AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಕೇಳಿದಾಗ ನಿಧಿ ಸುಬ್ಬಯ್ಯ, ಮಂಜು ನಿಮಗೆ ಮದುವೆ ಆಗಿದೆಯಾ? ಇದು ಸತ್ಯನಾ ಎಂದು ಕೇಳಿದ್ದಾರೆ. ದಿವ್ಯಾ ಸುರೇಶ್​ ಅವರಂತೂ ಒಮ್ಮೆ ಗಾಬರಿ ಆದರು.

BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!
ಮಂಜು ಪಾವಗಡ
ರಾಜೇಶ್ ದುಗ್ಗುಮನೆ
| Edited By: ಆಯೇಷಾ ಬಾನು|

Updated on: Mar 15, 2021 | 8:17 AM

Share

ಎಲ್ಲಾ ಸೀಕ್ರೆಟ್​ ಹೇಳಿಕೊಳ್ಳೋಕೆ ಮನೆಯಲ್ಲಿ ಲ್ಯಾಗ್​ ಮಂಜು ಅವರೇ ಬೇಕು! ಎಲ್ಲ ಹೆಣ್ಣುಮಕ್ಕಳು ಮಂಜುನೇ ಬೇಕು ಅಂತಾರೆ. ಹೀಗೇಕೆ? ಅವರಿಗೆ ಮದುವೆ ಆಗಿದೆ ಎನ್ನುವ ಕಾರಣಕ್ಕೆ ಎಲ್ಲರೂ ಮಂಜು ಬಳಿ ಸಿಕ್ರೇಟ್​ ಹೇಳಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ ಎಂದರು ಸುದೀಪ್​. ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು! ಆಗ ಸುದೀಪ್​ ಕೇಳಿದ್ದು ಒಂದೇ ಪ್ರಶ್ನೆ, ಮಂಜು ಅವ್ರೇ ನಿಮಗೆ ಮದುವೆ ಆಗಿದೆ ಎನ್ನುವ ವಿಚಾರ ಯಾರಿಗೂ ಗೊತ್ತಿಲ್ವಾ? ಈ ಮಾತನ್ನು ಕೇಳಿ ಮಂಜು ಅವರೇ ಒಮ್ಮೆ ಅಚ್ಚರಿಗೊಂಡರು.

ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಕೇಳಿದಾಗ ನಿಧಿ ಸುಬ್ಬಯ್ಯ, ಮಂಜು ನಿಮಗೆ ಮದುವೆ ಆಗಿದೆಯಾ? ಇದು ಸತ್ಯನಾ ಎಂದು ಕೇಳಿದ್ದಾರೆ. ದಿವ್ಯಾ ಸುರೇಶ್​ ಅವರಂತೂ ಒಮ್ಮೆ ಗಾಬರಿ ಆದರು. ಆಗ ಉತ್ತರಿಸಿದ ಮಂಜು, ಆ ದಿನ ನೀವೇ ಎಲ್ಲರೂ ಸೇರಿ ದಿವ್ಯಾ ಹಾಗೂ ನನ್ನ ಮದುವೆ ಮಾಡಿಸಿದ್ದೀರಲ್ಲ ಎಂದು ಹಳೆಯ ಘಟನೆಯನ್ನು ನೆನಪಿಸಿದರು!

ಆ ದಿನ ನಾಟಕ ನಡೆಯುತ್ತಿತ್ತು. ಬಿಗ್​ ಬಾಸ್​ ಮನೆಯಲ್ಲಿ ನಾಟಕ ಮಾಡುತ್ತಲೇ ದಿವ್ಯಾ ಅವರನ್ನು ಮದುವೆ ಆಗಿದ್ದರು ಮಂಜು! ಕತ್ತಿನಲ್ಲಿದ್ದ ಮೈಕ್​ ಬ್ಯಾಗ್​ ಅನ್ನು ಮಂಜು, ದಿವ್ಯಾ ಕತ್ತಿಗೆ ಹಾಕಿದ್ದರು. ದಿವ್ಯಾ ಅದನ್ನು ತೆಗೆದು ಮತ್ತೆ ಮಂಜುನ ಕತ್ತಿಗೆ ಹಾಕಿದ್ದಾರೆ. ಈ ಮೂಲಕ ಮನೆಯವರೆಲ್ಲರೂ ಇವರ ಮದುವೆಯೇ ಆಗಿದೆ ಎನ್ನುವ ಘೋಷಣೆ ಮಾಡಿದ್ದರು.

ಈ ಘಟನೆಯನ್ನು ಮಂಜು ನೆನಪು ಮಾಡುತ್ತಿದ್ದಂತೆ ಎಲ್ಲರೂ ದೊಡ್ಡದಾಗಿ ನಕ್ಕರು. ಆಗ ಮಾತನಾಡಿದ ಸುದೀಪ್​, ಮಂಜು ಅವರೇ ನಿಮಗೆ ಮದುವೆ ಆಗಿಲ್ಲ ಅನ್ನೋದು ನಿಜ. ಆದರೆ, ನಿಮ್ಮ ಬಗ್ಗೆ ನಮಗೆ ಎರಡು ಸೀಕ್ರೆಟ್​ ಗೊತ್ತಿದೆ. ಬೇಕಿದ್ರೆ ಅವರನ್ನು ಒಳಗೆ ಕಳುಹಿಸುತ್ತೇವೆ ಎಂದರು. ಆಗ ಮಂಜು, ಅದೊಂದು ಕೆಲಸ ಮಾಡಬೇಡಿ ಎಂದು ಕೋರಿದರು.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ

ಬಿಗ್​ ಬಾಸ್​ನಲ್ಲಿ ನಿರ್ಮಲಾ ಚೆನ್ನಪ್ಪ ವಿಚಿತ್ರ ವರ್ತನೆಗೆ ಕಾರಣ ತಿಳಿಸಿದ ಪತಿ ಸರ್ದಾರ್​ ಸತ್ಯ!

Follow Us
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಗಂಭೀರ ಆರೋಪ
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
8 ಜನ ನಾಮಿನೇಟ್; ಇದರಲ್ಲಿ ಎಲಿಮಿನೇಟ್ ಆಗೋದು ಯಾರು?
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ