Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸನ ಮೇಲೆ ರೌಡಿ ಶೀಟ್ ತೆರೆದ ಚಿಕ್ಕಜಾಲ ಪೊಲೀಸ್​​

ಸೋಷಿಯಲ್ ಮೀಡಿಯಾದಲ್ಲಿ ಮೈ ತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸ ಕಿಂಗ್ ಮೇಕರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟ್ ತೆರೆಯಲಾಗಿದೆ. ಯಲಹಂಕ ಹಾಗೂ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ದೂರು ಕೇಳಿ ಬಂದ ಹಿನ್ನೆಲೆ ಚಿಕ್ಕಜಾಲ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಮೈತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸನ ಮೇಲೆ ರೌಡಿ ಶೀಟ್ ತೆರೆದ ಚಿಕ್ಕಜಾಲ ಪೊಲೀಸ್​​
ಚಿಕ್ಕಜಾಲ ಪೊಲೀಸ್​ ಠಾಣೆ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on: Dec 20, 2023 | 4:28 PM

ಬೆಂಗಳೂರು, ಡಿಸೆಂಬರ್​​​ 20: ಸೋಷಿಯಲ್ ಮೀಡಿಯಾದಲ್ಲಿ ಮೈ ತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸ ಕಿಂಗ್ ಮೇಕರ್​ ವಿರುದ್ಧ ಇದೀಗ ರೌಡಿ ಶೀಟ್ (rowdy sheet) ತೆರೆಯಲಾಗಿದೆ. ಯಲಹಂಕ ಹಾಗೂ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ದೂರು ಕೇಳಿ ಬಂದ ಹಿನ್ನೆಲೆ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ದಾಸನ ಮೇಲೆ ನಾನ್ ಲೋಕಲ್ ರೌಡಿ ಶೀಟ್​ ತೆರೆಯಲಾಗಿದೆ.

ಎಂಎಲ್ಎ ಸಂಬಂಧಿ ರಾಮಮೂರ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಮಹಿಳೆಯ ಜಮೀನಿನ ವಿಚಾರವಾಗಿ ಧಮ್ಕಿ ಹಾಕಲು ಸುಪಾರಿ ಪಡೆದಿದ್ದ ದಾಸ, ಹುಡುಗರನ್ನು ಕಳುಹಿಸಿ ಮಹಿಳೆ ಮೇಲೆ‌ ಹಲ್ಲೆ ಮಾಡಿಸಿ ಜಾತಿ ನಿಂದನೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಕುರಿತು‌ ಮಹಿಳೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದೇ ಪ್ರಕರಣದಲ್ಲಿ ದಾಸ ಎ2 ಆರೋಪಿಯಾಗಿದ್ದ.

ಇದನ್ನೂ ಓದಿ: ಮೈತುಂಬ ಬಂಗಾರ ಹಾಕಿಕೊಂಡು, ಗ್ಯಾಂಗ್ ಕಟ್ಟಿಕೊಂಡು ಹವಾ ಮಾಡುತ್ತಿದ್ದ ದಾಸ ಅರೆಸ್ಟ್

ಇದೇ ರೀತಿ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲೂ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಚಿಕ್ಕಜಾಲ ಪೊಲೀಸರು ದಾಸ ಮೇಲೆ ರೌಡಿಶೀಟ್ ತೆರೆದಿದ್ದಾರೆ.

ಮೈ ತುಂಬ ಬಂಗಾರ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ದಾಸ, ಮೈತುಂಬ ಗೋಲ್ಡು ಸುತ್ತಲೂ ಹುಡುಗರು, ದೊಡ್ಡ ದೊಡ್ಡವರ ಜೊತೆ ಫೋಟೋದಲ್ಲಿ ಫಾಲೋವರ್ಸ್ ಬೆಳೆಸಿಕೊಂಡಿದ್ದ. ಬೇರೆಯವರ ಪ್ರಾಪರ್ಟಿ ಗಲಾಟೆ ನಡುವೆ ಯುವಕರ ಕಳುಹಿಸಿಕೊಟ್ಟ ಆರೋಪ ಹಿನ್ನಲೆ ಬಂಧನವಾಗಿದ್ದ. ಸದ್ಯ ಈತನ ಪೂರ್ವ ಪರ ಹಾಗೂ ಆತನ ಬಗ್ಗೆ ಯಲಹಂಕ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಕೊಳ್ಳೆಗಾಲ ಒಂಟಿ ಮಹಿಳೆ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ಕೊಲೆ ಹಿಂದಿನ ದಿನ ಮಗಳನ್ನು ಬಾಲಮಂದಿರಕ್ಕೆ ಸೇರಿಸಿದ್ದ ತಾಯಿ, ಯಾಕೆ?

ಈ ಹಿಂದೆ ಸಹ ಸಾಕಷ್ಟು ಜನರಿಗೆ ಬೆದರಿಕೆ ಹೊಡ್ಡಿ ಆಕ್ರಮವಾಗಿ ಹಣ ಗಳಿಸಿರುವ ಶಂಕೆ ವ್ಯಂಕ್ತವಾಗಿದೆ. ಯಲಹಂಕ ಸುತ್ತ ಮುತ್ತ ರಿಯಲ್ ಎಸ್ಟೇಟ್ ಬಿಲ್ಡಿರ್​ಗಳನ್ನು ಬೆದರಿಸಿರುವ ಆರೋಪ‌ ಮಾಡಲಾಗಿದೆ. ಹೀಗಾಗಿ ದಾಸನ ಮೊಬೈಲ್ ಫೋನ್​​ನ್ನು ಮಿರರ್ ಸ್ಕ್ರೀನ್ ಮಾಡಲು ಸಿಐಡಿಗೆ ರವಾನೆ ಮಾಡಲಾಗಿದೆ.

ಮೊದಲಿಗೆ ತನ್ನ ಮೊಬೈಲ್ ಪೊಲೀಸರಿಗೆ ನೀಡಲು ಒಪ್ಪದ ದಾಸ, ನಂತರ ತನಿಖೆಗೆ ಅವಶ್ಯಕತೆ ಹಿನ್ನೆಲೆ ಮೊಬೈಲ್ ಸೀಜ್ ಮಾಡಿದ್ದಾರೆ. ಸದ್ಯ ಯಲಹಂಕ ಪೊಲೀಸರಿಂದ ತನಿಖೆಯಲ್ಲಿ ಮೊಬೈಲ್​ನಲ್ಲಿ‌ ದೊಡ್ಡ ಬಿಲ್ಡರ್​ಗಳ ಸಂಪರ್ಕ ನಂಬರ್​ಗಳು ಪತ್ತೆ ಆಗಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಎಲ್ಲ ಧರ್ಮಗಳಲ್ಲೂ ಶೋಷಿತರು ಮತ್ತು ಬಡವರಿದ್ದಾರೆ: ಡಿಕೆ ಸುರೇಶ್
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?