AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ವರದಕ್ಷಿಣೆಗಾಗಿ ಕಿರುಕುಳ, ಗರ್ಭಿಣಿ ಪತ್ನಿಗೆ ಥಳಿಸಿ, ರಸ್ತೆಯಲ್ಲೇ ತಲಾಖ್ ನೀಡಿದ ಪತಿ

ಹೆಚ್ಚು ವರದಕ್ಷಿಣೆ ಸಿಗಲಿಲ್ಲ ಎಂದು ಗರ್ಭಿಣಿ ಪತ್ನಿಗೆ ಥಳಿಸಿ ರಸ್ತೆಯಲ್ಲೇ ವ್ಯಕ್ತಿಯೊಬ್ಬ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವರದಕ್ಷಿಣೆಗಾಗಿ ಒತ್ತಾಯಿಸಿ ಆಕೆಯನ್ನು ಥಳಿಸಿ ಹಿಂಸಿಸಿದ್ದು, ಇದು ಆಕೆಯ ಹುಟ್ಟಲಿರುವ ಮಗುವಿನ ಸಾವಿಗೆ ಕಾರಣವಾಯಿತು

ಉತ್ತರ ಪ್ರದೇಶ: ವರದಕ್ಷಿಣೆಗಾಗಿ ಕಿರುಕುಳ, ಗರ್ಭಿಣಿ ಪತ್ನಿಗೆ ಥಳಿಸಿ, ರಸ್ತೆಯಲ್ಲೇ ತಲಾಖ್ ನೀಡಿದ ಪತಿ
ಮದುವೆ, ತಲಾಖ್
ನಯನಾ ರಾಜೀವ್
|

Updated on: Aug 02, 2023 | 10:24 AM

Share

ಹೆಚ್ಚು ವರದಕ್ಷಿಣೆ ಸಿಗಲಿಲ್ಲ ಎಂದು ಗರ್ಭಿಣಿ ಪತ್ನಿಗೆ ಥಳಿಸಿ ರಸ್ತೆಯಲ್ಲೇ ವ್ಯಕ್ತಿಯೊಬ್ಬ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವರದಕ್ಷಿಣೆಗಾಗಿ ಒತ್ತಾಯಿಸಿ ಆಕೆಯನ್ನು ಥಳಿಸಿ ಹಿಂಸಿಸಿದ್ದು, ಇದು ಆಕೆಯ ಹುಟ್ಟಲಿರುವ ಮಗುವಿನ ಸಾವಿಗೆ ಕಾರಣವಾಯಿತು. ತ್ರಿವಳಿ ತಲಾಖ್ ಕಾಯ್ದೆ, ವರದಕ್ಷಿಣೆ ಕಿರುಕುಳ, ಕೊಲೆ ಯತ್ನ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ವ್ಯಕ್ತಿ ಮತ್ತು ಅವರ ಕುಟುಂಬದ ಆರು

ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಮನೋಜ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ. 2020 ರ ನವೆಂಬರ್‌ನಲ್ಲಿ ಇಬ್ಬರು ವಿವಾಹವಾಗಿದ್ದರು. ಮದುವೆಯ ಸಮಯದಲ್ಲಿ ತನ್ನ ಅತ್ತೆಯಂದಿರಿಗೆ ವರದಕ್ಷಿಣೆಯಾಗಿ ತನ್ನ ತಂದೆ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ನೀಡಿದ್ದರು ಎಂದು ಮಹಿಳೆ ಹೇಳಿದ್ದಾಳೆ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟು, ಸ್ಯಾನಿಟೈಸರ್ ಕುಡಿಸಿ ಹತ್ಯೆ ಮಾಡಿದ ಪುರುಷರ ಗುಂಪು

ಪತಿಗೆ ಮರು ಮದುವೆ ಮಾಡಲು ಮನೆಯವರು ಪ್ರಯತ್ನಿಸಿದ್ದಾರೆ, ಅತ್ತೆಯ ಕಿರುಕುಳದಿಂದಾಗಿ ಗರ್ಭಪಾತವಾಗಿದೆ ಎಂದು ಮಹಿಳೆ ಅಳಲು ತೋಡಿಕೊಂಡಳು. ಪ್ರಕರಣದ ತನಿಖೆ ನಡೆಯುತ್ತಿದ್ದು, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಿಸಲು ಯತ್ನಿಸುತ್ತಿದ್ದಾರೆ.

ಆದರೆ, ಆಕೆಯ ಪತಿ ಮತ್ತು ಆತನ ಕುಟುಂಬದವರು ಹೆಚ್ಚಿನ ಹಣ ಕೇಳುತ್ತಲೇ ಇದ್ದರು. ಆಕೆಯ ಪತಿ, ಅತ್ತೆ, ಅತ್ತಿಗೆ ಮತ್ತು ಇತರರು ನಂತರ ಸ್ವಲ್ಪ ಹೆಚ್ಚು ವರದಕ್ಷಿಣೆ ತೆಗೆದುಕೊಂಡರು. ಆದರೆ, ಇನ್ನೂ 2 ಲಕ್ಷ ರೂ. ರೂ ಕೊಡುವಂತೆ ಒತ್ತಾಯಿಸುತ್ತಿದ್ದರು ಎಂದು ಆಕೆ ಹೇಳಿದ್ದಾಳೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ