AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಇಲ್ಲಿ ಬಂದು ತಪ್ಪು ಮಾಡಿದೆ’; ಎರಡನೇ ವಾರಕ್ಕೆ ಸಂಗೀತಾಗೆ ಬಿಗ್ ಬಾಸ್ ಸಾಕಾಯ್ತು  

Sangeetha Sringeri: ‘ನಾನು ಇಲ್ಲಿ ಬಂದು ತಪ್ಪು ಮಾಡಿದೆ ಅನಿಸುತ್ತಿದೆ. ಇದು ನನ್ನ ತಪ್ಪು ನಿರ್ಧಾರ. ಅವರ ಬಳಿ ಉಗಿಸಿಕೊಳ್ಳೋದು, ಈ ರೀತಿ ಶಿಕ್ಷೆ ಅನುಭವಿಸೋದು ಯಾರಿಗೆ ಬೇಕು? ನಮ್ಮ ತಂಡ ನಾಳೆಯೂ ಗೆಲ್ಲಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ಸಂಗೀತಾ.

‘ನಾನು ಇಲ್ಲಿ ಬಂದು ತಪ್ಪು ಮಾಡಿದೆ’; ಎರಡನೇ ವಾರಕ್ಕೆ ಸಂಗೀತಾಗೆ ಬಿಗ್ ಬಾಸ್ ಸಾಕಾಯ್ತು   
ಸಂಗೀತಾ
ರಾಜೇಶ್ ದುಗ್ಗುಮನೆ
|

Updated on:Oct 19, 2023 | 8:44 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 10’ ಎರಡನೇ ವಾರಕ್ಕೆ ಕಾಲಿಟ್ಟಿದೆ. ಹಲವು ಸ್ಪರ್ಧಿಗಳ ಮಧ್ಯೆ ದ್ವೇಷ ಹುಟ್ಟಿಕೊಂಡಿದೆ. ಯಾರು ಟಾಪ್ ಐದರಲ್ಲಿ ಇರಬಹುದು ಎಂಬುದನ್ನು ಊಹಿಸೋಕೆ ಕಷ್ಟ ಆಗುತ್ತಿದೆ. ವಿನಯ್ ಗೌಡ, ಕಾರ್ತಿಕ್ ಮಹೇಶ್ ಮೊದಲಾದವರು ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಈ ಮಧ್ಯೆ ಸಂಗೀತಾಗೆ ಎರಡನೇ ವಾರಕ್ಕೆ ಬಿಗ್ ಬಾಸ್ (Bigg Boss) ಸಾಕಾಗಿದೆ. ವಿನಯ್ ಹಾಗೂ ಅವರ ಮಧ್ಯೆ ಮೂಡಿರುವ ದ್ವೇಷದ ಜ್ವಾಲೆ ಇದಕ್ಕೆ ಕಾರಣ ಎಂದು ಅನೇಕರು ಊಹಿಸಿದ್ದಾರೆ. ಬಿಗ್ ಬಾಸ್ ನೀಡುತ್ತಿರುವ ಶಿಕ್ಷೆಗೂ ಅವರು ಹೆದರಿದ್ದಾರೆ.

ಬಿಗ್ ಬಾಸ್​ನಲ್ಲಿ ಎರಡು ತಂಡ ಮಾಡಲಾಗಿದೆ. ಒಂದು ತಂಡಕ್ಕೆ ಕಾರ್ತಿಕ್ ಹಾಗೂ ಮತ್ತೊಂದು ತಂಡಕ್ಕೆ ವಿನಯ್ ಕ್ಯಾಪ್ಟನ್. ಕಾರ್ತಿಕ್ ತಂಡದಲ್ಲಿ ಸಂಗೀತಾ ಇದ್ದಾರೆ. ಟಾಸ್ಕ್​ನಲ್ಲಿ ಕಾರ್ತಿಕ್ ತಂಡ ಸೋತಿದ್ದರಿಂದ ಅವರಲ್ಲಿ ಒಬ್ಬರು ಶಿಕ್ಷೆ ಅನುಭವಿಸಬೇಕಿತ್ತು. ವಿನಯ್ ತಂಡದವರು ಸಂಗೀತಾ ಅವರನ್ನು ಶಿಕ್ಷೆಗೆ ಆಯ್ಕೆ ಮಾಡಿದರು. ಶಿಕ್ಷೆಯಾಗಿ ಸಗಣಿ ನೀರಲ್ಲಿ ಸ್ನಾನ ಮಾಡಿಸಲಾಯಿತು. ಇದಲ್ಲದೆ ವಿನಯ್ ಜೊತೆ ಜಗಳ ಕೂಡ ಆಗಿದೆ. ಇದು ಸಂಗೀತಾಗೆ ಸಾಕಷ್ಟು ಬೇಸರ ಮೂಡಿಸಿದೆ.

ಮಧ್ಯರಾತ್ರಿ ಸಂಗೀತಾ ಹಾಗೂ ಕಾರ್ತಿಕ್ ಮಾತನಾಡುತ್ತಿದ್ದರು. ಈ ವೇಳೆ ಸಂಗೀತಾ ಕಣ್ಣೀರು ಹಾಕಿದ್ದಾರೆ. ‘ನಾನು ಇಲ್ಲಿ ಬಂದು ತಪ್ಪು ಮಾಡಿದೆ ಅನಿಸುತ್ತಿದೆ. ಇದು ನನ್ನ ತಪ್ಪು ನಿರ್ಧಾರ. ಅವರ ಬಳಿ ಉಗಿಸಿಕೊಳ್ಳೋದು, ಈ ರೀತಿ ಶಿಕ್ಷೆ ಅನುಭವಿಸೋದು ಯಾರಿಗೆ ಬೇಕು? ನಮ್ಮ ತಂಡ ನಾಳೆಯೂ ಗೆಲ್ಲಲ್ಲ’ ಎಂದು ಕಣ್ಣೀರು ಹಾಕಿದ್ದಾರೆ ಸಂಗೀತಾ.

ಇದನ್ನೂ ಓದಿ: ಸಂಗೀತಾ ಗೆಳೆತನದಿಂದ ಕಾರ್ತಿಕ್​ಗೆ ಹಿನ್ನೆಡೆ ಆಗುತ್ತಿದೆಯೇ? ಬಿಗ್​ಬಾಸ್ ಮನೆಯಲ್ಲಿ ಹೀಗೊಂದು ಅನುಮಾನ

ಮರುದಿನ ಕಾರ್ತಿಕ್ ಅವರು ಸಂಗೀತಾ ಅವರನ್ನು ಮಾತನಾಡಿಸಿದ್ದಾರೆ. ‘ಈಗ ಬೆಟರ್ ಎನಿಸುತ್ತಿದೆ. ಆದರೆ, ಹೊರ ಹೊಗಲೇಬೇಕು ಎನಿಸುತ್ತಿದೆ’ ಎಂದಿದ್ದಾರೆ. ‘ಅಯ್ಯೋ ಹೀಗೆ ಹೇಳಬೇಡ. ಕುಳಿತು ಮಾತನಾಡೋ. ಎಲ್ಲವೂ ಸರಿ ಆಗುತ್ತದೆ’ ಎಂದು ಬುದ್ಧಿವಾದ ಹೇಳಿದ್ದಾರೆ ಕಾರ್ತಿಕ್. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಎಪಿಸೋಡ್ ನೋಡಲು ಅವಕಾಶ ಇದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:40 am, Thu, 19 October 23

Follow Us
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ