AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್: ಎಎಪಿ ಸಿಎಂ ಅಭ್ಯರ್ಥಿ ಇಸುದಾನ್ ಗಢ್ವಿ ರೋಡ್ ಶೋ ವೇಳೆ ಖಾಲಿ ರಸ್ತೆ, ವೈರಲ್ ವಿಡಿಯೊ 6 ತಿಂಗಳು ಹಿಂದಿನದ್ದು

Fact Check ಶ್ರೀನಿವಾಸ್ ಬಿವಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಗಳಲ್ಲಿ, ವಿಡಿಯೊ ಹಳೆಯದು ಎಂದು ಹಲವರು ಪ್ರತಿಕ್ರಿಯಿಸಿದ್ದು ವೈರಲ್ ವಿಡಿಯೊದ ಫ್ರೇಮ್‌ಗಳನ್ನು ಎಎಪಿ ಗುಜರಾತ್‌ನ ಯೂಟ್ಯೂಬ್ ಪೇಜ್​​ಗೆ ಅಪ್‌ಲೋಡ್ ಮಾಡಿದ ಆರು ತಿಂಗಳ ಹಳೆಯ ವಿಡಿಯೊದೊಂದಿಗೆ ಹೋಲಿಸಿದ್ದಾರೆ.

ಗುಜರಾತ್: ಎಎಪಿ ಸಿಎಂ ಅಭ್ಯರ್ಥಿ ಇಸುದಾನ್ ಗಢ್ವಿ ರೋಡ್ ಶೋ ವೇಳೆ ಖಾಲಿ ರಸ್ತೆ, ವೈರಲ್ ವಿಡಿಯೊ 6 ತಿಂಗಳು ಹಿಂದಿನದ್ದು
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ ವಿಡಿಯೊ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 29, 2022 | 9:27 PM

Share

ಗುಜರಾತ್‌ ಚುನಾವಣೆಗೆ (Gujarat Assembly Election)ಕೆಲವೇ ದಿನಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳು ಜಿದ್ದಾಜಿದ್ದಿನ ಪೈಪೋಟಿಗೆ ಸಿದ್ಧತೆ ನಡೆಸಿದ್ದು ಅಬ್ಬರದ ಪ್ರಚಾರದಲ್ಲಿ ನಿರತವಾಗಿವೆ, ಅಧಿಕಾರದಲ್ಲಿರುವ ಬಿಜೆಪಿ, ಕಾಂಗ್ರೆಸ್ ಮತ್ತು  ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದೆ. ಈ ನಡುವೆ ಎಎಪಿಯ(Aam Aadmi Party) ಮುಖ್ಯಮಂತ್ರಿ ಅಭ್ಯರ್ಥಿ ಇಸುದಾನ್ ಗಢ್ವಿ (Isudan Gadhvi)ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಢ್ವಿ ಅವರು ಚಲಿಸುತ್ತಿರುವ ವಾಹನದ ಮೇಲಿಂದ ಕೈ ಬೀಸುತ್ತಾ ರೋಡ್ ಶೋ ನಡೆಸುತ್ತಿರುವ ವಿಡಿಯೊ ಅದು. ಆದರೆ, ರಸ್ತೆ ಎರಡೂ ಕಡೆ ಖಾಲಿಯಾಗಿ ಕಾಣುತ್ತಿದ್ದು, ಜನಸಂದಣಿ ಕಾಣುತ್ತಿಲ್ಲ. ಕಾಂಗ್ರೆಸ್ ನಾಯಕರು ಸೇರಿದಂತೆ ವಿಡಿಯೊವನ್ನು ಶೇರ್ ಮಾಡಿ ಎಎಪಿ ನಾಯಕನನ್ನು ಲೇವಡಿ ಮಾಡಿದ್ದಾರೆ. ಎಎಪಿಯ ಗುಜರಾತ್ ಸಿಎಂ ಅಭ್ಯರ್ಥಿಯ ರೋಡ್‌ಶೋನ ದೃಶ್ಯಗಳನ್ನು ನೋಡಿದರೆ ಇಡೀ ಗುಜರಾತ್  ನೆರೆದಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ್ ಬಿವಿ ಮತ್ತು ಕೇಶವ್ ಚಂದ್ ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಅದೇ ಶೀರ್ಷಿಕೆಯ ಜೊತೆಗೆ ಹಿಮಾಚಲ ಪ್ರದೇಶ ಯುವ ಕಾಂಗ್ರೆಸ್, ಮಧ್ಯಪ್ರದೇಶ ಯುವ ಕಾಂಗ್ರೆಸ್ ಮತ್ತು ಯುಪಿ-ಪಶ್ಚಿಮ ಯುವ ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಪುಟಗಳಿಂದ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ವಿಡಿಯೊ ಆರು ತಿಂಗಳಿಗಿಂತ ಹಳೆಯದ್ದು. ಗಢ್ವಿ ಅವರನ್ನು ಗುಜರಾತ್‌ನಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೊದಲಿನ ವಿಡಿಯೊ ಎಂದು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿ ಮಾಡಿದೆ.

ಫ್ಯಾಕ್ಟ್ ಚೆಕ್ ಶ್ರೀನಿವಾಸ್ ಬಿವಿ ಅವರ ಟ್ವೀಟ್‌ಗೆ ಪ್ರತಿಕ್ರಿಯೆಗಳಲ್ಲಿ, ವಿಡಿಯೊ ಹಳೆಯದು ಎಂದು ಹಲವರು ಪ್ರತಿಕ್ರಿಯಿಸಿದ್ದು ವೈರಲ್ ವಿಡಿಯೊದ ಫ್ರೇಮ್‌ಗಳನ್ನು ಎಎಪಿ ಗುಜರಾತ್‌ನ ಯೂಟ್ಯೂಬ್ ಪೇಜ್​​ಗೆ ಅಪ್‌ಲೋಡ್ ಮಾಡಿದ ಆರು ತಿಂಗಳ ಹಳೆಯ ವಿಡಿಯೊದೊಂದಿಗೆ ಹೋಲಿಸಿದ್ದಾರೆ.  ಈ ಸುಳಿವಿನ ಸಹಾಯದಿಂದ ಯೂಟ್ಯೂಬ್‌ನಲ್ಲಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಈ ವರ್ಷದ ಮೇನಲ್ಲಿ ಎಎಪಿ ಗುಜರಾತ್‌ನ ಚಾನಲ್‌ಗೆ ಅಪ್‌ಲೋಡ್ ಮಾಡಿದ ಇದೇ ರೀತಿಯ ರೋಡ್‌ಶೋ ವಿಡಿಯೊ ಇದೆ. ಈ ವಿಡಿಯೊದಲ್ಲಿ ಗಢ್ವಿ ಅವರು ಇದೇ ರೀತಿಯ ಉಡುಪಿನಲ್ಲಿ ರ್ಯಾಲಿಯನ್ನು ಮುನ್ನಡೆಸುತ್ತಿರುವುದನ್ನು ಕಾಣಬಹುದು. ಕೆಲವು ಕೀವರ್ಡ್‌ಗಳನ್ನು ನೀಡಿ ಹುಡುಕಿದಾಗ ಆರು ತಿಂಗಳ ಹಿಂದೆ ಎಎಪಿ ಗುಜರಾತ್‌ನ ಅಧಿಕೃತ ಫೇಸ್‌ಬುಕ್ ಪುಟಕ್ಕೆ ಅಪ್‌ಲೋಡ್ ಮಾಡಲಾದ ಮೂಲ ವಿಡಿಯೊ ಸಿಕ್ಕಿದೆ.ಫೋರ್​​ಬಂದರ್‌ನಲ್ಲಿ ನಡೆದ ಪರಿವರ್ತನ್ ಯಾತ್ರೆ ಸಮಯದಲ್ಲಿ ಇದನ್ನು ಸೆರೆಹಿಡಿಯಲಾಗಿದೆ ಎಂದು ಗುಜರಾತಿ ಭಾಷೆಯಲ್ಲಿ ಶೀರ್ಷಿಕೆ ಬರೆದಿದೆ. ವೈರಲ್ ವಿಡಿಯೊದ ಫ್ರೇಮ್ ಮತ್ತು ಮೂಲ ವಿಡಿಯೊದಿಂದ ಫ್ರೇಮ್‌ಗಳನ್ನು ಹೋಲಿಸಿದ ನಂತರ, ಎರಡೂ ವಿಡಿಯೊಗಳು ಒಂದೇ ಅಂತ ಗೊತ್ತಾಗಿದೆ.

ಮುಖ್ಯಮಂತ್ರಿ ಅಭ್ಯರ್ಥಿಯ ಅಧಿಕೃತ ಹೆಸರನ್ನು ಘೋಷಿಸುವ ಸುಮಾರು ಆರು ತಿಂಗಳ ಮೊದಲು ಈ ವರ್ಷದ ಮೇ 17 ರಂದು ಈ ಲೈವ್ ವಿಡಿಯೊವನ್ನು AAP ಗುಜರಾತ್‌ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ವರದಿಯ ಪ್ರಕಾರ, ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವೆಂಬರ್ 4 ರಂದು ಗಢ್ವಿಯ ಹೆಸರನ್ನು ಘೋಷಿಸಿದರು. ಆದ್ದರಿಂದ, ಈ ರೋಡ್ ಶೋ ವೇಳೆ ಗಢ್ವಿ ಗುಜರಾತ್‌ಗೆ ಎಎಪಿಯ ಸಿಎಂ ಅಭ್ಯರ್ಥಿಯಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್