Success Story: ಮನಸಿದ್ದರೆ ಮಾರ್ಗ; ರಿಕ್ಷಾ ಚಾಲಕನ ಮಗ ಈಗ ಹಿರಿಯ ಐಎಎಸ್​ ಅಧಿಕಾರಿ

2004-05ರಲ್ಲಿ ಗೋವಿಂದ್‌ ಯುಪಿಎಸ್‌ಸಿ ಓದಲು ದೆಹಲಿಗೆ ತೆರಳಿದ್ದರು. ಆದರೆ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಆದರೂ ಅವರ ತಂದೆ ತನ್ನ ಮಗನ ಕನಸನ್ನು ನನಸಾಗಿಸಲು ನಿರ್ಧರಿಸಿದರು. ಹೀಗಾಗಿ, ಮತ್ತೆ ತಮ್ಮ 14 ಸೈಕಲ್ ರಿಕ್ಷಾಗಳನ್ನು ಮಾರಾಟ ಮಾಡಿದರು.

Success Story: ಮನಸಿದ್ದರೆ ಮಾರ್ಗ; ರಿಕ್ಷಾ ಚಾಲಕನ ಮಗ ಈಗ ಹಿರಿಯ ಐಎಎಸ್​ ಅಧಿಕಾರಿ
ತಂದೆಯ ಜೊತೆ ಐಎಎಸ್​ ಅಧಿಕಾರಿ ಗೋವಿಂದ್ ಜೈಸ್ವಾಲ್
Follow us
|

Updated on: Oct 25, 2023 | 11:31 AM

ವಾರಾಣಸಿ: ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಕುಳಿತರೆ ಅದೇ ನಮ್ಮ ಸೋಲಿಗೆ ದೊಡ್ಡ ಕಾರಣವಾಗುತ್ತದೆ. ಮನಸಿಟ್ಟು ಮಾಡಿದ ಕೆಲಸ ನಮ್ಮ ಕೈ ಹಿಡಿದೇ ಹಿಡಿಯುತ್ತದೆ ಎಂಬುದಕ್ಕೆ 2006ರಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಗೋವಿಂದ್ ಜೈಸ್ವಾಲ್ ಅವರೇ ಉದಾಹರಣೆ. ತಮ್ಮ 22ನೇ ವಯಸ್ಸಿನಲ್ಲಿ 48ನೇ ರ್ಯಾಂಕ್​ನೊಂದಿಗೆ ತೇರ್ಗಡೆಯಾಗಿರುವ ಗೋವಿಂದ್ ಜೈಸ್ವಾಲ್ ಅವರ ಕತೆ ಬಹಳ ಸ್ಫೂರ್ತಿದಾಯಕವಾಗಿದೆ. ಏಕೆಂದರೆ ಅವರ ತಂದೆ ಓರ್ವ ಸೈಕಲ್ ರಿಕ್ಷಾ ಚಾಲಕರಾಗಿದ್ದರು.

ಗೋವಿಂದ್ ಅವರ ಕುಟುಂಬ ವಾರಾಣಸಿಯಲ್ಲಿ ವಾಸವಾಗಿತ್ತು. ಅವರ ತಂದೆ ಮೊದಲು 35 ಸೈಕಲ್ ರಿಕ್ಷಾಗಳನ್ನು ಇಟ್ಟುಕೊಂಡಿದ್ದರು. ಆದರೆ, ಅವರು ತಮ್ಮ ತಾಯಿಯ ಅನಾರೋಗ್ಯದ ಹಣವನ್ನು ಹೊಂದಿಸಲು ಅವರು ಅವುಗಳಲ್ಲಿ 20 ಸೈಕಲ್ ರಿಕ್ಷಾಗಳನ್ನು ಮಾರಾಟ ಮಾಡಬೇಕಾಯಿತು. ಅದೇ ವರ್ಷ ಅವರ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: Success Story: ದಿನಕ್ಕೆ 10 ರೂ. ದುಡಿಯುತ್ತಿದ್ದ ದಿನಗೂಲಿ ನೌಕರ ಈಗ ಐಎಎಸ್​ ಅಧಿಕಾರಿ!

2004-05ರಲ್ಲಿ ಗೋವಿಂದ್‌ ಯುಪಿಎಸ್‌ಸಿ ಓದಲು ದೆಹಲಿಗೆ ತೆರಳಿದ್ದರು. ಆದರೆ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಆದರೂ ಅವರ ತಂದೆ ತನ್ನ ಮಗನ ಕನಸನ್ನು ನನಸಾಗಿಸಲು ನಿರ್ಧರಿಸಿದರು. ಹೀಗಾಗಿ, ಮತ್ತೆ ತಮ್ಮ 14 ಸೈಕಲ್ ರಿಕ್ಷಾಗಳನ್ನು ಮಾರಾಟ ಮಾಡಿದರು. ಕೊನೆಗೆ ತನಗಾಗಿ ಕೇವಲ ಒಂದು ಸೈಕಲ್ ರಿಕ್ಷಾವನ್ನು ಇಟ್ಟುಕೊಂಡಿದ್ದರು.

ಗೋವಿಂದ್ ಅವರ ತಂದೆ ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರೂ ತಲೆಕೆಡಿಸಿಕೊಳ್ಳದೆ ಸೈಕಲ್ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ತನ್ನ ಹೆಂಡತಿ, ತಾಯಿ, ಮಗನಿಗಾಗಿ ಗೋವಿಂದ್ ಅವರ ತಂದೆ ತಮ್ಮದೆಲ್ಲವನ್ನೂ ತ್ಯಾಗ ಮಾಡಿದರು. ಅದನ್ನು ಮನಸಿನಲ್ಲಿಟ್ಟುಕೊಂಡು ಕಷ್ಟಪಟ್ಟು ಓದಿದ ಗೋವಿಂದ್ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆದರು.

ಇದನ್ನೂ ಓದಿ: Success Story: 16ನೇ ವರ್ಷದಲ್ಲೇ ಶ್ರವಣ ಶಕ್ತಿ ಕಳೆದುಕೊಂಡ ಸೌಮ್ಯ ಈಗ ಐಎಎಸ್​ ಅಧಿಕಾರಿ

ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಓದಿದ ಗೋವಿಂದ್ 48ನೇ ರ್ಯಾಂಕ್ ಪಡೆದು ಇದೀಗ ಹಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಇದೀಗ ಯುಪಿಎಸ್​ಸಿ ಪರೀಕ್ಷೆ ಬರೆಯಲು ಪ್ರಯತ್ನಿಸುತ್ತಿರುವ ಎಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್