AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು

ಶಮಂತ್​ ಬ್ರೋ ಗೌಡ ಅವರ ವರ್ತನೆಗಳ ಬಗ್ಗೆ ವಾರದ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ. ಹುಡುಗಿಯರ ವಿಚಾರದಲ್ಲಿ ಶಮಂತ್​ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಮನೆಯ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು
ಮಂಜು ಪಾವಗಡ - ದಿವ್ಯಾ ಉರುಡುಗ - ಶಮಂತ್​ ಬ್ರೋ ಗೌಡ
ಮದನ್​ ಕುಮಾರ್​
| Edited By: |

Updated on: Mar 15, 2021 | 2:34 PM

Share

ಹುಡುಗಿಯರು ಬೇರೆ ಹುಡುಗರ ಜೊತೆ ಇರುವಷ್ಟು ಆರಾಮಾಗಿ ತಮ್ಮ ಜೊತೆ ಇರಲ್ಲ ಅಂತ ಶಮಂತ್​ಗೆ ಬಹಳ ಬೇಜಾರು ಇದೆ. ಈ ಮಾತು ನಿಜವೇ ಎಂದು ಮನೆಯ ಎಲ್ಲ ಸದಸ್ಯರಿಗೆ 2ನೇ ವಾರಾದ ಪಂಚಾಯಿತಿಯಲ್ಲಿ ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಎಲ್ಲರೂ ಬಗೆಬಗೆಯ ಉತ್ತರ ನೀಡಿದರು.

ಶುಭಾ ಪೂಂಜಾ ತುಂಬ ಫನ್ನಿಯಾಗಿ ಉತ್ತರಿಸಿದರು. ‘ಈ ವಿಷಯದಲ್ಲಿ ಶಮಂತ್​ ತುಂಬಾ ಬೇಜಾರು ಮಾಡಿಕೊಂಡಿರುವುದು ನಿಜ. ಹೊರಗಡೆ 22 ಹುಡುಗಿಯರು ಪ್ರಪೋಸ್​ ಮಾಡಿದ್ರು ಅಂತ ಶಮಂತ್​ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ನಿಮಗೆ ಒಬ್ಬರೂ ಬೀಳುತ್ತಿಲ್ಲವಲ್ಲ ಯಾಕೆ ಅಂತ ನಾನು ಕೇಳಿದೀನಿ’ ಎಂದರು ಶುಭಾ ಪೂಂಜಾ. ಅದಕ್ಕೆ ಕಿಚ್ಚನ ಪ್ರತಿಕ್ರಿಯೆ ಕೂಡ ಸಖತ್​ ಫನ್ನಿ ಆಗಿತ್ತು. ‘ರೀ.. ಶಮಂತ್​, ಹೊರಗಡೆ 22 ಹುಡುಗಿಯರು ಪ್ರಪೋಸ್​ ಮಾಡೋದು ಇಂಪಾರ್ಟೆಂಟ್​ ಅಲ್ಲ. ಮಂಜು ಥರ ಎರಡು ಹೊರಗಡೆ ಇಡಿ’ ಎಂದು ಸುದೀಪ್​ ಹೇಳುತ್ತಿದ್ದಂತೆಯೇ ಎಲ್ಲರೂ ಜೋರಾಗಿ ನಕ್ಕರು.

‘ಸುಮ್ಮನೆ ಇರಿ ಸರ್​, ಭಯ ಆಗುತ್ತಿದೆ’ ಎಂದು ಮಂಜು ಮಾತು ಶುರುಮಾಡಿದರು. ‘ನಾನು ಯಾರ ಜೊತೆಗಾದರೂ ಮಾತನಾಡಿದರೆ ಶಮಂತ್​ ಮುನಿಸಿಕೊಂಡು ಹೋಗುತ್ತಾನೆ. ಗುರೂ, ಇದು ಒಂದಾದರೂ ಬಿಟ್ಟು ಬಿಡು ಅಂತಾನೆ. ಕಲ್ಲು ಹಾಕಬೇಡ ಗುರೂ ಅನ್ನುತ್ತಾನೆ. ದಿವ್ಯಾ ಉರುಡುಗ ವಿಚಾರದಲ್ಲಿ ಶಮಂತ್​ ಈ ರೀತಿ ಹೇಳಿದ್ದಾನೆ’ ಎಂದಿದ್ದಾರೆ ಮಂಜು.

ಶುಭಾ ಪೂಂಜಾ ಇನ್ನೊಂದು ವಿಚಾರ ತೆರೆದಿಟ್ಟಿದ್ದಾರೆ. ‘ಫಸ್ಟ್​ವೀಕ್​ನಲ್ಲಿಯೇ ಶಮಂತ್​ ಕ್ಯಾಪ್ಟನ್​ ಆಗಿದ್ದರಿಂದ ಎಲ್ಲರ ತಲೆ ತಿಂದಿದ್ದಾರೆ. ಕೆಲಸ ಮಾಡಿಲ್ಲ, ವಸ್ತುಗಳನ್ನು ಸರಿಯಾಗಿ ಇಟ್ಟಿಲ್ಲ, ಅಡುಗೆ ಮಾಡಿಲ್ಲ, ಅದು ಮಾಡಿಲ್ಲ ಇದು ಮಾಡಿಲ್ಲ ಅಂತ ಎಲ್ಲ ಹುಡುಗಿಯರಿಗೂ ಅಜ್ಜಿ ಥರ ಶಮಂತ್​ ತಲೆ ತಿಂದಿದ್ದಾರೆ. ಹಾಗಾಗಿ ಎಲ್ಲ ಹುಡುಗಿಯರೂ ಶಮಂತ್​ರನ್ನು ಕಂಡರೆ ದೂರ ಓಡಿ ಹೋಗುತ್ತಾರೆ. ಹುಡುಗಿಯರನ್ನು ಬೀಳಿಸುವ ಟ್ಯಾಲೆಂಟ್​ ಶಮಂತ್​ಗೆ ಇನ್ನೂ ಬರಬೇಕು’ ಎಂಬುದು ಶುಭಾ ಪೂಂಜಾ ಅಭಿಪ್ರಾಯ.

ಇದನ್ನೂ ಓದಿ: BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?