AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಣೆಯಾಗಿದ್ದ ಬೆಂಗಳೂರು ಭೂ ಉದ್ಯಮಿ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆ

ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕೋಲಾರದ ವೇಮಗಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಮೃತ ದುರ್ದೈವಿ. ಕೋಲಾರದ ವೇಮಗಲ್ ಠಾಣಾ ವ್ಯಾಪ್ತಿಯ ನೀಲಗಿರಿ ತೋಪಿನಲ್ಲಿ ಪನ್ನೀರ್ ಸೆಲ್ವಂ ಶವ ಪತ್ತೆಯಾಗಿದೆ. ಬೆಂಗಳೂರಿನ ರಾಮಮೂರ್ತಿನಗರ ಠಾಣಾ ವ್ಯಾಪ್ತಿ ನಿವಾಸಿಯಾಗಿದ್ದ ಮೃತ ರಿಯಲ್ ಎಸ್ಟೇಟ್ ಉದ್ಯಮಿಗೆ ಸಂಬಂಧಿಕರೇ ವಿಷ ಉಣಿಸಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಪನ್ನೀರ್ ಸೆಲ್ವಂ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇದೀಗ ಆತನ ಶವ ಪತ್ತೆಯಾಗಿದ್ದು ಪೊಲೀಸರು […]

ಕಾಣೆಯಾಗಿದ್ದ ಬೆಂಗಳೂರು ಭೂ ಉದ್ಯಮಿ ನೀಲಗಿರಿ ತೋಪಿನಲ್ಲಿ ಶವವಾಗಿ ಪತ್ತೆ
KUSHAL V
| Edited By: |

Updated on: Aug 08, 2020 | 3:46 PM

Share

ಬೆಂಗಳೂರು: ನಗರದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಕೋಲಾರದ ವೇಮಗಲ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಪನ್ನೀರ್ ಸೆಲ್ವಂ ಮೃತ ದುರ್ದೈವಿ.

ಕೋಲಾರದ ವೇಮಗಲ್ ಠಾಣಾ ವ್ಯಾಪ್ತಿಯ ನೀಲಗಿರಿ ತೋಪಿನಲ್ಲಿ ಪನ್ನೀರ್ ಸೆಲ್ವಂ ಶವ ಪತ್ತೆಯಾಗಿದೆ. ಬೆಂಗಳೂರಿನ ರಾಮಮೂರ್ತಿನಗರ ಠಾಣಾ ವ್ಯಾಪ್ತಿ ನಿವಾಸಿಯಾಗಿದ್ದ ಮೃತ ರಿಯಲ್ ಎಸ್ಟೇಟ್ ಉದ್ಯಮಿಗೆ ಸಂಬಂಧಿಕರೇ ವಿಷ ಉಣಿಸಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆ ಪನ್ನೀರ್ ಸೆಲ್ವಂ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇದೀಗ ಆತನ ಶವ ಪತ್ತೆಯಾಗಿದ್ದು ಪೊಲೀಸರು ಹಚ್ಚಿನ ತನಿಖೆ ಮುಂದುವರೆಸಿದ್ದಾರೆ.