AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್​ ಚಾಪ್ಟರ್​ 2’

Yash: ‘ಕೆಜಿಎಫ್​​ ಚಾಪ್ಟರ್​ 1’ ಸಿನಿಮಾದ ಯಶಸ್ಸಿನ ಬಳಿಕ ಚಾಪ್ಟರ್​ 2 ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಗರಿಗೆದರಿದೆ. ಈ ಚಿತ್ರಕ್ಕೆ ಅದೆಷ್ಟು ದೊಡ್ಡ ಮಟ್ಟದ ಡಿಮ್ಯಾಂಡ್​ ಸೃಷ್ಟಿ ಆಗಿದೆ ಅಂದರೆ ದಕ್ಷಿಣ ಭಾರತದಲ್ಲಿ ರಜನಿಕಾಂತ್​ ಅವರನ್ನೇ ಮೀರಿಸಿದ್ದಾರೆ ರಾಕಿಂಗ್​ ಸ್ಟಾರ್.

Yash: ಸ್ಯಾಂಡಲ್‌ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್​ ಚಾಪ್ಟರ್​ 2’
ಯಶ್
ರಾಜೇಶ್ ದುಗ್ಗುಮನೆ
| Edited By: ಸಾಧು ಶ್ರೀನಾಥ್​|

Updated on: Mar 06, 2021 | 1:29 PM

Share

‘ಕೆಜಿಎಫ್​ 2’ ನೋಡೋದಕ್ಕೆ ಇಡೀ ದೇಶದ ಸಿನಿಪ್ರಿಯರು ಕಾಯುತ್ತಾ ಇದ್ದಾರೆ. ಡಿಜಿಟಲ್ ದುನಿಯಾದಲ್ಲಿ ಮಿಸ್ಟರ್​ ರಾಮಾಚಾರಿಯ ಹವಾ ಜೋರಾಗಿದೆ. 2.o ಚಿತ್ರಕ್ಕಿಂತಲೂ ಕೆಜಿಎಫ್‌2ಗೆ 10 ಕೋಟಿ ರೂ. ಎಕ್ಸ್‌ಟ್ರಾ ಸಿಕ್ಕಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ‘ಸೂಪರ್ ಸ್ಟಾರ್’ ರಜನಿಕಾಂತ್ ನಟನೆಯ ರೋಬೋ 2.0 ಸಿನಿಮಾ ಹಿಂದಿ ಬಾಕ್ಸ್ ಆಫೀಸ್​ನಲ್ಲಿ ವಸೂಲಿ ಮಾಡಿದಷ್ಟು ಹಣವನ್ನು ಸೌತ್ ಭಾಷೆಯಲ್ಲಿ ಮಾಡಲಿಲ್ಲ. ಆದ್ರೂ ಈ ಸಿನಿಮಾಗಿದ್ದ ಹೈಪ್​ನಿಂದಾಗಿ ಎಲ್ಲೆಡೆ ಸಿಕ್ಕಾಪಟ್ಟೆ ಬಿಸಿನೆಸ್ ಮಾಡಿತ್ತು. ಅದ್ರಲ್ಲೂ ಡಿಜಿಟಲ್ ದುನಿಯಾದಲ್ಲಿ ಓಟಿಟಿ, ಸ್ಯಾಟ್​ಲೈಟ್, ಮ್ಯೂಸಿಕ್ ರೈಟ್ಸ್ ಹೀಗೆ ಎಲ್ಲವು ಸೇರಿ 110 ಕೋಟಿ ನಿರ್ಮಾಪಕರಿಗೆ ಸಿಕ್ಕಿತ್ತು ಅಂತ ಪ್ರಚಾರವಾಗಿತ್ತು.

ಇದೀಗ ಆಲ್ಮೋಸ್ಟ್ ಅದೇ ರೇಂಜ್​ನಲ್ಲಿ ಕೆಜಿಎಫ್ ಚಾಪ್ಟರ್ 2ಗೂ ನಾನ್ ಥಿಯೇಟ್ರಿಕಲ್ ರೈಟ್ಸ್ ಬಿಸಿನೆಸ್ ಆಗ್ತಿದೆ ಅಂತ ಮೂಲಗಳು ಹೇಳುತ್ತಿವೆ. ಮೂಲಗಳ ಪ್ರಕಾರ, ಥಿಯೇಟ್ರಿಕಲ್ ಅಲ್ಲದೇ ಇತರೆ ರೈಟ್ಸ್​ನಿಂದ 120 ಕೋಟಿ ರೂ. ಹೊಂಬಾಳೆ ಫಿಲ್ಮ್ಸ್​ ಸಂಸ್ಥೆಗೆ ಸಿಗುತ್ತಿದೆ ಎಂಬ ಮಾಹಿತಿ ಲೀಕ್ ಆಗಿದೆ.

‘ಕೆಜಿಎಫ್ ಚಾಪ್ಟರ್ 1’ಗೆ ಹೋಲಿಸಿದ್ರೆ ಚಾಪ್ಟರ್ 2 ಮತ್ತಷ್ಟು ಆ್ಯಕ್ಷನ್ ಜತೆ ಪ್ರೇಕ್ಷಕರಿಗೆ ಡಬಲ್ ಟ್ರೀಟ್ ಕೊಡಲಿದೆ ಅನ್ನೋ ನಿರೀಕ್ಷೆಗಳಿವೆ. ಅಲ್ಲದೆ ಬಾಲಿವುಡ್​ ನಟ ಸಂಜಯ್ ದತ್ ಅವರು ಸ್ಟಾರ್ ವಿಲನ್ ಪಾತ್ರ ಮಾಡಿರೋದ್ರಿಂದ ಹಿಂದಿಯಲ್ಲಿ ಸಿನಿಮಾಗೆ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಆಗಿದೆ. ಹೀಗಾಗಿ ಡಿಜಿಟಲ್ ರೈಟ್ಸ್- ಸ್ಯಾಟಲೈಟ್ ರೈಟ್ಸ್ ಸೇರಿ ಕೋಟಿ ಕೋಟಿ ಸಿಗುತ್ತಿದೆ ಎಂಬ ಸುದ್ದಿ ಇದೆ. ಹಾಗಾಗಿ, ರಜನಿಕಾಂತ್​ ಅವರ ರೋಬೋ 2.0 ರೆಕಾರ್ಡ್‌ನ ಇದೀಗ ಕನ್ನಡದ ಮೂವಿ ಬ್ರೇಕ್ ಮಾಡ್ತಿದೆ ಅನ್ನೋ ಹೆಮ್ಮೆಯ ಸಮಾಚಾರ ಬಂದಿದೆ.

ಇದನ್ನೂ ಓದಿ: Yash: ಯಶ್​ ಪುತ್ರ ಹೇಳಿದ ಒಂದೇ ಪದಕ್ಕೆ ಮಿಲಿಯನ್​ ವ್ಯೂಸ್​! ಯಾವ ಸ್ಟಾರ್​ಗೂ ಕಮ್ಮಿ ಇಲ್ಲ ಯಥರ್ವ್​ ಹವಾ

ಕೆಜಿಎಫ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಸಿನಿಮಾ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ

Follow Us
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ