AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಜೈಲುಪಾಲಾದ ಬಿಗ್​ ಬಾಸ್​ ಸ್ಪರ್ಧಿ ಧನುಶ್ರೀ! ಮೊದಲ ವಾರವೇ ಕಳಪೆ ಹಣೆಪಟ್ಟಿ

Bigg Boss Kannada Updates (Day 5) : ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಲ್ಲಿ ಬರೀ ಮನರಂಜಿಸಿದರೆ ಸಾಲದು, ಟಾಸ್ಕ್​ನಲ್ಲಿ ಉತ್ತಮ ಪ್ರದರ್ಶನ ನೀಡುವುದು ಕೂಡ ಅಷ್ಟೇ ಮುಖ್ಯ. ಈ ವಿಚಾರದಲ್ಲಿ ಧನುಶ್ರೀಗೆ ಹಿನ್ನಡೆ ಆಗಿದೆ.

Bigg Boss Kannada: ಜೈಲುಪಾಲಾದ ಬಿಗ್​ ಬಾಸ್​ ಸ್ಪರ್ಧಿ ಧನುಶ್ರೀ! ಮೊದಲ ವಾರವೇ ಕಳಪೆ ಹಣೆಪಟ್ಟಿ
ಬಿಗ್​ ಬಾಸ್​ ಧನುಶ್ರೀ
Follow us
ರಾಜೇಶ್ ದುಗ್ಗುಮನೆ
|

Updated on: Mar 06, 2021 | 3:22 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ನಲ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟವರು ಧನುಶ್ರೀ. ಆದರೆ ಈ ಟಿಕ್​ಟಾಕ್​ ಸ್ಟಾರ್​ಗೆ ಯಾಕೋ ಈಗ ಟೈಮ್​ ಚೆನ್ನಾಗಿಲ್ಲ. ಮೊದಲ ವಾರ ಅವರ ಪರ್ಫಾರ್ಮೆನ್ಸ್​ ತುಂಬ ಕಳಪೆ ಆಗಿದೆ. ಅಷ್ಟೇ ಅಲ್ಲದೇ, ಅವರಿಗೆ ಜೈಲು ಶಿಕ್ಷೆ ಕೂಡ ನೀಡಲಾಗಿದೆ.

ವೀಕೆಂಡ್​ ಹತ್ತಿರ ಆಗುತ್ತಿದ್ದಂತೆಯೇ ಧನುಶ್ರೀಗೆ ಎಲಿಮಿನೇಷನ್ ​ಭಯ ಕಾಡುತ್ತಿದೆ. ಟಾಸ್ಕ್​ನ ವಿಚಾರದಲ್ಲಿ ಅವರು ಹಿಂದೆ ಬಿದ್ದಿದ್ದಾರೆ. ಟಿಕ್​ಟಾಕ್​ನಲ್ಲಿ ಮಿಂಚುತ್ತಿದ್ದ ಧನುಶ್ರೀ, ಬಿಗ್​ ಬಾಸ್​ ಮನೆಯೊಳಗೆ ಲಾಕ್​ ಆದಾಗಿನಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ. ಭಾಗವಹಿಸಿದ ಎಲ್ಲ ಟಾಸ್ಕ್​ನಲ್ಲೂ ಅವರ ಪರ್ಫಾರ್ಮೆನ್ಸ್​ ಕಡಿಮೆ ಇದೆ. ‘ಈ ವಾರದ ಟಾಸ್ಕ್​ಗಳಲ್ಲಿ ಕಳಪೆ ಯಾರು?‘ ಎಂಬ ಪ್ರಶ್ನೆಗೆ ಎಲ್ಲ ಸ್ಪರ್ಧಿಗಳು ಧನುಶ್ರೀ ಹೆಸರನ್ನೇ ಸೂಚಿಸಿದ್ದಾರೆ.

ಧನುಶ್ರೀಗೆ ಈ ರೀತಿ ಆಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಅವರಿಗೆ ‘ಕಳಪೆ’ ಎಂಬ ಹಣೆಪಟ್ಟಿ ನೀಡಲಾಗಿರುವುದು ಮಾತ್ರವಲ್ಲದೆ, ಬಿಗ್​ ಬಾಸ್​ ಕಠಿಣ ಶಿಕ್ಷೆ ಕೂಡ ನೀಡಿದ್ದಾರೆ. ಅವರನ್ನು ದೊಡ್ಮನೆಯೊಳಗಿನ ಜೈಲಿಗೆ ಕಳಿಸಲಾಗಿದೆ! ಖೈದಿ ರೀತಿ ಕಾಸ್ಟ್ಯೂಮ್​ ಹಾಕಿಸಿ ಬಂಧಿಸಲಾಗಿದೆ. ಇದರಿಂದ ಸಹಜವಾಗಿಯೇ ಅವರಿಗೆ ಬೇಸರ ಆಗಿದೆ. ಅವರ ಫ್ಯಾನ್ಸ್​ಗೂ ನಿರಾಸೆ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಜೈಲು ಶಿಕ್ಷೆ ಅನುಭವಿಸುವುದು ಕಷ್ಟ. ಬಂಧಿಯಾದ ಸ್ಪರ್ಧಿ ಬೇರೆ ಯಾರ ಜೊತೆಗೂ ಬೆರೆಯುವಂತಿಲ್ಲ. ಇತರೆ ಸದಸ್ಯರಿಗೆ ಸಿಕ್ಕಂತಹ ಊಟ ಇವರಿಗೆ ಸಿಗುವುದಿಲ್ಲ. ಊಟದ ವಿಚಾರದಲ್ಲಿ ಬಿಗ್​ ಬಾಸ್​ ಮೊದಲೇ ಕಟ್ಟುನಿಟ್ಟು. ಅದರಲ್ಲೂ ಯಾರಾದರೂ ಜೈಲು ಪಾಲಾದರೆ ಅಷ್ಟೇ ಕಥೆ. ಈಗ ಜೈಲು ಶಿಕ್ಷೆ ಅನುಭವಿಸುತ್ತಿರುವ ಧನುಶ್ರೀಗೆ ಪ್ರತಿ ಹೊತ್ತು ಗಂಜಿ ಮಾತ್ರ ಸಿಗಲಿದೆ. ಬೇರೆ ಯಾವುದೇ ಸೌಲಭ್ಯವನ್ನು ಅವರು ಬಳಸುವಂತಿಲ್ಲ. ಮನೆಯ ಇತರೆ ಸದಸ್ಯರ ಅಡುಗೆಗೆ ಬೇಕಾದ ತರಕಾರಿಯನ್ನು ಧನುಶ್ರೀಯೇ ಹೆಚ್ಚಿಕೊಡಬೇಕು.

ಬಿಗ್​ ಬಾಸ್​ ಮುಂದಿನ ಆದೇಶ ನೀಡುವವರೆಗೂ ಧನುಶ್ರೀ ಜೈಲಿನಲ್ಲೇ ಇರಬೇಕಾಗಿದೆ. ಈ ವಾರ ನಾಮಿನೇಟ್​ ಆಗಿರುವವರ ಪಟ್ಟಿಯಲ್ಲಿ ಧನುಶ್ರೀ ಕೂಡ ಇದ್ದಾರೆ. ಹಾಗಾಗಿ ಅವರು ಎಲಿಮಿನೇಟ್​ ಆದರೂ ಅಚ್ಚರಿ ಏನಿಲ್ಲ. ಅವರ ಜೊತೆಗೆ ಶುಭಾ ಪೂಂಜಾ, ವಿಶ್ವನಾಥ್​, ರಘು, ನಿರ್ಮಲಾ ಚೆನ್ನಪ್ಪ ಅವರ ತಲೆ ಮೇಲೆ ಕೂಡ ಎಲಿಮಿನೇಷನ್​ ತೂಗುಗತ್ತಿ ಇದೆ. ಈ ವಾರ ಯಾರು ಬಿಗ್​ ಬಾಸ್ ಮನೆಯಿಂದ ಹೊರಬೀಳುತ್ತಾರೆ ಎಂಬುದು ‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಬಹಿರಂಗವಾಗಲಿದೆ.

ಇದನ್ನೂ ಓದಿ: Bigg Boss Kannada Day 3: ಧನುಶ್ರೀ ಮೇಕಪ್​ ತೆಗೆಯೋಕೆ ಒಂದು ವರ್ಷ ಸ್ನಾನ ಮಾಡಬೇಕು ಎಂದ ಪ್ರಶಾಂತ್​ ಸಂಬರಗಿ

Bigg Boss Kannada Day 1: ಬಿಗ್​ ಬಾಸ್​ ಮನೆಯಲ್ಲಿ ಧನುಶ್ರೀ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ ನಿರ್ಮಲಾ

ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪ್ರಧಾನಿ ಮೋದಿಯವರನ್ನು ಭೇಟಿಯಾದ ವೈಭವ್ ಸೂರ್ಯವಂಶಿ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಪಾಕ್​ಗೆ ಬಿಎಸ್‌ಎಫ್ ನೀಡಿದ ಹೊಡೆತದಿಂದ ಹೊರಬರಲು ವರ್ಷವೇ ಬೇಕು; ಅಮಿತ್ ಶಾ
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ