
ರಂಗಭೂಮಿಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರೋ ಕಲಾಗಂಗೋತ್ರಿ ಈಗ ‘ಮುಖ್ಯಮಂತ್ರಿ’ ನಾಟಕದ (Mukhyamantri Play) 875ನೇ ಶೋನ ಆಯೋಜನೆ ಮಾಡಿದೆ. ಈ ವೀಕೆಂಡ್ನಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಶೋ ವೀಕ್ಷಿಸಬಹುದಾಗಿದೆ. ಹಲವು ದಶಕಗಳಿಂದ ಈ ನಾಟಕವನ್ನು ಮಾಡಿಕೊಂಡು ಬರಲಾಗುತ್ತಿದೆ. ಎಷ್ಟೇ ಶೋ ಪ್ರದರ್ಶನ ಕಂಡರೂ ಮುಖ್ಯಮಂತ್ರಿ ನಾಟಕದ ಜನಪ್ರಿಯತೆ ಎಂದಿಗೂ ಕಡಿಮೆ ಆಗಿಲ್ಲ. ಪ್ರತಿ ಬಾರಿಯೂ ಈ ನಾಟಕ ಹೌಸ್ಫುಲ್ ಪ್ರದರ್ಶನ ಕಾಣುತ್ತದೆ. ವೀಕೆಂಡ್ನಲ್ಲಿ ಈ ನಾಟಕವನ್ನು ನೀವು ನೋಡಬಹುದಾಗಿದೆ.
ಬಿವಿ ರಾಜಾರಾಮ್ ಅವರು ‘ಮುಖ್ಯಮಂತ್ರಿ’ ನಾಟಕವನ್ನು ನಿರ್ದೇಶನ ಮಾಡಿದರು. 1980ರಲ್ಲಿ ಈ ನಾಟಕದ ಮೊದಲ ಶೋ ಪ್ರದರ್ಶನ ಕಂಡಿತು. ಆಗ ಯಾರೊಬ್ಬರೂ ಈ ನಾಟಕ ಇಷ್ಟು ದೀರ್ಘ ಪ್ರಯಾಣ ಕಾಣುತ್ತದೆ ಎಂದು ಭಾವಿಸಿರಲಿಲ್ಲ. ರೆಂಜಿತ್ ಕಪೂರ್ ಅವರು ಹಿಂದಿಯಲ್ಲಿ ಬರೆದ ಕಥೆಯನ್ನು ಆಧರಿಸಿ ‘ಮುಖ್ಯಮಂತ್ರಿ’ ನಾಟಕ ಜನಿಸಿತು.
ಟಿಎಸ್ ಲೋಹಿತಾಶ್ವ ಅವರು ಈ ನಾಟಕವನ್ನು ಕನ್ನಡಕ್ಕೆ ತರ್ಜಮ್ಯ ಮಾಡಿದರು. ಅವರು ಮುಖ್ಯಮಂತ್ರಿ ಪಾತ್ರ ಮಾಡಬೇಕಿತ್ತು. ಆದರೆ, ಅವರಿಗೆ ಅನಾರೋಗ್ಯ ಆಗಿದ್ದರಿಂದ ಚಂದ್ರು ಅವರಿಗೆ ಅವಕಾಶ ಹೋಯಿತು. ಗಂಭೀರ ರಾಜಕೀಯ ವಿಚಾರ ಹೊಂದಿದ್ದ ಈ ನಾಟಕವು ಅದರ ಪ್ರಥಮ ಪ್ರದರ್ಶನದ ನಂತರ ರಾಜಕೀಯ ವಿಡಂಬನೆಯಾಗಿ ಬದಲಾಯಿತು ಅನ್ನೋದು ವಿಶೇಷ.
ಮುಖ್ಯಮಂತ್ರಿ ಚಂದ್ರುಗೆ ಬಾಯ್ಪಾಟ ಮಾಡಿಕೊಂಡು ಡೈಲಾಗ್ ಹೇಳಲು ಇಷ್ಟ ಇರಲಿಲ್ಲ. ಹೀಗಾಗಿ, ಅವರು ನಾಟಕಕ್ಕೆ ಹಾಸ್ಯದ ಟಚ್ ಕೊಟ್ಟರು. ಆ ಬಳಿಕ ಈ ನಾಟಕವನ್ನು ಎಲ್ಲರೂ ಹೆಚ್ಚು ಇಷ್ಟಪಟ್ಟರು. ಚಂದ್ರಶೇಖರ್ ಎಂದಿದ್ದವರು ಮುಖ್ಯಮಂತ್ರಿ ಚಂದ್ರು ಆಗಿ ಬದಲಾಗಲು ಈ ನಾಟಕವೇ ಕಾರಣ ಆಯಿತು.
ವರ್ಷಗಳು ಕಳೆದಂತೆ ಸ್ಥಿತಿ-ಗತಿಗಳು, ರಾಜಕೀಯ ವಿಚಾರಗಳು ಬದಲಾಗುತ್ತಾ ಬಂದಿವೆ. ಅದಕ್ಕೆ ತಕ್ಕಂತೆ ತಂಡದವರು ಡೈಲಾಗ್ನ ಬದಲಾಯಿಸುತ್ತಾ ಬಂದಿದ್ದಾರೆ. ಇದರಿಂದ ನಾಟಕ ಇನ್ನೂ ಹೊಸತನ ಕಾಪಾಡಿಕೊಂಡಿದೆ.
ಇದನ್ನೂ ಓದಿ: ಕಲ್ಪನಾ ಮೃತಪಟ್ಟಿದ್ದ ಐಬಿಯಲ್ಲಿ ರಾತ್ರಿ ಭಯನಾಕ ಅನುಭವ; ಕಿಲಕಿಲ ನಗುವಿಗೆ ಬೆಚ್ಚಿಬಿದ್ದ ಮುಖ್ಯಮಂತ್ರಿ ಚಂದ್ರು
‘ಮುಖ್ಯಮಂತ್ರಿ’ ನಾಟಕ ಮೇ 17ರಂದು ಬೆಂಗಳೂರಿನ ಜೆಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ 7 ಗಂಟೆಗೆ ಪ್ರಸಾರ ಕಾಣಲಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ಗಳು ಲಭ್ಯ ಇವೆ. ಸ್ಥಳದಲ್ಲಿ ತೆರಳಿಯೂ ನೀವು ಟಿಕೆಟ್ ಖರೀದಿಸಿಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.