ಕೈಕಾಲು ಕಟ್ಟಿ ಕಗ್ಗೊಲೆ; ಪೋಸ್ಟ್​ಮಾರ್ಟಂ ವೇಳೆ ಬಯಲಾಯ್ತು ಅಚ್ಚರಿಯ ಸತ್ಯ

ಕೆಂಪು ಕುರ್ತಾ ಮತ್ತು ಬಿಳಿ ಪೈಜಾಮಾದಲ್ಲಿ, ಉದ್ದನೆಯ ಕೂದಲನ್ನು ಗಮನಿಸಿದ ನಂತರ ಆ ದೇಹವು ಮಹಿಳೆಯ ದೇಹ ಎಂದು ಪೊಲೀಸರು ಊಹಿಸಿದ್ದರು. ಅವರು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದರೆ, ಅವರ ಊಹೆ ತಪ್ಪಾಗಿತ್ತು.

ಕೈಕಾಲು ಕಟ್ಟಿ ಕಗ್ಗೊಲೆ; ಪೋಸ್ಟ್​ಮಾರ್ಟಂ ವೇಳೆ ಬಯಲಾಯ್ತು ಅಚ್ಚರಿಯ ಸತ್ಯ
ಪ್ರಾತಿನಿಧಿಕ ಚಿತ್ರ
Image Credit source: India Today
Edited By:

Updated on: Sep 07, 2023 | 7:27 PM

ನವದೆಹಲಿ: ಕೈ-ಕಾಲುಗಳನ್ನು ಕಟ್ಟಿ ಗೋಣಿಚೀಲದಲ್ಲಿ ತುಂಬಿದ್ದ ಕೊಳೆತ ಮೃತದೇಹವನ್ನು ಉತ್ತರ ಪ್ರದೇಶದ ಪೊಲೀಸರು ಪತ್ತೆ ಹಚ್ಚಿದ್ದರು. ಆ ಶವ ಯಾರದ್ದೆಂದು ಯಾರಿಗೂ ತಿಳಿದಿರಲಿಲ್ಲ. ಆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಕೊಳೆತು ಗುರುತು ಹಿಡಿಯದಂತಹ ಸ್ಥಿತಿಯಲ್ಲಿದ್ದ ಆ ಹೆಣದ ವ್ಯಕ್ತಿ ಉದ್ದನೆಯ ಕೂದಲು ಬಿಟ್ಟುಕೊಂಡು, ಕುರ್ತಾ-ಪೈಜಾಮಾ ಧರಿಸಿದ್ದರಿಂದ ಅದು ಮಹಿಳೆಯದ್ದೆಂದು ಪೊಲೀಸರು ನಂಬಿದ್ದರು. ಆದರೆ, ಅಸಲಿ ಕತೆಯೇ ಬೇರೆ ಇತ್ತು.

ಮೋರಿಯ ಬಳಿ ದುರ್ವಾಸನೆ ಹರಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಭಾನುವಾರ ಕರೆ ಮಾಡಿದ್ದರು. ಅಲ್ಲಿಗೆ ಧಾವಿಸಿದ ಪೊಲೀಸರಿಗೆ ಗೋಣಿಚೀಲದೊಳಗಿದ್ದ ಶವ ಸಿಕ್ಕಿತ್ತು. ಆ ದೇಹವು ಮೋರಿಯ ನೀರಿನಲ್ಲಿ ಮುಳುಗಿ ಕೊಳೆತು ಹೋಗಿದ್ದರಿಂದ ಅದರ ಗುರುತು ಪತ್ತೆ ಹಚ್ಚುವುದು ಕಷ್ಟಕರವಾಗಿತ್ತು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ತಾಯಿ, ಮಗನ ಬರ್ಬರ ಹತ್ಯೆ

ಕೆಂಪು ಕುರ್ತಾ ಮತ್ತು ಬಿಳಿ ಪೈಜಾಮಾದಲ್ಲಿ, ಉದ್ದನೆಯ ಕೂದಲನ್ನು ಗಮನಿಸಿದ ನಂತರ ಆ ದೇಹವು ಮಹಿಳೆಯ ದೇಹ ಎಂದು ಪೊಲೀಸರು ಊಹಿಸಿದ್ದರು. ಅವರು ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ನಡೆಸಿಲಾರಂಭಿಸಿದ ವೈದ್ಯರಿಗೆ ಆ ಶವ ಮಹಿಳೆಯದ್ದಲ್ಲ, ಪುರುಷನದ್ದು ಎಂದು ಗೊತ್ತಾಗಿದೆ.

ಪೊಲೀಸರು ಆ ಶವ ಮಹಿಳೆಯದ್ದು ಎಂದು ಆರಂಭದಲ್ಲಿ ತಿಳಿಸಿದ್ದರಿಂದ ವೈದ್ಯರು ಬೆಚ್ಚಿಬಿದ್ದರು. ಆ ಮೃತದೇಹ ಮಹಿಳೆಯದ್ದು ಎಂದು ನಮೂದಿಸಿರುವ ಪೊಲೀಸರು ಆ ವರದಿಯಲ್ಲಿ ಅದು ಪುರುಷನ ಶವ ಎಂದು ಸರಿಪಡಿಸುವವರೆಗೂ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಹಳೇ ದ್ವೇಷಕ್ಕೆ ಭೀಕರ ಹತ್ಯೆ; ಒಂದೇ ಮನೆಯ ನಾಲ್ವರನ್ನು ಕೊಚ್ಚಿ ಕೊಲೆ

ಹೀಗಾಗಿ, ಪೊಲೀಸರು ಆ ಶವವನ್ನು ಶವಾಗಾರದಲ್ಲಿ 72 ಗಂಟೆಗಳ ಕಾಲ ಇರಿಸಿದ್ದರು. ಆ ಮೃತದೇಹ ಅರ್ಚಕರದ್ದಾಗಿರುವ ಸಾಧ್ಯತೆ ಇದೆ. ಅವರ ಕುತ್ತಿಗೆಗೆ ಹಗ್ಗ ಬಿಗಿಯಲಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us