ಅಯೋಧ್ಯೆಗೆ ಬರುವ ಪ್ರಧಾನಿಗೆ ಹೂವಿನ ಸ್ವಾಗತ: ಅಭಿಮಾನ ತೋರಿದ ಇಕ್ಬಾಲ್ ಅನ್ಸಾರಿ
Iqbal Ansari wants Narendra Modi to be PM again: ನರೇಂದ್ರ ಮೋದಿ ನೇತೃತ್ವದ ಸರ್ಕಾರದ 10 ವರ್ಷದ ಸಾಧನೆ ಉತ್ತಮವಾಗಿದೆ. ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಬಾಬ್ರಿ ಮಸೀದಿ ಪರ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಬಯಸಿದ್ದಾರೆ. ಅಯೋಧ್ಯೆಗೆ ಇಂದು ಭಾನುವಾರ ಆಮಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಹೂವಿನಿಂದ ಸ್ವಾಗತಿಸಲು ತಯಾರಾಗಿರುವುದಾಗಿ ಅನ್ಸಾರಿ ಹೇಳಿದ್ದಾರೆ. ಅಯೋಧ್ಯೆ ಇರುವ ಫೈಜಾಬಾದ್ ಸೇರಿದಂತೆ ಉತ್ತರಪ್ರದೇಶದ 14 ಸ್ಥಾನಗಳಿಗೆ ಮೇ 20ರಂದು ಮತದಾನ ನಡೆಯುತ್ತಿದೆ.

ನವದೆಹಲಿ, ಮೇ 5: ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ಉತ್ತರಪ್ರದೇಶದ ಅಯೋಧ್ಯೆ ನಗರದಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆ (Lok Sabha elections 2024) ನಡುವೆ ಅವರು ಮೊದಲ ಬಾರಿಗೆ ಅಯೋಧ್ಯೆಗೆ ಹೋಗುತ್ತಿರುವುದು. ಪ್ರಧಾನಿ ಭೇಟಿಗಾಗಿ ಅಯೋಧ್ಯೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ರಾಮಮಂದಿರವನ್ನು ಸುಂದರವಾಗಿ ಅಲಂಕರಿಸಲಾಗಿದೆ. ಅವರ ಭೇಟಿಯ ಬಗ್ಗೆ ಜನರಲ್ಲಿ ಅಪಾರ ಉತ್ಸಾಹವಿದೆ. ಸಂಜೆ 7 ಗಂಟೆ ಸುಮಾರಿಗೆ ರಾಮಮಂದಿರದಲ್ಲಿರುವ ರಾಮಲಲ್ಲಾದ ದರ್ಶನ ಮಾಡಲಿದ್ದಾರೆ. ಇದಾದ ಬಳಿಕ ನರೇಂದ್ರ ಮೋದಿ ಅವರಿಂದ ರೋಡ್ ಶೋ ನಡೆಯಲಿದೆ.
ಇದೇ ವೇಳೆ, ಬಾಬ್ರಿ ಮಸೀದಿ ರಾಮ ಜನ್ಮಭೂಮಿ ವಿವಾದದ ಕೋರ್ಟ್ ಕೇಸ್ನಲ್ಲಿ ಮಸೀದಿ ಪರವಾಗಿ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ ಪ್ರಧಾನಿ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿದ್ದಾರೆ. ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ತಮಗೆ ಖುಷಿ ಕೊಟ್ಟಿದೆ ಎಂದ ಅವರು, ಕಳೆದ 10 ವರ್ಷದ ಮೋದಿ ಸರ್ಕಾರದ ಸಾಧನೆಯನ್ನು ಪ್ರಶಂಸಿಸಿದ್ದು, ಮತ್ತೊಮ್ಮೆ ಅವರೇ ಪ್ರಧಾನಿ ಆಗಲಿ ಎಂದು ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಯೋಧ್ಯೆ ಮಂಗಳಕರವಾಗಿದೆ. ಅವರ ರ್ಯಾಲಿ ಯಶಸ್ವಿಯಾಗಲಿ ಎಂದು ಹೇಳಿರುವ ಇಕ್ಬಾಲ್ ಅನ್ಸಾರಿ, ಅಯೋಧ್ಯೆಗೆ ಬರುವ ಪ್ರಧಾನಿ ಅವರನ್ನು ಹೂವಿನ ಅರ್ಚೆ ಮೂಲಕ ಸ್ವಾತಿಸಲು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹೇಮಂತ್ ಕರ್ಕರೆಯನ್ನು ಕೊಂದಿದ್ದು ಪೊಲೀಸರು, ಕಸಬ್ ನಿರಪರಾಧಿ ಎಂದ ಕಾಂಗ್ರೆಸ್ ನಾಯಕ
ಇಕ್ಬಾಲ್ ಅನ್ಸಾರಿ ಮಸೀದಿ ಮಂದಿರ ವಿವಾದದಲ್ಲಿ ಬಾಬ್ರಿ ಪರ ಕಕ್ಷಿದಾರರಾಗಿದ್ದರೂ ಸುಪ್ರೀಂಕೋರ್ಟ್ನಿಂದ ಹಿಂದೂಗಳ ಪರವಾಗಿ ತೀರ್ಪು ಬಂದಾಗ ಅದನ್ನು ಸ್ವಾಗತಿಸಿದ ಕೆಲವೇ ಮುಸ್ಲಿಮರಲ್ಲಿ ಅವರೂ ಒಬ್ಬರು.
#WATCH | Ayodhya, Uttar Pradesh | On PM Modi’s visit to Ayodhya, former litigant in Ayodhya land dispute case, Iqbal Ansari says, “We want Prime Minister Narendra Modi’s rally in Ayodhya to be successful. Ayodhya is auspicious for PM Modi. We are ready to welcome him to Ayodhya… pic.twitter.com/JHgmJNHDqZ
— ANI (@ANI) May 5, 2024
ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ದಿನಚರಿ
ನರೇಂದ್ರ ಮೋದಿ ಅವರು ನಿನ್ನೆ ಶನಿವಾರ ಸಂಜೆ ಉತ್ತರಪ್ರದೇಶಕ್ಕೆ ಆಗಮಿಸಿದರು. ಇಂದು ಮಧ್ಯಾಹ್ನ 2:45ಕ್ಕೆ ಇತಾವಾ ಎಂಬ ಎಸ್ಬಿ ಭದ್ರಕೋಟೆಯಲ್ಲಿ ಭಾಷಣ ಮಾಡಿದ್ದಾರೆ. ಧೌರಾಹರ ಎಂಬಲ್ಲಿ ಮತ್ತೊಂದು ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದಾದ ಬಳಿಕ ಅಯೋಧ್ಯೆ ತಲುಪಲಿರುವ ಮೋದಿ, ಸಂಜೆ 7ಕ್ಕೆ ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಾಲರಾಮನ ದರ್ಶನದ ಬಳಿಕ ಅವರು ಅಯೋಧ್ಯೆಯಲ್ಲಿ 2 ಕಿಮೀ ರೋಡ್ಶೋ ನಡೆಸಲಿದ್ದಾರೆ. ಸುಗ್ರೀವ ಕೋಟೆಯಿಂದ ಲತಾ ಚೌಕ್ವರೆಗೆ ಈ ರ್ಯಾಲಿ ಇರಲಿದೆ. ಈ ಮಾರ್ಗದುದ್ದಕ್ಕೂ ಪುಷ್ಟಗಳಲ್ಲಿ ಅಲಂಕಾರಣ ಮಾಡಲಾಗಿದೆ. ಕಟ್ಟುನಿಟ್ಟಿನ ಭದ್ರತೆಯನ್ನೂ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ, ಮೂವರು ಭಾರತೀಯರ ಬಂಧನ: ಜೈಶಂಕರ್ ಪ್ರತಿಕ್ರಿಯೆ
ಮೇ 20 ರಂದು ಅಯೋಧ್ಯೆಯಲ್ಲಿ ಮತದಾನ
ಮೇ 20 ರಂದು ಅಯೋಧ್ಯೆ ಇರುವ ಫೈಜಾಬಾದ್ನಲ್ಲಿ ಐದನೇ ಹಂತದ ಮತದಾನ ನಡೆಯಲಿದೆ. ಫೈಜಾಬಾದ್ನಲ್ಲಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಪರ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ. ಲಲ್ಲು ಸಿಂಗ್ 2014 ಮತ್ತು 2019 ರಲ್ಲಿ ಸತತ ಎರಡು ಬಾರಿ ಗೆದ್ದಿದ್ದರು. ಬಿಜೆಪಿ ಸತತ ಮೂರನೇ ಬಾರಿಗೆ ಅವರನ್ನು ಇಲ್ಲಿಂದ ಕಣಕ್ಕಿಳಿಸಿದೆ. ರಾಮ್ ಲಲ್ಲಾ ದರ್ಶನದ ನಂತರ ಪ್ರಧಾನಿ ಮೋದಿಯವರ ಮೆಗಾ ರೋಡ್ ಶೋ ನಡೆಯಲಿದೆ. ಸುಮಾರು ಎರಡು ಕಿಲೋಮೀಟರ್ ರೋಡ್ ಶೋ ನಡೆಯಲಿದೆ. ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮೇ 20 ರಂದು ಫೈಜಾಬಾದ್ ಸೇರಿದಂತೆ ಉತ್ತರ ಪ್ರದೇಶದ 14 ಸ್ಥಾನಗಳಿಗೆ ಮತದಾನ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




