AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಡವಟ್ಟು ಮಾಡಿಕೊಂಡು ಸ್ಟಾರ್​ ನಟನ ಜತೆ ನಟಿಸುವ ಆಫರ್​ ಕಳೆದುಕೊಂಡ ಅಮಲಾ ಪೌಲ್​

ಈಗಾಗಲೇ ‘ಗೋಸ್ಟ್​’ ಸಿನಿಮಾದ ಶೂಟಿಂಗ್​ ಪ್ರಾರಂಭಗೊಂಡಿದೆ. ನಾಯಕಿ ಇಲ್ಲದ ದೃಶ್ಯಗಳನ್ನು ಶೂಟ್​ ಮಾಡಲಾಗುತ್ತಿದೆ. ಹೀರೋಯಿನ್​ ಬದಲಾದ ಕಾರಣಕ್ಕೆ ಸಿನಿಮಾದ ಶೂಟಿಂಗ್​ ವಿಳಂಬವಾಗಬಹುದು.

ಎಡವಟ್ಟು ಮಾಡಿಕೊಂಡು ಸ್ಟಾರ್​ ನಟನ ಜತೆ ನಟಿಸುವ ಆಫರ್​ ಕಳೆದುಕೊಂಡ ಅಮಲಾ ಪೌಲ್​
ಅಮಲಾ ಪೌಲ್​
TV9 Web
| Edited By: |

Updated on: Nov 20, 2021 | 8:09 PM

Share

ನಟರಿಗೆ ಕೊಡುವ ಸಂಭಾವನೆಗೆ ಹೋಲಿಸಿದರೆ ನಟಿಯರಿಗೆ ಸಿಗುವ ಸಂಭಾವನೆ ಕಡಿಮೆಯೇ. ಎಲ್ಲಾ ಚಿತ್ರರಂಗದಲ್ಲೂ ಇದು ನಡೆದೇ ಇದೆ. ಕೆಲವೇ ಕೆಲವು ನಟಿಯರು ಮಾತ್ರ, ಕೆಲವೇ ಕೆಲವು ಸಿನಿಮಾಗಳಲ್ಲಿ ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಇದೆ. ಅದೇ ರೀತಿ ಖ್ಯಾತ ನಟಿ ಅಮಲಾ ಪೌಲ್​ ಕೂಡ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಈ ಕಾರಣಕ್ಕೆ ಅವರು ಸಿನಿಮಾ ಆಫರ್​ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಅಕ್ಕಿನೇನಿ ನಾಗಾರ್ಜುನ ನಟನೆಯ ‘ಗೋಸ್ಟ್​’​  ಸಿನಿಮಾದಿಂದ ಕಾಜಲ್​ ಅಗರ್​ವಾಲ್​ ಹಿಂದೆ ಸರಿದಿದ್ದಾರೆ. ಇದಕ್ಕೆ ಈಗ ಅಮಲಾ ಪೌಲ್​ ಎಂಟ್ರಿ ಆಗಬೇಕಿತ್ತು. ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟು ಅವರು ಎಡವಟ್ಟು ಮಾಡಿಕೊಂಡಿದ್ದಾರೆ.

ನಿರ್ದೇಶಕ ಪ್ರವೀಣ್​ ಅವರು ಅಮಾಲಾಗೆ ‘ಗೋಸ್ಟ್​’ನಲ್ಲಿ ನಟಿಸಲು ಆಫರ್​ ನೀಡಿದ್ದರು. ಸಿನಿಮಾದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ನಾಯಕ-ನಾಯಕಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗುತ್ತದೆ. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡುತ್ತದೆ. ಇದನ್ನು ಹಾಡಿನ ಮೂಲಕ ತೋರಿಸೋಕೆ ನಿರ್ದೇಶಕರು ನಿರ್ಧರಿಸಿದ್ದಾರೆ. ಲಿಪ್​ ಲಾಕ್​ ಸೇರಿ ಕೆಲ ಇಂಟಿಮೇಟ್​ ದೃಶ್ಯಗಳು ಇದರಲ್ಲಿ ಇರಲಿದೆ. ಸಿನಿಮಾ ಸಂಭಾವನೆಯ ಜತೆಗೆ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋಕೆ ಅಮಲಾ ಹೆಚ್ಚಿನ ಹಣ ಕೇಳಿದ್ದರು. ಇದನ್ನು ಭರಿಸೋಕೆ ನಿರ್ಮಾಪಕರು ನಿರಾಕರಿಸಿದ್ದಾರೆ.

ಈಗಾಗಲೇ ‘ಗೋಸ್ಟ್​’ ಸಿನಿಮಾದ ಶೂಟಿಂಗ್​ ಪ್ರಾರಂಭಗೊಂಡಿದೆ. ನಾಯಕಿ ಇಲ್ಲದ ದೃಶ್ಯಗಳನ್ನು ಶೂಟ್​ ಮಾಡಲಾಗುತ್ತಿದೆ. ಹೀರೋಯಿನ್​ ಬದಲಾದ ಕಾರಣಕ್ಕೆ ಸಿನಿಮಾದ ಶೂಟಿಂಗ್​ ವಿಳಂಬವಾಗಬಹುದು. ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣವಾಗಿ ಸಿನಿಮಾ ಶೂಟಿಂಗ್​ ಮುಗಿಸುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ಅದು ಕೈಗೂಡೂವ ಸೂಚನೆ ಕಾಣುತ್ತಿಲ್ಲ.

ಅಮಲಾ ಪೌಲ್​ ಎರಡು ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿದ ಸಂದರ್ಭದಲ್ಲಿ ಅಮಲಾ ಪೌಲ್​ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಮಾಡಿದ್ದರು. ಬಹುಬೇಗನೆ ನಮ್ಮನ್ನು ಬಿಟ್ಟು ತೆರಳಿದಿರಿ ಎಂದು ಅಮಲಾ ಬರೆದುಕೊಂಡಿದ್ದರು.

ಇದನ್ನೂ ಓದಿ: ‘ಪುನೀತ್​ ರಾಜ್​ಕುಮಾರ್​​​ ಇನ್ನೂ ಇಲ್ಲೇ ಇದ್ದಾರೆ ಅನಿಸುತ್ತಿದೆ’; ಅಕ್ಕಿನೇನಿ ನಾಗಾರ್ಜುನ ಬೇಸರ

Samantha: ಮದುವೆ ಹೆಣ್ಣಿಗೆ ಮೇಕಪ್​ ಮಾಡ್ತಾರೆ ಸಮಂತಾ; ಬುಕಿಂಗ್​ ಓಪನ್​ ಆಗಿದೆ ಎಂದ ನಟಿ

ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ