ಮಾಡಿದೆ ಎಂಬುದು ಗಮನಿಸಬೇಕಾದ ಸಂಗತಿ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: ಭಾರತೀಯ ರೈಲ್ವೆಯಿಂದ ಜೂನ್ 21ಕ್ಕೆ ಶ್ರೀರಾಮಾಯಣ ಯಾತ್ರಾ ರೈಲು ಪ್ರಾರಂಭ

Published On - 7:09 pm, Fri, 3 June 22