AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?

ಟಾಸ್ಕ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಬಿಗ್​ ಬಾಸ್​ ನೀಡಿದ್ದ ಚಿಕನ್​ ಅನ್ನು ಹಿಂಪಡೆದಿದ್ದರು. ಇದಾದ ನಂತರ ಅನೇಕ ಬಾರಿ ಶುಭಾ ನನಗೆ ಚಿಕನ್​ ಬೇಕು ಎಂದು ಕ್ಯಾಮೆರಾ ಮುಂದೆ ಬಂದು ಗೋಗರೆದಿದ್ದರು.

ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?
ದಿವ್ಯಾ ಉರುಡುಗ-ಅರವಿಂದ್ ಕೆಪಿ
ರಾಜೇಶ್ ದುಗ್ಗುಮನೆ
| Edited By: |

Updated on: Apr 08, 2021 | 6:45 AM

Share

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ನಡುವಣ ಪ್ರೀತಿ ವಿಚಾರ ಬಿಗ್​ ಬಾಸ್​ ಮನೆಯ ಸದ್ಯದ ಹಾಟ್ ಟಾಪಿಕ್​. ಅವರ ನಡುವೆ ನಡೆವ ಸಾಕಷ್ಟು ವಿಚಾರಗಳು ಬಿಗ್​ ಬಾಸ್​ ಮನೆಯಲ್ಲಿ ಹೈಲೈಟ್​ ಆಗುತ್ತಿದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಇದೇ ಮಾದರಿಯ ಘಟನೆ ಒಂದು ನಡೆದಿದೆ. ಇವರ ಪ್ರೀತಿ ನೋಡಿ ಮನೆ ಮಂದಿಯೆಲ್ಲ ಅಚ್ಚರಿ ಹೊರ ಹಾಕಿದ್ದಾರೆ. ಟಾಸ್ಕ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಬಿಗ್​ ಬಾಸ್​ ನೀಡಿದ್ದ ಚಿಕನ್​ ಅನ್ನು ಹಿಂಪಡೆದಿದ್ದರು. ಇದಾದ ನಂತರ ಅನೇಕ ಬಾರಿ ಶುಭಾ ನನಗೆ ಚಿಕನ್​ ಬೇಕು ಎಂದು ಕ್ಯಾಮೆರಾ ಮುಂದೆ ಬಂದು ಗೋಗರೆದಿದ್ದರು. ಅಂತೆಯೇ ಒಂದು ಪ್ಲೇಟ್​ ಚಿಕನ್​ ನೀಡಲಾಯಿತು. ಇದನ್ನು ಒಂದು ಗಂಟೆ ಹಿಡಿದೇ ನಿಲ್ಲಬೇಕಿತ್ತು. ಪ್ರತಿ ಒಂದು ಗಂಟೆಗೆ ಇದು ಬೇರೆಯವರ ಕೈಗೆ ವರ್ಗಾವಣೆ ಆಗಬೇಕು.

ರಾತ್ರಿ 11 ಗಂಟೆ ವೇಳೆಗೆ ಈ ಪ್ಲೇಟ್​ ದಿವ್ಯಾ ಉರುಡುಗ ಕೈಗೆ ವರ್ಗಾವಣೆ ಆಗಿತ್ತು. ಅವರಿಗೆ ಹಸಿವಾದ್ದರಿಂದ ಊಟ ಮಾಡಬೇಕು ಎಂದರು. ಆಗ ಅರವಿಂದ್​ ಒಂದು ಪ್ಲೇಟ್​ನಲ್ಲಿ ಅನ್ನ ಮತ್ತು ರಸಂ ಹಾಕಿಕೊಂಡು ಬಂದರು. ಅಷ್ಟೇ ಅಲ್ಲ, ಸ್ಫೂನ್​ ಮೂಲಕ ದಿವ್ಯಾಗೆ ಊಟ ಮಾಡಿಸಿದ್ದಾರೆ. ಇದನ್ನು ನೋಡಿದ ಮನೆ ಮಂದಿಯೆಲ್ಲರೂ ಅರವಿಂದ್ ಕಾಲೆಳೆದಿದ್ದಾರೆ. ಊಟ ಮಾಡಿಸಪ್ಪ, ಊಟ ಮಾಡಿಸಪ್ಪ ಎಂದು ಕೊಂಕು ಮಾಡಿದ್ದಾರೆ. ಅರವಿಂದ್​ ಅವರು ಊಟ ಮಾಡಿಸುತ್ತಿದ್ದಂತೆ ದಿವ್ಯಾ ಖುಷಿಯಾಗಿದ್ದಾರೆ. ಅದು ಅವರ ಮುಖದಲ್ಲೂ ಎದ್ದು ಕಾಣುತ್ತಿತ್ತು.   ಒಟ್ಟಿನಲ್ಲಿ ಇಬ್ಬರ ಪ್ರೇಮ ವಿಚಾರ ಸದ್ಯ ಮನೆ ತುಂಬೆಲ್ಲ ಚರ್ಚೆ ಆಗುತ್ತಿದೆ. ಆದರೆ, ಈ ಜೋಡಿ ಮಾತ್ರ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಬೇರೆ ಬೇರೆ ತಂಡದಲ್ಲಿದ್ರೂ ದಿವ್ಯಾ-ದಿವ್ಯಾ ಹೊಸ ಗೇಮ್ ಪ್ಲಾನ್; ರೋಲ್ ಮಾಡೆಲ್ ಆಗೋ ಆಸೆಯಲ್ಲಿ ದಿವ್ಯಾ ಉರುಡುಗ

ಮಂಜು- ದಿವ್ಯಾ ಸುರೇಶ್‌ದು ಆಗಲ್ಲ, ಸಮಾನತೆ ಕಾಣಲ್ಲ : ಶಂಕರ್ ಅಶ್ವಥ್

ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?
ಸಿಎಂ ಅನುಮತಿ ಪಡೆದೇ ದೆಹಲಿಗೆ: ಡಿಕೆಶಿ ಖಡಕ್ ಮಾತಿನ ಮರ್ಮಾವೇನು?
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ದೆಹಲಿ ಪ್ರವಾಸ: ಡಿಕೆಶಿ ನಡೆಯೇ ಕುತೂಹಲ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
3 ಮಾದರಿಯ ಸರಣಿಗಾಗಿ ಆಸ್ಟ್ರೇಲಿಯಾ ತಲುಪಿದ ಟೀಂ ಇಂಡಿಯಾ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ