AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು

ಶಮಂತ್​ ಬ್ರೋ ಗೌಡ ಅವರ ವರ್ತನೆಗಳ ಬಗ್ಗೆ ವಾರದ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ. ಹುಡುಗಿಯರ ವಿಚಾರದಲ್ಲಿ ಶಮಂತ್​ ಹೇಗೆ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ಮನೆಯ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು
ಮಂಜು ಪಾವಗಡ - ದಿವ್ಯಾ ಉರುಡುಗ - ಶಮಂತ್​ ಬ್ರೋ ಗೌಡ
ಮದನ್​ ಕುಮಾರ್​
| Edited By: |

Updated on: Mar 15, 2021 | 2:34 PM

Share

ಹುಡುಗಿಯರು ಬೇರೆ ಹುಡುಗರ ಜೊತೆ ಇರುವಷ್ಟು ಆರಾಮಾಗಿ ತಮ್ಮ ಜೊತೆ ಇರಲ್ಲ ಅಂತ ಶಮಂತ್​ಗೆ ಬಹಳ ಬೇಜಾರು ಇದೆ. ಈ ಮಾತು ನಿಜವೇ ಎಂದು ಮನೆಯ ಎಲ್ಲ ಸದಸ್ಯರಿಗೆ 2ನೇ ವಾರಾದ ಪಂಚಾಯಿತಿಯಲ್ಲಿ ಸುದೀಪ್​ ಪ್ರಶ್ನೆ ಕೇಳಿದರು. ಅದಕ್ಕೆ ಎಲ್ಲರೂ ಬಗೆಬಗೆಯ ಉತ್ತರ ನೀಡಿದರು.

ಶುಭಾ ಪೂಂಜಾ ತುಂಬ ಫನ್ನಿಯಾಗಿ ಉತ್ತರಿಸಿದರು. ‘ಈ ವಿಷಯದಲ್ಲಿ ಶಮಂತ್​ ತುಂಬಾ ಬೇಜಾರು ಮಾಡಿಕೊಂಡಿರುವುದು ನಿಜ. ಹೊರಗಡೆ 22 ಹುಡುಗಿಯರು ಪ್ರಪೋಸ್​ ಮಾಡಿದ್ರು ಅಂತ ಶಮಂತ್​ ಹೇಳಿಕೊಳ್ಳುತ್ತಾರೆ. ಆದರೆ ಇಲ್ಲಿ ನಿಮಗೆ ಒಬ್ಬರೂ ಬೀಳುತ್ತಿಲ್ಲವಲ್ಲ ಯಾಕೆ ಅಂತ ನಾನು ಕೇಳಿದೀನಿ’ ಎಂದರು ಶುಭಾ ಪೂಂಜಾ. ಅದಕ್ಕೆ ಕಿಚ್ಚನ ಪ್ರತಿಕ್ರಿಯೆ ಕೂಡ ಸಖತ್​ ಫನ್ನಿ ಆಗಿತ್ತು. ‘ರೀ.. ಶಮಂತ್​, ಹೊರಗಡೆ 22 ಹುಡುಗಿಯರು ಪ್ರಪೋಸ್​ ಮಾಡೋದು ಇಂಪಾರ್ಟೆಂಟ್​ ಅಲ್ಲ. ಮಂಜು ಥರ ಎರಡು ಹೊರಗಡೆ ಇಡಿ’ ಎಂದು ಸುದೀಪ್​ ಹೇಳುತ್ತಿದ್ದಂತೆಯೇ ಎಲ್ಲರೂ ಜೋರಾಗಿ ನಕ್ಕರು.

‘ಸುಮ್ಮನೆ ಇರಿ ಸರ್​, ಭಯ ಆಗುತ್ತಿದೆ’ ಎಂದು ಮಂಜು ಮಾತು ಶುರುಮಾಡಿದರು. ‘ನಾನು ಯಾರ ಜೊತೆಗಾದರೂ ಮಾತನಾಡಿದರೆ ಶಮಂತ್​ ಮುನಿಸಿಕೊಂಡು ಹೋಗುತ್ತಾನೆ. ಗುರೂ, ಇದು ಒಂದಾದರೂ ಬಿಟ್ಟು ಬಿಡು ಅಂತಾನೆ. ಕಲ್ಲು ಹಾಕಬೇಡ ಗುರೂ ಅನ್ನುತ್ತಾನೆ. ದಿವ್ಯಾ ಉರುಡುಗ ವಿಚಾರದಲ್ಲಿ ಶಮಂತ್​ ಈ ರೀತಿ ಹೇಳಿದ್ದಾನೆ’ ಎಂದಿದ್ದಾರೆ ಮಂಜು.

ಶುಭಾ ಪೂಂಜಾ ಇನ್ನೊಂದು ವಿಚಾರ ತೆರೆದಿಟ್ಟಿದ್ದಾರೆ. ‘ಫಸ್ಟ್​ವೀಕ್​ನಲ್ಲಿಯೇ ಶಮಂತ್​ ಕ್ಯಾಪ್ಟನ್​ ಆಗಿದ್ದರಿಂದ ಎಲ್ಲರ ತಲೆ ತಿಂದಿದ್ದಾರೆ. ಕೆಲಸ ಮಾಡಿಲ್ಲ, ವಸ್ತುಗಳನ್ನು ಸರಿಯಾಗಿ ಇಟ್ಟಿಲ್ಲ, ಅಡುಗೆ ಮಾಡಿಲ್ಲ, ಅದು ಮಾಡಿಲ್ಲ ಇದು ಮಾಡಿಲ್ಲ ಅಂತ ಎಲ್ಲ ಹುಡುಗಿಯರಿಗೂ ಅಜ್ಜಿ ಥರ ಶಮಂತ್​ ತಲೆ ತಿಂದಿದ್ದಾರೆ. ಹಾಗಾಗಿ ಎಲ್ಲ ಹುಡುಗಿಯರೂ ಶಮಂತ್​ರನ್ನು ಕಂಡರೆ ದೂರ ಓಡಿ ಹೋಗುತ್ತಾರೆ. ಹುಡುಗಿಯರನ್ನು ಬೀಳಿಸುವ ಟ್ಯಾಲೆಂಟ್​ ಶಮಂತ್​ಗೆ ಇನ್ನೂ ಬರಬೇಕು’ ಎಂಬುದು ಶುಭಾ ಪೂಂಜಾ ಅಭಿಪ್ರಾಯ.

ಇದನ್ನೂ ಓದಿ: BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್​ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು