​2ನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಹೆಸರು ಫೈನಲ್? ಕಳೆದ ಬಾರಿ ಸೋತ 9 ಅಭ್ಯರ್ಥಿಗಳಿಗೆ ಟಿಕೆಟ್​ ಸಾಧ್ಯತೆ

|

Updated on: Apr 02, 2023 | 9:34 AM

ಇನ್ನೇನು ಕೆಲವೆ ದಿನಗಳಲ್ಲಿ ಕಾಂಗ್ರೆಸ್​ 2ನೇ ಪಟ್ಟಿ ಬಿಡುಗಡೆ ಮಾಡಲಿದೆ. ಈ ನಿಟ್ಟಿನಲ್ಲಿ ಗುರುವಾರ (ಮಾ.30) ರಂದು ಬೆಂಗಳೂರಿನ ಹೊರವಲಯದಲ್ಲಿ ಸ್ಕ್ರೀನಿಂಗ್​ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ಟಿಕೆಟ್​​ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ರಾಜ್ಯ ಕಾಂಗ್ರೆಸ್​ 52 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಗೊಳಿಸಿ ಹೈಕಮಾಂಡ್​ಗೆ ಕಳುಹಿಸಿದೆ.

​2ನೇ ಪಟ್ಟಿಯಲ್ಲಿ ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಹೆಸರು ಫೈನಲ್? ಕಳೆದ ಬಾರಿ ಸೋತ 9 ಅಭ್ಯರ್ಥಿಗಳಿಗೆ ಟಿಕೆಟ್​ ಸಾಧ್ಯತೆ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೆಂಗಳೂರು: ಮುಂದಿನ ತಿಂಗಳು ಮೇ 10ರಂದು ಕರ್ನಾಟಕ ವಿಧಾಸನಸಭೆ ಚುನಾವಣೆ (Karnataka Assembly Election) ಮತದಾನ (Voting) ನಡೆಯಲಿದ್ದು, ಪ್ರಮುಖ ರಾಜಕೀಯ ಪಕ್ಷಗಳ ಪ್ರಚಾರ ಕಾವೇರಿದೆ. ಕಾಂಗ್ರೆಸ್ (Congress)​ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇನ್ನೇನು ಕೆಲವೆ ದಿನಗಳಲ್ಲಿ 2ನೇ ಪಟ್ಟಿ ಬಿಡುಗಡೆ ಮಾಡಲಿದೆ. ಈ ನಿಟ್ಟಿನಲ್ಲಿ ಗುರುವಾರ (ಮಾ.30) ರಂದು ಬೆಂಗಳೂರಿನ ಹೊರವಲಯದಲ್ಲಿ ಸ್ಕ್ರೀನಿಂಗ್​ ಕಮಿಟಿ ಸಭೆ ನಡೆದಿದ್ದು, ಸಭೆಯಲ್ಲಿ ಟಿಕೆಟ್​​ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ರಾಜ್ಯ ಕಾಂಗ್ರೆಸ್​ 52 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಗೊಳಿಸಿ ಹೈಕಮಾಂಡ್​ಗೆ ಕಳುಹಿಸಿದೆ. ಮೂಲಗಳ ಪ್ರಕಾರ 2ನೇ ಪಟ್ಟಿಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ (Siddaramiah) ಬಹುತೇಕ ಅವಕಾಶ ಸಿಗಬಹುದೆಂದು ನಿರೀಕ್ಷಿಸಲಾಗಿದೆ.

ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯನವರಿಗೆ ವರುಣಾದಿಂದ ಸ್ಪರ್ಧಿಸಲು ಟಿಕೆಟ್ ಘೋಷಣೆಯಾಗಿದ್ದು, 2ನೇ ಪಟ್ಟಿಯಲ್ಲಿ ಅವರಿಗೆ ಕೋಲಾರದಿಂದ ಟಿಕೆಟ್ ನೀಡಲು ಹೈಕಮಾಂಡ್ ಒಪ್ಪಬೇಕಿದೆ. 2ನೇ ಪಟ್ಟಿಯನ್ನು ಹೈಕಮಾಂಡ್​ ಫೈನಲ್​ ಮಾಡಲಿದ್ದು, ಏಪ್ರಿಲ್​ 4 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತು ಉನ್ನತ ಮಟ್ಟದ ನಾಯಕರ ಸಭೆ ನಡೆಯಲಿದೆ.

ಇದನ್ನೂ ಓದಿ: ಮಾನನಷ್ಟ ಮೊಕದ್ದಮೆಯಲ್ಲಿ ವಿನಾಯಿತಿ ಕೋರಿದ ರಾಹುಲ್ ಗಾಂಧಿ ಅರ್ಜಿ ಏಪ್ರಿಲ್ 15 ರಂದು ವಿಚಾರಣೆ

ಇನ್ನು, ಉಳಿದ 48 ವಿಧಾನಸಭಾ ಕ್ಷೇತ್ರಗಳಿಗೆ ಸ್ಕ್ರೀನಿಂಗ್​ ಕಮಿಟಿ ಇಬ್ಬರು ಹೆಸರುಗಳನ್ನು ಅಂತಿಮಗೊಳಿಸಿದೆ. ಒಬ್ಬರ ಹೆಸರನ್ನೇ ಅಂತಿಮಗೊಳಿಸಿ, ಪಟ್ಟಿ ಕಳುಹಿಸುವಂತೆ ಹೈಕಮಾಂಡ್​​, ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎಂದು ಕಾಂಗ್ರೆಸ್​ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. 52 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್​ ಏಪ್ರಿಲ್​ 4 ರಂದು ಅಂತಿಮಗೊಳಿಸುತ್ತದೆ. ಉಳಿದ 48 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಯ್ದಿರಿಸಲಾಗುತ್ತದೆ.

ಈ ಬಾರಿ ಕಾಂಗ್ರೆಸ್,​ 2018ರ ವಿಧಾನಸಭೆ ಚುನಾವಣೆಯಲ್ಲಿ 4 ಸಾವಿರ ಮತಗಳ ಅಂತರದಿಂದ ಸೋತ 9 ಅಭ್ಯರ್ಥಿಗಳಿಗೆ ಟಿಕೆಟ್​ ನೀಡಲಿದೆ. ಹರಿಹರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎಸ್​.ರಾಮಪ್ಪ ಅವರಿಗೆ ಟಿಕೆಟ್​ ಸಿಗಲಿದ್ದು, ಪಾವಗಡ ಕ್ಷೇತ್ರದಿಂದ ಹಾಲಿ ಶಾಸಕ ವೆಂಕಟರಮಣಪ್ಪ ಅವರ ಪುತ್ರ ಎಚ್‌ವಿ ವೆಂಕಟೇಶ್​​ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

ಯಾದಗಿರಿ ಕ್ಷೇತ್ರದಿಂದ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎ ಬಿ ಮಾಲಕರೆಡ್ಡಿ ಅವರ ಪುತ್ರಿ ಅನುರಾಗ್ ಮಾಲಕರೆಡ್ಡಿ ಹೆಸರನ್ನು ರಾಜ್ಯ ಘಟಕ ಸೂಚಿಸಿದೆ. ಮಾಲಕರೆಡ್ಡಿ ಶೀಘ್ರದಲ್ಲೇ ಕಾಂಗ್ರೆಸ್ ಸೇರುವ ನಿರೀಕ್ಷೆಯಿದೆ.

ಎರಡನೇ ಹಂತದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

1. ಗುರುಮಿಠಕಲ್ : ಬಾಬುರಾವ್ ಚಿಂಚನಸೂರ್

2. ಹೊನ್ನಾಳಿ : ಡಿ ಜಿ ಶಾಂತನಗೌಡ

3. ಬಾದಾಮಿ : ಬಿ ಚಿಮ್ಮನಕಟ್ಟಿ

4. ಸಿಂದನೂರು : ಹಂಪನಗೌಡ ಬಾದರ್ಲಿ

5. ಹುಬ್ಬಳ್ಳಿ-ಧಾರವಾಡ ಪಶ್ಚಿಮ : ಮೋಹನ್ ಲಿಂಬಿಕಾಯಿ

6. ಮೊಳಕಾಲ್ಮುರು : ಎನ್ ವೈ ಗೋಪಾಲಕೃಷ್ಣ

7. ಕಡೂರು : ವೈ ಎಸ್ ವಿ ದತ್ತ

8. ತಿರಿಕೆರೆ : ಶ್ರೀನಿವಾಸ್​​

9. ಕಲಘಟಗಿ: ಸಂತೋಷ ಲಾಡ್​

10. ಮೂಡಿಗೆರೆ: ನಯನಾ ಮೋಟಮ್ಮ

11. ಚಿಕ್ಕಮಗಳೂರು : ಹೆಚ್ ಡಿ ತಮ್ಮಯ್ಯ

12. ಅರಸೀಕೆರೆ : ಕೆ ಎಂ ಶಿವಲಿಂಗೇಗೌಡ

13. ಗುಬ್ಬಿ : ಎಸ್ ಆರ್ ಶ್ರೀನಿವಾಸ್

14. ಪುಲಕೇಶಿನಗರ : ಆರ್ ಅಖಂಡ ಶ್ರೀನಿವಾಸ್ ಮೂರ್ತಿ

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:05 am, Sun, 2 April 23