AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಭೀಕರ ಹತ್ಯೆ: ಕೊಲೆ ನಂತರ ಹಂತಕನಿಗೆ ಕಾಡಿತ್ತಾ ಪಾಪ ಪ್ರಜ್ಞೆ?

Bengaluru Mahalaxmi Murder Case: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 50ಕ್ಕೂ ಹೆಚ್ಚು ತುಂಡು ಮಾಡಿ ಪ್ರೀಜರ್​ನಲ್ಲಿ ತುಂಬಲಾಗಿತ್ತು. ಮಹಾಲಕ್ಷ್ಮೀಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಮುಕ್ತಿ ರಂಜನ್​ ರಾಯ್​ಗೆ ಪಾಪ ಪ್ರಜ್ಞೆ ಕಾಡಿತ್ತಾ ಎಂಬ ಅನುಮಾನ ಮೂಡಿದೆ.

ವೈಯ್ಯಾಲಿಕಾವಲ್ ಮಹಾಲಕ್ಷ್ಮಿ ಭೀಕರ ಹತ್ಯೆ: ಕೊಲೆ ನಂತರ ಹಂತಕನಿಗೆ ಕಾಡಿತ್ತಾ ಪಾಪ ಪ್ರಜ್ಞೆ?
ಮುಕ್ತಿ ರಂಜನ್​ ರಾಯ್​, ಮಹಾಲಕ್ಷ್ಮೀ
Shivaprasad B
| Edited By: |

Updated on: Sep 29, 2024 | 2:42 PM

Share

ಬೆಂಗಳೂರು, ಸೆಪ್ಟೆಂಬರ್​ 29: ಬೆಂಗಳೂರಿನ ವೈಯ್ಯಾಲಿಕಾವಲ್ ನಿವಾಸಿ ಮಹಾಲಕ್ಷ್ಮಿಯನ್ನು ಕೊಲೆ (Bengaluru Mahalaxmi Murder Case)​ ಮಾಡಿದ್ದ ಆರೋಪಿ ಮುಕ್ತಿ ರಂಜನ್​ ರಾಯ್​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾಲಕ್ಷ್ಮಿ ಹತ್ಯೆ ನಂತರ ಮುಕ್ತಿ ರಂಜನ್ ರಾಯ್​ ಅವಳ ನೆನಪಿನಲ್ಲೇ ಆತ್ಮಹತ್ಯೆ ಮಾಡಿಕೊಂಡನು ಎಂಬ ಅನುಮಾನ ವ್ಯಕ್ತವಾಗಿದೆ. ಕೊಲೆಯಾದ ಮಹಾಲಕ್ಷ್ಮೀ ಮತ್ತು ಆರೋಪಿ ಮುಕ್ತಿ ರಂಜನ್​ ರಾಯ್​ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ದೆಹಲಿಗೆ ಬಂದರೂ ನನಗೆ ಅವಳ ನೆನಪೇ ಕಾಡುತ್ತಿದ್ದೆ

ಮಹಾಲಕ್ಷ್ಮೀ ಮತ್ತು ಮುಕ್ತಿ ರಂಜನ್​ ರಾಯ್​ ಜೊತೆಗೆ ನಾಲ್ಕ ದಿನಗಳ ದೆಹಲಿ ಪ್ರವಾಸ ಮಾಡಿದ್ದನು. ಮುಕ್ತಿ ರಂಜನ್ ಕೊಲೆ ಮಾಡಿದ ನಂತರ ಪಶ್ಚಿಮ ಬಂಗಾಳ ಮಾತ್ರವಲ್ಲದೇ ದೆಹಲಿಯಲ್ಲೂ ನಾಲ್ಕು ದಿನ ತಲೆಮರೆಸಿಕೊಂಡಿದ್ದನು. ಮುಕ್ತಿ ರಂಜನ್​ ರಾಯ್ ದೆಹಲಿಯಲ್ಲಿದ್ದಾಗ​, ತಾಯಿ ಮತ್ತು ತಮ್ಮನಿಗೆ ಕರೆ ಮಾಡಿ, ಮಹಾಲಕ್ಷ್ಮಿಯನ್ನು ಕೋಪದಲ್ಲಿ ಹತ್ಯೆ ಮಾಡ್ಬಿಟ್ಟಿದ್ದೀನಿ. ದೆಹಲಿಗೆ ಬಂದರೂ ನನಗೆ ಅವಳ ನೆನಪೇ ಕಾಡುತ್ತಿದ್ದೆ ಎಂದು ಅಳಲು ತೋಡಿಕೊಂಡಿದ್ದನು.

ಸಿಮ್​ ಬದಲಾಯಿಸಿದ್ದ ಆರೋಪಿ

ಆರೋಪಿ ಮುಕ್ತಿ ರಂಜನ್​ ರಾಯ್​ ಮೊದಲು ಏರ್​ಟೆಲ್​ ಸಿಮ್ ಬಳಕೆ ಮಾಡುತ್ತಿದ್ದನು. ಮಹಾಲಕ್ಷ್ಮೀಯನ್ನು ಕೊಲೆ ಮಾಡಿ ಪಶ್ವಿಮ ಬಂಗಾಳಕ್ಕೆ ಹೋಗುತ್ತಿದ್ದಂತೆ ಹಳೆ ನಂಬರ್ ಅನ್ನು ಸ್ವಿಚ್ ಆಫ್ ಮಾಡಿದ್ದನು. ಬಳಿಕ ಆರೋಪಿ ಮುಕ್ತಿ ರಂಜನ್​ ರಾಯ್​ ಸಹೋದರನ ದಾಖಲಾತಿ ನೀಡಿ ಬಿಎಸ್​​ ಎನ್​ಎಲ್​ ಸಿಮ್ ಖರೀದಿಸಿದ್ದನು. ಬಿಎಸ್​ಎನ್​ಎಲ್​ ಸಿಮ್ ಖರೀದಿ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತಾದರೂ, ಆರೋಪಿಯ ನಿಖರವಾದ ಲೊಕೇಶನ್ ಪತ್ತೆಯಾಗ್ತಿರಲಿಲ್ಲ. ಐದಾರು ಕಿಮೀ ಆಸುಪಾಸು ಬಿಎಸ್​ಎನ್​ಎಲ್​ ಟವರ್ ಪತ್ತೆಯಾಗುತ್ತಿತ್ತು. ಇದು ಆರೋಪಿ ಪಾಲಿಗೆ ವರದಾನವಾಗಿತ್ತು.

ಇದನ್ನೂ ಓದಿ: ಬೆಂಗಳೂರು ಮಹಾಲಕ್ಷ್ಮೀ ಕೊಲೆಯಾಗಿದ್ದು ಮದುವೆ ವಿಚಾರಕ್ಕೆ?: ಕಮಿಷನರ್​ ದಯಾನಂದ್​ ಹೇಳಿದ್ದಿಷ್ಟು

ಹೊಸ ಸಿಮ್​ ಖರಿದಿಸಿದ ಬಳಿಕ, ತಾನು ಕೊಲೆ ಮಾಡಿದ ವಿಚಾರವನ್ನು ತಾಯಿ ಮತ್ತು ಸಹೋದರನ ಬಳಿ ಹೇಳಿದ್ದನು. ನಂತರ ಆರೋಪಿ ಮುಕ್ತಿ ರಂಜನ್​ ರಾಯ್​ ದೆಹಲಿಗೆ ತೆರಳಿದ್ದನು. ಒಡಿಶಾದ ಫಂಡಿ ಗ್ರಾಮದಲ್ಲೇ ಇದ್ದರೆ ಪೊಲೀಸರು ಬರುತ್ತಾರೆಂದು ಊರುಬಿಟ್ಟಿದ್ದನು. ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿದ ವಿಚಾರ ಹೊರ ಜಗತ್ತಿಗೆ ತಿಳಿಯುವವರೆಗೂ ಆರೋಪಿ ಮುಕ್ತಿ ರಂಜನ್​ ರಾಯ್​ ಒಳ ಒಳಗೆ ಮರಗುತ್ತಿದ್ದನು.

ಸೆಪ್ಟೆಂಬರ್ 22ರ ವೇಳೆಗೆ ಆರೋಪಿ ಮುಕ್ತಿ ರಂಜನ್​ ರಾಯ್​ ತಮ್ಮನನ್ನು ಪೊಲೀಸರು ವಶಕ್ಕೆ ಪಡೆದು ಕುಟುಂಬಸ್ಥರನ್ನು ಸಂಪರ್ಕಿಸಿದ್ದರು. ಈ ವಿಚಾರವನ್ನು ಆರೋಪಿ ಮುಕ್ತಿ ರಂಜನ್​ ರಾಯ್​​ ತಾಯಿಯಿಂದ ತಿಳಿದುಕೊಂಡಿದ್ದನು. ಅಲ್ಲದೇ ಆರೋಪಿಯನ್ನು ಹುಡುಕಿಕೊಂಡು ಬೆಂಗಳೂರು ಪೊಲೀಸರು ತನ್ನೂರಿಗೆ ಬಂದಿರುವ ವಿಚಾರವನ್ನೂ ತಾಯಿಯಿಂದ ತಿಳಿದುಕೊಂಡಿದ್ದನು. ಕೊನೆಗೆ ತಾಯಿಗೆ ಮನೆಗೆ ಬರುತ್ತೇನೆ ಎಂದು ಹೇಳಿದವನು, ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
Shivaprasad B
Shivaprasad B
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ