AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಠ ಕಲಿಸಿದ ಗುರುಗಳ ಫೋಟೋ ಹುಡುಕುತ್ತಿದೆ ಇಡೀ ಸ್ಯಾಂಡಲ್​ವುಡ್​! ಈ ಟ್ರೆಂಡ್​ಗೆ ಕಾರಣ ಏನು?

ಸೋಶಿಯಲ್​ ಮೀಡಿಯಾದಲ್ಲಿ ಆಗಾಗ ಒಂದಿಲ್ಲೊಂದು ಚಾಲೆಂಜ್​ ಸದ್ದು ಮಾಡುತ್ತಲೇ ಇರುತ್ತದೆ. ಈಗ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ವಿಶೇಷವಾದ ಒಂದು ಟ್ರೆಂಡ್​ ಪ್ರಾರಂಭಿಸಿದ್ದಾರೆ.

ಪಾಠ ಕಲಿಸಿದ ಗುರುಗಳ ಫೋಟೋ ಹುಡುಕುತ್ತಿದೆ ಇಡೀ ಸ್ಯಾಂಡಲ್​ವುಡ್​! ಈ ಟ್ರೆಂಡ್​ಗೆ ಕಾರಣ ಏನು?
ಸಂತೋಷ್​ ಆನಂದ್​ರಾಮ್​, ಪುನೀತ್​ ರಾಜ್​ಕುಮಾರ್, ಧ್ರುವ ಸರ್ಜಾ
ರಾಜೇಶ್ ದುಗ್ಗುಮನೆ
|

Updated on: Mar 06, 2021 | 6:36 PM

Share

ಸಿನಿಮಾ ಸೆಲೆಬ್ರಿಟಿಗಳು ಯಾವಾಗಲೂ ತಮ್ಮ ತಮ್ಮ ಫೋಟೋಗಳನ್ನೇ ಸೋಶಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿಕೊಂಡು ಮಿಂಚುತ್ತಾರೆ. ಆದರೆ ಈಗ ತಮಗೆ ಪಾಠ ಕಲಿಸಿದ ಗುರುಗಳ ಫೋಟೋವನ್ನು ಹುಡುಕಿ ತೆಗೆಯುವಲ್ಲಿ ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ಬ್ಯುಸಿ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾ!

ಈಗಾಗಲೇ ಸಿಕ್ಕಿರುವ ಸುಳಿವಿನ ಪ್ರಕಾರ ‘ಯುವರತ್ನ’ ಸಿನಿಮಾದಲ್ಲಿ ಗುರು-ಶಿಷ್ಯರ ನಡುವಿನ ಕಥೆ ಇದೆ. ಅದಕ್ಕೆ ಪೂರಕವಾಗಿ ಇತ್ತೀಚೆಗಷ್ಟೇ ‘ಪಾಠಶಾಲಾ…’ ಹಾಡು ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸುತ್ತಿದೆ. ಇದರ ನಡುವೆ ಈ ಚಿತ್ರತಂಡದವರು #MyGuruChallenge ಆರಂಭಿಸಿದ್ದಾರೆ. ಬದುಕಿನಲ್ಲಿ ಪಾಠ ಕಲಿಸಿದ ಶಿಕ್ಷಕರು ಅಥವಾ ಗುರುವಿನ ಸ್ಥಾನ ತುಂಬಿದ ವ್ಯಕ್ತಿಯ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗುತ್ತಿದೆ.

‘ಅ ಆ ಇ ಈ ಅಕ್ಷರ ಕಲಿಸಿದ ಕನ್ನಡ ಟೀಚರ್ ಕಮಲ ಮಿಸ್. ನನ್ನ ಗುರು ನನ್ನ ಹೆಮ್ಮೆ. ಮೈ ಗುರು ಚಾಲೆಂಜ್​ ಆರಂಭಿಸಲು ಖುಷಿ ಆಗುತ್ತಿದೆ’ ಎಂದು ಟ್ವೀಟ್​ ಮಾಡಿರುವ ಯುವರತ್ನ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರು ‘ಡಾಲಿ’ ಧನಂಜಯ, ಪವನ್​ ಒಡೆಯರ್​, ಕಾರ್ತಿಕ್​ ಗೌಡ ಅವರನ್ನು ನಾಮಿನೇಟ್​ ಮಾಡಿದ್ದಾರೆ. ಸದ್ಯಕ್ಕೆ ಇದು ಟ್ವಿಟರ್​ನಲ್ಲಿ ವೈರಲ್​ ಆಗುತ್ತಿದೆ. ಪವನ್​ ಒಡೆಯರ್​ ಮತ್ತು ಕಾರ್ತಿಕ್​ ಗೌಡ ಪ್ರತಿಕ್ರಿಯಿಸಿ, ಇನ್ನಷ್ಟು ಸೆಲೆಬ್ರಿಟಿಗಳಿಗೆ ಚಾಲೆಂಜ್​​ ದಾಟಿಸಿದ್ದಾರೆ. ಇಂಥ ಒಳ್ಳೆಯ ಚಾಲೆಂಜ್​ ಆರಂಭಿಸಿರುವುದಕ್ಕೆ ನೆಟ್ಟಿಗರು ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಡಾ. ರಾಜ್​ಕುಮಾರ್​ ಅವರೇ ನಮ್ಮ ಗುರು ಎನ್ನುತ್ತಿದ್ದಾರೆ ಅಣ್ಣಾವ್ರ ಅಭಿಮಾನಿಗಳು. ಲೆಕ್ಕಶಾಸ್ತ್ರ ಕಲಿಸಿದ ಗುರುವಿನ ಫೋಟೋ ಹಾಕಿಕೊಂಡು ಪವನ್​ ಒಡೆಯರ್​ ಖುಷಿಪಟ್ಟಿದ್ದಾರೆ. ಚಿರಂಜೀವಿ ಸರ್ಜಾ ಜೊತೆಗಿನ ಫೋಟೋವನ್ನು ಶೇರ್ ​ಮಾಡಿಕೊಂಡಿರುವ ಧ್ರುವ ಸರ್ಜಾ, ಅಣ್ಣನೇ ನನ್ನ ಗುರು ಎಂದಿದ್ದಾರೆ. ‘ಬಾಳೆಂಬ ಮೊಳಕೆ ಚಿಗುರೊಡೆಯಲು ಮಳೆಯಾದೆ. ಹೂವಾಗಿ ಅರಳಲು ಸ್ಫೂರ್ತಿಯ ಸೂರ್ಯನಾದೆ. ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ ನನ್ನ ಅಣ್ಣ ನನ್ನ ಗುರು’ ಎಂದು ಧ್ರುವ ಟ್ವೀಟ್​ ಮಾಡಿದ್ದಾರೆ. ಶಿವರಾಜ್​ಕುಮಾರ್​ ಮತ್ತು ಪುನೀತ್​ ರಾಜ್​ಕುಮಾರ್​ಗೆ ಅವರು ಚಾಲೆಂಜ್​ ದಾಟಿಸಿದ್ದಾರೆ.

ಇದನ್ನೂ ಓದಿ: Paatashaala Song: ಪಾಠಶಾಲಾ ಹಾಡಿಗೆ ತಲೆದೂಗಿದ ಪುನೀತ್​ ರಾಜ್​ಕುಮಾರ್​ ಫ್ಯಾನ್ಸ್​! ನಿಮಗೂ ಇಷ್ಟವಾಯ್ತಾ ಯುವರತ್ನ ಹೊಸ ಗೀತೆ?

Puneeth Rajkumar: ಯುವರತ್ನ ರಿಲೀಸ್​ಗೂ ಮುನ್ನವೇ ಧಾರಾವಾಹಿ ಕಡೆಗೆ ಗಮನ ಹರಿಸಿದ ಪುನೀತ್​ ರಾಜ್​ಕುಮಾರ್​! ಅಭಿಮಾನಿಗಳಿಗೆ ಸರ್ಪ್ರೈಸ್​

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ