AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾತು ಹಿಂಪಡೆಯುತ್ತೇನೆ’; ಕೊನೆಗೂ ದ್ವೇಷ ಮರೆತು ಒಂದಾದ ವಿನಯ್-ಸಂಗೀತಾ

‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲೇ ಸಂಗೀತಾ ಹಾಗೂ ವಿನಯ್ ಮಧ್ಯೆ ಪರಿಚಯ ಇತ್ತು. ಬಿಗ್ ಬಾಸ್ ಮನೆಗೆ ಬಂದ ನಂತರದಲ್ಲಿ ಇವರ ಮಧ್ಯೆ ಕಿರಿಕ್ ಆಯಿತು. ಬದ್ಧ ವೈರಿಗಳಂತೆ ಇವರು ವರ್ತಿಸೋಕೆ ಆರಂಭಿಸಿದರು. ಈ ಬೆಳವಣಿಗೆ ಎಲ್ಲರಿಗೂ ಶಾಕ್ ತಂದಿತ್ತು. ಈಗ ಇಬ್ಬರೂ ರಾಜಿ ಆಗಿದ್ದಾರೆ.

‘ಮಾತು ಹಿಂಪಡೆಯುತ್ತೇನೆ’; ಕೊನೆಗೂ ದ್ವೇಷ ಮರೆತು ಒಂದಾದ ವಿನಯ್-ಸಂಗೀತಾ
ವಿನಯ್-ಸಂಗೀತಾ
ರಾಜೇಶ್ ದುಗ್ಗುಮನೆ
|

Updated on: Oct 20, 2023 | 7:38 AM

Share

ಕಳೆದ ವಾರ ಸಂಗೀತಾ ಹೆಸರನ್ನು ವಿನಯ್ ಅವರು ನಾಮಿನೇಷನ್​ಗೆ ತೆಗೆದುಕೊಂಡಿದ್ದರು. ಈ ಆಯ್ಕೆಗೆ ಅವರು ರೂಲ್ಸ್ ಬ್ರೇಕ್ ಮಾಡಿರುವ ಕಾರಣ ನೀಡಿದ್ದರು. ಇದು ಸಂಗೀತಾಗೆ (Sangeetha Sringeri) ಸರಿ ಎನಿಸಿರಲಿಲ್ಲ. ಈ ಕಾರಣದಿಂದಲೇ ಇಬ್ಬರ ಮಧ್ಯೆ ಕಿರಿಕ್ ಉಂಟಾಗಿತ್ತು. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದರು. ಈಗ ಇಬ್ಬರೂ ದ್ವೇಷ ಮರೆತು ರಾಜಿ ಆಗಿದ್ದಾರೆ. ಈ ವಿಚಾರ ಇಬ್ಬರ ಅಭಿಮಾನಿಗಳಿಗೆ ಖುಷಿ ನಿಡಿದೆ. ಮುಂದಿನ ದಿನಗಳಲ್ಲಿ ಇವರು ಮೊದಲಿನಂತೆ ಒಳ್ಳೆಯ ಗೆಳೆಯರಾಗಿ ಇರುತ್ತಾರಾ ಎಂಬ ಪ್ರಶ್ನೆ ಮೂಡಿದೆ.

‘ಬಿಗ್ ಬಾಸ್’ಗೆ ಬರುವುದಕ್ಕೂ ಮೊದಲೇ ಸಂಗೀತಾ ಹಾಗೂ ವಿನಯ್ ಮಧ್ಯೆ ಪರಿಚಯ ಇತ್ತು. ಒಂದೇ ಧಾರಾವಾಹಿಯಲ್ಲಿ ಇವರು ನಟಿಸಿದ್ದರು. ಬಿಗ್ ಬಾಸ್ ಮನೆಗೆ ಬಂದ ನಂತರದಲ್ಲಿ ಇವರ ಮಧ್ಯೆ ಕಿರಿಕ್ ಆಯಿತು. ಬದ್ಧ ವೈರಿಗಳಂತೆ ಇವರು ವರ್ತಿಸೋಕೆ ಆರಂಭಿಸಿದರು. ಈ ಬೆಳವಣಿಗೆ ಎಲ್ಲರಿಗೂ ಶಾಕ್ ತಂದಿತ್ತು. ಈಗ ಇಬ್ಬರೂ ರಾಜಿ ಆಗಿದ್ದಾರೆ.

ಇತ್ತೀಚೆಗೆ ಟಾಸ್ಕ್ ಆಡುವಾಗ ಸಂಗೀತಾ ಅವರು ವಿನಯ್ ವಿರುದ್ಧ ಕೂಗಾಡಿದ್ದರು. ನಿಮ್ಮ ಧ್ವನಿ ನನಗೆ ಭಯ ತರಿಸುವ ರೀತಿಯಲ್ಲಿ ಇದೆ ಎಂದು ಹೇಳಿದ್ದರು. ಇದು ವಿನಯ್ ಅಸಮಾಧಾನಕ್ಕೆ ಕಾರಣ ಆಗಿತ್ತು. ವಿನಯ್ ಅವರ ವರ್ತನೆಯಿಂದ ಸಂಗೀತಾ ಅವರು ಖಿನ್ನೆತೆಗೆ ಒಳಗಾಗುತ್ತಿದ್ದಾರೆ ಎಂದೆಲ್ಲ ಭಾಗ್ಯಶ್ರೀ ಸುದ್ದಿ ಹಬ್ಬಿಸಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಸಂಗೀತಾ ಹಾಗೂ ವಿನಯ್ ಮತ್ತಷ್ಟು ಕುಪಿತಗೊಂಡರು.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಬಿಸಿ ಗಾಳಿ​: ಕೋಪದಲ್ಲಿ ಬಾಯಿಗೆ ಬಂದಂತೆ ಬೈದ ವಿನಯ್ ಗೌಡ

ಅಕ್ಟೋಬರ್ 19 ಎಪಿಸೋಡ್​ನಲ್ಲಿ ಇಬ್ಬರೂ ಕುಳಿತು ಮಾತನಾಡಿದ್ದಾರೆ. ‘ನಡೆದಿರುವ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ. ಜಗಳ ಆಡುವಾಗ ನಿಮ್ಮ ಮಾತು ಬೆದರಿಕೆ ಹಾಕುವಂತಿದೆ ಎಂದಿದ್ದೆ. ಅದು ಸಿಟ್ಟಲ್ಲಿ ಹೇಳಿದ್ದು ಅಷ್ಟೇ. ಆ ಮಾತನ್ನು ಹಿಂಪಡೆಯುತ್ತೇನೆ’ ಎಂದರು ಸಂಗೀತಾ. ‘ನಾವು ಮೊದಲಿನಂತೆ ಇದ್ದುಬಿಡೋಣ. ಈಗಾದ ಘಟನೆಯನ್ನು ಮರೆಯೋಣ’ ಎಂದರು ವಿನಯ್.

ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಆಗುತ್ತಿದೆ. ಜಿಯೋದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ