AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?

ಟಾಸ್ಕ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಬಿಗ್​ ಬಾಸ್​ ನೀಡಿದ್ದ ಚಿಕನ್​ ಅನ್ನು ಹಿಂಪಡೆದಿದ್ದರು. ಇದಾದ ನಂತರ ಅನೇಕ ಬಾರಿ ಶುಭಾ ನನಗೆ ಚಿಕನ್​ ಬೇಕು ಎಂದು ಕ್ಯಾಮೆರಾ ಮುಂದೆ ಬಂದು ಗೋಗರೆದಿದ್ದರು.

ದಿವ್ಯಾ ಉರುಡುಗ-ಅರವಿಂದ್​ ಪ್ರೀತಿಯ ಉತ್ಕಟತೆ ನೋಡಿ ಮನೆಯವರೇ ಕಂಗಾಲು; ಅಂಥದ್ದೇನಾಯ್ತು?
ದಿವ್ಯಾ ಉರುಡುಗ-ಅರವಿಂದ್ ಕೆಪಿ
ರಾಜೇಶ್ ದುಗ್ಗುಮನೆ
| Edited By: |

Updated on: Apr 08, 2021 | 6:45 AM

Share

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ನಡುವಣ ಪ್ರೀತಿ ವಿಚಾರ ಬಿಗ್​ ಬಾಸ್​ ಮನೆಯ ಸದ್ಯದ ಹಾಟ್ ಟಾಪಿಕ್​. ಅವರ ನಡುವೆ ನಡೆವ ಸಾಕಷ್ಟು ವಿಚಾರಗಳು ಬಿಗ್​ ಬಾಸ್​ ಮನೆಯಲ್ಲಿ ಹೈಲೈಟ್​ ಆಗುತ್ತಿದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಇದೇ ಮಾದರಿಯ ಘಟನೆ ಒಂದು ನಡೆದಿದೆ. ಇವರ ಪ್ರೀತಿ ನೋಡಿ ಮನೆ ಮಂದಿಯೆಲ್ಲ ಅಚ್ಚರಿ ಹೊರ ಹಾಕಿದ್ದಾರೆ. ಟಾಸ್ಕ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಬಿಗ್​ ಬಾಸ್​ ನೀಡಿದ್ದ ಚಿಕನ್​ ಅನ್ನು ಹಿಂಪಡೆದಿದ್ದರು. ಇದಾದ ನಂತರ ಅನೇಕ ಬಾರಿ ಶುಭಾ ನನಗೆ ಚಿಕನ್​ ಬೇಕು ಎಂದು ಕ್ಯಾಮೆರಾ ಮುಂದೆ ಬಂದು ಗೋಗರೆದಿದ್ದರು. ಅಂತೆಯೇ ಒಂದು ಪ್ಲೇಟ್​ ಚಿಕನ್​ ನೀಡಲಾಯಿತು. ಇದನ್ನು ಒಂದು ಗಂಟೆ ಹಿಡಿದೇ ನಿಲ್ಲಬೇಕಿತ್ತು. ಪ್ರತಿ ಒಂದು ಗಂಟೆಗೆ ಇದು ಬೇರೆಯವರ ಕೈಗೆ ವರ್ಗಾವಣೆ ಆಗಬೇಕು.

ರಾತ್ರಿ 11 ಗಂಟೆ ವೇಳೆಗೆ ಈ ಪ್ಲೇಟ್​ ದಿವ್ಯಾ ಉರುಡುಗ ಕೈಗೆ ವರ್ಗಾವಣೆ ಆಗಿತ್ತು. ಅವರಿಗೆ ಹಸಿವಾದ್ದರಿಂದ ಊಟ ಮಾಡಬೇಕು ಎಂದರು. ಆಗ ಅರವಿಂದ್​ ಒಂದು ಪ್ಲೇಟ್​ನಲ್ಲಿ ಅನ್ನ ಮತ್ತು ರಸಂ ಹಾಕಿಕೊಂಡು ಬಂದರು. ಅಷ್ಟೇ ಅಲ್ಲ, ಸ್ಫೂನ್​ ಮೂಲಕ ದಿವ್ಯಾಗೆ ಊಟ ಮಾಡಿಸಿದ್ದಾರೆ. ಇದನ್ನು ನೋಡಿದ ಮನೆ ಮಂದಿಯೆಲ್ಲರೂ ಅರವಿಂದ್ ಕಾಲೆಳೆದಿದ್ದಾರೆ. ಊಟ ಮಾಡಿಸಪ್ಪ, ಊಟ ಮಾಡಿಸಪ್ಪ ಎಂದು ಕೊಂಕು ಮಾಡಿದ್ದಾರೆ. ಅರವಿಂದ್​ ಅವರು ಊಟ ಮಾಡಿಸುತ್ತಿದ್ದಂತೆ ದಿವ್ಯಾ ಖುಷಿಯಾಗಿದ್ದಾರೆ. ಅದು ಅವರ ಮುಖದಲ್ಲೂ ಎದ್ದು ಕಾಣುತ್ತಿತ್ತು.   ಒಟ್ಟಿನಲ್ಲಿ ಇಬ್ಬರ ಪ್ರೇಮ ವಿಚಾರ ಸದ್ಯ ಮನೆ ತುಂಬೆಲ್ಲ ಚರ್ಚೆ ಆಗುತ್ತಿದೆ. ಆದರೆ, ಈ ಜೋಡಿ ಮಾತ್ರ ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಎಂಬುದನ್ನು ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಬೇರೆ ಬೇರೆ ತಂಡದಲ್ಲಿದ್ರೂ ದಿವ್ಯಾ-ದಿವ್ಯಾ ಹೊಸ ಗೇಮ್ ಪ್ಲಾನ್; ರೋಲ್ ಮಾಡೆಲ್ ಆಗೋ ಆಸೆಯಲ್ಲಿ ದಿವ್ಯಾ ಉರುಡುಗ

ಮಂಜು- ದಿವ್ಯಾ ಸುರೇಶ್‌ದು ಆಗಲ್ಲ, ಸಮಾನತೆ ಕಾಣಲ್ಲ : ಶಂಕರ್ ಅಶ್ವಥ್

Follow Us
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್