Crime News: ದಾರಿಮಧ್ಯೆ ಅನೈತಿಕ ಸಂಬಂಧ ವಿಚಾರ ಗಂಡ-ಹೆಂಡ್ತಿ ಜಗಳ: ಬೈಕ್ ನಿಲ್ಲಿಸಿ ಆತ್ಮಹತ್ಯೆ..!

| Updated By: ಝಾಹಿರ್ ಯೂಸುಫ್

Updated on: Aug 19, 2021 | 9:31 PM

Crime News In Kannada: ಸಮೀಪದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರ ಈ ಘಟನೆಯನ್ನು ನೋಡಿದ್ದು, ಇಬ್ಬರನ್ನೂ ರಕ್ಷಿಸಲು ಪ್ರಯತ್ನಿಸಿದ್ದನು.

Crime News: ದಾರಿಮಧ್ಯೆ ಅನೈತಿಕ ಸಂಬಂಧ ವಿಚಾರ ಗಂಡ-ಹೆಂಡ್ತಿ ಜಗಳ: ಬೈಕ್ ನಿಲ್ಲಿಸಿ ಆತ್ಮಹತ್ಯೆ..!
ಸಾಂದರ್ಭಿಕ ಚಿತ್ರ
Follow us on

ಪ್ರಯಾಣದ ವೇಳೆ ದಾರಿಮಧ್ಯೆ ಶುರುವಾದ ಗಂಡ-ಹೆಂಡತಿ ನಡುವಣ ಸಣ್ಣ ಜಗಳವೊಂದು ಆತ್ಮಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ದಂಪತಿಗಳು ಪತೋರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಕಲಿಯನ್ ಸೇತುವೆಯ ಮೂಲಕ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಗಂಡನಿಗೆ ಕರೆ ಬಂದಿದೆ. ಇದನ್ನು ಗಮನಿಸಿದ ಹೆಂಡತಿಯು ಜಗಳಿಕ್ಕಿಳಿದ್ದಾಳೆ. ಇಬ್ಬರ ನಡುವಣ ಈ ಜಗಳ ತಾರಕ್ಕೇರುತ್ತಿದ್ದಂತೆ ಸೇತುವೆ ಮೇಲೆ ಬೈಕ್ ನಿಲ್ಲಿಸಿದ್ದಾನೆ. ಅಷ್ಟೇ ಅಲ್ಲದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡನ ಬೆನ್ನಲ್ಲೇ ಹೆಂಡತಿ ಕೂಡ ನದಿಗೆ ಹಾರಿದ್ದಾಳೆ.

ಸಮೀಪದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರ ಈ ಘಟನೆಯನ್ನು ನೋಡಿದ್ದು, ಇಬ್ಬರನ್ನೂ ರಕ್ಷಿಸಲು ಪ್ರಯತ್ನಿಸಿದ್ದನು. ಆದರೆ ಈ ವೇಳೆ ಯುವಕ ಸಾವನ್ನಪ್ಪಿದ್ದು, ಯುವತಿ ಬದುಕುಳಿದಿದ್ದಾಳೆ. ಇನ್ನು ಮೃತ ಯುವಕನನ್ನು ವೈಶಾಲಿ ಜಿಲ್ಲೆಯ ಮಹನಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಅವಿನಾಶ್ ಕುಮಾರ್ ಪಟೇಲ್ ಎಂದು ಗುರುತಿಸಲಾಗಿದೆ. ಹಾಗೆಯೇ ಯುವತಿ ಮೊಹಿಯುದ್ದೀನ್ ನಗರದ ಹರೈಲ್ ಗ್ರಾಮದ ನಿವಾಸಿ ಸೋನಾಕ್ಷಿ ಕುಮಾರಿ ಎಂದು ತಿಳಿದು ಬಂದಿದೆ.

ಮೃತ ಯುವಕನಿಗೆ ಬೇರೊಂದು ಹುಡುಗಿಯ ಜೊತೆ ಅನೈತಿಕ ಸಂಬಂಧ ಇದ್ದು, ಇದೇ ಕಾರಣದಿಂದ ನವದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದೇ ವಿಚಾರವಾಗಿ ಬೈಕ್​ನಲ್ಲಿ ಹೋಗುತ್ತಿದ್ದಾಗ ಜಗಳ ನಡೆದಿರುವ ಸಾಧ್ಯತೆಯಿದೆ. ಅಲ್ಲದೆ ಈ ವೇಳೆ ಕರೆ ಮಾಡಿದವರು ಯಾರೆಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯ ಸಮಯದಲ್ಲಿ ಯಾವುದೇ ವಿಷಯಗಳು ಗಮನಕ್ಕೆ ಬಂದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಮುಖೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಷ್ಮಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವ ಟೀಮ್ ಇಂಡಿಯಾದ ಈ ಆಟಗಾರ ಯಾರೆಂದು ಗುರುತಿಸಬಲ್ಲಿರಾ?

ಇದನ್ನೂ ಓದಿ: Crime News: ನರೇಶ್ ಎಂಬ ನರರಾಕ್ಷಸ: 50 ರೂಪಾಯಿಗಾಗಿ ಪುಟ್ಟ ಮಗುವಿನ ಕೊಲೆ..!

ಇದನ್ನೂ ಓದಿ: Ola Electric scooter S1: ಯಾವ ರಾಜ್ಯದಿಂದ ಅತೀ ಕಡಿಮೆ ಬೆಲೆಗೆ ಓಲಾ ಸ್ಕೂಟರ್ ಖರೀದಿಸಬಹುದು?

(There was a dispute between husband and wife Ended with Suicide)