AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್​ಗಾಗಿ ಕೊರಿಯರ್​ ಬಾಯ್​ನನ್ನು ಹತ್ಯೆ ಮಾಡಿದ ಯುವಕ: 4 ದಿನ ಶವದ ಜತೆ ಇದ್ದು ಆರೋಪಿ ಮುಂದೆ ಮಾಡಿದ್ದೇನು? ಇಲ್ಲಿದೆ ಇಂಟ್ರೆಸ್ಟಿಂಗ್​ ಸ್ಟೋರಿ

ಐಫೋನ್ ಆಸೆಗಾಗಿ ಕೊರಿಯರ್​ ಬಾಯ್​ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ.

ಐಫೋನ್​ಗಾಗಿ ಕೊರಿಯರ್​ ಬಾಯ್​ನನ್ನು ಹತ್ಯೆ ಮಾಡಿದ ಯುವಕ: 4 ದಿನ ಶವದ ಜತೆ ಇದ್ದು ಆರೋಪಿ ಮುಂದೆ ಮಾಡಿದ್ದೇನು? ಇಲ್ಲಿದೆ ಇಂಟ್ರೆಸ್ಟಿಂಗ್​ ಸ್ಟೋರಿ
ಸಾಂದರ್ಭಿಕ ಚಿತ್ರ
TV9 Web
| Edited By: ವಿವೇಕ ಬಿರಾದಾರ|

Updated on: Feb 19, 2023 | 12:48 PM

Share

ಹಾಸನ: ಐಫೋನ್ ಆಸೆಗಾಗಿ ಕೊರಿಯರ್​ ಬಾಯ್​ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಹೇಮಂತ್ ನಾಯಕ್ (23) ಕೊಲೆಯಾದ ಕೊರಿಯರ್​ ಬಾಯ್. ಹೇಮಂತ್​ ದತ್ತ (20) ಕೊಲೆ ಮಾಡಿದ ಆರೋಪಿ. ಸದ್ಯ ಪೊಲೀಸರು ಆರೋಪಿ ಹೇಮಂತ ದತ್ತನನ್ನು ಬಂಧಿಸಿದ್ದಾರೆ.

ಕೊರಿಯರ್​ ಬಾಯ್ ಕೊಲೆಯಾಗಿದ್ದು ಹೇಗೆ?

ಮೂಲತಃ ಹಳೆಕಲ್ಲನಾಯಕನಹಳ್ಳಿ ಗ್ರಾಮದ ಆರೋಪಿ ಹೇಮಂತ್​ ದತ್ತ ಕೂಡ ಡೆಲವರಿ ಬಾಯ್ ಆಗಿದ್ದನು. ಈತನು ಫೆಬ್ರವರಿ 7 ರಂದು 46 ಸಾವಿರಕ್ಕೆ ಆನ್​​ಲೈನ್​ನಲ್ಲಿ ಸೆಕೆಂಡ್ ಹ್ಯಾಂಡ್​ ಐಫೋನ್ ಬುಕ್​ ಮಾಡಿದ್ದನು. ಈ ಹಿನ್ನೆಲೆ ಫೆ.10 ರಂದು ಲಕ್ಷ್ನಿಪುರ ಬಡಾವಣೆಯಲ್ಲಿರುವ ಹೇಮಂತ ದತ್ತ ಮೆನೆಗೆ ಐಫೋನ್​​​ ಡೆಲಿವರಿ ಮಾಡಲೆಂದು ಹೇಮಂತ್ ನಾಯಕ್ ಬಂದಿದ್ದನು. ಈ ವೇಳೆ ಹೇಮಂತ್​ ದತ್ತ ನನ್ನ ಬಳಿ ಹೆಚ್ಚಿನ ಹಣ ಇಲ್ಲ ಎಂದು ಹೇಳಿದ್ದು, ಹಾಗೇ ಐಫೋನ್ ಬಾಕ್ಸ್​​​​ ಓಪನ್​ ಮಾಡಲು ಹೇಳಿದ್ದಾನೆ. ಆಗ ಹೇಮಂತ್​ ನಾಯಕ್​ ಹಣ ನೀಡದೆ ಬಾಕ್ಸ್ ಓಪನ್ ಮಾಡಲ್ಲ ಎಂದಿದ್ದಾನೆ.

ಇದರಿಂದ ಕೋಪಗೊಂಡಿದ್ದ ಆರೋಪಿ ಹೇಮಂತ್​ ದತ್ತ, ಹೇಮಂತ್​ ನಾಯಕನನ್ನು ಮನೆ ಒಳಗೆ ಕರೆಸಿ ಕೂಡಿಸಿದ್ದಾನೆ. ನಂತರ ನನ್ನ ಸ್ನೇಹಿತ ಹಣ ತರುತ್ತಿದ್ದಾನೆ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಾನೆ. ಈ ವೇಳೆ ಹೇಮಂತ್ ನಾಯಕ್ ಮೊಬೈಲ್​​ ನೋಡುತ್ತಾ ಕುಳಿತಿದ್ದನು. ಆಗ ಹೇಮಂತ್​ ದತ್ತ ಹಿಂದಿನಿಂದ ಬಂದು ಚಾಕುವಿನಿಂದ ಇರಿದು ಹೇಮಂತ್​ ನಾಯಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಗೋಣಿಚೀಲದಲ್ಲಿ ಸುತ್ತಿ 4 ದಿನ ಮನೆಯಲ್ಲಿಟ್ಟಿದ್ದನು.

ಬಳಿಕ ಫೆಬ್ರವರಿ 10 ರ ರಾತ್ರಿ ಬೈಕ್​ನಲ್ಲಿ ಶವ ಹೊತ್ತೊಯ್ದು ಅರಸೀಕೆರೆ ನಗರದ ಅಂಚೆಕೊಪ್ಪಲು ಸಮೀಪದ ರೈಲ್ವೆ ಟ್ರ್ಯಾಕ್ ಬಳಿ ಸುಟ್ಟಿರುವ ಆರೋಪ ಕೇಳಿಬಂದಿದೆ. ನಂತರ ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಅರಸೀಕೆರೆ ನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ