AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ ಅಡ್ಡ ಗಟ್ಟಿ ಯುವಕನನ್ನ ಕಲ್ಲಿನಿಂದ ಜಜ್ಜಿ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಬೈಕ್ ಅಡ್ಡ ಗಟ್ಟಿ ಕಲ್ಲಿನಿಂದ ಜಜ್ಜಿ ಯುವಕನನ್ನು ಬರ್ಬರ್ ಹತ್ಯೆ ಮಾಡಿದ ಘಟನೆ ಬೀದರ್(Bidar) ತಾಲೂಕಿನ ಅಲಿಯಂಬರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ ವ್ಯಕ್ತಿ ಯಾರ ಜೊತೆಗೂ ಜಗಳ ಮಾಡಿಕೊಂಡ ಉದಾಹರಣೆ ಇಲ್ಲ. ಆದರೆ, ಆತ ಕೊಲೆಯಾಗಲು ಕಾರಣ ಮಾತ್ರ ನಿಗೂಢವಾಗಿಯೇ ಇದೆ.

ಬೈಕ್​ ಅಡ್ಡ ಗಟ್ಟಿ ಯುವಕನನ್ನ ಕಲ್ಲಿನಿಂದ ಜಜ್ಜಿ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮೃತ ವ್ಯಕ್ತಿ
ಸುರೇಶ ನಾಯಕ
| Edited By: |

Updated on: Nov 12, 2023 | 4:20 PM

Share

ಬೀದರ್, ನ.12: ಬೈಕ್ ಅಡ್ಡ ಗಟ್ಟಿ ಕಲ್ಲಿನಿಂದ ಜಜ್ಜಿ ಯುವಕನನ್ನು ಬರ್ಬರ್ ಹತ್ಯೆ ಮಾಡಿದ ಘಟನೆ ಬೀದರ್(Bidar) ತಾಲೂಕಿನ ಅಲಿಯಂಬರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ತಾಲೂಕಿನ ವಿಳಾಸಪೂರ ನಿವಾಸಿಯಾದ ಅಮೀತ್ ಮಾನಾಜಿ(35) ಕೊಲೆಯಾದ ಯುವಕ. ನಿನ್ನೆ(ನ.11) ರಾತ್ರಿ 9:30 ರ ಸುಮಾರಿಗೆ ಬೈಕ್ ಮೇಲೆ ಬರುತ್ತಿದ್ದಾ ತಡೆದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಈ ಘಟನೆ ಜನವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇನ್ನು ಮೃತ ಯುವಕ ಹಾಗೂ ಆತನ ತಂದೆ-ತಾಯಿಯ ಊರು ಬೀದರ್ ತಾಲೂಕಿನ ವಿಳಾಸಪುರ ಗ್ರಾಮವಾದರೂ ಕೂಡ ಅವರು ನೆಲೆಸಿದ್ದು ಮೈಸೂರಿನಲ್ಲಿ. ಅಮೀತ್ ಮಾನಾಜಿ ಅಲ್ಲಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅಮೀತ್​ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದ. ಜೊತೆಗೆ ಒಂದು ಮುದ್ದಾದ ಮಗು ಕೂಡ ಇತ್ತು. ಹೆಂಡತಿ, ಮಕ್ಕಳು ತಂದೆ-ತಾಯಿ ಎಲ್ಲರೂ ಕೂಡ ಮೈಸೂರಿನಲ್ಲಿಯೇ ವಾಸವಿದ್ದಾರೆ. ಆದರೆ, ಅಮೀತ್ ಮಾತ್ರ ಕೃಷಿ ಮಾಡಬೇಕು ಎನ್ನುವ ಉದ್ದೇಶದಿಂದ ಲಾಕ್ ಡೌನ್ ಅವಧಿಯಲ್ಲಿ ಬೀದರ್ ತಾಲೂಕಿನ ತನ್ನ ತಂದೆಯ ಊರಾದ ವಿಳಾಸಪುರ ಗ್ರಾಮಕ್ಕೆ ಬಂದಿದ್ದ.

ತನ್ನ ತಂದೆಯ 35 ಎಕರೆಯಷ್ಟು ನೀರಾವರಿ ಜಮೀನಿರುವ ಕಾರಣ ಕೃಷಿಯಲ್ಲಿಯೇ ಏನಾದರೂ ಹೊಸದನ್ನ ಮಾಡಬೇಕು ಎನ್ನುವ ಉದ್ದೇಶದಿಂದ ಎರಡು ವರ್ಷದ ಹಿಂದೆ ಬಂದಿದ್ದ. ಜೊತೆಗೆ ಕಳೆದ ಎರಡು ವರ್ಷದಿಂದ ಕಷ್ಟಪಟ್ಟು ಟೋಮ್ಯಾಟೋ ತರಕಾರಿ ಬೆಳೆಸಿಕೊಂಡು ಕೈ ತುಂಬಾ ಆದಾಯ ಗಳಿಸುತ್ತಿದ್ದ. ಬಿಡುವಿನ ವೇಳೆಯಲ್ಲಿ ಮೈಸೂರಿಗೆ ಹೋಗಿ ಬಂದು ಮಾಡುತ್ತಿದ್ದ, ಇತ್ತ ಹೆಂಡತಿಯೂ ಕೂಡ ಆಗಾಗ ಗಂಡನನ್ನ ನೋಡಲು ಬೀದರ್​ಗೆ ಬರುತ್ತಿದ್ದರು. ಸಂಸಾರವೂ ಕೂಡ ಚನ್ನಾಗಿಯೇ ಇತ್ತು. ಇನ್ನೂ ಊರವರ ಜೊತೆಗೆ ಕೂಡ ಅಮೀತ್ ಚನ್ನಾಗಿಯೇ ಇದ್ದು, ಊರಿನ ಜನರ ಪ್ರೀತಿ ವಿಶ್ವಾಸವನ್ನ ಘಳಿಸಿಕೊಂಡಿದ್ದ. ಆದರೆ, ನಿನ್ನೆ ರಾತ್ರಿ ಏಕಾಏಕಿ ಅಮೀತ್ ಕೊಲೆಯಾಗಿ ಹೋಗಿದ್ದಾನೆ. ಇದು ಸಹಜವಾಗಿಯೇ ಗ್ರಾಮಸ್ಥರ ಅಶ್ಚರ್ಯಕ್ಕೂ ಕೂಡ ಕಾರಣವಾಗಿದೆ.

ಇದನ್ನೂ ಓದಿ:ಬೆಂಗಳೂರು: ಡಿಜೆಯಲ್ಲಿ ಕನ್ನಡ, ತಮಿಳು ಹಾಡು ಹಾಕಲು ಸ್ನೇಹಿತರ ಮಧ್ಯೆ ವಾಗ್ವಾದ, ಕೊಲೆಯಲ್ಲಿ ಅಂತ್ಯ

ಭೀಕರವಾಗಿ ಕೊಲೆಯಾಗಿರುವ ಅಮೀತ್ ಮಾನಾಜಿ, ತನ್ನ ಹೊಲದಲ್ಲಿ ಸುಮಾರು 10 ಎಕರೆಯಷ್ಟೂ ಈ ಸಲ ಟೊಮ್ಯಾಟೋ ನಾಟಿ ಮಾಡಬೇಕು ಎಂದು ಯೋಚನೆ ಮಾಡಿದ್ದ. ಈ ಹಿನ್ನಲೆ ಅಮೀತ್ ಟೋಮೋಟೋ ಬೇಸಾಯದ ಬಗ್ಗೆ ಅರಿವಿದ್ದ ಹೊನ್ನಕೇರಿಯ ಪ್ರಗತಿ ಪರ ರೈತನಿಗೆ ಭೇಟಿಯಾಗಿ ಬೆಳೆ, ಮಾರುಕಟ್ಟೆ ಹಾಗೂ ಅದಕ್ಕೆ ಬರುವ ರೋಗದ ಬಗ್ಗೆ ಚರ್ಚೆ ಮಾಡಿ ರಾತ್ರಿ 9:30 ಸುಮಾರಿಗೆ ಮನೆಗೆ ಬರುತ್ತಿದ್ದಾಗ. ಇತನನ್ನು ಕೊಲೆ ಮಾಡಬೇಕು ಎಂದು ಯೋಜನೆ ಮಾಡಿಕೊಂಡಿದ್ದ ಹಂತಕ ಪಡೆ, ಆತ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಅಡ್ಡ ಗಟ್ಟಿದ್ದಾರೆ. ಮೊದಲು ಹೊಡೆದು, ನಂತರ ಕಲ್ಲಿನಿಂದ ತಲೆ, ಬೆನ್ನಿಗೆ, ಕಾಲಿಗೆ ಜಜ್ಜಿದ್ದಾರೆ. ಬಳಿಕ ಜಾಕುವಿನಿಂದ ಹಿಂಬದಿ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾರೆ.

ಕೊಲೆ ಮಾಡಿದವರ್ಯಾರು ಎಂಬ ಯಕ್ಷ ಪ್ರಶ್ನೆ

ಹೌದು, ಮೃತ ವ್ಯಕ್ತಿ ಯಾರ ಜೊತೆಗೂ ಜಗಳ ಮಾಡಿಕೊಂಡ ಉದಾಹರಣೆ ಇಲ್ಲ. ಆದರೆ, ಆತ ಕೊಲೆಯಾಗಲು ಕಾರಣ ಮಾತ್ರ ನಿಗೂಢವಾಗಿಯೇ ಇದೆ. ಇನ್ನು ಕೊಲೆಯಾದ ವಿಷಯ ತಿಳಿಯುತ್ತಿದಂತೆ ಜನವಾಡ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಜರ ತಂಡ ಬಂದು ಕೊಲೆಗಾರರ ಸುಳಿವು ಪತ್ತೆ ಹಚ್ಚಲು ಮಾಹಿತಿ ಕಲೆಹಾಕಿ ಹೋಗಿದ್ದಾರೆ. ಘಟನಾ ಸ್ಥಳದಲ್ಲಿಯೇ ಜನಸಾಗರವೇ ತುಂಬಿಕೊಂಡಿತ್ತು, ಕುಟುಂಬಸ್ಥರ ಆಕ್ರಂಧನ ಕೂಡ ಮುಗಿಲು ಮುಟ್ಟಿತ್ತು, ಈ ಕೊಲೆಗೆ ಕಾರಣರಾದವರನ್ನ ಬೇಗ ಪತ್ತೆ ಹಚ್ಚಿ ಅವರಿಗೆ ಉಗ್ರವಾದ ಶಿಕ್ಷ ಕೊಡಬೇಕು ಎಂದು ಕುಟುಂಬಸ್ಥರ ಮನವಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು