AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಮನುಷ್ಯತ್ವ ಮರೆತರಾ ಬಿಗ್​ ಬಾಸ್​ ಸ್ಪರ್ಧಿಗಳು? ಎರಡೇ ವಾರಕ್ಕೆ ಅಸಲಿ ಮುಖಗಳು ಬಹಿರಂಗ!

ಇಷ್ಟು ದಿನ ಶಾಂತವಾಗಿದ್ದ ಬಿಗ್​ ಬಾಸ್​ ಮನೆ ಈಗ ರಣಾಂಗಣ ಆಗಿದೆ. ಒಬ್ಬರ ಮೇಲೆ ಇನ್ನೊಬ್ಬರು ಆಕ್ರಮಣ ಮಾಡಿದ್ದು, ಪರಿಸ್ಥಿತಿ ಬೇರೆ ಮಟ್ಟಕ್ಕೆ ಹೋಗಿದೆ.

Bigg Boss Kannada: ಮನುಷ್ಯತ್ವ ಮರೆತರಾ ಬಿಗ್​ ಬಾಸ್​ ಸ್ಪರ್ಧಿಗಳು? ಎರಡೇ ವಾರಕ್ಕೆ ಅಸಲಿ ಮುಖಗಳು ಬಹಿರಂಗ!
ಬಿಗ್​ ಬಾಸ್​ ಕನ್ನಡ ಸೀಸನ್​ 8
Follow us
ಮದನ್​ ಕುಮಾರ್​
| Updated By: ganapathi bhat

Updated on: Mar 10, 2021 | 11:24 AM

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. 16 ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಪೈಪೋಟಿಯು ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಇತರೆ ಸ್ಪರ್ಧಿಗಳ ಮೇಲೆ ಆಕ್ರಮಣ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಆತಂಕಕಾರಿ ವೈರಸ್​!

9ನೇ ದಿನ ಮನೆಯ ಸದಸ್ಯರಿಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ ನೀಡಲಾಯಿತು. ವೈರಸ್​ ಮತ್ತು ಮನುಷ್ಯರು ಎಂದು 2 ತಂಡ ಮಾಡಲಾಯಿತು. ವೈರಸ್​ ಟೀಮ್​ನವರು ಮನುಷ್ಯರ ಮೇಲೆ ದಾಳಿ ಮಾಡಬೇಕು. ಅದರಿಂದ ತಪ್ಪಿಸಿಕೊಳ್ಳಲು ಮನುಷ್ಯರು ಪ್ರಯತ್ನಿಸಬೇಕು. ಒಂದು ವೇಳೆ ವೈರಸ್​ ತಗುಲಿಸಿಕೊಂಡರೆ ಕ್ವಾರಂಟೈನ್​ ಆಗಬೇಕು. ಕ್ವಾರಂಟೈನ್​ ಸಮಯದಲ್ಲಿ ವೈರಸ್​ಗಳು ನೀಡುವ ಶಿಕ್ಷೆಯನ್ನು ಮನುಷ್ಯರು ಅನುಭವಿಸಬೇಕು. ಇದು ಆಟದ ರೂಲ್ಸ್​.

ವೈರಸ್​ ಹೆಸರು ಕೇಳುತ್ತಿದ್ದಂತೆಯೇ ಮನೆಯ ಎಲ್ಲ ಸದಸ್ಯರೂ ಅಲರ್ಟ್ ಆದರು. ಆಟವನ್ನು ಕೂಡ ಅಷ್ಟೇ ಗಂಭೀರವಾಗಿ ತೆಗೆದುಕೊಂಡರು. ಆಟ ಆಡುವ ಭರದಲ್ಲಿ ಕೊಂಚ ಅತಿರೇಕ ಎಂಬಂತೆ ಎಲ್ಲರೂ ವರ್ತಿಸಿದ್ದಾರೆ. ವೈರಸ್​ ವರ್ಸಸ್​ ಮನುಷ್ಯರ ಯುದ್ಧದಲ್ಲಿ ನಿರ್ಮಲಾ ಚೆನ್ನಪ್ಪ ಅವರ ಕುತ್ತಿಗೆಗೆ ನೋವಾಯಿತು. ಶಮಂತ್​ಗೆ ಉಸಿರಾಡಲು ಕಷ್ಟ ಆಗುವ ರೀತಿಯಲ್ಲಿ ಪ್ರಶಾಂತ್​ ಸಂಬರಗಿ ನಡೆದುಕೊಂಡರು. ಆಟ ಮುಖ್ಯವೇ ಹೊರತು ಮನೆಯ ಸದಸ್ಯರ ಸುರಕ್ಷೆ ಮುಖ್ಯವಲ್ಲ ಎಂಬ ಮನೋಭಾವದಲ್ಲಿ ಎಲ್ಲರೂ ದಾಳಿ ಮಾಡಿದರು!

ಕ್ವಾರಂಟೈನ್​ ಶಿಕ್ಷೆ ಅನುಭವಿಸಿದ ಗೀತಾ ಭಾರತಿ ಭಟ್​ ಅವರ ಮುಖಕ್ಕೆ ಡಂಬೆಲ್​ ತಾಗಿ ನೋವಾಯಿತು. ದಿವ್ಯಾ ಉರುಡುಗ ಮುಂತಾದವರಿಗೆ ಪರಚಿದ ಗಾಯಗಳಾಗಿವೆ. ಎಲ್ಲರೂ ಆಟ ಆಡಿದ ರೀತಿ ನೋಡಿದರೆ ಅಲ್ಲೇನೋ ರಿಯಲ್​ ಹೊಡೆದಾಟ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಇದೆಲ್ಲವನ್ನೂ ವೀಕ್ಷಕರು ಉಸಿರು ಬಿಗಿ ಹಿಡಿದು ನೋಡಬೇಕಾಯಿತು! ಈ ಟಾಸ್ಕ್​ನಿಂದಾಗಿ ಒಳಗಿರುವವರ ಅಸಲಿ ಮುಖಗಳು ಅನಾವರಣ ಆಗಿವೆ. ಇಷ್ಟು ದಿನ ಟಾಸ್ಕ್​ ಮುಗಿದ ಬಳಿಕ ಒಂದಾಗುತ್ತಿದ್ದ ಎಲ್ಲರೂ 9ನೇ ದಿನ ಮಾತ್ರ ಟಾಸ್ಕ್​ ನಂತರವೂ ಮುಖ ಗಂಟು ಹಾಕಿಕೊಂಡಿದ್ದರು!

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ

Bigg Boss Kannada: ಮಂಜುಗೆ ‘ಐ ಲವ್​ ಯೂ’ ಎಂದ ದಿವ್ಯಾ ಉರುಡುಗ! ಬಿಗ್​ ಬಾಸ್​ನಲ್ಲಿ ಏನು ನಡೀತಾ ಇದೆ?

ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ