AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಚಿಕ್ಕ ಹುಡುಗ ವಿಶ್ವನಾಥ್​ಗೆ ಶಿಷ್ಯನಾದ ಸಂಬರಗಿ! ಒಂದೇ ವಾರದಲ್ಲಿ ಗೇಮ್​ ಚೇಂಜ್​ ಮಾಡಿದ ಕಿಚ್ಚ!

ವೀಕ್ಷಕರು ಊಹಿಸಲೂ ಸಾಧ್ಯವಾಗದಂತಹ ಟ್ವಿಸ್ಟ್​ಗಳು ಬಿಗ್​ ಬಾಸ್​ ಮನೆಯಲ್ಲಿ ಕಾಣಿಸುತ್ತಿವೆ. ಮನೆಯೊಳಗಿನ ಚಿಕ್ಕ ಸ್ಪರ್ಧಿ ವಿಶ್ವನಾಥ್​ಗೆ ಪ್ರಶಾಂತ್​ ಸಂಬರಗಿ ಶಿಷ್ಯನಾಗಿದ್ದಾರೆ.

Bigg Boss Kannada: ಚಿಕ್ಕ ಹುಡುಗ ವಿಶ್ವನಾಥ್​ಗೆ ಶಿಷ್ಯನಾದ ಸಂಬರಗಿ! ಒಂದೇ ವಾರದಲ್ಲಿ ಗೇಮ್​ ಚೇಂಜ್​ ಮಾಡಿದ ಕಿಚ್ಚ!
ಪ್ರಶಾಂತ್​ ಸಂಬರಗಿ - ವಿಶ್ವನಾಥ್​
ಮದನ್​ ಕುಮಾರ್​
|

Updated on: Mar 15, 2021 | 12:45 PM

Share

ಬಿಗ್​ ಬಾಸ್​ನಲ್ಲಿ ಏನು ಬೇಕಾದರೂ ಆಗಬಹುದು. ಇಂದು ಹಾರಾಡಿದವರು ನಾಳೆ ಮುಗ್ಗರಿಸಿ ಬೀಳಬಹುದು. ಪ್ರಶಾಂತ್​ ಸಂಬರಗಿ ಮತ್ತು ವಿಶ್ವನಾಥ್​ ನಡುವೆಯೂ ಹಾಗೆಯೇ ಆಗಿದೆ. ಅದಕ್ಕೆ ಕಾರಣ ಆಗಿರುವುದು ಮಾತ್ರ ಕಿಚ್ಚ ಸುದೀಪ್​! ಹೌದು, ಎರಡನೇ ವಾರದ ಪಂಚಾಯಿತಿಯಲ್ಲಿ ಸುದೀಪ್​ ಇಂಥದ್ದೊಂದು ಟ್ವಿಸ್ಟ್ ನೀಡಿದ್ದಾರೆ.

ವಿಶ್ವ ವೀಕ್​ ಎಂದಿದ್ದ ಸಂಬರಗಿ ಮೊದಲ ವಾರದಲ್ಲಿ ನಾಮಿನೇಷನ್​ನಿಂದ ಬಚಾವ್​ ಆಗಲು ಇದ್ದ ಟಾಸ್ಕ್​ನಲ್ಲಿ ವಿಶ್ವನಾಥ್​ ಅವರನ್ನು ಪ್ರಶಾಂತ್​ ಪ್ರತಿಸ್ಪರ್ಧಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರ ಆಯ್ಕೆಗೆ ಕಾರಣ ಏನು ಎಂದು ಕೇಳಿದ್ದಕ್ಕೆ, ‘ವಿಶ್ವ ತುಂಬಾ ವೀಕ್​ ಸ್ಪರ್ಧಿ. ನನ್ನ ಸ್ವಾರ್ಥಕ್ಕಾಗಿ ಅವರನ್ನು ಆಯ್ಕೆ ಮಾಡಿಕೊಂಡೆ’ ಎಂದು ಪ್ರಶಾಂತ್​ ಸಂಬರಗಿ ಉತ್ತರ ನೀಡಿದ್ದರು. ಸುದೀಪ್​ ಮುಂದೆ ಅದನ್ನು ಪ್ರಶಾಂತ್​ ಒಪ್ಪಿಕೊಂಡಿದ್ದರು ಕೂಡ. ಅಲ್ಲದೆ, ಆ ಟಾಸ್ಕ್​ನಲ್ಲಿ ವಿಶ್ವನಾಥ್​ ಎದುರು ಪ್ರಶಾಂತ್​ ಗೆದ್ದು ಬೀಗಿದ್ದರು. ಆದರೆ ತಮ್ಮನ್ನು ವೀಕ್​ ಎಂದು ಕರೆದಿದ್ದು ವಿಶ್ವನಾಥ್​ಗೆ ಬೇಸರ ಮೂಡಿಸಿತ್ತು.

ಆದರೆ ಈಗ ಗೇಮ್​ ಚೇಂಜ್​! ಎರಡನೇ ವಾರದ ಪಂಚಾಯಿತಿಯಲ್ಲಿ ಒಂದು ಹಾಡು ಹೇಳುವಂತೆ ವಿಶ್ವನಾಥ್​ಗೆ ಸುದೀಪ್​ ಸೂಚಿಸಿದರು. ಅದರಂತೆ, ಮನೆಯೊಳಗೆ ತಾವೇ ಕಂಪೋಸ್​ ಮಾಡಿದ ಹಾಡನ್ನು ವಿಶ್ವನಾಥ್​ ಹೇಳಿದರು. ಅದೇ ಹಾಡಿನ ನಾಲ್ಕು ಸಾಲು ಹೇಳುವಂತೆ ಪ್ರಶಾಂತ್​ಗೆ ಸುದೀಪ್​ ಸೂಚಿಸಿದರು. ಆದರೆ ಪ್ರಶಾಂತ್​ ಹಾಡಿದ ರೀತಿ ಅಷ್ಟಾಗಿ ಯಾರಿಗೂ ಹಿಡಿಸಲಿಲ್ಲ. ಇನ್ನೊಂದು ವಾರದೊಳಗೆ ಕಲಿತು ಹಾಡುತ್ತೇನೆ ಎಂದು ಪ್ರಶಾಂತ್​ ಭರವಸೆ ನೀಡಿದ್ದಾರೆ. ಅವರಿಗೆ ಹಾಡು ಕಲಿಸುವ ಜವಾಬ್ದಾರಿಯನ್ನು ವಿಶ್ವನಾಥ್​ಗೆ ವಹಿಸಲಾಗಿದೆ. ಅಂದು ವೀಕ್​ ಎಂದು ಪರಿಗಣಿಸಿದ್ದ ವಿಶ್ವನಾಥ್​ಗೆ ಇಂದು ಹಾಡಿನ ವಿಚಾರದಲ್ಲಿ ಪ್ರಶಾಂತ್​ ಶಿಷ್ಯನಾಗಿದ್ದಾರೆ!

ಒಬ್ಬರು ಒಂದು ವಿಚಾರದಲ್ಲಿ ಸ್ಟ್ರಾಂಗ್​ ಆಗಿದ್ದರೆ, ಇನ್ನೊಂದು ವಿಚಾರದಲ್ಲಿ ವೀಕ್​ ಆಗಿರುವುದು ಸಹಜ. ಮಾತುಗಾರಿಕೆ ಮತ್ತು ಟಾಸ್ಕ್​ ವಿಚಾರದಲ್ಲಿ ಪ್ರಶಾಂತ್ ಸ್ಟ್ರಾಂಗ್​ ಆಗಿರಬಹುದು. ಆದರೆ ಹಾಡುಗಾರಿಕೆಯಲ್ಲಿ ಅವರು ವೀಕ್​ ಎಂಬುದು ಎಲ್ಲರ ಎದುರು ಬಹಿರಂಗ ಆಗಿದೆ. ಈ ವಿಚಾರವನ್ನು ಮನಗಾಣಿಸುವ ಸಲುವಾಗಿಯೇ ಸುದೀಪ್​ ಈ ಟಾಸ್ಕ್​ ನೀಡಿದ್ದಾರಾ? ಹಾಡು ಕಲಿತು ಪ್ರಶಾಂತ್​ ಎಲ್ಲರ ಎದುರಿನಲ್ಲೂ ಭೇಷ್​ ಎನಿಸಿಕೊಳ್ಳುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ವಾರದ ಪಂಚಾಯಿತಿಯಲ್ಲಿ ಉತ್ತರ ಸಿಗಬೇಕಿದೆ.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಮನೆಯಿಂದ ಎಲಿಮಿನೇಟ್​ ಆದ ನಿರ್ಮಲಾ ಚೆನ್ನಪ್ಪ; ಇಲ್ಲಿದೆ ಕಾರಣ

‘ಅಸಭ್ಯವಾಗಿ ಮುಟ್ಟಿದರೆ ಬಿಗ್​ ಬಾಸ್​ ಸಹಿಸಲ್ಲ’: ಸುದೀಪ್​ ಹೀಗೆ ಎಚ್ಚರಿಕೆ ನೀಡಿದ್ದು ಯಾರಿಗೆ?

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ