AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು

ಶಮಂತ್​ ಬ್ರೋ ಗೌಡ ಅವರ ವರ್ತನೆಗಳ ಬಗ್ಗೆ ವಾರದ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ. ಹುಡುಗಿಯರ ವಿಚಾರದಲ್ಲಿ ಶಮಂತ್​ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಮನೆಯ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು
ಮಂಜು ಪಾವಗಡ - ದಿವ್ಯಾ ಉರುಡುಗ - ಶಮಂತ್​ ಬ್ರೋ ಗೌಡ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Mar 15, 2021 | 2:34 PM

ಹುಡುಗಿಯರು ಬೇರೆ ಹುಡುಗರ ಜೊತೆ ಇರುವಷ್ಟು ಆರಾಮಾಗಿ ತಮ್ಮ ಜೊತೆ ಇರಲ್ಲ ಅಂತ ಶಮಂತ್​ಗೆ ಬಹಳ ಬೇಜಾರು ಇದೆ. ಈ ಮಾತು ನಿಜವೇ ಎಂದು ಮನೆಯ ಎಲ್ಲ ಸದಸ್ಯರಿಗೆ 2ನೇ ವಾರಾದ ಪಂಚಾಯಿತಿಯಲ್ಲಿ ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಎಲ್ಲರೂ ಬಗೆಬಗೆಯ ಉತ್ತರ ನೀಡಿದರು.

ಶುಭಾ ಪೂಂಜಾ ತುಂಬ ಫನ್ನಿಯಾಗಿ ಉತ್ತರಿಸಿದರು. ‘ಈ ವಿಷಯದಲ್ಲಿ ಶಮಂತ್​ ತುಂಬಾ ಬೇಜಾರು ಮಾಡಿಕೊಂಡಿರುವುದು ನಿಜ. ಹೊರಗಡೆ 22 ಹುಡುಗಿಯರು ಪ್ರಪೋಸ್​ ಮಾಡಿದ್ರು ಅಂತ ಶಮಂತ್​ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ನಿಮಗೆ ಒಬ್ಬರೂ ಬೀಳುತ್ತಿಲ್ಲವಲ್ಲ ಯಾಕೆ ಅಂತ ನಾನು ಕೇಳಿದೀನಿ’ ಎಂದರು ಶುಭಾ ಪೂಂಜಾ. ಅದಕ್ಕೆ ಕಿಚ್ಚನ ಪ್ರತಿಕ್ರಿಯೆ ಕೂಡ ಸಖತ್​ ಫನ್ನಿ ಆಗಿತ್ತು. ‘ರೀ.. ಶಮಂತ್​, ಹೊರಗಡೆ 22 ಹುಡುಗಿಯರು ಪ್ರಪೋಸ್​ ಮಾಡೋದು ಇಂಪಾರ್ಟೆಂಟ್​ ಅಲ್ಲ. ಮಂಜು ಥರ ಎರಡು ಹೊರಗಡೆ ಇಡಿ’ ಎಂದು ಸುದೀಪ್​ ಹೇಳುತ್ತಿದ್ದಂತೆಯೇ ಎಲ್ಲರೂ ಜೋರಾಗಿ ನಕ್ಕರು.

‘ಸುಮ್ಮನೆ ಇರಿ ಸರ್​, ಭಯ ಆಗುತ್ತಿದೆ’ ಎಂದು ಮಂಜು ಮಾತು ಶುರುಮಾಡಿದರು. ‘ನಾನು ಯಾರ ಜೊತೆಗಾದರೂ ಮಾತನಾಡಿದರೆ ಶಮಂತ್​ ಮುನಿಸಿಕೊಂಡು ಹೋಗುತ್ತಾನೆ. ಗುರೂ, ಇದು ಒಂದಾದರೂ ಬಿಟ್ಟು ಬಿಡು ಅಂತಾನೆ. ಕಲ್ಲು ಹಾಕಬೇಡ ಗುರೂ ಅನ್ನುತ್ತಾನೆ. ದಿವ್ಯಾ ಉರುಡುಗ ವಿಚಾರದಲ್ಲಿ ಶಮಂತ್​ ಈ ರೀತಿ ಹೇಳಿದ್ದಾನೆ’ ಎಂದಿದ್ದಾರೆ ಮಂಜು.

ಶುಭಾ ಪೂಂಜಾ ಇನ್ನೊಂದು ವಿಚಾರ ತೆರೆದಿಟ್ಟಿದ್ದಾರೆ. ‘ಫಸ್ಟ್​ವೀಕ್​ನಲ್ಲಿಯೇ ಶಮಂತ್​ ಕ್ಯಾಪ್ಟನ್​ ಆಗಿದ್ದರಿಂದ ಎಲ್ಲರ ತಲೆ ತಿಂದಿದ್ದಾರೆ. ಕೆಲಸ ಮಾಡಿಲ್ಲ, ವಸ್ತುಗಳನ್ನು ಸರಿಯಾಗಿ ಇಟ್ಟಿಲ್ಲ, ಅಡುಗೆ ಮಾಡಿಲ್ಲ, ಅದು ಮಾಡಿಲ್ಲ ಇದು ಮಾಡಿಲ್ಲ ಅಂತ ಎಲ್ಲ ಹುಡುಗಿಯರಿಗೂ ಅಜ್ಜಿ ಥರ ಶಮಂತ್​ ತಲೆ ತಿಂದಿದ್ದಾರೆ. ಹಾಗಾಗಿ ಎಲ್ಲ ಹುಡುಗಿಯರೂ ಶಮಂತ್​ರನ್ನು ಕಂಡರೆ ದೂರ ಓಡಿ ಹೋಗುತ್ತಾರೆ. ಹುಡುಗಿಯರನ್ನು ಬೀಳಿಸುವ ಟ್ಯಾಲೆಂಟ್​ ಶಮಂತ್​ಗೆ ಇನ್ನೂ ಬರಬೇಕು’ ಎಂಬುದು ಶುಭಾ ಪೂಂಜಾ ಅಭಿಪ್ರಾಯ.

ಇದನ್ನೂ ಓದಿ: BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಅಕ್ರಮ ಸಂಬಂಧ ಹೊಂದಿದ್ದ ಜೋಡಿಯನ್ನು ಕಟ್ಟಿ ಹಾಕಿ, ಶುದ್ಧೀಕರಿಸಿದ ಸ್ಥಳೀಯರು
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
ಶಿವರಾಜಕುಮಾರ್ ಮತ್ತು ರಮ್ಯಾ ಸಹ ವಿಷಾದ ವ್ಯಕ್ತಪಡಿಸಬೇಕು: ಸಂತೋಷ್ ಹೆಗ್ಡೆ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ