‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ಬಿಗ್​ ಬಾಸ್​ ಮನೆಯಲ್ಲಿ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ಆ ವಿಚಾರದ ಬಗ್ಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್​ ಚರ್ಚೆ ಮಾಡಿದ್ದಾರೆ.

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?
ಬಿಗ್​ ಬಾಸ್​ ಕನ್ನಡ ಸೀಸನ್​ 8
Edited By:

Updated on: Mar 14, 2021 | 4:49 PM

ಬಿಗ್​ ಬಾಸ್​ನಲ್ಲಿ ಏನೇ ಜಗಳ, ಕಿರಿಕ್​, ವಿವಾದಗಳು ಇರಬಹುದು. ಆದರೆ ಸ್ಪರ್ಧಿಗಳ ರಕ್ಷಣೆ ಕೂಡ ತುಂಬ ಮುಖ್ಯ. ಅದರಲ್ಲೂ ಮಹಿಳಾ ಸ್ಪರ್ಧಿಗಳ ಸೇಫ್ಟಿ ಬಗ್ಗೆ ಬಿಗ್​ ಬಾಸ್​ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂಬುದನ್ನು ನಿರೂಪಕ ಕಿಚ್ಚ ಸುದೀಪ್​ ಹೇಳಿದ್ದಾರೆ. ಎರಡನೇ ವಾರದ ವೀಕೆಂಡ್​ ಎಪಿಸೋಡ್​ನಲ್ಲಿ ಈ ವಿಚಾರ ಚರ್ಚೆ ಆಗಿದೆ. ಇದಕ್ಕೆಲ್ಲ ಕಾರಣ ಆಗಿರುವುದು ನಿಧಿ ಸುಬ್ಬಯ್ಯ ಮಾಡಿದ ಒಂದೇ ಒಂದು ಆರೋಪ.

ಎರಡನೇ ವಾರದಲ್ಲಿ ಮನೆಯೊಳಗಿನ ಸ್ಪರ್ಧಿಗಳಿಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ ನೀಡಲಾಗಿತ್ತು. ಅದರಲ್ಲಿ ಎಲ್ಲರೂ ತುಂಬ ಆಕ್ರಮಣಕಾರಿಯಾಗಿ ಆಟ ಆಡಿದರು. ಈ ವೇಳೆ ತಮ್ಮನ್ನು ಮಂಜು ಮತ್ತು ಶಮಂತ್​ ಮನಬಂದಂತೆ ಮುಟ್ಟಿದರು ಎಂದು ನಿಧಿ ಸುಬ್ಬಯ್ಯ ಆರೋಪ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಮನೆಯೊಳಗೆ ಅನೇಕ ಮಾತುಕತೆ ಆಯಿತು. ಅದನ್ನು ಗಂಭೀರವಾಗಿ ಪರಿಗಣಿಸಿರುವ ಸುದೀಪ್​ ಅವರು ನಿಧಿಗೆ ಒಂದು ಭರವಸೆ ನೀಡಿದ್ದಾರೆ.

‘ನಿಧಿಯವರೇ ನೀವು ತುಂಬ ಬೇಜಾರು ಮಾಡಿಕೊಂಡಿದ್ರಿ. ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಆರೋಪ ಮೊದಲನೇ ಸಲ ಕೂಡ ಅಲ್ಲ. ನಿಮಗೆ ಅನ್​ಕಂಫರ್ಟೆಬಲ್ ಆಗಿಲ್ಲ ಎಂದು ನಾನು ಹೇಳ್ತಾ ಇಲ್ಲ. ಆದರೆ ಯಾರಾದರೂ ಕೆಟ್ಟ ಉದ್ದೇಶದಿಂದ, ಅಕಸ್ಮಾತ್ ಆಗಿ ಅಂಥದ್ದೇನಾದರೂ ನಡೆಸ್ತಾ ಇದಾರೆ ಅಂತ ಗೊತ್ತಾದರೆ ಬಿಗ್​ ಬಾಸ್​ ಖಡಾಖಂಡಿತವಾಗಿ ತಕ್ಷಣ ಮಧ್ಯಪ್ರವೇಶಿಸ್ತಾರೆ. ನೀವು ನಂಬಲೇ ಬೇಕು. ಬಿಗ್​ ಬಾಸ್​ ನಿಮ್ಮ ಜೊತೆ ಇದ್ದೇ ಇರ್ತಾರೆ’ ಎಂದಿದ್ದಾರೆ ಸುದೀಪ್​.

ಈ ವಿಚಾರದ ಬಗ್ಗೆ ನಿಮಗೆ ಏನಾದರೂ ಹೇಳೋಕೆ ಇದೆಯಾ ಅಂತ ನಿಧಿಗೆ ಸುದೀಪ್​ ಪ್ರಶ್ನಿಸಿದರು. ‘ಪ್ರಾರಂಭದಿಂದಲೂ ರೂಲ್ಸ್​ ಚೇಂಜ್​ ಮಾಡಿ ಆಡುತ್ತಿದ್ದರು. ಎರಡನೇ ದಿನ ಅದನ್ನು ಇನ್ನೊಂದು ಲೆವೆಲ್​ಗೆ ತೆಗೆದುಕೊಂಡು ಹೋದವರು ಶಮಂತ್​, ಮಂಜು ಮತ್ತು ದಿವ್ಯಾ ಉರುಡುಗ. ಅವರು ಆ ರೀತಿ ನಡೆದುಕೊಳ್ಳಬಾರದಿತ್ತು. ಆ ಕಾರಣಕ್ಕಾಗಿ ಅವರ ಟೀಮ್​ ಮೇಲೆ ನನಗೆ ಗೌರವ ಹೊರಟುಹೋಯ್ತು’ ಎಂದಿದ್ದಾರೆ ನಿಧಿ. ಒಟ್ಟಿನಲ್ಲಿ ಸುದೀಪ್​ ಈ ಎಚ್ಚರಿಕೆ ಸಂದೇಶ ನೀಡಿದ ಬಳಿಕ ಮನೆಯ ವಾತಾವರಣ ಬದಲಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬಿಗ್​ ಬಾಸ್​ ಅಭ್ಯರ್ಥಿಗಳ ಕುತಂತ್ರ ಬುದ್ಧಿ ಬಗ್ಗೆ ಸುದೀಪ್​ ಬಳಿ ಅಳಲು ತೋಡಿಕೊಂಡ ಶಂಕರ್​ ಅಶ್ವತ್ಥ್​ ​

ಬಿಗ್​ ಬಾಸ್​ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್​ ಆಗಿ ತಬ್ಬಿಕೊಳ್ಳುವ ಪ್ರಶಾಂತ್​ ಸಂಬರಗಿಗೆ ಸುದೀಪ್​ ಖಡಕ್​ ವಾರ್ನಿಂಗ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us