AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಚಿಕ್ಕ ಹುಡುಗ ವಿಶ್ವನಾಥ್​ಗೆ ಶಿಷ್ಯನಾದ ಸಂಬರಗಿ! ಒಂದೇ ವಾರದಲ್ಲಿ ಗೇಮ್​ ಚೇಂಜ್​ ಮಾಡಿದ ಕಿಚ್ಚ!

ವೀಕ್ಷಕರು ಊಹಿಸಲೂ ಸಾಧ್ಯವಾಗದಂತಹ ಟ್ವಿಸ್ಟ್​ಗಳು ಬಿಗ್​ ಬಾಸ್​ ಮನೆಯಲ್ಲಿ ಕಾಣಿಸುತ್ತಿವೆ. ಮನೆಯೊಳಗಿನ ಚಿಕ್ಕ ಸ್ಪರ್ಧಿ ವಿಶ್ವನಾಥ್​ಗೆ ಪ್ರಶಾಂತ್​ ಸಂಬರಗಿ ಶಿಷ್ಯನಾಗಿದ್ದಾರೆ.

Bigg Boss Kannada: ಚಿಕ್ಕ ಹುಡುಗ ವಿಶ್ವನಾಥ್​ಗೆ ಶಿಷ್ಯನಾದ ಸಂಬರಗಿ! ಒಂದೇ ವಾರದಲ್ಲಿ ಗೇಮ್​ ಚೇಂಜ್​ ಮಾಡಿದ ಕಿಚ್ಚ!
ಪ್ರಶಾಂತ್​ ಸಂಬರಗಿ - ವಿಶ್ವನಾಥ್​
Follow us
ಮದನ್​ ಕುಮಾರ್​
|

Updated on: Mar 15, 2021 | 12:45 PM

ಬಿಗ್​ ಬಾಸ್​ನಲ್ಲಿ ಏನು ಬೇಕಾದರೂ ಆಗಬಹುದು. ಇಂದು ಹಾರಾಡಿದವರು ನಾಳೆ ಮುಗ್ಗರಿಸಿ ಬೀಳಬಹುದು. ಪ್ರಶಾಂತ್​ ಸಂಬರಗಿ ಮತ್ತು ವಿಶ್ವನಾಥ್​ ನಡುವೆಯೂ ಹಾಗೆಯೇ ಆಗಿದೆ. ಅದಕ್ಕೆ ಕಾರಣ ಆಗಿರುವುದು ಮಾತ್ರ ಕಿಚ್ಚ ಸುದೀಪ್​! ಹೌದು, ಎರಡನೇ ವಾರದ ಪಂಚಾಯಿತಿಯಲ್ಲಿ ಸುದೀಪ್​ ಇಂಥದ್ದೊಂದು ಟ್ವಿಸ್ಟ್ ನೀಡಿದ್ದಾರೆ.

ವಿಶ್ವ ವೀಕ್​ ಎಂದಿದ್ದ ಸಂಬರಗಿ ಮೊದಲ ವಾರದಲ್ಲಿ ನಾಮಿನೇಷನ್​ನಿಂದ ಬಚಾವ್​ ಆಗಲು ಇದ್ದ ಟಾಸ್ಕ್​ನಲ್ಲಿ ವಿಶ್ವನಾಥ್​ ಅವರನ್ನು ಪ್ರಶಾಂತ್​ ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರ ಆಯ್ಕೆಗೆ ಕಾರಣ ಏನು ಎಂದು ಕೇಳಿದ್ದಕ್ಕೆ, ‘ವಿಶ್ವ ತುಂಬಾ ವೀಕ್​ ಸ್ಪರ್ಧಿ. ನನ್ನ ಸ್ವಾರ್ಥಕ್ಕಾಗಿ ಅವರನ್ನು ಆಯ್ಕೆ ಮಾಡಿಕೊಂಡೆ’ ಎಂದು ಪ್ರಶಾಂತ್​ ಸಂಬರಗಿ ಉತ್ತರ ನೀಡಿದ್ದರು. ಸುದೀಪ್​ ಮುಂದೆ ಅದನ್ನು ಪ್ರಶಾಂತ್​ ಒಪ್ಪಿಕೊಂಡಿದ್ದರು ಕೂಡ. ಅಲ್ಲದೆ, ಆ ಟಾಸ್ಕ್​ನಲ್ಲಿ ವಿಶ್ವನಾಥ್​ ಎದುರು ಪ್ರಶಾಂತ್​ ಗೆದ್ದು ಬೀಗಿದ್ದರು. ಆದರೆ ತಮ್ಮನ್ನು ವೀಕ್​ ಎಂದು ಕರೆದಿದ್ದು ವಿಶ್ವನಾಥ್​ಗೆ ಬೇಸರ ಮೂಡಿಸಿತ್ತು.

ಆದರೆ ಈಗ ಗೇಮ್​ ಚೇಂಜ್​! ಎರಡನೇ ವಾರದ ಪಂಚಾಯಿತಿಯಲ್ಲಿ ಒಂದು ಹಾಡು ಹೇಳುವಂತೆ ವಿಶ್ವನಾಥ್​ಗೆ ಸುದೀಪ್​ ಸೂಚಿಸಿದರು. ಅದರಂತೆ, ಮನೆಯೊಳಗೆ ತಾವೇ ಕಂಪೋಸ್​ ಮಾಡಿದ ಹಾಡನ್ನು ವಿಶ್ವನಾಥ್​ ಹೇಳಿದರು. ಅದೇ ಹಾಡಿನ ನಾಲ್ಕು ಸಾಲು ಹೇಳುವಂತೆ ಪ್ರಶಾಂತ್​ಗೆ ಸುದೀಪ್​ ಸೂಚಿಸಿದರು. ಆದರೆ ಪ್ರಶಾಂತ್​ ಹಾಡಿದ ರೀತಿ ಅಷ್ಟಾಗಿ ಯಾರಿಗೂ ಹಿಡಿಸಲಿಲ್ಲ. ಇನ್ನೊಂದು ವಾರದೊಳಗೆ ಕಲಿತು ಹಾಡುತ್ತೇನೆ ಎಂದು ಪ್ರಶಾಂತ್​ ಭರವಸೆ ನೀಡಿದ್ದಾರೆ. ಅವರಿಗೆ ಹಾಡು ಕಲಿಸುವ ಜವಾಬ್ದಾರಿಯನ್ನು ವಿಶ್ವನಾಥ್​ಗೆ ವಹಿಸಲಾಗಿದೆ. ಅಂದು ವೀಕ್​ ಎಂದು ಪರಿಗಣಿಸಿದ್ದ ವಿಶ್ವನಾಥ್​ಗೆ ಇಂದು ಹಾಡಿನ ವಿಚಾರದಲ್ಲಿ ಪ್ರಶಾಂತ್​ ಶಿಷ್ಯನಾಗಿದ್ದಾರೆ!

ಒಬ್ಬರು ಒಂದು ವಿಚಾರದಲ್ಲಿ ಸ್ಟ್ರಾಂಗ್​ ಆಗಿದ್ದರೆ, ಇನ್ನೊಂದು ವಿಚಾರದಲ್ಲಿ ವೀಕ್​ ಆಗಿರುವುದು ಸಹಜ. ಮಾತುಗಾರಿಕೆ ಮತ್ತು ಟಾಸ್ಕ್​ ವಿಚಾರದಲ್ಲಿ ಪ್ರಶಾಂತ್ ಸ್ಟ್ರಾಂಗ್​ ಆಗಿರಬಹುದು. ಆದರೆ ಹಾಡುಗಾರಿಕೆಯಲ್ಲಿ ಅವರು ವೀಕ್​ ಎಂಬುದು ಎಲ್ಲರ ಎದುರು ಬಹಿರಂಗ ಆಗಿದೆ. ಈ ವಿಚಾರವನ್ನು ಮನಗಾಣಿಸುವ ಸಲುವಾಗಿಯೇ ಸುದೀಪ್​ ಈ ಟಾಸ್ಕ್​ ನೀಡಿದ್ದಾರಾ? ಹಾಡು ಕಲಿತು ಪ್ರಶಾಂತ್​ ಎಲ್ಲರ ಎದುರಿನಲ್ಲೂ ಭೇಷ್​ ಎನಿಸಿಕೊಳ್ಳುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ವಾರದ ಪಂಚಾಯಿತಿಯಲ್ಲಿ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ಬೆಂಗಳೂರಿನಲ್ಲಿ ಮತ್ತೆ ಮಳೆ: ವೀಕೆಂಡ್​ನಲ್ಲಿ ಸಿಲಿಕಾನ್​ ಸಿಟಿ ಕೂಲ್​ ಕೂಲ್
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
ತುಮಕೂರು: ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ಕಳವು
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
17 ಕೋಟಿ ರೂ. ಮಾಹಿತಿ ಇಲ್ಲ: ಮತ್ತೊಂದು ಬಾಂಬ್ ಸಿಡಿಸಿದ ಬಿಆರ್ ಪಾಟೀಲ್
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಗಂಡು ಮಕ್ಕಳಿಗೆ ಬಸ್ ನಲ್ಲಿ ಹತ್ತಲು ಆಗುತ್ತಿಲ್ಲ, ಪರಿಸ್ಥಿತಿ ಕೆಟ್ಟದಾಗಿದೆ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮಾದಪ್ಪನಾಣೆಗೂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ:ಸಂಚಲನ ಮೂಡಿಸಿದ ಕೈ ಶಾಸಕ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಮನೆಗೆ ನುಗ್ಗಿ ವ್ಯಕ್ತಿಗೆ ಗುಂಡು ಹಾರಿಸಿ, ಹೆಂಡತಿ, ಮಕ್ಕಳ ಅಪಹರಣ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಭಾರಿ ಗಾತ್ರದ ಜಿಂಕೆಯನ್ನ ಬೇಟೆಯಾಡಿದ ಚಿರತೆ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
ಮೈಸೂರಿನಲ್ಲಿ ರಜನೀಕಾಂತ್ ನೋಡಲು ಜನಸಾಗರ: ವಿಡಿಯೋ ನೋಡಿ
VIDEO: ಲೈನ್ ದಾಟಿ ವಿಕೆಟ್ ಕೈಚೆಲ್ಲಿದ ಜಸ್​ಪ್ರೀತ್ ಬುಮ್ರಾ
VIDEO: ಲೈನ್ ದಾಟಿ ವಿಕೆಟ್ ಕೈಚೆಲ್ಲಿದ ಜಸ್​ಪ್ರೀತ್ ಬುಮ್ರಾ