AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deceased Person Loan: ಮೃತ ವ್ಯಕ್ತಿಯ ಸಾಲ ತೀರಿಸುವ ಜವಾಬ್ದಾರಿ ಯಾರದು? ಇಲ್ಲಿದೆ ವಿವಿಧ ಸನ್ನಿವೇಶದ ವಿವರಣೆ

ಸಾಲ ಪಡೆದ ವ್ಯಕ್ತಿ ಮೃತಪಟ್ಟಲ್ಲಿ ಅದರ ಮರುಪಾವತಿಗೆ ಯಾರು ಜವಾಬ್ದಾರರು ಎಂಬ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬ ವಿವರಣೆ ಇಲ್ಲಿದೆ.

Deceased Person Loan: ಮೃತ ವ್ಯಕ್ತಿಯ ಸಾಲ ತೀರಿಸುವ ಜವಾಬ್ದಾರಿ ಯಾರದು? ಇಲ್ಲಿದೆ ವಿವಿಧ ಸನ್ನಿವೇಶದ ವಿವರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 10, 2022 | 7:54 AM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಜೂನ್ 5, 2022ರಂದು ಭೋಪಾಲ್‌ನ 17 ವರ್ಷದ ವನಿಶಾ ಪಾಠಕ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದಾರೆ. ಯಾರು ಈ ಪಾಠಕ್​ ಅಂದರೆ, ಆಕೆಯ ತಂದೆ ಮೃತಪಟ್ಟ ನಂತರ ಅವರ ಗೃಹ ಸಾಲವನ್ನು (Home Loan) ಪಾವತಿಸುವಂತೆ ಪತ್ರಗಳನ್ನು ಕಳುಹಿಸಲಾಗುತ್ತಿದೆ. ನಿರ್ಮಲಾ ಸೀತಾರಾಮನ್ ಅವರು ಟ್ವಿಟ್ಟರ್‌ನಲ್ಲಿ, ಹಣಕಾಸು ವ್ಯವಹಾರಗಳ ಇಲಾಖೆ ಮತ್ತು ಎಲ್ಐಸಿ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ ಮತ್ತು ಪರಿಸ್ಥಿತಿಯನ್ನು ತನಿಖೆ ಮಾಡುವಂತೆ ವಿನಂತಿಸಿದ್ದಾರೆ. ವನಿಶಾರ ತಂದೆ ಜೀತೇಂದ್ರ ಪಾಠಕ್ ಎಂಬ ಎಲ್‌ಐಸಿ ಏಜೆಂಟ್ ತಮ್ಮ ಕಚೇರಿಯಿಂದ ಸಾಲ ಪಡೆದಿದ್ದರು. ತನ್ನ ತಂದೆ ತೀರಿಕೊಂಡ ನಂತರ, ವನಿಶಾಗೆ ತನ್ನ ತಂದೆಯ ಹೆಸರಿನಲ್ಲಿ ಲೀಗಲ್ ನೋಟಿಸ್‌ಗಳು ಬರುವುದಕ್ಕೆ ಪ್ರಾರಂಭಿಸಿವೆ. ತಂದೆಯ ಸಾಲವನ್ನು ಮರುಪಾವತಿಸಬೇಕೆಂದು ಒತ್ತಾಯಿಸಲಾಗುತ್ತಿದೆ.

ವನಿಶಾ ಅಪ್ರಾಪ್ತ ವಯಸ್ಸಿನವಳು. ಆಕೆಯ ಹಣ ಮತ್ತು ಮಾಸಿಕ ಕಮಿಷನ್‌ಗಳನ್ನು ಎಲ್‌ಐಸಿ ಸ್ಥಗಿತಗೊಳಿಸಿದೆ. ತನಗೆ ಕೇವಲ 17 ವರ್ಷವಾಗಿರುವುದರಿಂದ ಸಾಲವನ್ನು ಮರುಪಾವತಿಸಲು ಹೆಚ್ಚಿನ ಸಮಯ ನೀಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ ಎಂದು ವನಿಶಾ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾಳೆ. ಇದು ಅಪ್ರಾಪ್ತ ವಯಸ್ಕಳ ಪ್ರಕರಣವಾಗಿದ್ದರೂ ಒಬ್ಬ ವ್ಯಕ್ತಿ ಮರಣಿಸಿದ ನಂತರ ಅವರ ಸಾಲ ಏನಾಗುತ್ತದೆ, ಹಾಗೆಯೇ ಸಾಲಗಾರ ಸಾಲದ ಬಾಕಿಯೊಂದಿಗೆ ಮರಣ ಹೊಂದಿದರೆ ಕಾನೂನು ಉತ್ತರಾಧಿಕಾರಿಗಳ ಜವಾಬ್ದಾರಿಗಳು ಇಲ್ಲಿವೆ.

ಸಹ-ಅರ್ಜಿದಾರರನ್ನು ಹೊಂದಿರುವಾಗ

ಇಬ್ಬರು ಅಥವಾ ಹೆಚ್ಚಿನ ಸಾಲಗಾರರು ಜಂಟಿಯಾಗಿ ಸಾಲವನ್ನು ತೆಗೆದುಕೊಂಡರೆ ಸಾಲವನ್ನು ಮರುಪಾವತಿ ಮಾಡುವ ಹೊಣೆಗಾರಿಕೆಯನ್ನು ಸಹ-ಸಾಲಗಾರರಿಗೆ ವರ್ಗಾಯಿಸಲಾಗುತ್ತದೆ. ಆದರೆ ಒಬ್ಬರೇ ಸಾಲಗಾರ ಸಾಲ ಪಡೆದಾಗ ಅದರ ಪರಿಣಾಮಗಳನ್ನು ಸಾಲದ ಸ್ವರೂಪದಿಂದ ನಿರ್ಧರಿಸಲಾಗುತ್ತದೆ, ಅದು ಸುರಕ್ಷಿತ (secured) ಅಥವಾ ಅಸುರಕ್ಷಿತ (unsecured) ಸಾಲವೋ ಎಂಬುದರ ಮೇಲೆ ನಿರ್ಧಾರ ಆಗುತ್ತದೆ. ಸಾಲಗಾರರು ಇನ್ನೊಬ್ಬ ಸಹ-ಅರ್ಜಿದಾರನೊಂದಿಗೆ ಸಾಲವನ್ನು ತೆಗೆದುಕೊಂಡರೆ, ಸಾಲವನ್ನು ಮರುಪಾವತಿಸಲು ಪ್ರಾಥಮಿಕ ಅರ್ಜಿದಾರನ ಬಾಧ್ಯತೆಯನ್ನು ಉಳಿದಿರುವ ಸಹ-ಅರ್ಜಿದಾರ ಅಥವಾ ಜಂಟಿ ಸಾಲಗಾರರಿಗೆ ವರ್ಗಾಯಿಸಲಾಗುತ್ತದೆ.

ಅಸುರಕ್ಷಿತ ಸಾಲದ ಸಂದರ್ಭದಲ್ಲಿ ಸಾಲ

ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಾಲದಂತಹ ಅಸುರಕ್ಷಿತ ಸಾಲವನ್ನು ಪಾವತಿಸಲು ಸಾಲದಾತರು ಕಾನೂನು ಉತ್ತರಾಧಿಕಾರಿಗಳನ್ನು ಒತ್ತಾಯಿಸಲು ಸಾಧ್ಯವಿಲ್ಲ. ಅಸುರಕ್ಷಿತ ಸಾಲದೊಂದಿಗೆ ಯಾವುದೇ ಆಧಾರವಿಲ್ಲದ ಕಾರಣ, ಬಿಲ್ ಪಾವತಿಸಲು ಮೃತರ ಯಾವುದೇ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುವುದಿಲ್ಲ. ಅಲ್ಲದೆ, ಅಸುರಕ್ಷಿತ ಸಾಲವನ್ನು ಮರುಪಾವತಿ ಮಾಡುವ ಮೊದಲು ಸಾಲಗಾರರು ಮರಣ ಹೊಂದಿದರೆ ಸಾಲದಾತರು ಮೃತರ ಉಳಿದಿರುವ ಪಾಲುದಾರ ಅಥವಾ ಕಾನೂನು ಉತ್ತರಾಧಿಕಾರಿಯಿಂದ ಪಾವತಿಸದ ಸಾಲಗಳನ್ನು ಮರುಪಡೆಯಲು ಸಾಧ್ಯವಿಲ್ಲ.

ಸುರಕ್ಷಿತ ಸಾಲದ ಸಂದರ್ಭದಲ್ಲಿ 

ಸುರಕ್ಷಿತ ಸಾಲದ ವಿಚಾರಕ್ಕೆ ಬಂದಾಗ, ಸಾಲದಾತರು ಈಗಾಗಲೇ ಆಧಾರವನ್ನು ಹೊಂದಿದ್ದರೆ ಸಾಲದಾತರ ಸಾಲಗಳನ್ನು ಪಾವತಿಸುವ ನಿರ್ಧಾರವನ್ನು ಕಾನೂನು ಉತ್ತರಾಧಿಕಾರಿಗಳು ಮಾಡುತ್ತಾರೆ. ಅವರು ಆಸ್ತಿಯನ್ನು ಇಟ್ಟುಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ.

ಸಾಲಗಾರರು ಒಬ್ಬಂಟಿಯಾಗಿರುವಾಗ ಮತ್ತು ಬಾಕಿ ಉಳಿದಿರುವ ಸುರಕ್ಷಿತ ಸಾಲದೊಂದಿಗೆ ಮರಣ ಹೊಂದಿದಾಗ, ಸುರಕ್ಷಿತ ಸಾಲದಾತರು ಸಾಲಗಾರರ ಕಾನೂನು ಉತ್ತರಾಧಿಕಾರಿಗಳಿಂದ ಮರುಪಾವತಿಯನ್ನು ಪಡೆಯಬಹುದು. ಆದರೆ ಉತ್ತರಾಧಿಕಾರಿಗಳನ್ನು ಹಾಗೆ ಮಾಡಲು ಒತ್ತಾಯಿಸಲಾಗುವುದಿಲ್ಲ. ಸಾಲದ ಬಾಧ್ಯತೆಯನ್ನು ಗೌರವಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ನಿರ್ಧರಿಸುವುದು ಕಾನೂನು ಉತ್ತರಾಧಿಕಾರಿಗಳಿಗೆ ಬಿಟ್ಟದ್ದು. ಪಾವತಿಸದಿದ್ದಲ್ಲಿ ಸಾಲದಾತರು ಅಡಮಾನದ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಸಾಲವನ್ನು ಮರುಪಡೆಯಲು ಸಾಧ್ಯವಾಗುತ್ತದೆ. ಸಹ-ಅರ್ಜಿದಾರ/ಕಾನೂನು ಉತ್ತರಾಧಿಕಾರಿಯು ಸಾಲವನ್ನು ಮರುಪಾವತಿಸಲು ಜವಾಬ್ದಾರರಾಗಿರುತ್ತಾರೆ; ಅವರು ಹಾಗೆ ಮಾಡಲು ಸಾಧ್ಯವಾಗದಿದ್ದರೆ ಆಸ್ತಿಯನ್ನು ಬ್ಯಾಂಕ್ ವಶಪಡಿಸಿಕೊಳ್ಳುತ್ತದೆ ಮತ್ತು ಹಣವನ್ನು ಮರುಪಾವತಿಸಲು ಹರಾಜು ಮಾಡುತ್ತದೆ.

ಸಾಲಗಾರರಿಂದ ಆಸ್ತಿಗಳನ್ನು ಪಿತ್ರಾರ್ಜಿತವಾಗಿ ಪಡೆದಾಗ

ಕಾನೂನು ಉತ್ತರಾಧಿಕಾರಿಯು ಮೃತ ಸಾಲಗಾರರಿಂದ ಆಸ್ತಿಯನ್ನು ಪಡೆದಿದ್ದರೆ ಪರಿಸ್ಥಿತಿ ಬದಲಾಗುತ್ತದೆ. ಮತ್ತೊಂದೆಡೆ, ಕಾನೂನು ಉತ್ತರಾಧಿಕಾರಿಯ ಕರ್ತವ್ಯಗಳು ಸೀಮಿತವಾಗಿರುತ್ತದೆ. ಕಾನೂನು ಉತ್ತರಾಧಿಕಾರಿಗಳು ಮೃತ ವ್ಯಕ್ತಿಯಿಂದ ಯಾವುದೇ ಆಸ್ತಿಯನ್ನು ಪಡೆದರೆ ಅವರು ಸಾಲ ಮರುಪಾವತಿಸಲು ಬಾಧ್ಯತೆ ಹೊಂದಿರುತ್ತಾರೆ.

ಕಾನೂನು ಉತ್ತರಾಧಿಕಾರಿಗಳು ಸಾಲಗಾರರಿಂದ ಯಾವುದೇ ಸ್ವತ್ತುಗಳನ್ನು ಸ್ವೀಕರಿಸುವ ಮಟ್ಟಕ್ಕೆ ಮಾತ್ರ ಜವಾಬ್ದಾರರಾಗಿರುತ್ತಾರೆ. ಉದಾಹರಣೆಗೆ, ಕಾನೂನುಬದ್ಧ ಉತ್ತರಾಧಿಕಾರಿಯು 1 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆದರೆ ಕಾನೂನುಬದ್ಧ ಉತ್ತರಾಧಿಕಾರಿಯು ಮೃತರು ಪಡೆದ ಸಾಲಕ್ಕೆ ಸಾಲದಾತರಿಗೆ ನೀಡಬೇಕಾದ್ದರಲ್ಲಿ ಆ ಮೊತ್ತಕ್ಕೆ ಮಾತ್ರ ಹೊಣೆಗಾರನಾಗಿರುತ್ತಾರೆ ಹೊರತು, ಹೆಚ್ಚು ಅಲ್ಲ. ಸಾಲ ಬಾಕಿ ಇರುವ ವ್ಯಕ್ತಿಯಿಂದ ಆಸ್ತಿಯನ್ನು ಆನುವಂಶಿಕವಾಗಿ ಪಡೆದರೆ, ನೀವು ಮೌಲ್ಯಮಾಪನ ಮಾಡಬೇಕು, ಆಸ್ತಿಯ ಮೌಲ್ಯ ಮತ್ತು ಸಾಲವನ್ನು ಮರುಪಾವತಿ ಮಾಡುವುದು ಹೇಗೆ ಎಂದು ನಿರ್ಧರಿಸಿ.

ವಿಮಾ ಪಾಲಿಸಿಯೊಂದಿಗೆ ಸಾಲ

ಸುರಕ್ಷಿತ ಸಾಲವು ಸಾಮಾನ್ಯವಾಗಿ ವಿಮೆಯಿಂದ ಬಂದಿರುತ್ತದೆ, ಇದು ಸಾಲದ ಮರುಪಾವತಿಗೆ ಸಹಾಯ ಮಾಡುತ್ತದೆ. ಹೋಮ್ ಲೋನ್ ಸಾಲದಾರರು ಸಾಮಾನ್ಯವಾಗಿ ವಿಮಾ ಪಾಲಿಸಿಯನ್ನು ಖರೀದಿಸುತ್ತಾರೆ, ಅದನ್ನು ಸಾಲದ ಬಾಕಿ ಮೊತ್ತವನ್ನು ಪಾವತಿಸಲು ಬಳಸಿಕೊಳ್ಳಬಹುದು. ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಸಾಲವನ್ನು ನೀಡಿದಾಗ ಲೋನ್ ಪ್ರೊಟೆಕ್ಟರ್ ವಿಮೆಯನ್ನು ನೀಡುತ್ತವೆ. ಸಾಲಗಾರರು ಅದನ್ನು ತೆಗೆದುಕೊಂಡಲ್ಲಿ ದುರದೃಷ್ಟವಶಾತ್ ಸಾಲಗಾರ ಸತ್ತರೆ ವಿಮಾ ಕಂಪೆನಿಯು ಉಳಿದ ಸಾಲವನ್ನು ಪಾವತಿಸುತ್ತದೆ. ಸಾಲಗಾರರು ಸಾಲ ವಿಮೆಯನ್ನು ಹೊಂದಿಲ್ಲ ಅಂತಾದರೆ ಟರ್ಮ್ ಇನ್ಷೂರೆನ್ಸ್ ಅಥವಾ ಇನ್ನೊಂದು ವಿಧದ ಜೀವ ವಿಮೆಯನ್ನು ಹೊಂದಿದ್ದರೆ, ಕುಟುಂಬ ಸದಸ್ಯರು ವಿಮಾ ಪಾಲಿಸಿಯಿಂದ ಬರುವ ಆದಾಯದೊಂದಿಗೆ ಸಾಲವನ್ನು ಮರುಪಾವತಿ ಮಾಡಬಹುದು.

ವಿಮೆ ಇಲ್ಲದ ಸಾಲ

ಯಾವುದೇ ವಿಮೆ ಇಲ್ಲದಿದ್ದರೆ ಅಡಮಾನ ಮಾಡಿದ ಆಸ್ತಿಯನ್ನು ಹಿಂತಿರುಗಿಸಲು ಬಯಸಿದರೆ ಕಾನೂನು ಉತ್ತರಾಧಿಕಾರಿಗಳು ಹಣವನ್ನು ಸ್ವತಃ ತೆರಬೇಕಾಗುತ್ತದೆ. ಕಾನೂನು ಉತ್ತರಾಧಿಕಾರಿಯು ಸುರಕ್ಷಿತ ಸಾಲವನ್ನು ಪಾವತಿಸಲು ನಿರಾಕರಿಸಿದರೆ ಮೃತರ ಆಸ್ತಿ ಅಥವಾ ಸ್ವತ್ತುಗಳನ್ನು ಲಗತ್ತಿಸುವ ಮೂಲಕ ಮತ್ತು SARFAESI ಶಾಸನದ ಅಡಿಯಲ್ಲಿ ಅಥವಾ ಸಿವಿಲ್ ನ್ಯಾಯಾಲಯ ಅಥವಾ DRT ನಿರ್ಧಾರದ ಮೂಲಕ ಹರಾಜು ಮಾಡುವುದರೊಂದಿಗೆ ಸುರಕ್ಷಿತ ಸಾಲಗಾರರು ಬಾಧ್ಯತೆಯನ್ನು ಸಂಗ್ರಹಿಸಲು ಸಂಪೂರ್ಣ ಹಕ್ಕುಗಳನ್ನು ಹೊಂದಿರುತ್ತಾರೆ.

ಕಾನೂನು ವಾರಸುದಾರರು ಏನು ಮಾಡಬೇಕು

ಪಾವತಿಗಳನ್ನು ಹೇಗೆ ಮುಂದುವರಿಸಬೇಕೆಂದು ನಿರ್ಧರಿಸುವ ಮೊದಲು ಅಡಮಾನ ಅಥವಾ ಪಿತ್ರಾರ್ಜಿತ ಆಸ್ತಿಯ ಮೌಲ್ಯದ ನಿವ್ವಳ ಲಾಭ ವಿಶ್ಲೇಷಣೆಯನ್ನು ನಡೆಸುವುದು ಕಾನೂನು ಉತ್ತರಾಧಿಕಾರಿಗಳಿಗೆ ಉತ್ತಮವಾಗಿದೆ. ಒಬ್ಬ ವ್ಯಕ್ತಿಯ ಮರಣದ ನಂತರ ಕಾನೂನುಬದ್ಧ ಉತ್ತರಾಧಿಕಾರಿಗಳು ಆ ವ್ಯಕ್ತಿಯಿಂದ ಆನುವಂಶಿಕವಾಗಿ ಪಡೆದ ಆಸ್ತಿಗಳು ಮತ್ತು ಸ್ವತ್ತುಗಳ ಸಂಪೂರ್ಣ ಮೌಲ್ಯವನ್ನು ಮತ್ತು ಆ ವ್ಯಕ್ತಿಯ ಜವಾಬ್ದಾರಿಗಳನ್ನು ನಿರ್ಣಯಿಸಬೇಕು. ಕಾನೂನು ಉತ್ತರಾಧಿಕಾರಿಗಳು ಅವರು ಪಿತ್ರಾರ್ಜಿತ ಆಸ್ತಿಗಳ ಮೌಲ್ಯಕ್ಕೆ ಸಾಲಗಾರರಿಗೆ ಜವಾಬ್ದಾರರಾಗಿರುತ್ತಾರೆ, ಅದನ್ನು ಮೃತರು ಸಾಲ ಪಡೆದ ಸಾಲದಾತರಿಗೆ ಪಾವತಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖು ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ