AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್​ ಚಾಪ್ಟರ್​ 2’

Yash: ‘ಕೆಜಿಎಫ್​​ ಚಾಪ್ಟರ್​ 1’ ಸಿನಿಮಾದ ಯಶಸ್ಸಿನ ಬಳಿಕ ಚಾಪ್ಟರ್​ 2 ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಗರಿಗೆದರಿದೆ. ಈ ಚಿತ್ರಕ್ಕೆ ಅದೆಷ್ಟು ದೊಡ್ಡ ಮಟ್ಟದ ಡಿಮ್ಯಾಂಡ್​ ಸೃಷ್ಟಿ ಆಗಿದೆ ಅಂದರೆ ದಕ್ಷಿಣ ಭಾರತದಲ್ಲಿ ರಜನಿಕಾಂತ್​ ಅವರನ್ನೇ ಮೀರಿಸಿದ್ದಾರೆ ರಾಕಿಂಗ್​ ಸ್ಟಾರ್.

Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್​ ಚಾಪ್ಟರ್​ 2’
ಯಶ್
ರಾಜೇಶ್ ದುಗ್ಗುಮನೆ
| Edited By: |

Updated on: Mar 06, 2021 | 1:29 PM

Share

‘ಕೆಜಿಎಫ್​ 2’ ನೋಡೋದಕ್ಕೆ ಇಡೀ ದೇಶದ ಸಿನಿಪ್ರಿಯರು ಕಾಯುತ್ತಾ ಇದ್ದಾರೆ. ಡಿಜಿಟಲ್ ದುನಿಯಾದಲ್ಲಿ ಮಿಸ್ಟರ್​ ರಾಮಾಚಾರಿಯ ಹವಾ ಜೋರಾಗಿದೆ. 2.o ಚಿತ್ರಕ್ಕಿಂತಲೂ ಕೆಜಿಎಫ್‌2ಗೆ 10 ಕೋಟಿ ರೂ. ಎಕ್ಸ್‌ಟ್ರಾ ಸಿಕ್ಕಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ರೋಬೋ 2.0 ಸಿನಿಮಾ ಹಿಂದಿ ಬಾಕ್ಸ್ ಆಫೀಸ್​ನಲ್ಲಿ ವಸೂಲಿ ಮಾಡಿದಷ್ಟು ಹಣವನ್ನು ಸೌತ್ ಭಾಷೆಯಲ್ಲಿ ಮಾಡಲಿಲ್ಲ. ಆದ್ರೂ ಈ ಸಿನಿಮಾಗಿದ್ದ ಹೈಪ್​ನಿಂದಾಗಿ ಎಲ್ಲೆಡೆ ಸಿಕ್ಕಾಪಟ್ಟೆ ಬಿಸಿನೆಸ್ ಮಾಡಿತ್ತು. ಅದ್ರಲ್ಲೂ ಡಿಜಿಟಲ್ ದುನಿಯಾದಲ್ಲಿ ಓಟಿಟಿ, ಸ್ಯಾಟ್​ಲೈಟ್, ಮ್ಯೂಸಿಕ್ ರೈಟ್ಸ್ ಹೀಗೆ ಎಲ್ಲವು ಸೇರಿ 110 ಕೋಟಿ ನಿರ್ಮಾಪಕರಿಗೆ ಸಿಕ್ಕಿತ್ತು ಅಂತ ಪ್ರಚಾರವಾಗಿತ್ತು.

ಇದೀಗ ಆಲ್ಮೋಸ್ಟ್ ಅದೇ ರೇಂಜ್​ನಲ್ಲಿ ಕೆಜಿಎಫ್ ಚಾಪ್ಟರ್ 2ಗೂ ನಾನ್ ಥಿಯೇಟ್ರಿಕಲ್ ರೈಟ್ಸ್ ಬಿಸಿನೆಸ್ ಆಗ್ತಿದೆ ಅಂತ ಮೂಲಗಳು ಹೇಳುತ್ತಿವೆ. ಮೂಲಗಳ ಪ್ರಕಾರ, ಥಿಯೇಟ್ರಿಕಲ್ ಅಲ್ಲದೇ ಇತರೆ ರೈಟ್ಸ್​ನಿಂದ 120 ಕೋಟಿ ರೂ. ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಗೆ ಸಿಗುತ್ತಿದೆ ಎಂಬ ಮಾಹಿತಿ ಲೀಕ್ ಆಗಿದೆ.

‘ಕೆಜಿಎಫ್ ಚಾಪ್ಟರ್ 1’ಗೆ ಹೋಲಿಸಿದ್ರೆ ಚಾಪ್ಟರ್ 2 ಮತ್ತಷ್ಟು ಆ್ಯಕ್ಷನ್ ಜತೆ ಪ್ರೇಕ್ಷಕರಿಗೆ ಡಬಲ್ ಟ್ರೀಟ್ ಕೊಡಲಿದೆ ಅನ್ನೋ ನಿರೀಕ್ಷೆಗಳಿವೆ. ಅಲ್ಲದೆ ಬಾಲಿವುಡ್​ ನಟ ಸಂಜಯ್ ದತ್ ಅವರು ಸ್ಟಾರ್ ವಿಲನ್ ಪಾತ್ರ ಮಾಡಿರೋದ್ರಿಂದ ಹಿಂದಿಯಲ್ಲಿ ಸಿನಿಮಾಗೆ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಆಗಿದೆ. ಹೀಗಾಗಿ ಡಿಜಿಟಲ್ ರೈಟ್ಸ್- ಸ್ಯಾಟಲೈಟ್ ರೈಟ್ಸ್ ಸೇರಿ ಕೋಟಿ ಕೋಟಿ ಸಿಗುತ್ತಿದೆ ಎಂಬ ಸುದ್ದಿ ಇದೆ. ಹಾಗಾಗಿ, ರಜನಿಕಾಂತ್​ ಅವರ ರೋಬೋ 2.0 ರೆಕಾರ್ಡ್‌ನ ಇದೀಗ ಕನ್ನಡದ ಮೂವಿ ಬ್ರೇಕ್ ಮಾಡ್ತಿದೆ ಅನ್ನೋ ಹೆಮ್ಮೆಯ ಸಮಾಚಾರ ಬಂದಿದೆ.

ಇದನ್ನೂ ಓದಿ: Yash: ಯಶ್​ ಪುತ್ರ ಹೇಳಿದ ಒಂದೇ ಪದಕ್ಕೆ ಮಿಲಿಯನ್​ ವ್ಯೂಸ್​! ಯಾವ ಸ್ಟಾರ್​ಗೂ ಕಮ್ಮಿ ಇಲ್ಲ ಯಥರ್ವ್​ ಹವಾ

ಕೆಜಿಎಫ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ