AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್​​ ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೇ ಎಗರಿಸಿದ ಕಿಲಾಡಿ ಕಳ್ಳ

ಬೆಂಗಳೂರು: ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೆ ಕಳ್ಳ ಕದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಅಶೋಕ್ ಗಜರೆ ಎಂಬಾತ ನೋ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದ. ಈ ಕಾರಣ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ ಪಿಸಿ ಮುಲ್ಲ ಮುಸ್ತಫಾ ಚಾಲಕನಿಗೆ ಫೈನ್ ಹಾಕಿದ್ದರು. ಇದರಿಂದ ಪೇದೆ ಮೇಲೆ ಸಿಟ್ಟಿಗೆದ್ದ ಅಶೋಕ್ ಗಜರೆ ಪೇದೆ ಮುಲ್ಲ ಮುಸ್ತಫಾರನ್ನ  ವೈಜಿ ಪಾಳ್ಯ ಪೊಲೀಸ್ ವಸತಿ ಗೃಹದವರೆಗೆ ಫಾಲೋ ಮಾಡಿದ್ದಾನೆ. ನಂತರ ಪೇದೆ ಬೈಕ್ ನಿಲ್ಲಿಸಿ ಮನೆ ಒಳಗೆ ಹೋದ ಮೇಲೆ ಆಶೋಕ್ ವಾಕಿಟಾಕಿ […]

ಟ್ರಾಫಿಕ್​​ ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೇ ಎಗರಿಸಿದ ಕಿಲಾಡಿ ಕಳ್ಳ
ಸಾಧು ಶ್ರೀನಾಥ್​
|

Updated on:Sep 23, 2019 | 5:58 PM

Share

ಬೆಂಗಳೂರು: ಫೈನ್ ಹಾಕಿದಕ್ಕೆ ಪೊಲೀಸರ ವಸ್ತುಗಳನ್ನೆ ಕಳ್ಳ ಕದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಅಶೋಕ್ ಗಜರೆ ಎಂಬಾತ ನೋ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದ. ಈ ಕಾರಣ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ ಪಿಸಿ ಮುಲ್ಲ ಮುಸ್ತಫಾ ಚಾಲಕನಿಗೆ ಫೈನ್ ಹಾಕಿದ್ದರು. ಇದರಿಂದ ಪೇದೆ ಮೇಲೆ ಸಿಟ್ಟಿಗೆದ್ದ ಅಶೋಕ್ ಗಜರೆ ಪೇದೆ ಮುಲ್ಲ ಮುಸ್ತಫಾರನ್ನ  ವೈಜಿ ಪಾಳ್ಯ ಪೊಲೀಸ್ ವಸತಿ ಗೃಹದವರೆಗೆ ಫಾಲೋ ಮಾಡಿದ್ದಾನೆ.

ನಂತರ ಪೇದೆ ಬೈಕ್ ನಿಲ್ಲಿಸಿ ಮನೆ ಒಳಗೆ ಹೋದ ಮೇಲೆ ಆಶೋಕ್ ವಾಕಿಟಾಕಿ ಸೇರಿ ಪೇದೆಯ ಬೈಕ್ ನಲ್ಲಿದ್ದ ಪೊಲೀಸ್ ರೇನ್ ಕೋಟ್, ಟ್ಯಾಬ್, ಮಾಸ್ಕ್ ಕದ್ದಿದ್ದಾನೆ. ಶಬ್ದ ಕೇಳಿ ಹೊರ ಬಂದ ಪೇದೆಗೆ ಕಳ್ಳ ಅಶೋಕ್ ‘ನಂಗೆ ಫೈನ್ ಹಾಕ್ತಿಯಾ..? ನಾನ್ಯಾರೆಂದು ತೋರಿಸ್ತೀನಿ’ ಎಂದು ಪೇದೆಗೆ ಆವಾಜ್ ಹಾಕಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Published On - 5:53 pm, Mon, 23 September 19

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು