Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಚಿಕ್ಕ ಹುಡುಗ ವಿಶ್ವನಾಥ್​ಗೆ ಶಿಷ್ಯನಾದ ಸಂಬರಗಿ! ಒಂದೇ ವಾರದಲ್ಲಿ ಗೇಮ್​ ಚೇಂಜ್​ ಮಾಡಿದ ಕಿಚ್ಚ!

ವೀಕ್ಷಕರು ಊಹಿಸಲೂ ಸಾಧ್ಯವಾಗದಂತಹ ಟ್ವಿಸ್ಟ್​ಗಳು ಬಿಗ್​ ಬಾಸ್​ ಮನೆಯಲ್ಲಿ ಕಾಣಿಸುತ್ತಿವೆ. ಮನೆಯೊಳಗಿನ ಚಿಕ್ಕ ಸ್ಪರ್ಧಿ ವಿಶ್ವನಾಥ್​ಗೆ ಪ್ರಶಾಂತ್​ ಸಂಬರಗಿ ಶಿಷ್ಯನಾಗಿದ್ದಾರೆ.

Bigg Boss Kannada: ಚಿಕ್ಕ ಹುಡುಗ ವಿಶ್ವನಾಥ್​ಗೆ ಶಿಷ್ಯನಾದ ಸಂಬರಗಿ! ಒಂದೇ ವಾರದಲ್ಲಿ ಗೇಮ್​ ಚೇಂಜ್​ ಮಾಡಿದ ಕಿಚ್ಚ!
ಪ್ರಶಾಂತ್​ ಸಂಬರಗಿ - ವಿಶ್ವನಾಥ್​
Follow us
ಮದನ್​ ಕುಮಾರ್​
|

Updated on: Mar 15, 2021 | 12:45 PM

ಬಿಗ್​ ಬಾಸ್​ನಲ್ಲಿ ಏನು ಬೇಕಾದರೂ ಆಗಬಹುದು. ಇಂದು ಹಾರಾಡಿದವರು ನಾಳೆ ಮುಗ್ಗರಿಸಿ ಬೀಳಬಹುದು. ಪ್ರಶಾಂತ್​ ಸಂಬರಗಿ ಮತ್ತು ವಿಶ್ವನಾಥ್​ ನಡುವೆಯೂ ಹಾಗೆಯೇ ಆಗಿದೆ. ಅದಕ್ಕೆ ಕಾರಣ ಆಗಿರುವುದು ಮಾತ್ರ ಕಿಚ್ಚ ಸುದೀಪ್​! ಹೌದು, ಎರಡನೇ ವಾರದ ಪಂಚಾಯಿತಿಯಲ್ಲಿ ಸುದೀಪ್​ ಇಂಥದ್ದೊಂದು ಟ್ವಿಸ್ಟ್ ನೀಡಿದ್ದಾರೆ.

ವಿಶ್ವ ವೀಕ್​ ಎಂದಿದ್ದ ಸಂಬರಗಿ ಮೊದಲ ವಾರದಲ್ಲಿ ನಾಮಿನೇಷನ್​ನಿಂದ ಬಚಾವ್​ ಆಗಲು ಇದ್ದ ಟಾಸ್ಕ್​ನಲ್ಲಿ ವಿಶ್ವನಾಥ್​ ಅವರನ್ನು ಪ್ರಶಾಂತ್​ ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರ ಆಯ್ಕೆಗೆ ಕಾರಣ ಏನು ಎಂದು ಕೇಳಿದ್ದಕ್ಕೆ, ‘ವಿಶ್ವ ತುಂಬಾ ವೀಕ್​ ಸ್ಪರ್ಧಿ. ನನ್ನ ಸ್ವಾರ್ಥಕ್ಕಾಗಿ ಅವರನ್ನು ಆಯ್ಕೆ ಮಾಡಿಕೊಂಡೆ’ ಎಂದು ಪ್ರಶಾಂತ್​ ಸಂಬರಗಿ ಉತ್ತರ ನೀಡಿದ್ದರು. ಸುದೀಪ್​ ಮುಂದೆ ಅದನ್ನು ಪ್ರಶಾಂತ್​ ಒಪ್ಪಿಕೊಂಡಿದ್ದರು ಕೂಡ. ಅಲ್ಲದೆ, ಆ ಟಾಸ್ಕ್​ನಲ್ಲಿ ವಿಶ್ವನಾಥ್​ ಎದುರು ಪ್ರಶಾಂತ್​ ಗೆದ್ದು ಬೀಗಿದ್ದರು. ಆದರೆ ತಮ್ಮನ್ನು ವೀಕ್​ ಎಂದು ಕರೆದಿದ್ದು ವಿಶ್ವನಾಥ್​ಗೆ ಬೇಸರ ಮೂಡಿಸಿತ್ತು.

ಆದರೆ ಈಗ ಗೇಮ್​ ಚೇಂಜ್​! ಎರಡನೇ ವಾರದ ಪಂಚಾಯಿತಿಯಲ್ಲಿ ಒಂದು ಹಾಡು ಹೇಳುವಂತೆ ವಿಶ್ವನಾಥ್​ಗೆ ಸುದೀಪ್​ ಸೂಚಿಸಿದರು. ಅದರಂತೆ, ಮನೆಯೊಳಗೆ ತಾವೇ ಕಂಪೋಸ್​ ಮಾಡಿದ ಹಾಡನ್ನು ವಿಶ್ವನಾಥ್​ ಹೇಳಿದರು. ಅದೇ ಹಾಡಿನ ನಾಲ್ಕು ಸಾಲು ಹೇಳುವಂತೆ ಪ್ರಶಾಂತ್​ಗೆ ಸುದೀಪ್​ ಸೂಚಿಸಿದರು. ಆದರೆ ಪ್ರಶಾಂತ್​ ಹಾಡಿದ ರೀತಿ ಅಷ್ಟಾಗಿ ಯಾರಿಗೂ ಹಿಡಿಸಲಿಲ್ಲ. ಇನ್ನೊಂದು ವಾರದೊಳಗೆ ಕಲಿತು ಹಾಡುತ್ತೇನೆ ಎಂದು ಪ್ರಶಾಂತ್​ ಭರವಸೆ ನೀಡಿದ್ದಾರೆ. ಅವರಿಗೆ ಹಾಡು ಕಲಿಸುವ ಜವಾಬ್ದಾರಿಯನ್ನು ವಿಶ್ವನಾಥ್​ಗೆ ವಹಿಸಲಾಗಿದೆ. ಅಂದು ವೀಕ್​ ಎಂದು ಪರಿಗಣಿಸಿದ್ದ ವಿಶ್ವನಾಥ್​ಗೆ ಇಂದು ಹಾಡಿನ ವಿಚಾರದಲ್ಲಿ ಪ್ರಶಾಂತ್​ ಶಿಷ್ಯನಾಗಿದ್ದಾರೆ!

ಒಬ್ಬರು ಒಂದು ವಿಚಾರದಲ್ಲಿ ಸ್ಟ್ರಾಂಗ್​ ಆಗಿದ್ದರೆ, ಇನ್ನೊಂದು ವಿಚಾರದಲ್ಲಿ ವೀಕ್​ ಆಗಿರುವುದು ಸಹಜ. ಮಾತುಗಾರಿಕೆ ಮತ್ತು ಟಾಸ್ಕ್​ ವಿಚಾರದಲ್ಲಿ ಪ್ರಶಾಂತ್ ಸ್ಟ್ರಾಂಗ್​ ಆಗಿರಬಹುದು. ಆದರೆ ಹಾಡುಗಾರಿಕೆಯಲ್ಲಿ ಅವರು ವೀಕ್​ ಎಂಬುದು ಎಲ್ಲರ ಎದುರು ಬಹಿರಂಗ ಆಗಿದೆ. ಈ ವಿಚಾರವನ್ನು ಮನಗಾಣಿಸುವ ಸಲುವಾಗಿಯೇ ಸುದೀಪ್​ ಈ ಟಾಸ್ಕ್​ ನೀಡಿದ್ದಾರಾ? ಹಾಡು ಕಲಿತು ಪ್ರಶಾಂತ್​ ಎಲ್ಲರ ಎದುರಿನಲ್ಲೂ ಭೇಷ್​ ಎನಿಸಿಕೊಳ್ಳುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ವಾರದ ಪಂಚಾಯಿತಿಯಲ್ಲಿ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್