AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವೈರಸ್​ಗೆ ಬಲಿಯಾದ ಹಿರಿಯ ನಟ ಕಿಶೋರ್ ನಂದಲಸ್ಕರ್

Actor Kishore Nandlaskar Death: ಜೀವನದಲ್ಲಿ ಕಿಶೋರ್​ ತುಂಬಾ ನೊಂದಿದ್ದರು. ಅವರಿಗೆ ಸಂಸಾರದ ತೊಂದರೆಗಳು ಬಹಳಷ್ಟು ಇದ್ದವು. ಕುಟುಂಬ ಸದಸ್ಯರ ಜೊತೆ ಅವರು ವಾಸಿಸುತ್ತ ಇರಲಿಲ್ಲ.

ಕೊರೊನಾ ವೈರಸ್​ಗೆ ಬಲಿಯಾದ ಹಿರಿಯ ನಟ ಕಿಶೋರ್ ನಂದಲಸ್ಕರ್
ಕಿಶೋರ್ ನಂದಲಸ್ಕರ್
Follow us
ಮದನ್​ ಕುಮಾರ್​
|

Updated on: Apr 20, 2021 | 8:13 PM

ದೇಶದೆಲ್ಲೆಡೆ ಕೊರೊನಾ ವೈರಸ್​ ರಣಕೇಕೆ ಮುಂದುವರಿದಿದೆ. ಪ್ರಮುಖ ನಗರಗಳಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಎಲ್ಲಾ ವಯಸ್ಸಿನವರೂ ಈ ಮಹಾಮಾರಿಗೆ ಟಾರ್ಗೆಟ್​ ಆಗುತ್ತಿದ್ದಾರೆ. ಕೊರೊನಾ ಎರಡನೇ ಅಲೆಗೆ ಅನೇಕ ಸೆಲೆಬ್ರಿಟಿಗಳು ಕೂಡ ನಿಧನರಾಗುತ್ತಿದ್ದಾರೆ. ಹಿರಿಯ ನಟ ಕಿಶೋರ್​ ನಂದಲಸ್ಕರ್​ ಅವರು ಮಂಗಳವಾರ (ಏ.20) ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಕಿಶೋರ್​ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ.

ಹಿಂದಿ ಮತ್ತು ಮರಾಠಿ ಸಿನಿಮಾಗಳ ಮೂಲಕ ಕಿಶೋರ್​ ನಂದಲಸ್ಕರ್​ ಫೇಮಸ್​ ಆಗಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಿಶೋರ್​ ನಿಧನರಾದ ಸುದ್ದಿಯನ್ನು ಅವರು ಮೊಮ್ಮಗ ಖಚಿತಪಡಿಸಿದ್ದಾರೆ. ಕಳೆದ ಬುಧವಾರ ಅವರಿಗೆ ಕೊರೊನಾ ಪಾಸಿಟಿವ್​ ಆಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಏ.20ರಂದು ಮಧ್ಯಾಹ್ನ 12.30ರ ಸುಮಾರಿಗೆ ಇಹಲೋಕ ತ್ಯಜಿಸಿದರು.

1989ರಲ್ಲಿ ಕಿಶೋರ್​ ಅವರು ಸಿನಿಮಾ ಲೋಕಕ್ಕೆ ಕಾಲಿಟ್ಟರು. ಅಂದಿನಿಂದಲೂ ಅವರು ಬೇಡಿಕೆಯ ಪೋಷಕನಟನಾಗಿದ್ದರು. ಖಾಕಿ, ವಾಸ್ತವ್​: ದ ರಿಯಾಲಿಟಿ, ಸಿಂಘಂ, ಜಿಸ್​ ದೇಶ್​ ಮೈ ಗಂಗಾ ರೆಹ್ತಾ ಹೈ, ಸಿಂಬಾ ಮುಂತಾದ ಹಿಂದಿ ಸಿನಿಮಾಗಳಲ್ಲಿ ಕಿಶೋರ್​ ನಟಿಸಿದ್ದರು. ಹಲವು ಮರಾಠಿ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು.

ಜೀವನದಲ್ಲಿ ಕಿಶೋರ್​ ತುಂಬ ನೊಂದಿದ್ದರು. ಅವರಿಗೆ ಸಂಸಾರದ ತೊಂದರೆಗಳು ಬಹಳಷ್ಟು ಇದ್ದವು. ಕುಟುಂಬ ಸದಸ್ಯರ ಜೊತೆ ಅವರು ವಾಸಿಸುತ್ತ ಇರಲಿಲ್ಲ. ಹೆಚ್ಚಾಗಿ ಒಬ್ಬರೇ ಕಾಲ ಕಳೆಯುತ್ತಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡುವ ಸ್ವಭಾವ ಅವರದ್ದಾಗಿರಲಿಲ್ಲ. ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೂ ಅವರು ಬೇರೆ ಕಲಾವಿದರ ಜೊತೆ ಹೆಚ್ಚು ಬರೆಯುತ್ತಿರಲಿಲ್ಲ ಎಂದು ನಟಿ ಉಶಾ ನಂದಕರಣಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಹಲವು ಸಿನಿಮಾಗಳಲ್ಲಿ ನಟಿಸಿದ್ದರು ಕೂಡ ಯಾರೂ ತಮ್ಮನ್ನು ಗುರುತಿಸುತ್ತಿಲ್ಲ ಎಂದು ಕಿಶೋರ್​ ಬೇಸರ ಮಾಡಿಕೊಂಡಿದ್ದರು. ಜನಪ್ರಿಯತೆ ಇದ್ದಾಗ ಮಾತ್ರ ಎಲ್ಲರೂ ಮಾತನಾಡಿಸುತ್ತಾರೆ. ಒಮ್ಮೆ ತೆರೆಮರೆಗೆ ಸರಿದರೆ ಯಾರೂ ನಮ್ಮ ಬಗ್ಗೆ ಕಾಳಜಿ ತೋರಿಸುವುದಿಲ್ಲ ಎಂದು ನನ್ನ ಬಳಿ ಅವರು ಅಳಲು ತೋಡಿಕೊಂಡಿದ್ದರು’ ಎಂದು ಉಶಾ ಹೇಳಿದ್ದಾರೆ. ಉಶಾ ಮತ್ತು ಕಿಶೋರ್​ ಅವರು ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು.

ಇದನ್ನೂ ಓದಿ: ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ