AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮರಣೋತ್ತರ ಪರೀಕ್ಷೆ ನಿಲ್ಲಿಸಿ, ನಾನು ಜೀವಂತವಾಗಿದ್ದೇನೆ; ಪೊಲೀಸರಿಗೆ ಶಾಕ್ ನೀಡಿದ ಯುವಕ

ಮರಣೋತ್ತರ ಪರೀಕ್ಷೆ ವೇಳೆ ಯುವಕನೊಬ್ಬ ಪ್ರತ್ಯಕ್ಷನಾಗಿ ಶಾಕ್ ನೀಡಿದ್ದಾನೆ. ವಿಚಿತ್ರ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಯುವಕನೊಬ್ಬ ಶುಕ್ರವಾರ ಪೊಲೀಸ್ ಠಾಣೆಗೆ ಹೋಗಿ ತನ್ನ ಮರಣೋತ್ತರ ಪರೀಕ್ಷೆಯನ್ನು ನಿಲ್ಲಿಸುವಂತೆ ವಿನಂತಿಸಿ ಸ್ಥಳೀಯ ಪೊಲೀಸರನ್ನು ದಿಗ್ಭ್ರಮೆಗೊಳಿಸಿದ್ದಾನೆ. ಏಕೆಂದರೆ ಅವನು ಜೀವಂತವಾಗಿದ್ದನು. ನಿನ್ನೆ ಸುಮನ್ ಎಂಬಾಕೆ ಘಟಂಪುರ ಪೊಲೀಸ್ ಠಾಣೆಗೆ ಆಗಮಿಸಿ ಆ ಶವ ತನ್ನ ಸಹೋದರನದ್ದು ಎಂದು ಗುರುತಿಸಿದರು.

ನನ್ನ ಮರಣೋತ್ತರ ಪರೀಕ್ಷೆ ನಿಲ್ಲಿಸಿ, ನಾನು ಜೀವಂತವಾಗಿದ್ದೇನೆ; ಪೊಲೀಸರಿಗೆ ಶಾಕ್ ನೀಡಿದ ಯುವಕ
Death
ಸುಷ್ಮಾ ಚಕ್ರೆ
|

Updated on:Jun 14, 2025 | 9:13 PM

Share

ಕಾನ್ಪುರ, ಜೂನ್ 14: ವಿಚಿತ್ರ ಘಟನೆಯೊಂದರಲ್ಲಿ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಯುವಕನೊಬ್ಬ ಶುಕ್ರವಾರ ಪೊಲೀಸ್ ಠಾಣೆಗೆ ಹೋಗಿ ತನ್ನ ಮರಣೋತ್ತರ ಪರೀಕ್ಷೆಯನ್ನು ನಿಲ್ಲಿಸುವಂತೆ ವಿನಂತಿಸುವ ಮೂಲಕ ಸ್ಥಳೀಯ ಪೊಲೀಸರನ್ನು ದಿಗ್ಭ್ರಮೆಗೊಳಿಸಿದ್ದಾನೆ. ಕಾನ್ಪುರ ದೇಹತ್ ಜಿಲ್ಲೆಯ ಘಟಂಪುರದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮನ್ ಎಂಬ ಮಹಿಳೆ ಕಾಣೆಯಾದ ತನ್ನ ಸಹೋದರನ ಶವವನ್ನು ಪತ್ತೆ ಹಚ್ಚಿದ್ದರು. ನಂತರ ಆ ಶವದ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸ್ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದರು. ಆ ಶವವು ತನ್ನ ಕಾಣೆಯಾದ ಸಹೋದರ ಅಜಯ್ ಶಂಖ್ವರ್ ಎಂದು ಆಕೆ ಹೇಳಿಕೊಂಡಿದ್ದರು.

ಘಟಂಪುರ ಪಟ್ಟಣ ಚೌಕದಲ್ಲಿ ಗುರುವಾರ ಪತ್ತೆಯಾದ ಶವವನ್ನು 1 ದಿನವಾದರೂ ಯಾರೂ ಗುರುತಿಸಿರಲಿಲ್ಲ. ಮೃತನ ಬಳಿ ಯಾವುದೇ ಗುರುತಿನ ದಾಖಲೆಗಳಿಲ್ಲದ ಕಾರಣ, ಆತನ ಗುರುತನ್ನು ಪತ್ತೆಹಚ್ಚಲು ಸಹಾಯ ಕೋರಿ ಪೊಲೀಸರು ವಾಟ್ಸಾಪ್ ಗುಂಪುಗಳ ಮೂಲಕ ಶವದ ಫೋಟೋಗಳನ್ನು ಹಾಕಿದ್ದರು. ನಿನ್ನೆ ಸುಮನ್ ಎಂಬಾಕೆ ಘಟಂಪುರ ಪೊಲೀಸ್ ಠಾಣೆಗೆ ಆಗಮಿಸಿ ಆ ಶವ ತನ್ನ ಸಹೋದರನದ್ದು ಎಂದು ಗುರುತಿಸಿದರು. ಮೃತ ಅಜಯ್ ಅವರನ್ನು ಹೋಲುವ ವ್ಯಕ್ತಿ ಅವರಂತೆಯೇ ಇದ್ದ ಎಂದು ಅವರು ಹೇಳಿದರು. ಅವರ ಸಹೋದರ ಕೂಡ ಕೆಂಪು ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು ಎಂದಿದ್ದರು.

ಇದನ್ನೂ ಓದಿ: ಪಾಲ್ಘರ್​​ನಲ್ಲಿ ಆಗಷ್ಟೇ ಹುಟ್ಟಿದ ಮಗು ಸಾವು; ಆ್ಯಂಬುಲೆನ್ಸ್ ಸಿಗದೆ ಚೀಲದಲ್ಲೇ 80 ಕಿ.ಮೀ. ಶವ ಹೊತ್ತು ಸಾಗಿದ ತಂದೆ

ಕುಟುಂಬದಿಂದ ಬಂದ ಗುರುತಿನ ಚೀಟಿ ಮತ್ತು ಔಪಚಾರಿಕ ದೂರಿನ ನಂತರ, ಪೊಲೀಸರು ವಿಚಾರಣೆಯನ್ನು ಪೂರ್ಣಗೊಳಿಸಿ, ಶುಕ್ರವಾರ ಬೆಳಿಗ್ಗೆ ನಿಗದಿಯಾಗಿದ್ದ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಾನ್ಪುರದ ಶವಾಗಾರಕ್ಕೆ ಕಳುಹಿಸಿದರು. ಆದರೆ, ಶವಪರೀಕ್ಷೆ ನಡೆಸುವ ಮೊದಲು, ನಿಜವಾದ ಅಜಯ್ ಶಂಖ್ವರ್ ಘಟಂಪುರ ಪೊಲೀಸ್ ಠಾಣೆಗೆ ಕಾಲಿಟ್ಟರು. “ಸರ್, ನಾನು ಜೀವಂತವಾಗಿದ್ದೇನೆ. ದಯವಿಟ್ಟು ನನ್ನ ಮರಣೋತ್ತರ ಪರೀಕ್ಷೆಯನ್ನು ನಿಲ್ಲಿಸಿ” ಎಂದು ಅಜಯ್ ಕರ್ತವ್ಯದಲ್ಲಿದ್ದ ದಿಗ್ಭ್ರಮೆಗೊಂಡ ಅಧಿಕಾರಿಗಳಿಗೆ ಹೇಳಿದರು.

ಇದನ್ನೂ ಓದಿ: ಹೆಂಡತಿಯ ಚಿತಾಭಸ್ಮ ಬಿಡಲು ಲಂಡನ್​ನಿಂದ ಬಂದಿದ್ದ ಗಂಡನೇ ವಿಮಾನ ಅಪಘಾತದಲ್ಲಿ ಬೂದಿಯಾದ ಕತೆಯಿದು!

ಭಿತರ್‌ಗಾಂವ್‌ನ ಇಟ್ಟಿಗೆ ಗೂಡುವೊಂದರಲ್ಲಿ ದಿನಗೂಲಿ ಕಾರ್ಮಿಕನಾಗಿರುವ ಅಜಯ್, ತನ್ನ ಬಳಿ ಮೊಬೈಲ್ ಫೋನ್ ಇಲ್ಲ ಮತ್ತು ಸಾಮಾನ್ಯವಾಗಿ ತನ್ನ ಕುಟುಂಬದೊಂದಿಗೆ ಮಾತನಾಡಲು ವಾರಕ್ಕೆ ಒಂದು ಅಥವಾ ಎರಡು ಬಾರಿ ಸಹೋದ್ಯೋಗಿಯ ಫೋನ್ ಅನ್ನು ಪಡೆಯುತ್ತೇನೆ ಎಂದು ಪೊಲೀಸರಿಗೆ ವಿವರಿಸಿದರು. “ನಾನು ಸತ್ತಿದ್ದೇನೆ ಎಂದು ಘೋಷಿಸಲಾಗಿದೆ ಮತ್ತು ನನ್ನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬ ವಿಷಯ ನನಗೆ ತಿಳಿಯಿತು. ನಾನು ಜೀವಂತವಾಗಿದ್ದೇನೆ ಎಂದು ತಿಳಿಸಲು ಇಲ್ಲಿಗೆ ಬಂದಿದ್ದೇನೆ. ಇಲ್ಲದಿದ್ದರೆ ಅಧಿಕೃತ ದಾಖಲೆಗಳಲ್ಲಿ ನನ್ನನ್ನು ಸತ್ತೆಂದು ಪರಿಗಣಿಸಲಾಗುತ್ತದೆ.” ಎಂದು ಆ ವ್ಯಕ್ತಿ ಪೊಲೀಸರಿಗೆ ಹೇಳಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:03 pm, Sat, 14 June 25

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ