AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಬ್ಯಾಗ್​ ತಂದ ಬಿಗ್​ ಬಾಸ್​ ಸ್ಪರ್ಧಿ; ಸಿಟ್ಟಾದ ಅಮ್ಮ ಬ್ಯಾಗ್​ ಹೇಗೆ ಎಸೆದ್ರು?

ಆಶು ರೆಡ್ಡಿ ಬ್ಯಾಗ್​ ತಂದ ವಿಚಾರವನ್ನು ಖುಷಿಯಿಂದ ತಾಯಿಗೆ ಹೇಳಿದ್ದಾರೆ. ಆಗ ಅವರ ತಾಯಿ ಬ್ಯಾಗ್​ನ ಬೆಲೆ ಕೇಳಿದ್ದಾರೆ. ಇದಕ್ಕೆ ಆಶು ‘2 ಲಕ್ಷ ರೂಪಾಯಿ’ ಎಂದು ಉತ್ತರಿಸಿದ್ದಾರೆ.

2 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಬ್ಯಾಗ್​ ತಂದ ಬಿಗ್​ ಬಾಸ್​ ಸ್ಪರ್ಧಿ; ಸಿಟ್ಟಾದ ಅಮ್ಮ ಬ್ಯಾಗ್​ ಹೇಗೆ ಎಸೆದ್ರು?
2 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಬ್ಯಾಗ್​ ತಂದ ಬಿಗ್​ ಬಾಸ್​ ಸ್ಪರ್ಧಿ; ಸಿಟ್ಟಾದ ಅಮ್ಮ ಬ್ಯಾಗ್​ ಹೇಗೆ ಎಸೆದ್ರು?
ರಾಜೇಶ್ ದುಗ್ಗುಮನೆ
|

Updated on: Jun 23, 2021 | 5:22 PM

Share

ಸೆಲೆಬ್ರಿಟಿಗಳು ಸದಾ ಬ್ರ್ಯಾಂಡೆಡ್​ ವಸ್ತುಗಳನ್ನು ಧರಿಸೋಕೆ ಇಷ್ಟಪಡುತ್ತಾರೆ. ಅವರು ಧರಿಸೋ ಬಟ್ಟೆಯ ಬೆಲೆಯನ್ನು ಅವರೇ ಹೇಳಿಕೊಳ್ಳಬೇಕೆಂದೇನು ಇಲ್ಲ. ಅಭಿಮಾನಿಗಳೇ ಈ ಬಗ್ಗೆ ಹುಡುಕಾಟ ನಡೆಸಿ ಬೆಲೆ ಕಂಡು ಹಿಡಿಯುತ್ತಾರೆ. ಈಗ ಬ್ರ್ಯಾಂಡೆಡ್​ ಬ್ಯಾಗ್​ ವಿಚಾರಕ್ಕೆ ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸಾಕಷ್ಟು ಸುದ್ದಿಯಾಗಿದ್ದಾರೆ.

ತೆಲುಗು ಬಿಗ್​ ಬಾಸ್​ನ ಭಾಗವಾಗಿದ್ದ ಆಶು ರೆಡ್ಡಿ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರುವ ಅವರು ಅಭಿಮಾನಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಬಿಗ್​ ಬಾಸ್​ ವಿನ್ನರ್​ ರಾಹುಲ್​ ಜತೆ ಅವರು ರಿಲೇಶನ್​ಶಿಪ್​ನಲ್ಲಿದ್ದಾರೆ ಅನ್ನೋ ವಿಚಾರ ಇತ್ತೀಚೆಗೆ ವರದಿಯಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ಇಲ್ಲ. ಅವರಿಗೆ ಇತ್ತೀಚೆಗೆ 2 ಲಕ್ಷ ಮೌಲ್ಯದ ಬ್ಯಾಗ್​ ಒಂದು ಗಿಫ್ಟ್​ ಆಗಿ ಸಿಕ್ಕಿತ್ತು. ಆದರೆ, ಅಮ್ಮನ ಬಳಿ 2 ಲಕ್ಷ ರೂಪಾಯಿ ಕೊಟ್ಟು ಬ್ಯಾಗ್​ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಈ ವಿಚಾರ ಕೇಳಿ ಅವರ ತಾಯಿ ಶಾಕ್​ ಆಗಿದ್ದಾರೆ.

ಆಶು ರೆಡ್ಡಿ ಬ್ಯಾಗ್​ ತಂದ ವಿಚಾರವನ್ನು ಖುಷಿಯಿಂದ ತಾಯಿಗೆ ಹೇಳಿದ್ದಾರೆ. ಆಗ ಅವರ ತಾಯಿ ಬ್ಯಾಗ್​ನ ಬೆಲೆ ಕೇಳಿದ್ದಾರೆ. ಇದಕ್ಕೆ ಆಶು ‘2 ಲಕ್ಷ ರೂಪಾಯಿ’ ಎಂದು ಉತ್ತರಿಸಿದ್ದಾರೆ. ಇದನ್ನು ಆಶು ತಾಯಿ ಗಂಭೀರವಾಗಿ ಸ್ವೀಕರಿಸದೆ, ನಿಜವಾಗಿಯೂ ಬ್ಯಾಗ್​ನ ಬೆಲೆ ಎಷ್ಟು ಎಂದು ಮರುಪ್ರಶ್ನೆ ಮಾಡಿದ್ದಾರೆ. ಆಗ ಆಶು ಅದೇ ಉತ್ತರವನ್ನು ಹೇಳಿದ್ದಾರೆ. ಇದರಿಂದ ಸಿಟ್ಟಾದ ತಾಯಿ ಬ್ಯಾಗ್​ ಎಸೆದಿದ್ದಾರೆ.

View this post on Instagram

A post shared by Ashu Reddy❤️ (@ashu_uuu)

‘ಮನೆಯಲ್ಲಿ ಈಗಾಗಲೇ ಸಾಕಷ್ಟು ಬ್ಯಾಗ್​ಗಳಿವೆ. ಹೀಗಿರುವಾಗ ಮತ್ತೊಂದು ಬ್ಯಾಗ್​ ತಂದಿದ್ದೇಕೆ? ಬ್ಯಾಗ್​ ಅಂಗಡಿ ಇಡುವ ಆಲೋಚನೆ ಇದೆಯೇ?’ ಎಂದು  ಆಶು ತಾಯಿ ಪ್ರಶ್ನೆ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಬರೋಬ್ಬರಿ 35 ಸಾವಿರ ರೂಪಾಯಿ ಕೊಟ್ಟು ಬ್ರ್ಯಾಂಡೆಡ್​ ಬೆಲ್ಟ್​ ಖರೀದಿಸಿದ ಮಗಳಿಗೆ ತಿರುಗೇಟು ಕೊಟ್ಟ ಅಮ್ಮ; ವಿಡಿಯೋ ವೈರಲ್

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ