AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಯಾ ಶರಣ್​ ಮಗಳಿಗೆ ರಾಧಾ ಎಂದು ಹೆಸರು ಇಟ್ಟಿದ್ದೇಕೆ? ಇದಕ್ಕಿದೆ ರಷ್ಯಾದ ಕನೆಕ್ಷನ್​

ಶ್ರೀಯಾ ಶರಣ್​ ಅವರು ತಮಗೆ ಹೆಣ್ಣು ಮಗು ಜನಿಸಿದ ವಿಚಾರವನ್ನು ಒಂದೂವರೆ ವರ್ಷಗಳ ಕಾಲ ಮುಚ್ಚಿಟ್ಟಿದ್ದರೂ ಕೂಡ ಈಗ ಆ ಕುರಿತು​ ಮನಬಿಚ್ಚಿ ಮಾತನಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತ, ಮಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಶ್ರೀಯಾ ಶರಣ್​ ಮಗಳಿಗೆ ರಾಧಾ ಎಂದು ಹೆಸರು ಇಟ್ಟಿದ್ದೇಕೆ? ಇದಕ್ಕಿದೆ ರಷ್ಯಾದ ಕನೆಕ್ಷನ್​
ಶ್ರೀಯಾ ಶರಣ್
TV9 Web
| Updated By: ಮದನ್​ ಕುಮಾರ್​|

Updated on:Oct 19, 2021 | 9:58 AM

Share

ಖ್ಯಾತ ನಟಿ ಶ್ರೀಯಾ ಶರಣ್​ ಅವರು ಗುಟ್ಟಾಗಿ ಮುಗು ಮಾಡಿಕೊಂಡರು. ತಾವು ಪ್ರೆಗ್ನೆಂಟ್​ ಆಗಿರುವ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ಹೆಣ್ಣು ಮಗು ಜನಿಸಿ ಒಂದೂವರೆ ವರ್ಷ ಆಗುವವರೆಗೂ ಅವರು ಈ ರಹಸ್ಯವನ್ನು ಕಾಯ್ದುಕೊಂಡಿದ್ದರು. ಇತ್ತೀಚೆಗಷ್ಟೇ ವಿಷಯ ಬಹಿರಂಗ ಆಯಿತು. ವಿಶೇಷ ಏನೆಂದರೆ ತಮ್ಮ ಮಗುವಿಗೆ ರಾಧಾ ಶರಣ್​ ಕೊಸ್ವೀವ್​ ಎಂದು ನಾಮಕರಣ ಮಾಡಿದ್ದಾರೆ. ಹೀಗೆ ಹೆಸರು ಇಡಲು ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ರಾಧಾ ಎಂಬ ಹೆಸರಿಗೆ ರಷ್ಯಾದ ಕನೆಕ್ಷನ್​ ಸಹ ಇದೆ.

ಶ್ರೀಯಾ ಶರಣ್​ ಮದುವೆ ಆಗಿರುವುದು ರಷ್ಯಾದ ಟೆನಿಸ್​ ಆಟಗಾರ ಆಂಡ್ರೀ ಕೊಸ್ಚೀವ್​ ಅವರನ್ನು. ‘ನಮಗೆ ಹೆಣ್ಣು ಮಗು ಜನಿಸಿದೆ ಎಂಬ ವಿಷಯ ನಮ್ಮ ತಾಯಿಗೆ ಗೊತ್ತಾದ ತಕ್ಷಣ ರಾಧಾ ರಾಣಿ ಬರುತ್ತಿದ್ದಾಳೆ ಎಂದು ಅವರು ಹೇಳಿದರು. ಆಗ ನನ್ನ ಪತಿ ಆಂಡ್ರೀಗೆ ಅಚ್ಚರಿ ಆಯಿತು. ನಿಮ್ಮ ತಾಯಿ ಯಾಕೆ ರಷ್ಯಾದ ಹೆಸರನ್ನು ಹೇಳುತ್ತಿದ್ದಾರೆ ಅಂತ ಅವರು ನನ್ನನ್ನು ಕೇಳಿದರು. ರಾಧಾ ಎಂದರೆ ರಷ್ಯಾದ ಹೆಸರಲ್ಲ ಅಂತ ನಾನು ಹೇಳಿದೆ. ರಾಧಾ ಎಂದರೆ ರಷ್ಯನ್​ ಭಾಷೆಯಲ್ಲಿ ಖುಷಿ ಎಂದರ್ಥ ಎಂದು ಅವರು ಹೇಳಿದರು. ಹಾಗಾಗಿ ನಾವು ಅದೇ ಹೆಸರನ್ನು ಮಗಳಿಗೆ ಇಡಲು ನಿರ್ಧರಿಸಿದೆವು. ರಾಧಾ ಶರಣ್​​ ಕೊಸ್ಚೀವ್​ ಎಂಬುದು ನಮ್ಮ ಮಗಳ ಪೂರ್ಣ ಹೆಸರು’ ಎಂದು ಶ್ರೀಯಾ ಶರಣ್​ ಹೇಳಿದ್ದಾರೆ.

ಶ್ರೀಯಾ ಶರಣ್​ ಅವರು ತಮಗೆ ಹೆಣ್ಣು ಮಗು ಜನಿಸಿದ ವಿಚಾರವನ್ನು ಒಂದೂವರೆ ವರ್ಷಗಳ ಕಾಲ ಮುಚ್ಚಿಟ್ಟಿದ್ದರೂ ಕೂಡ ಈಗ ಆ ಕುರಿತು​ ಮನಬಿಚ್ಚಿ ಮಾತನಾಡುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಸಂದರ್ಶನ ನೀಡುತ್ತ, ಮಗಳ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ‘2020ರ ಕ್ವಾರಂಟೈನ್​ ತುಂಬಾನೇ ಅದ್ಭುತವಾಗಿತ್ತು. ಇಡೀ ಪ್ರಪಂಚವು ಕಷ್ಟದಲ್ಲಿ ಸಾಗುತ್ತಿರುವಾಗ, ನಮ್ಮ ಪ್ರಪಂಚವು ಬದಲಾಯಿತು. ನಮಗೆ ಆ ಸಂದರ್ಭದಲ್ಲಿ ಹೆಣ್ಣುಮಗುವಾಗಿದೆ’ ಎನ್ನುವ ಮೂಲಕ ತಾವು ತಾಯಿಯಾದ ವಿಚಾರವನ್ನು ಶ್ರೀಯಾ ಬಹಿರಂಗಪಡಿಸಿದರು.

ಶ್ರಿಯಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಇದಲ್ಲದೆ, ಶ್ರಿಯಾ ತೆಲುಗು, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರಿಯಾ ‘ಅರಸು’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರೂಪಾ ಅಯ್ಯರ್​ ನಿರ್ದೇಶನದ ‘ಚಂದ್ರ’ ಸಿನಿಮಾದಲ್ಲಿ ನಟಿಸಿದ್ದರು.

ಇದನ್ನೂ ಓದಿ:

Sri Reddy: ‘ಆತ ಸಲಿಂಗಕಾಮಿ, ಅಂಥ ವ್ಯಕ್ತಿ ಜತೆ ಸಮಂತಾ ಸಂಬಂಧ ಬೆಳೆಸಲ್ಲ’; ನಟಿ ಶ್ರೀರೆಡ್ಡಿ ಶಾಕಿಂಗ್​ ಹೇಳಿಕೆ

Anchor Anasuya: ನಿರೂಪಕಿ ಅನುಸೂಯ ಬಟ್ಟೆ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ ನಟ ಕೋಟ ಶ್ರೀನಿವಾಸ ರಾವ್​

Published On - 9:55 am, Tue, 19 October 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ