AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್ ಸ್ಪರ್ಧಿಗಳಿಗೆ​ ಚಿತ್ರ-ವಿಚಿತ್ರ ಅವಾರ್ಡ್​; ಚಕ್ರವರ್ತಿಗೆ ಬ್ಲೇಡ್​ ರಾಜ ಪ್ರಶಸ್ತಿ

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಸದಾ ಕಾಲ ಮಿಂಚುತ್ತಲೇ ಇರುವವರು ಯಾರು ಎಂಬ ಪ್ರಶ್ನೆಗೆ ಹೆಚ್ಚು ಜನರು ದಿವ್ಯಾ ಸುರೇಶ್​ ಹೆಸರನ್ನು ಸೂಚಿಸಿದರು. ಹಾಗಾಗಿ ಅವರಿಗೆ ಮಿಂಚಿಂಗ್​ ಸ್ಟಾರ್​ ಪ್ರಶಸ್ತಿ ನೀಡಲಾಯಿತು.

ಬಿಗ್​ ಬಾಸ್ ಸ್ಪರ್ಧಿಗಳಿಗೆ​ ಚಿತ್ರ-ವಿಚಿತ್ರ ಅವಾರ್ಡ್​; ಚಕ್ರವರ್ತಿಗೆ ಬ್ಲೇಡ್​ ರಾಜ ಪ್ರಶಸ್ತಿ
ರಘು ಗೌಡ-ಚಕ್ರವರ್ತಿ ಚಂದ್ರಚೂಡ್
ಮದನ್​ ಕುಮಾರ್​
|

Updated on: May 10, 2021 | 7:11 AM

Share

ಸತತ 70 ದಿನಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ಕ್ಕೆ ತೆರೆಬೀಳುತ್ತಿದೆ. ಫಿನಾಲೆಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ ನಿಜಕ್ಕೂ ಬೇಸರ ಆಗಿದೆ. 11 ಜನರು ಒಂದೇ ಬಾರಿಗೆ ದೊಡ್ಮನೆಯಿಂದ ಹೊರಬರಬೇಕಾದ ಪರಿಸ್ಥಿತಿ ಬಂದಿದೆ. ಕೊರೊನಾ ವೈರಸ್​ ಮಿತಿಮೀರಿ ಹರಡುತ್ತಿರುವುದರಿಂದ ಸರ್ಕಾರ ಕಠಿಣ ಲಾಕ್​ಡೌನ್​ ಜಾರಿ ಮಾಡಿದ್ದು ಅನಿವಾರ್ಯವಾಗಿ ಶೋ ಅರ್ಧಕ್ಕೆ ನಿಲ್ಲಿಸಲಾಗುತ್ತಿದೆ. ಅದರ ನಡುವೆಯೂ ಬಿಗ್​ ಬಾಸ್ ಕಡೆಯಿಂದ ಕೆಲವು ಫನ್ನಿ ಅವಾರ್ಡ್​ಗಳನ್ನು ನೀಡಲಾಗಿದೆ.​

ಬ್ಲೇಡ್​ ರಾಜ ಅವಾರ್ಡ್​

ಪದೇಪದೇ ಅತಿಯಾಗಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಚಕ್ರವರ್ತಿ ಚಂದ್ರಚೂಡ್​ ಅವರ ಹೆಸರನ್ನು​ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​ ಸೇರಿದಂತೆ 9 ಜನರು ಚಕ್ರವರ್ತಿ ಹೆಸರನ್ನು ಶಿಫಾರನ್ನು ಮಾಡಿದ್ದರಿಂದ ಬ್ಲೇಡ್​ ರಾಜ ಪ್ರಶಸ್ತಿಯು ಚಕ್ರವರ್ತಿ ಚಂದ್ರಚೂಡ್​ ಪಾಲಾಯಿತು. ಅತಿ ಕಡಿಮೆ ಮಾತನಾಡುವ ಪ್ರಿಯಾಂಕಾ ತಿಮ್ಮೇಶ್​ ಅವರಿಂದ ಈ ಪ್ರಶಸ್ತಿಯನ್ನು ಕೊಡಿಸಲಾಯಿತು.

ಸ್ಲೋ ಮೋಷನ್​ ಸುಂದ್ರ​ ಯಾರು?

ಶಮಂತ್​, ನಿಧಿ ಮತ್ತು ರಘು ಗೌಡ ಹೆಸರು ಈ ಪ್ರಶಸ್ತಿಗೆ ನಾಮಿನೇಟ್​ ಆದವು. ಆದರೆ ರಘು ಗೌಡಗೆ ಹೆಚ್ಚು ಸ್ಪರ್ಧಿಗಳು ವೋಟ್​ ಮಾಡಿದ್ದರಿಂದ ಅವರಿಗೆ ಸ್ಲೋ ಮೋಷನ್​ ಸುಂದ್ರ ಎಂಬ ಪ್ರಶಸ್ತಿ ನೀಡಲಾಯಿತು. ಟಾಸ್ಕ್​ ಮಾಡುವಾಗ, ಮನೆ ಕೆಲಸ ಮಾಡುವಾಗ ಮತ್ತು ಮಾತನಾಡುವಾಗ ಕೂಡ ರಘು ಸಿಕ್ಕಾಪಟ್ಟೆ ಸ್ಲೋ ಎಂಬುದನ್ನು ಎಲ್ಲರೂ ಒತ್ತಿ ಹೇಳಿದರು. ಮನೆಯಲ್ಲಿ ಅತಿ ಸ್ಪೀಡ್​ ಆಗಿರುವ ಪ್ರಶಾಂತ್​ ಸಂಬರಗಿ ಅವರು ಈ ಪ್ರಶಸ್ತಿಯನ್ನು ರಘುಗೆ ಪ್ರದಾನ ಮಾಡಿದರು.

ಮಿಂಚಿಂಗ್​ ಸ್ಟಾರ್​ ದಿವ್ಯಾ

ಬಿಗ್​ ಬಾಸ್​ ಮನೆಯಲ್ಲಿ ಸದಾ ಕಾಲ ಮಿಂಚುತ್ತಲೇ ಇರುವವರು ಯಾರು ಎಂಬ ಪ್ರಶ್ನೆಗೆ ಹೆಚ್ಚು ಜನರು ದಿವ್ಯಾ ಸುರೇಶ್​ ಹೆಸರನ್ನು ಸೂಚಿಸಿದರು. ಹಾಗಾಗಿ ಅವರಿಗೆ ಮಿಂಚಿಂಗ್​ ಸ್ಟಾರ್​ ಪ್ರಶಸ್ತಿ ನೀಡಲಾಯಿತು. ಇನ್ನೂ ಕೆಲವು ಅವಾರ್ಡ್​ಗಳು ಕಾಯುತ್ತಿವೆ. ಮೇ 10ರ ಎಪಿಸೋಡ್​ನಲ್ಲಿ ಆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಇದನ್ನೂ ಓದಿ: 

ಚಕ್ರವರ್ತಿ ತೆಗೆದುಕೊಂಡ ಆ ಒಂದು ನಿರ್ಧಾರ ಅವರ ಬಿಗ್​ ಬಾಸ್​ ಜರ್ನಿಯನ್ನೇ ಬದಲಾಯಿಸಿತು

ನನ್ನನ್ನು ವೇಶ್ಯೆ ಮನೆಯಲ್ಲಿ ಕೆಲಸಕ್ಕೆ ಬಿಟ್ಟಿದ್ದರು; ಭಯಾನಕ ಘಟನೆ ಬಗ್ಗೆ ಹೇಳಿಕೊಂಡ ಚಕ್ರವರ್ತಿ

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್