AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅತೀ ಸುರಕ್ಷಿತ ಮನೆ ಬಿಗ್ ಬಾಸ್’; ಸ್ಪರ್ಧಿಗಳಿಗೆ ಸುದೀಪ್ ಎಚ್ಚರಿಕೆ

‘ಅತೀ ಸುರಕ್ಷಿತ ಮನೆ ಎಂದರೆ ಅದು ಬಿಗ್ ಬಾಸ್. ಇಲ್ಲಿ ಯಾರಿಗೂ ಏನೂ ಆಗುವುದಿಲ್ಲ’ ಎಂದರು ಸುದೀಪ್. ಈ ಮಾತನ್ನು ಮನೆಯವರು ಕೂಡ ಒಪ್ಪಿಕೊಂಡರು.

‘ಅತೀ ಸುರಕ್ಷಿತ ಮನೆ ಬಿಗ್ ಬಾಸ್’; ಸ್ಪರ್ಧಿಗಳಿಗೆ ಸುದೀಪ್ ಎಚ್ಚರಿಕೆ
ಸುದೀಪ್
ರಾಜೇಶ್ ದುಗ್ಗುಮನೆ
|

Updated on:Oct 22, 2023 | 12:26 PM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರ ಹೆಚ್ಚು ಬಳಕೆ ಆದ ಶಬ್ದ ‘ಥ್ರೆಟ್​’. ವಿನಯ್ ಅವರಿಂದ ಥ್ರೆಟ್ ಆಗುತ್ತಿದೆ ಎಂದು ಸಂಗೀತಾ ಹೇಳುತ್ತಲೇ ಬಂದರು. ವಿನಯ್ ಜೋರಾಗಿ ಮಾತನಾಡಿದ್ದೇ ಇದಕ್ಕೆ ಕಾರಣ. ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ಸುದೀಪ್ ಅವರು ಮನೆ ಮಂದಿಗೆ ಬುದ್ಧಿವಾದ ಹೇಳಿದ್ದಾರೆ. ಈ ರೀತಿಯ ಪದ ಬಳಕೆ ಮಾಡುವ ಮೊದಲು ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ ಸುದೀಪ್.

ವಿನಯ್ ಅವರು ಜೋರು ಧ್ವನಿಯಲ್ಲಿ ಮಾತನಾಡಿದ್ದರು. ಇದರಿಂದ ಅಸಮಾಧಾನಗೊಂಡ ಸಂಗೀತಾ ಅವರು ನಮಗೆ ನಿಮ್ಮ ಮಾತುಗಳಿಂದ ಭಯ ಆಗುತ್ತಿದೆ ಎಂದರು. ನಾನು ಯಾರಿಗೂ ಥ್ರೆಟ್ ಮಾಡುತ್ತಿಲ್ಲ ಎಂದು ವಿನಯ್ ಹೇಳಿದರು. ಸಂಗೀತಾ ಅವರ ಮಾತಿನಿಂದ ಪ್ರಭಾವಿತರಾದ ತನಿಶಾ ಕೂಡ ಥ್ರೆಟ್ ಶಬ್ದ ಬಳಕೆ ಮಾಡಿದರು. ಈ ಬಗ್ಗೆ ಸುದೀಪ್ ಮಾತನಾಡಿದರು.

‘ಇಲ್ಲಿ ಯಾರಿಗೂ ಥ್ರೆಟ್ ಇಲ್ಲ. ಒಂದೊಮ್ಮೆ ಥ್ರೆಟ್ ಬಂತು ಎಂದರೆ ಅಂಥವರಿಗೆ ಡೋರ್ ಓಪನ್ ಆಗುತ್ತದೆ. ಅವರು ನೇರವಾಗಿ ಮನೆಯಿಂದ ಹೋಗುತ್ತಾರೆ. ಮಾತನಾಡುವ ಮೊದಲು ಎಚ್ಚರಿಕೆ ಇರಲಿ. ಅತೀ ಸುರಕ್ಷಿತ ಮನೆ ಎಂದರೆ ಅದು ಬಿಗ್ ಬಾಸ್. ಇಲ್ಲಿ ಯಾರಿಗೂ ಏನೂ ಆಗುವುದಿಲ್ಲ’ ಎಂದರು ಸುದೀಪ್. ಈ ಮಾತನ್ನು ಮನೆಯವರು ಕೂಡ ಒಪ್ಪಿಕೊಂಡರು.

ಇದನ್ನೂ ಓದಿ: ‘ಈ ಮನಸ್ಥಿತಿಯಿಂದಲೇ ಮಹಿಳೆಯರು ಬಿಗ್ ಬಾಸ್ ಗೆಲ್ತಿಲ್ಲ’; ನೇರವಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್

‘ಬಿಗ್ ಬಾಸ್’ ರಿಯಾಲಿಟಿ ಶೋ ಹಲವು ದೇಶಗಳಲ್ಲಿ, ಹಲವು ಭಾಷೆಗಳಲ್ಲಿ ನಡೆಯುತ್ತಿದೆ. ಒಂದೊಂದು ದೇಶದಿಂದ ಒಂದು ಹೆಸರಿನಿಂದ ಶೋನ ಕರೆಯಲಾಗುತ್ತದೆ. ಇಲ್ಲಿ ಒಬ್ಬರ ಮೇಲೆ ಹಲ್ಲೆ ನಡೆದರೆ ಅಂಥವರನ್ನು ಮನೆಯಿಂದ ಹೊರಗೆ ಕಳುಹಿಸಲಾಗುತ್ತದೆ. ಈ ಕಾರಣಕ್ಕೆ ಸ್ಪರ್ಧಿಗಳು ಹೆಚ್ಚು ಸುರಕ್ಷಿತ ಎನಿಸಿಕೊಳ್ಳುತ್ತಾರೆ. ಈ ಮೊದಲು ಕೈ ಮಾಡಿ ದೊಡ್ಮನೆಯಿಂದ ಹೊರ ಹೋದ ಅನೇಕರಿದ್ದಾರೆ. ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:37 am, Sun, 22 October 23

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?