AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರ ಚುಚ್ಚು ಮಾತಿಗೆ ದಿನವೂ ಕಣ್ಣೀರು ಹಾಕುತ್ತಿದ್ದೆ: ಧನುಶ್

Actor Dhanush: ಇಂದು ಸ್ಟಾರ್ ಹೀರೋಗಳಲ್ಲಿ ಒಬ್ಬರೆಂದು ಗುರುತಿಸಿಕೊಳ್ಳುವ ನಟ ಧನುಶ್, ಒಂದು ಸಮಯದಲ್ಲಿ ತೀವ್ರ ವ್ಯಂಗ್ಯ, ಟ್ರೋಲ್ ಗೆ ಗುರಿಯಾಗಿದ್ದರಂತೆ. ಜನರು ತಮ್ಮ ಬಗ್ಗೆ ಆಡುತ್ತಿದ್ದ ಮಾತುಗಳು ಕೇಳಿ ದಿನವೂ ಅಳುತ್ತಿದ್ದರಂತೆ.

ಜನರ ಚುಚ್ಚು ಮಾತಿಗೆ ದಿನವೂ ಕಣ್ಣೀರು ಹಾಕುತ್ತಿದ್ದೆ: ಧನುಶ್
ಧನುಶ್
Follow us
ಮಂಜುನಾಥ ಸಿ.
|

Updated on:Mar 08, 2023 | 5:56 PM

ತಮಿಳು ನಟ ಧನುಶ್ (Dhanush) ಈಗ ಪ್ಯಾನ್ ವರ್ಲ್ಡ್ ಸ್ಟಾರ್. ತಮಿಳು ಸಿನಿಮಾ (Kollywood) ಗಡಿ ಮೀರಿ ಹಿಂದಿ ಬಳಿಕ ಹಾಲಿವುಡ್​ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಧನುಶ್​ರ ಸಿನಿಮಾಗಳಿಗೆ ನೂರಾರು ಕೋಟಿ ಗಳಿಕೆ ಎಂಬುದು ನೀರು ಕುಡಿದಂತೆ. ಅವರಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಅವರ ನಟನೆಯನ್ನು ಮೆಚ್ಚುವ ಹಲವು ಸಿನಿಮಾ ವಿಮರ್ಶಕರಿದ್ದಾರೆ. ಆದರೆ ಒಂದು ಸಮಯದಲ್ಲಿ ಇದೇ ಧನುಶ್ ತಮ್ಮ ಲುಕ್ಸ್​ನಿಂದಾಗಿ ತೀವ್ರ ಟೀಕೆಗೆ ಒಳಗಾಗಿದ್ದರಂತೆ. ಪ್ರತಿದಿನವೂ ಕಣ್ಣೀರು ಹಾಕುತ್ತಿದ್ದರಂತೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಬಾಡಿ ಶೇಮಿಂಗ್ (Body Shaming) ಎಂಬುವುದು ನಟಿಯರನ್ನು ಮಾತ್ರವಲ್ಲ ನಟರಲ್ಲೂ ಬಾಧಿಸಿದೆ. ಅದಕ್ಕೆ ಸ್ಟಾರ್ ನಟ ಧನುಶ್ ಉದಾಹರಣೆ. ಈಗ ಸಖತ್ ಹ್ಯಾಂಡ್ಸಮ್ ಆಗಿ ಕಾಣುವ ಧನುಶ್ ಚಿತ್ರರಂಗಕ್ಕೆ ಕಾಲಿಟ್ಟಾಗ ಹೀಗಿರಲಿಲ್ಲ. ಆಗ ಲುಕ್ಸ್, ದೇಹಾಕಾರ, ಬಣ್ಣದ ಬಗ್ಗೆ ವಿಪರೀತ ಟೀಕೆಗಳನ್ನು, ಟ್ರೋಲ್​ಗಳನ್ನು ಎದುರಿಸಿದ್ದರು.

ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಧನುಶ್, ”ನಾನು ‘ಕಾದಲ್ ಕೊಂಡೇನ್’ ಸಿನಿಮಾ ಮಾಡುವಾಗ ಸೆಟ್​ನಲ್ಲಿ ಯಾರಾದರೂ ಯಾರು ಹೀರೋ ಎಂದು ಕೇಳಿದರೆ, ನಾನು ಬೇರೆಯವರನ್ನು ತೋರಿಸುತ್ತಿದ್ದೆ. ಅಷ್ಟು ಕೀಳರಿಮೆಯಿಂದ ಕೊರಗುತ್ತಿದ್ದೆ. ಆದರೆ ನಾನೇ ಹೀರೋ ಎಂದು ತಿಳಿದಾಗ ಅವರು ನನ್ನನ್ನು ವ್ಯಂಗ್ಯ ಮಾಡುತ್ತಿದ್ದರು. ನನ್ನ ಆಕಾರ, ಬಣ್ಣ ಕಂಡು ನನ್ನನ್ನು ಆಟೋ ಡ್ರೈವರ್ ಎಂದು ಕರೆಯುತ್ತಿದ್ದರು. ಆಟೋ ಡ್ರೈವರ್ ನಟನಾಗಲು ಬಂದಿದ್ದಾನೆ ಎನ್ನುತ್ತಿದ್ದರು” ಎಂದು ನೆನಪು ಮಾಡಿಕೊಂಡಿದ್ದಾರೆ.

”ಆಗೆಲ್ಲ ನನಗೆ ಬಹಳ ದುಃಖವಾಗುತ್ತಿತ್ತು, ಆಗ ನಾನಿನ್ನೂ ಚಿಕ್ಕವನು, ಅವರಿಗೆ ಎದುರು ಹೇಳುವ ಧೈರ್ಯ ನನಗೆ ಇರಲಿಲ್ಲ. ಹಾಗಾಗಿ ನಾನು ಕಾರಿನಲ್ಲಿ ಕುಳಿತು ಜೋರಾಗಿ ಅಳುತ್ತಿದ್ದೆ. ನನ್ನನ್ನು ಗೇಲಿ ಮಾಡದ ಒಬ್ಬೇ ಒಬ್ಬ ವ್ಯಕ್ತಿಯೂ ಆ ಸಿನಿಮಾದ ಸೆಟ್​ನಲ್ಲಿ ಇರಲಿಲ್ಲ” ಎಂದು ಬೇಸರದಿಂದ ಹೇಳಿದ್ದಾರೆ ನಟ ಧನುಶ್. ಅದೇ ಸಮಯಕ್ಕೆ ಅವರಿಗೆ ಅನ್ನಿಸಿತಂತೆ, ಯಾಕೆ ಒಬ್ಬ ಆಟೋ ಡ್ರೈವರ್ ಸಹ ಹೀರೋ ಆಗಬಾರದು ಎಂದು.

ಆರಂಭದ ಸಮಯದಲ್ಲಿ ಧನುಶ್ ತಮ್ಮ ಲುಕ್ಸ್​ಗಳಿಂದಾಗಿ ತೀವ್ರ ಟೀಕೆ, ಟ್ರೋಲ್​ಗಳನ್ನು ಎದುರಿಸಿದ್ದರು. ಸಣ್ಣನೆ ದೇಹದ, ಕೋಲು ಮುಖದ, ಕಪ್ಪು ಬಣ್ಣದ ಧನುಶ್ ಹೀರೋ ಮೆಟಿರಿಯಲ್ ಅಲ್ಲ ಎಂದು ಕೆಲವು ಪತ್ರಿಕೆಗಳು ಸಹ ಬರೆದಿದ್ದವು. ಆದರೆ ನಟ ಧನುಶ್ ತಮ್ಮನ್ನು ಟೀಕಿಸಿದ ಎಲ್ಲರನ್ನೂ ಸುಳ್ಳು ಮಾಡಿ ದೊಡ್ಡ ಸ್ಟಾರ್ ನಟನಾಗಿ ಬೆಳೆದರು.

‘ಹೀರೋ ಲುಕ್’ ಇಲ್ಲದ ಕಾರಣದಿಂದಲೇ ಹೀರೋ ಪಾತ್ರಗಳ ಜೊತೆಗೆ ಭಿನ್ನ ಮಾದರಿಯ ಪಾತ್ರಗಳನ್ನು ಮಾಡುತ್ತಾ, ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತ ಬಂದ ಧನುಶ್ ತಮಿಳಿನ ತಮ್ಮ ಸಮಕಾಲೀನ ನಟರಿಗಿಂತಲೂ ಹೆಚ್ಚು ಯಶಸ್ಸನ್ನು, ವಿಮರ್ಶಕರಿಂದ ಪ್ರಶಂಸೆಗಳನ್ನು ಪಡೆದುಕೊಂಡರು. ಅವರ ನಟನೆಗೆ ಮೆಚ್ಚಿ ಬಾಲಿವುಡ್, ಹಾಲಿವುಡ್ ನಿಂದಲೂ ಅವಕಾಶಗಳು ಅವರನ್ನು ಅರಸಿ ಬಂದವು. ತಂದೆಯ ಬೆಂಬಲದಿಂದಲೇ ಧನುಶ್ ಚಿತ್ರರಂಗಕ್ಕೆ ಬಂದರಾದರೂ ಇಲ್ಲಿ ನೆಲೆಗೊಂಡಿದ್ದು ಮಾತ್ರ ಸ್ವಂತ ಬಲದಿಂದಲೇ.

ಧನುಶ್ ನಟಿಸಿರುವ ‘ವಾತಿ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಕೆಲವೇ ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ. ‘ಕ್ಯಾಪ್ಟನ್ ಮಿಲ್ಲರ್’ ಹೆಸರಿನ ಸಿನಿಮಾದಲ್ಲಿ ಧನುಶ್ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಶಿವಣ್ಣ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಲಾನಿಧಿ ಮಾರನ್ ನಿರ್ಮಾಣದ ‘ರಾಯನ್’ ಹೆಸರಿನ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ ಧನುಶ್. ಇದರ ನಡುವೆ ತೆಲುಗಿನ ಖ್ಯಾತ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಇನ್ನೂ ಹೆಸರಿಡದ ದ್ವಿಭಾಷಾ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಸಾಯಿ ಪಲ್ಲವಿ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:55 pm, Wed, 8 March 23

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ