AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಪ್ರಭಾಸ್​ಗೆ ಜೋಕರ್ ಎಂದಿಲ್ಲ’; ಅರ್ಷದ್ ವಾರ್ಸಿ ಸ್ಪಷ್ಟನೆ

ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಈ ವೇಳೆ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಬೇಸರ ಹೊರಹಾಕಿದ್ದರು. ‘ಕಲ್ಕಿ 2898 ಎಡಿ ಸಿನಿಮಾ ನೋಡಿದೆ. ನನಗೆ ಅದು ಇಷ್ಟ ಆಗಲೇ ಇಲ್ಲ. ಪ್ರಭಾಸ್ ಬಗ್ಗೆ ನನಗೆ ಬೇಸರ ಇದೆ’ ಎಂದು ಅವರು ಹೇಳಿದ್ದರು.

‘ನಾನು ಪ್ರಭಾಸ್​ಗೆ ಜೋಕರ್ ಎಂದಿಲ್ಲ’; ಅರ್ಷದ್ ವಾರ್ಸಿ ಸ್ಪಷ್ಟನೆ
ಪ್ರಭಾಸ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 30, 2024 | 11:26 AM

Share

ಹಿಂದಿ ಚಿತ್ರರಂಗದ ನಟ ಅರ್ಷದ್ ವಾರ್ಸಿ ಅವರ ಇತ್ತೀಚಿಗಿನ ಹೇಳಿಕೆಯನ್ನು ನೀವು ಕೇಳಿಯೇ ಇರುತ್ತೀರಿ. ಪ್ರಭಾಸ್ ಬಗ್ಗೆ ಅವರು ಟೀಕೆ ಮಾಡಿ ಸಾಕಷ್ಟು ಸುದ್ದಿ ಆದರು. ಅವರು ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಪಾತ್ರವನ್ನು ಜೋಕರ್ ಎಂದು ಕರೆದರು. ಈ ಬಗ್ಗೆ ಸ್ವತಃ ನಿರ್ದೇಶಕ ನಾಗ್ ಅಶ್ವಿನ್ ಬೇಸರ ಹೊರಹಾಕಿದ್ದರು. ಈ ಬಗ್ಗೆ ಕೊನೆಗೂ ಅರ್ಷದ್ ವಾರ್ಸಿ ಅವರು ಸ್ಪಷ್ಟನೆ ನೀಡಿದ್ದಾರೆ. ಅವರು ಹೇಳಿದ್ದು ಏನು ಗೊತ್ತಾ? ನಾವು ಹೇಳುತ್ತೇವೆ ನೋಡಿ.

ಅರ್ಷದ್ ವಾರ್ಸಿ ಹೇಳಿದ್ದು ಏನು?

ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದರು. ಈ ವೇಳೆ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಬೇಸರ ಹೊರಹಾಕಿದ್ದರು. ‘ಕಲ್ಕಿ 2898 ಎಡಿ ಸಿನಿಮಾ ನೋಡಿದೆ. ನನಗೆ ಅದು ಇಷ್ಟ ಆಗಲೇ ಇಲ್ಲ. ಪ್ರಭಾಸ್ ಬಗ್ಗೆ ನನಗೆ ಬೇಸರ ಇದೆ. ಅವರು ಜೋಕರ್ ರೀತಿ ಕಾಣಿಸಿದ್ದಾರೆ’ ಎಂದು ಅವರು ಹೇಳಿದ್ದರು. ಇದರಿಂದ ಪ್ರಭಾಸ್ ಫ್ಯಾನ್ಸ್ ಸಿಟ್ಟಾದರು. ತೆಲುಗು ಮಂದಿ ಅರ್ಷದ್ ವಿರುದ್ಧ ತಿರುಗಿಬಿದ್ದರು.

ಟೀಕೆ

ನಟ ನಾನಿ, ಸುಧೀರ್ ಬಾಬು ಸೇರಿದಂತೆ ಎಲ್ಲರೂ ಅರ್ಷದ್ ವಿರುದ್ಧ ಕೋಪ ಹೊರಹಾಕಿದ್ದರು. ನಾಗ್ ಅಶ್ವಿನ್ ಅವರು ಎಕ್ಸ್​ ಮೂಲಕ ಈ ಬಗ್ಗೆ ಅಪಸ್ವರ ತೆಗೆದಿದ್ದರು. ‘ಅರ್ಷದ್ ಸರ್ ತಮ್ಮ ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳಬೇಕಿತ್ತು. ಅವರ ಮಕ್ಕಳಿಗೆ ಬುಜಿ ಆಟಿಕೆ ಕಳುಹಿಸುವೆ. ಪ್ರಭಾಸ್ ಅವರು ಬೆಸ್ಟ್​ ಎಂದು ಹೇಳುವ ರೀತಿಯಲ್ಲಿ ಕಲ್ಕಿ ಸೀಕ್ವೆಲ್​ಗಾಗಿ ಕೆಲಸ ಮಾಡುವೆ’ ಎಂದಿದ್ದರು.

ಇದನ್ನೂ ಓದಿ: ‘ಕಲ್ಕಿ ಚಿತ್ರದಲ್ಲಿ ಪ್ರಭಾಸ್​ನ ಜೋಕರ್ ರೀತಿ ತೋರಿಸಲಾಗಿದೆ’; ಬಾಲಿವುಡ್ ನಟನ ಬೇಸರ

ಅರ್ಷದ್ ಸ್ಪಷ್ಟನೆ..

ಐಫಾ ಅವಾರ್ಡ್​ನಲ್ಲಿ ಮಾತನಾಡಿದ ಅರ್ಷದ್,  ‘ನಾನು ಪಾತ್ರದ ಬಗ್ಗೆ ಮಾತನಾಡಿದ್ದೇನೆಯೇ ಹೊರತು ವೈಯಕ್ತಿಕ ಅಲ್ಲ. ಪ್ರಭಾಸ್ ಓರ್ವ ಅದ್ಭುತ ಕಲಾವಿದ. ಅವರು ಆಗಾಗ ತಮ್ಮನ್ನು ಸಾಬೀತು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದು ನಮಗೆ ಗೊತ್ತು’ ಎಂದಿದ್ದಾರೆ. ‘ಒಳ್ಳೆಯ ಕಲಾವಿದನಿಗೆ ಕೆಟ್ಟ ಪಾತ್ರ ಕೊಟ್ಟರೆ ಬೇಸರ ಆಗುತ್ತದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ