AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆಯವರಿಗೆ ಗೊತ್ತಾಗಿಹೋಯ್ತು; ಇನ್ನು ಎಲ್ಲವೂ ಸುಲಭ

ಬಿಗ್​ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಪ್ರಶಾಂತ್​ ಮೇಲೆ ಅಸಮಾಧಾನವಿದೆ. ಹೀಗಾಗಿಯೇ, ಅವರಿಂದ ಆದಷ್ಟು ದೂರ ಇರೋಕೆ ಇಷ್ಟಪಡುತ್ತಾರೆ. ಮಾಡಿದ್ದು ತಪ್ಪು ಎಂದು ಯಾರಾದರೂ ಎತ್ತಿ ತೋರಿಸಿದರೆ, ಅವರಿಗೆ ಸಿಟ್ಟು ಬಂದು ಬಿಡುತ್ತದೆ. ಆದರೆ, ಮನೆಯಲ್ಲಿ ಅವರು ಸ್ಟ್ರಾಂಗ್​ ಸ್ಪರ್ಧಿ ಆಗಿದ್ದರಿಂದಲೇ ಪ್ರತಿ ಬಾರಿಯೂ ಎಲಿಮಿನೇಷನ್​ಗೆ ನಾಮಿನೇಟ್​ ಆದರೂ ಬಚಾವ್​ ಆಗುತ್ತಿದ್ದಾರೆ.

ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆಯವರಿಗೆ ಗೊತ್ತಾಗಿಹೋಯ್ತು; ಇನ್ನು ಎಲ್ಲವೂ ಸುಲಭ
ಪ್ರಶಾಂತ್​ ಸಂಬರಗಿ
ರಾಜೇಶ್ ದುಗ್ಗುಮನೆ
| Edited By: |

Updated on: Apr 08, 2021 | 7:26 AM

Share

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆ ಸೇರಿರುವ ಸ್ಟ್ರಾಂಗ್​ ಕಂಟೆಸ್ಟಂಟ್​​​​ಗಳಲ್ಲಿ ಒಬ್ಬರು. ಮಾತಿಗೆ ನಿಂತರೆ ಅವರನ್ನು ಸೋಲಿಸೋದು ಅಷ್ಟು ಸುಲಭ ಅಲ್ಲವೇ ಅಲ್ಲ. ಅವರು ಜಗಳವಾಡೋಕೆ ಇಳಿದರಂತೂ ಮುಗಿದೇ ಹೋಯಿತು. ಅವರ ಎದುರು ನಿಲ್ಲೋಕೆ ಎಲ್ಲರೂ ಭಯ ಪಡುತ್ತಾರೆ. ಆದರೆ, ಈಗ ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆ ಮಂದಿಗೆಲ್ಲ ಗೊತ್ತಾಗಿದೆ. ಇನ್ನು ಮುಂದಿನ ಆಟಗಳೆಲ್ಲವೂ ತುಂಬಾನೇ ಸುಲಭ ಎಂದು ಮನೆ ಮಂದಿ ಖುಷಿಯಾಗಿದ್ದಾರೆ. ಬಿಗ್​ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಪ್ರಶಾಂತ್​ ಮೇಲೆ ಅಸಮಾಧಾನವಿದೆ. ಹೀಗಾಗಿಯೇ, ಅವರಿಂದ ಆದಷ್ಟು ದೂರ ಇರೋಕೆ ಇಷ್ಟಪಡುತ್ತಾರೆ. ಮಾಡಿದ್ದು ತಪ್ಪು ಎಂದು ಯಾರಾದರೂ ಎತ್ತಿ ತೋರಿಸಿದರೆ, ಅವರಿಗೆ ಸಿಟ್ಟು ಬಂದು ಬಿಡುತ್ತದೆ. ಮನೆಯಲ್ಲಿ ಅವರು ಸ್ಟ್ರಾಂಗ್​ ಸ್ಪರ್ಧಿ ಆಗಿದ್ದರಿಂದಲೇ ಪ್ರತಿ ಬಾರಿಯೂ ಎಲಿಮಿನೇಷನ್​ಗೆ ನಾಮಿನೇಟ್​ ಆದರೂ ಬಚಾವ್​ ಆಗುತ್ತಿದ್ದಾರೆ. ಆದರೆ, ಪ್ರತಿ ವ್ಯಕ್ತಿಗೂ ಒಂದು ಮೈನಸ್​ ಪಾಯಿಂಟ್​ ಅನ್ನೋದು ಇದ್ದೇ ಇರುತ್ತದೆ. ಇದಕ್ಕೆ ಪ್ರಶಾಂತ್​ ಕೂಡ ಹೊರತಾಗಿಲ್ಲ.

ಪ್ರಶಾಂತ್​ ಸಂಬರಗಿ ಯಾವುದೇ ಟಾಸ್ಕ್​ ನೀಡಲಿ ಅದನ್ನು ಸರಿಯಾಗಿ ಆಡಿದ ಉದಾಹರಣೆ ತುಂಬಾನೇ ಕಡಿಮೆ. ಇದು ಮನೆ ಮಂದಿಗೆಲ್ಲ ಗೊತ್ತಾಗಿದೆ. ಕೆಲ ವಾರಗಳ ಹಿಂದೆ ಟಾಸ್ಕ್​ ಒಂದರಲ್ಲಿ ರಘು ಗೌಡ ತಪ್ಪು ಮಾಡಿದಾಗ ಅದನ್ನು ಹೀಯಾಳಿಸಿ ನಕ್ಕಿದ್ದರು. ಆದರೆ, ಅಲ್ಲಿ ಅವರೇ ಟಾಸ್ಕ್​ ಮಾಡುವಾಗ ಎಡವಿದ್ದರು.

ಏಪ್ರಿಲ್​​ 7 ರ ಸಂಚಿಕೆಯಲ್ಲೂ ಇದೇ ರೀತಿ ಆಗಿದೆ. ಪ್ರಶಾಂತ್​ ಗೇಮ್​ ಆಡುವಾಗ ಕಳಪೆ ಪ್ರದರ್ಶನ ನೀಡಿದ್ದಾರೆ. ಇದನ್ನು ಪ್ರಶಾಂತ್​ ಕೂಡ ಒಪ್ಪಿಕೊಂಡಿದ್ದಾರೆ. ನಾನು ಕಳಪೆಯಾಗಿ ಆಟವಾಡಿದ್ದೇನೆ. ಇದಕ್ಕೆ ಕ್ಷಮೆಯಾಚಿಸುತ್ತೇನೆ ಎಂದರು. ಮನೆ ಮಂದಿ ಕೂಡ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಪ್ರಶಾಂತ್​ ವೈಯಕ್ತಿಕವಾಗಿ ಟಾಸ್ಕ್​ ಅನ್ನು ಸರಿಯಾಗಿ ನಿಭಾಯಿಸುವುದಿಲ್ಲ. ಅವರು ಗುಂಪಿನಲ್ಲಿದ್ದಾಗ ಮಾತ್ರ ಹುಲಿ ಎಂದು ಹೀಯಾಳಿಸಿದರು.

ಇಷ್ಟು ದಿನ ಮನೆಯಲ್ಲಿರುವ ಪ್ರಶಾಂತ್​ ಅವರ ಮೈನಸ್​ ಪಾಯಿಂಟ್​ಗಳು ಏನು ಎನ್ನುವುದು ಅನೇಕರಿಗೆ ಗೊತ್ತೇ ಇರಲಿಲ್ಲ. ಈಗ ಈ ವಿಚಾರ ತಿಳಿದು ಮನೆ ಮಂದಿಗೆ ಒಂದು ಅಸ್ತ್ರ ಸಿಕ್ಕಂತಾಗಿದೆ.

ಇದನ್ನೂ ಓದಿ: Bigg Boss Kannada: ಕಳ್ಳ​ ನನ್ಮಗ ಎಂದು ಪ್ರಶಾಂತ್​ಗೆ ಬೈಯ್ದ ನಿಧಿ! ಅಚ್ಚರಿ ಹುಟ್ಟಿಸಿದ ಸಂಬರಗಿ ಪ್ರತಿಕ್ರಿಯೆ

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ