
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಎರಡನೇ ವಾರ ಎಲಿಮಿನೇಷನ್ ಇರಲಿಲ್ಲ ಅದು ಪ್ರೇಕ್ಷಕರಿಗೆ ಮೊದಲೇ ತಿಳಿದಿತ್ತು. ಆದರೆ ಮನೆಯ ಸದಸ್ಯರ ಮುಂದೆ ಇಬ್ಬರು ಸದಸ್ಯರು ಮನೆಯಿಂದ ಹೊರಗೆ ಬಂದಿದ್ದಾರೆ. ಅವರಿಬ್ಬರು ಸೀಕ್ರೇಟ್ ರೂಂನಲ್ಲಿ ಮುಂದಿನ ಕೆಲ ದಿನಗಳ ಕಾಲ ಸಮಯ ಕಳೆಯಲಿದ್ದಾರೆ. ಅಸಲಿಗೆ ಈ ವಾರ ಹಲವಾರು ಮಂದಿ ನಾಮಿನೇಟ್ ಆಗಿದ್ದರು. ಆದರೆ ಈ ವಾರ ಎಲಿಮಿನೇಷನ್ ಇರಲಿಲ್ಲ. ಬದಲಿಗೆ ಮನೆಯ ಸದಸ್ಯರ ಎದುರು ಇಬ್ಬರು ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕರೆತರಲಾಯ್ತು.
ನಾಮಿನೇಟ್ ಆದ ಹಲವರಲ್ಲಿ ಅಂತಿಮವಾಗಿ ನಾಲ್ಕು ಜನರನ್ನು ನಾಲ್ಕು ಕನ್ನಡಿಗಳ ಮುಂದೆ ನಿಲ್ಲಿಸಿ, ಅವರೊಟ್ಟಿಗೆ ಅವರೇ ಮಾತನಾಡುವಂತೆ ಬಿಗ್ಬಾಸ್ ಸೂಚಿಸಿದರು. ಅವಿನಾಶ್, ವೈಷ್ಣವಿ, ಶಾಸ್ತ್ರಿ ಮತ್ತು ಮಂಜ ಅವರುಗಳು ಕನ್ನಡಿ ಮುಂದೆ ನಿಂತರು. ಅವಿನಾಶ್, ತನ್ನ ಬಳಿ ತಾನೇ ಮಾತನಾಡುವಾಗ ಬಹಳ ಭಾವುಕರಾಗಿಬಿಟ್ಟರು. ಅದಾದ ಬಳಿಕ ವೈಷ್ಣವಿ ಮಾತನಾಡಿದರು. ಇಬ್ಬರ ಕನ್ನಡಿ ಒಡೆಯಲಿಲ್ಲ ಹಾಗಾಗಿ ಅವರನ್ನು ಸೇಫ್ ಎಂದು ಪರಿಗಣಿಸಿ ಮನೆಯ ಒಳಕ್ಕೆ ಕಳಿಸಲಾಯ್ತು.
ಇದನ್ನೂ ಓದಿ:‘ದಿ ಪ್ಯಾರಡೈಸ್’ ಸಿನಿಮಾ ಪ್ರಚಾರದಿಂದ ದೂರ ಉಳಿದ ನಟಿ ಖಯಾದು ಲೋಹರ್
ಬಳಿಕ ಮಾಡರ್ನ್ ಕವಿ ಮಂಜ ಮತ್ತು ಕಿರಣ್ ಶಾಸ್ತ್ರಿ ಅವರುಗಳು ಕನ್ನಡಿ ಎದುರು ನಿಂತು ಮಾತನಾಡಿದರು. ಇಬ್ಬರ ಕನ್ನಡಿಗಳೂ ಸಹ ಒಡೆದು ಚೂರು ಚೂರಾದವು. ಆ ಮೂಲಕ ಇಬ್ಬರೂ ಹೊರಗೆ ಹೋಗಬೇಕಾಯ್ತು. ಕಿರಣ್ ಭಾವುಕನಾಗಿ ಹೊರಗೆ ಹೋದರೆ ಮಂಜ, ಹುಂಬತನದ ಮಾತುಗಳನ್ನಾಡಿ ಹೊರಗೆ ಹೋದ. ಅಸಲಿ ವಿಷಯ ಏನೆಂದರೆ ಈ ವಾರ ಯಾವುದೇ ನಾಮಿನೇಷನ್ ಇಲ್ಲ ಆದರೆ ಮನೆಯ ಸದಸ್ಯರ ಎದುರು ಮಾತ್ರ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ.
ಬಹುಷಃ ಕಿರಣ್ ಶಾಸ್ತ್ರಿ ಮತ್ತು ಮಂಜನನ್ನು ಸೀಕ್ರೇಟ್ ರೂಮಿನಲ್ಲಿ ಇರಿಸಲಾಗುತ್ತದೆ. ಕಳೆದ ಸೀಸನ್ನಲ್ಲಿ ಇಬ್ಬರನ್ನು ಹೀಗೆಯೇ ಸೀಕ್ರೆಟ್ ರೂಮಿನಲ್ಲಿ ಇರಿಸಲಾಗಿತ್ತು. ಸೀಕ್ರೇಟ್ ರೂಮಿನಿಂದಲೇ ಆ ಇಬ್ಬರೂ ಆಟ ಆಡಿದ್ದರು. ಹಾಗೆಯೇ ಈ ಬಾರಿ ಶಾಸ್ತ್ರಿ ಮತ್ತು ಮಂಜ ಸಹ ಸೀಕ್ರೆಟ್ ರೂಮಿನಲ್ಲಿ ಇರಬಹುದೇನೋ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ