AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!

ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಕೇಳಿದಾಗ ನಿಧಿ ಸುಬ್ಬಯ್ಯ, ಮಂಜು ನಿಮಗೆ ಮದುವೆ ಆಗಿದೆಯಾ? ಇದು ಸತ್ಯನಾ ಎಂದು ಕೇಳಿದ್ದಾರೆ. ದಿವ್ಯಾ ಸುರೇಶ್​ ಅವರಂತೂ ಒಮ್ಮೆ ಗಾಬರಿ ಆದರು.

BBK8: ಲ್ಯಾಗ್​ ಮಂಜುಗೆ ಮದುವೆ ಆಗಿರುವ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಯಾರಿಗೂ ಗೊತ್ತಿಲ್ವಂತೆ!
ಮಂಜು ಪಾವಗಡ
ರಾಜೇಶ್ ದುಗ್ಗುಮನೆ
| Edited By: |

Updated on: Mar 15, 2021 | 8:17 AM

Share

ಎಲ್ಲಾ ಸೀಕ್ರೆಟ್​ ಹೇಳಿಕೊಳ್ಳೋಕೆ ಮನೆಯಲ್ಲಿ ಲ್ಯಾಗ್​ ಮಂಜು ಅವರೇ ಬೇಕು! ಎಲ್ಲ ಹೆಣ್ಣುಮಕ್ಕಳು ಮಂಜುನೇ ಬೇಕು ಅಂತಾರೆ. ಹೀಗೇಕೆ? ಅವರಿಗೆ ಮದುವೆ ಆಗಿದೆ ಎನ್ನುವ ಕಾರಣಕ್ಕೆ ಎಲ್ಲರೂ ಮಂಜು ಬಳಿ ಸಿಕ್ರೇಟ್​ ಹೇಳಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ ಎಂದರು ಸುದೀಪ್​. ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಅನೇಕರಲ್ಲಿ ಅಚ್ಚರಿ ಮೂಡಿಸಿತ್ತು! ಆಗ ಸುದೀಪ್​ ಕೇಳಿದ್ದು ಒಂದೇ ಪ್ರಶ್ನೆ, ಮಂಜು ಅವ್ರೇ ನಿಮಗೆ ಮದುವೆ ಆಗಿದೆ ಎನ್ನುವ ವಿಚಾರ ಯಾರಿಗೂ ಗೊತ್ತಿಲ್ವಾ? ಈ ಮಾತನ್ನು ಕೇಳಿ ಮಂಜು ಅವರೇ ಒಮ್ಮೆ ಅಚ್ಚರಿಗೊಂಡರು.

ಮಂಜುಗೆ ಮದುವೆ ಆಗಿದೆ ಎನ್ನುವ ವಿಚಾರ ಕೇಳಿದಾಗ ನಿಧಿ ಸುಬ್ಬಯ್ಯ, ಮಂಜು ನಿಮಗೆ ಮದುವೆ ಆಗಿದೆಯಾ? ಇದು ಸತ್ಯನಾ ಎಂದು ಕೇಳಿದ್ದಾರೆ. ದಿವ್ಯಾ ಸುರೇಶ್​ ಅವರಂತೂ ಒಮ್ಮೆ ಗಾಬರಿ ಆದರು. ಆಗ ಉತ್ತರಿಸಿದ ಮಂಜು, ಆ ದಿನ ನೀವೇ ಎಲ್ಲರೂ ಸೇರಿ ದಿವ್ಯಾ ಹಾಗೂ ನನ್ನ ಮದುವೆ ಮಾಡಿಸಿದ್ದೀರಲ್ಲ ಎಂದು ಹಳೆಯ ಘಟನೆಯನ್ನು ನೆನಪಿಸಿದರು!

ಆ ದಿನ ನಾಟಕ ನಡೆಯುತ್ತಿತ್ತು. ಬಿಗ್​ ಬಾಸ್​ ಮನೆಯಲ್ಲಿ ನಾಟಕ ಮಾಡುತ್ತಲೇ ದಿವ್ಯಾ ಅವರನ್ನು ಮದುವೆ ಆಗಿದ್ದರು ಮಂಜು! ಕತ್ತಿನಲ್ಲಿದ್ದ ಮೈಕ್​ ಬ್ಯಾಗ್​ ಅನ್ನು ಮಂಜು, ದಿವ್ಯಾ ಕತ್ತಿಗೆ ಹಾಕಿದ್ದರು. ದಿವ್ಯಾ ಅದನ್ನು ತೆಗೆದು ಮತ್ತೆ ಮಂಜುನ ಕತ್ತಿಗೆ ಹಾಕಿದ್ದಾರೆ. ಈ ಮೂಲಕ ಮನೆಯವರೆಲ್ಲರೂ ಇವರ ಮದುವೆಯೇ ಆಗಿದೆ ಎನ್ನುವ ಘೋಷಣೆ ಮಾಡಿದ್ದರು.

ಈ ಘಟನೆಯನ್ನು ಮಂಜು ನೆನಪು ಮಾಡುತ್ತಿದ್ದಂತೆ ಎಲ್ಲರೂ ದೊಡ್ಡದಾಗಿ ನಕ್ಕರು. ಆಗ ಮಾತನಾಡಿದ ಸುದೀಪ್​, ಮಂಜು ಅವರೇ ನಿಮಗೆ ಮದುವೆ ಆಗಿಲ್ಲ ಅನ್ನೋದು ನಿಜ. ಆದರೆ, ನಿಮ್ಮ ಬಗ್ಗೆ ನಮಗೆ ಎರಡು ಸೀಕ್ರೆಟ್​ ಗೊತ್ತಿದೆ. ಬೇಕಿದ್ರೆ ಅವರನ್ನು ಒಳಗೆ ಕಳುಹಿಸುತ್ತೇವೆ ಎಂದರು. ಆಗ ಮಂಜು, ಅದೊಂದು ಕೆಲಸ ಮಾಡಬೇಡಿ ಎಂದು ಕೋರಿದರು.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ

ಬಿಗ್​ ಬಾಸ್​ನಲ್ಲಿ ನಿರ್ಮಲಾ ಚೆನ್ನಪ್ಪ ವಿಚಿತ್ರ ವರ್ತನೆಗೆ ಕಾರಣ ತಿಳಿಸಿದ ಪತಿ ಸರ್ದಾರ್​ ಸತ್ಯ!

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು