Crime News: ಟಿವಿ ವಾಲ್ಯೂಮ್ ಯಾಕಿಷ್ಟು ಜೋರಾಗಿದೆ? ಎಂದ ವ್ಯಕ್ತಿಯ ಕತ್ತು ಕತ್ತರಿಸಿ ಕೊಲೆ

|

Updated on: Sep 09, 2024 | 4:39 PM

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ 5 ಜನ ಸೇರಿ ಯುವಕನೊಬ್ಬನನ್ನು ಕೊಂದಿರುವ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ. ಇದಾದ ಬಳಿಕ ಆ ಯುವಕನನ್ನು ಕೊಂದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಗೋಕುಲ ಕೃಷ್ಣನ್ ಕೊಯಮತ್ತೂರು ಜಿಲ್ಲೆಯ ಸೆಲ್ವಪುರಂ ಪ್ರದೇಶದವರು. ಟಿವಿ ವಾಲ್ಯೂಮ್ ಜೋರಾಗಿದ್ದ ಕಾರಣದಿಂದ ಎರಡು ಮನೆಯವರ ಜೊತೆ ಜಗಳ ಮಾಡಿಕೊಂಡಿದ್ದರು.

Crime News: ಟಿವಿ ವಾಲ್ಯೂಮ್ ಯಾಕಿಷ್ಟು ಜೋರಾಗಿದೆ? ಎಂದ ವ್ಯಕ್ತಿಯ ಕತ್ತು ಕತ್ತರಿಸಿ ಕೊಲೆ
ಸಾಂದರ್ಭಿಕ ಚಿತ್ರ
Follow us on

ಕೊಯಮತ್ತೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೆಂಪಟ್ಟಿ ಕಾಲೋನಿ ಬಳಿ ನಡೆದ ಗ್ಯಾಂಗ್ ಫೈಟ್‌ನಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ರಾತ್ರಿ ತಮಿಳುನಾಡಿನ ಸೆಲ್ವಪುರಂ ಪೊಲೀಸರು 5 ಜನರ ತಂಡವನ್ನು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳನ್ನು ಸೆಲ್ವಪುರಂ ನಿವಾಸಿಗಳಾದ ಪ್ರವೀಣ್, ನಾಗರಾಜನ್, ಚಂದ್ರು, ಸೂರ್ಯ ಮತ್ತು ಸಂಜಯ್ ಎಂದು ಗುರುತಿಸಲಾಗಿದೆ.

24 ವರ್ಷದ ಪ್ರವೀಣ್ ಎಂಬಾತ ಗೋಕುಲಕೃಷ್ಣನ್ ಮನೆಯ ಎದುರು ವಾಸವಾಗಿದ್ದು, ದೊಡ್ಡ ಧ್ವನಿಯಲ್ಲಿ ದೂರದರ್ಶನ ವೀಕ್ಷಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಗಲಾಟೆ ಸೃಷ್ಟಿಯಾಗುತ್ತಿದ್ದಂತೆ ಗೋಕುಲಕೃಷ್ಣನ್ ಪ್ರವೀಣ್ ಮನೆಗೆ ತೆರಳಿ ಟಿವಿಯ ವಾಲ್ಯೂಮ್ ಕಡಿಮೆ ಮಾಡುವಂತೆ ಕೇಳಿಕೊಂಡರು. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಇದೇ ಕೋಪವನ್ನು ಮನಸಿನಲ್ಲಿಟ್ಟುಕೊಂಡಿದ್ದ ಪ್ರವೀಣ್ ಹೊಡೆದಾಡಲು ಕೂಡ ಹೋಗಿದ್ದ. ಕೊನೆಗೆ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಈ ಜಗಳಕ್ಕೆ ಅಂತ್ಯ ಹಾಡಲು ಮುಂದಾದ ಆತ ಗೋಕುಲಕೃಷ್ಣನ್ ಅವರನ್ನು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: Shocking Video: ಮಹಿಳೆಯರ ಒಳಉಡುಪು ಕದಿಯುವುದೇ ಈ ಕಳ್ಳನ ಚಾಳಿ; ಯುವಕನ ವಿಡಿಯೋ ವೈರಲ್

ಗೋಕುಲಕೃಷ್ಣನ್ ಅವರ ಸಹಾಯಕ್ಕೆ ಬಂದ ಅವರ ಗೆಳೆಯರು ಈ ಜಗಳ ವಿಪರೀತಕ್ಕೆ ಹೋಗುತ್ತಿರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಪ್ರವೀಣ ಹಾಗೂ ಆತನ ಗೆಳೆಯರು ಗೋಕುಲಕೃಷ್ಣನ್ ಮೇಲೆ ದಾಳಿ ನಡೆಸಿ ಕೊಂದಿದ್ದಾರೆ. ಪ್ರವೀಣ್ ಮತ್ತು ಆತನ ಸ್ನೇಹಿತರು ಗೋಕುಲಕೃಷ್ಣನ್ ಮೇಲೆ ದೊಣ್ಣೆ, ಚಾಕುಗಳಿಂದ ಹಲ್ಲೆ ನಡೆಸಿದ್ದಾರೆ. ಆತನನ್ನು ಸ್ಥಳದಲ್ಲೇ ಕೊಲ್ಲಲಾಗಿದೆ.

ಇದನ್ನೂ ಓದಿ: Shocking News: 9 ದಿನದ ಮಗುವಿಗೆ ಪಪ್ಪಾಯ ಹಾಲು ಹಾಕಿ ಕೊಂದ ಅಪ್ಪ-ಅಮ್ಮ; ಕಾರಣ ಕೇಳಿದ್ರೆ ಶಾಕ್ ಆಗ್ತೀರ!

ಬಳಿಕ ಪ್ರವೀಣ್ ಹಾಗೂ ಆತನ ಸ್ನೇಹಿತರು ಪರಾರಿಯಾಗಿದ್ದಾರೆ. ಸೆಲ್ವಪುರಂ ಪೊಲೀಸರು ರಾತ್ರಿಯ ರೌಂಡ್ಸ್ ವೇಳೆ ಸ್ಥಳಕ್ಕೆ ಬಂದಿದ್ದು, ಮೃತದೇಹವನ್ನು ಪತ್ತೆ ಹಚ್ಚಿ ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ವಿಚಾರಣೆ ಆರಂಭಿಸಿದ ಪೊಲೀಸರು ಭಾನುವಾರ ಪ್ರವೀಣ್ ಮತ್ತು ಆತನ ಸ್ನೇಹಿತರನ್ನು ಬಂಧಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ