AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮರಣೋತ್ತರ ಪರೀಕ್ಷೆ ನಿಲ್ಲಿಸಿ, ನಾನು ಜೀವಂತವಾಗಿದ್ದೇನೆ; ಪೊಲೀಸರಿಗೆ ಶಾಕ್ ನೀಡಿದ ಯುವಕ

ಮರಣೋತ್ತರ ಪರೀಕ್ಷೆ ವೇಳೆ ಯುವಕನೊಬ್ಬ ಪ್ರತ್ಯಕ್ಷನಾಗಿ ಶಾಕ್ ನೀಡಿದ್ದಾನೆ. ವಿಚಿತ್ರ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಯುವಕನೊಬ್ಬ ಶುಕ್ರವಾರ ಪೊಲೀಸ್ ಠಾಣೆಗೆ ಹೋಗಿ ತನ್ನ ಮರಣೋತ್ತರ ಪರೀಕ್ಷೆಯನ್ನು ನಿಲ್ಲಿಸುವಂತೆ ವಿನಂತಿಸಿ ಸ್ಥಳೀಯ ಪೊಲೀಸರನ್ನು ದಿಗ್ಭ್ರಮೆಗೊಳಿಸಿದ್ದಾನೆ. ಏಕೆಂದರೆ ಅವನು ಜೀವಂತವಾಗಿದ್ದನು. ನಿನ್ನೆ ಸುಮನ್ ಎಂಬಾಕೆ ಘಟಂಪುರ ಪೊಲೀಸ್ ಠಾಣೆಗೆ ಆಗಮಿಸಿ ಆ ಶವ ತನ್ನ ಸಹೋದರನದ್ದು ಎಂದು ಗುರುತಿಸಿದರು.

ನನ್ನ ಮರಣೋತ್ತರ ಪರೀಕ್ಷೆ ನಿಲ್ಲಿಸಿ, ನಾನು ಜೀವಂತವಾಗಿದ್ದೇನೆ; ಪೊಲೀಸರಿಗೆ ಶಾಕ್ ನೀಡಿದ ಯುವಕ
Death
ಸುಷ್ಮಾ ಚಕ್ರೆ
|

Updated on:Jun 14, 2025 | 9:13 PM

Share

ಕಾನ್ಪುರ, ಜೂನ್ 14: ವಿಚಿತ್ರ ಘಟನೆಯೊಂದರಲ್ಲಿ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಯುವಕನೊಬ್ಬ ಶುಕ್ರವಾರ ಪೊಲೀಸ್ ಠಾಣೆಗೆ ಹೋಗಿ ತನ್ನ ಮರಣೋತ್ತರ ಪರೀಕ್ಷೆಯನ್ನು ನಿಲ್ಲಿಸುವಂತೆ ವಿನಂತಿಸುವ ಮೂಲಕ ಸ್ಥಳೀಯ ಪೊಲೀಸರನ್ನು ದಿಗ್ಭ್ರಮೆಗೊಳಿಸಿದ್ದಾನೆ. ಕಾನ್ಪುರ ದೇಹತ್ ಜಿಲ್ಲೆಯ ಘಟಂಪುರದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮನ್ ಎಂಬ ಮಹಿಳೆ ಕಾಣೆಯಾದ ತನ್ನ ಸಹೋದರನ ಶವವನ್ನು ಪತ್ತೆ ಹಚ್ಚಿದ್ದರು. ನಂತರ ಆ ಶವದ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸ್ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದರು. ಆ ಶವವು ತನ್ನ ಕಾಣೆಯಾದ ಸಹೋದರ ಅಜಯ್ ಶಂಖ್ವರ್ ಎಂದು ಆಕೆ ಹೇಳಿಕೊಂಡಿದ್ದರು.

ಘಟಂಪುರ ಪಟ್ಟಣ ಚೌಕದಲ್ಲಿ ಗುರುವಾರ ಪತ್ತೆಯಾದ ಶವವನ್ನು 1 ದಿನವಾದರೂ ಯಾರೂ ಗುರುತಿಸಿರಲಿಲ್ಲ. ಮೃತನ ಬಳಿ ಯಾವುದೇ ಗುರುತಿನ ದಾಖಲೆಗಳಿಲ್ಲದ ಕಾರಣ, ಆತನ ಗುರುತನ್ನು ಪತ್ತೆಹಚ್ಚಲು ಸಹಾಯ ಕೋರಿ ಪೊಲೀಸರು ವಾಟ್ಸಾಪ್ ಗುಂಪುಗಳ ಮೂಲಕ ಶವದ ಫೋಟೋಗಳನ್ನು ಹಾಕಿದ್ದರು. ನಿನ್ನೆ ಸುಮನ್ ಎಂಬಾಕೆ ಘಟಂಪುರ ಪೊಲೀಸ್ ಠಾಣೆಗೆ ಆಗಮಿಸಿ ಆ ಶವ ತನ್ನ ಸಹೋದರನದ್ದು ಎಂದು ಗುರುತಿಸಿದರು. ಮೃತ ಅಜಯ್ ಅವರನ್ನು ಹೋಲುವ ವ್ಯಕ್ತಿ ಅವರಂತೆಯೇ ಇದ್ದ ಎಂದು ಅವರು ಹೇಳಿದರು. ಅವರ ಸಹೋದರ ಕೂಡ ಕೆಂಪು ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು ಎಂದಿದ್ದರು.

ಇದನ್ನೂ ಓದಿ: ಪಾಲ್ಘರ್​​ನಲ್ಲಿ ಆಗಷ್ಟೇ ಹುಟ್ಟಿದ ಮಗು ಸಾವು; ಆ್ಯಂಬುಲೆನ್ಸ್ ಸಿಗದೆ ಚೀಲದಲ್ಲೇ 80 ಕಿ.ಮೀ. ಶವ ಹೊತ್ತು ಸಾಗಿದ ತಂದೆ

ಕುಟುಂಬದಿಂದ ಬಂದ ಗುರುತಿನ ಚೀಟಿ ಮತ್ತು ಔಪಚಾರಿಕ ದೂರಿನ ನಂತರ, ಪೊಲೀಸರು ವಿಚಾರಣೆಯನ್ನು ಪೂರ್ಣಗೊಳಿಸಿ, ಶುಕ್ರವಾರ ಬೆಳಿಗ್ಗೆ ನಿಗದಿಯಾಗಿದ್ದ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕಾನ್ಪುರದ ಶವಾಗಾರಕ್ಕೆ ಕಳುಹಿಸಿದರು. ಆದರೆ, ಶವಪರೀಕ್ಷೆ ನಡೆಸುವ ಮೊದಲು, ನಿಜವಾದ ಅಜಯ್ ಶಂಖ್ವರ್ ಘಟಂಪುರ ಪೊಲೀಸ್ ಠಾಣೆಗೆ ಕಾಲಿಟ್ಟರು. “ಸರ್, ನಾನು ಜೀವಂತವಾಗಿದ್ದೇನೆ. ದಯವಿಟ್ಟು ನನ್ನ ಮರಣೋತ್ತರ ಪರೀಕ್ಷೆಯನ್ನು ನಿಲ್ಲಿಸಿ” ಎಂದು ಅಜಯ್ ಕರ್ತವ್ಯದಲ್ಲಿದ್ದ ದಿಗ್ಭ್ರಮೆಗೊಂಡ ಅಧಿಕಾರಿಗಳಿಗೆ ಹೇಳಿದರು.

ಇದನ್ನೂ ಓದಿ: ಹೆಂಡತಿಯ ಚಿತಾಭಸ್ಮ ಬಿಡಲು ಲಂಡನ್​ನಿಂದ ಬಂದಿದ್ದ ಗಂಡನೇ ವಿಮಾನ ಅಪಘಾತದಲ್ಲಿ ಬೂದಿಯಾದ ಕತೆಯಿದು!

ಭಿತರ್‌ಗಾಂವ್‌ನ ಇಟ್ಟಿಗೆ ಗೂಡುವೊಂದರಲ್ಲಿ ದಿನಗೂಲಿ ಕಾರ್ಮಿಕನಾಗಿರುವ ಅಜಯ್, ತನ್ನ ಬಳಿ ಮೊಬೈಲ್ ಫೋನ್ ಇಲ್ಲ ಮತ್ತು ಸಾಮಾನ್ಯವಾಗಿ ತನ್ನ ಕುಟುಂಬದೊಂದಿಗೆ ಮಾತನಾಡಲು ವಾರಕ್ಕೆ ಒಂದು ಅಥವಾ ಎರಡು ಬಾರಿ ಸಹೋದ್ಯೋಗಿಯ ಫೋನ್ ಅನ್ನು ಪಡೆಯುತ್ತೇನೆ ಎಂದು ಪೊಲೀಸರಿಗೆ ವಿವರಿಸಿದರು. “ನಾನು ಸತ್ತಿದ್ದೇನೆ ಎಂದು ಘೋಷಿಸಲಾಗಿದೆ ಮತ್ತು ನನ್ನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂಬ ವಿಷಯ ನನಗೆ ತಿಳಿಯಿತು. ನಾನು ಜೀವಂತವಾಗಿದ್ದೇನೆ ಎಂದು ತಿಳಿಸಲು ಇಲ್ಲಿಗೆ ಬಂದಿದ್ದೇನೆ. ಇಲ್ಲದಿದ್ದರೆ ಅಧಿಕೃತ ದಾಖಲೆಗಳಲ್ಲಿ ನನ್ನನ್ನು ಸತ್ತೆಂದು ಪರಿಗಣಿಸಲಾಗುತ್ತದೆ.” ಎಂದು ಆ ವ್ಯಕ್ತಿ ಪೊಲೀಸರಿಗೆ ಹೇಳಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:03 pm, Sat, 14 June 25

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!