Bigg Boss Kannada: ಕಳ್ಳ​ ನನ್ಮಗ ಎಂದು ಪ್ರಶಾಂತ್​ಗೆ ಬೈಯ್ದ ನಿಧಿ! ಅಚ್ಚರಿ ಹುಟ್ಟಿಸಿದ ಸಂಬರಗಿ ಪ್ರತಿಕ್ರಿಯೆ

Nidhi Subbaiah: ಹೆಜ್ಜೆ ಹೆಜ್ಜೆಗೂ ಪ್ರಶಾಂತ್​ ಸಂಬರಗಿ ಸುಳ್ಳು ಹೇಳುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದು ನಿಧಿಗೆ ಕಿಂಚಿತ್ತೂ ಇಷ್ಟ ಆಗುತ್ತಿಲ್ಲ. ಹಾಗಾಗಿ ಪ್ರಶಾಂತ್​ಗೆ ‘ಕಳ್ಳ ನನ್ಮಗ’ ಎಂದು ಅವರು ಬೈಯ್ದಿದ್ದಾರೆ.

Bigg Boss Kannada: ಕಳ್ಳ​ ನನ್ಮಗ ಎಂದು ಪ್ರಶಾಂತ್​ಗೆ ಬೈಯ್ದ ನಿಧಿ! ಅಚ್ಚರಿ ಹುಟ್ಟಿಸಿದ ಸಂಬರಗಿ ಪ್ರತಿಕ್ರಿಯೆ
ನಿಧಿ ಸುಬ್ಬಯ್ಯ - ಪ್ರಶಾಂತ್​ ಸಂಬರಗಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Apr 07, 2021 | 3:47 PM

ಬಿಗ್​ ಬಾಸ್​ ಮನೆಯಲ್ಲೀಗ ಆಟ ತೀವ್ರವಾಗಿದೆ. ತಮ್ಮ ಉಳಿವಿಗಾಗಿ ಎಲ್ಲರೂ ಸಿಕ್ಕಾಪಟ್ಟೆ ಹಣಾಹಣಿ ನಡೆಸುತ್ತಿದ್ದಾರೆ. ಟಾಸ್ಕ್​ನಲ್ಲಿ ಗೆಲ್ಲುವುದು ಮಾತ್ರವಲ್ಲದೆ ಕಿರಿಕ್​ಗಳನ್ನೂ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಪ್ರಶಾಂತ್​ ಸಂಬರಗಿ ಅವರ ನಡೆ ಅಚ್ಚರಿ ಮೂಡಿಸುತ್ತಿದೆ. ಅವರನ್ನು ಎಲ್ಲರೂ ಟಾರ್ಗೆಟ್​ ಮಾಡುತ್ತಿದ್ದಾರೆ. ಹಾಗೆ ಟಾರ್ಗೆಟ್​ ಆಗುವ ರೀತಿಯಲ್ಲೇ ಪ್ರಶಾಂತ್​ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿ ನಿಧಿ ಸುಬ್ಬಯ್ಯ ಅವರು ಮುಖಕ್ಕೆ ಹೊಡೆದಂತೆ ಪ್ರಶಾಂತ್​ ಸಂಬರಗಿಗೆ ಬೈಯ್ದಿದ್ದಾರೆ!

ಹೆಜ್ಜೆ ಹೆಜ್ಜೆಗೂ ಪ್ರಶಾಂತ್​ ಸಂಬರಗಿ ಸುಳ್ಳು ಹೇಳುತ್ತಾರೆ ಎಂಬುದು ಈಗಾಗಗಲೇ ಸಾಬೀತಾಗಿದೆ. ವೀಕ್ಷಕರ ಗಮನಕ್ಕೂ ಅದು ಬಂದಿದೆ. ಮೊದಲು ತಪ್ಪು ಮಾಡಿ, ಆಮೇಲೆ ತನ್ನಿಂದ ತಪ್ಪೇ ಆಗಿಲ್ಲ ಎಂದು ವಾದಿಸುವ ಚಾಳಿ ಪ್ರಶಾಂತ್​ ಅವರದ್ದು. ಇದು ನಿಧಿಗೆ ಕಿಂಚಿತ್ತೂ ಇಷ್ಟ ಆಗಿಲ್ಲ. ಇದೇ ವಿಚಾರವಾಗಿ ಅಡುಗೆ ಮನೆಯಲ್ಲಿ ಚರ್ಚೆ ಆಗುತ್ತಿತ್ತು. ಈ ವೇಳೆ ಪ್ರಶಾಂತ್​ಗೆ ‘ಕಳ್ಳ ನನ್ಮಗ’ ಎಂದು ನಿಧಿ ಬೈಯ್ದರು.

‘ಅರ್ಧ ಚಮಚ ತುಪ್ಪದ ವಿಚಾರಕ್ಕೆ ಮನೆಯವರನ್ನು ನೋಡಿ ಇಡೀ ಕರ್ನಾಟಕ ನಗುವಂತೆ ಮಾಡಿದ್ರಲ್ಲ ಅಂತ ಸುದೀಪ್​ ಹೇಳಿದ್ರು’ ಎಂದು ಅಡುಗೆ ಮನೆಯಲ್ಲಿ ಚಂದ್ರಚೂಡ್​ಗೆ ಪ್ರಶಾಂತ್​ ಹೇಳುತ್ತಿದ್ದರು. ಆ ಮಾತಿಗೆ ನಿಧಿ ವಿರೋಧ ವ್ಯಕ್ತಪಡಿಸಿದರು. ಸುದೀಪ್​ ಆ ರೀತಿ ಹೇಳಿಯೇ ಇಲ್ಲ ಎಂದು ನಿಧಿ ವಾದಿಸಿದರು. ಆದರೂ ಹಠ ಬಿಡಿದೇ ಪ್ರಶಾಂತ್​ ಮಾತು ಮುಂದುವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನಿಧಿ, ‘ಯಾಕೆ ಸುಳ್ಳು ಹೇಳುತ್ತೀರಿ? ಮಾತು ಮಾತಿಗೆ ತಾಯಾಣೆ ಹಾಕೋದು. ಕಳ್​ ನನ್ಮಗ’ ಎಂದು ಹೇಳಿದರು.

‘ಕಳ್​ ನನ್ಮಗ’ ಎಂದು ನಿಧಿ ಹೇಳಿದ್ದು ಪ್ರಶಾಂತ್​ಗೆ ಸ್ಪಷ್ಟವಾಗಿ ಕೇಳಿಸಿತು. ಅವರು ಅರ್ಧ ಸೆಕೆಂಡ್​ ಮೌನವಾದರೇ ಹೊರತು ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ. ಇದು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ. ಚಿಕ್ಕ ಪುಟ್ಟ ವಿಚಾರಗಳಿಗೆ ನೇರಾನೇರ ಜಗಳ ಮಾಡುವ ಪ್ರಶಾಂತ್​ ಸಂಬರಗಿ ಅವರು ‘ಕಳ್​ ನನ್ಮಗ’ ಎಂಬ ಬೈಯ್ಗುಳವನ್ನು ಕೇಳಿಸಿಕೊಂಡು ಯಾಕೆ ಸುಮ್ಮನಾದರೂ? ಈ ಪ್ರಶ್ನೆ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿದೆ.

ನಿಧಿ ಹೀಗೆ ಹೀನಾಮಾನ ಬೈಯ್ದಿದ್ದನ್ನು ಕೇಳಿಸಿಕೊಂಡು ಸುಮ್ಮನಿರುವ ವ್ಯಕ್ತಿತ್ವ ಪ್ರಶಾಂತ್​ ಸಂಬರಗಿ ಅವರದ್ದು ಅಲ್ಲವೇ ಅಲ್ಲ. ಆದರೂ ಅವರು ಸೈಲೆಂಟ್​ ಆಗಿದ್ದಾರೆ ಎಂದರೆ ಅದರ ಹಿಂದೆ ಏನೋ ಸ್ಟ್ರಾಟಜಿ ಇದೆ ಎಂಬುದು ಖಂಡಿತ. ‘ನಿಧಿ ಕಳ್ ನನ್ಮಗ ಎಂದು ಬೈಯ್ದಳು. ನನಗೆ ಸ್ಪಷ್ಟವಾಗಿ ಕೇಳಿಸಿತು’ ಎಂದು ಚಕ್ರವರ್ತಿ ಚಂದ್ರಚೂಡ್​ ಕೂಡ ಆ ಘಟನೆಯನ್ನು ಪ್ರಶಾಂತ್​ಗೆ ಮತ್ತೆ ನೆನಪಿಸಿದರು. ಆದರೂ ಪ್ರಶಾಂತ್​ ಹೆಚ್ಚೇನೂ ಕೆರಳಿಲ್ಲ. ಇದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಮನೆ ಹೊರಗೆ ಇದ್ದಾಗ ತಮಗೆ ಸಂಬಂಧವೇ ಇಲ್ಲದ ವಿಚಾರಗಳಲ್ಲಿ ತಲೆಹಾಕಿ ಕೂಗಾಡುತ್ತಿದ್ದ ಸಂಬರಗಿ, ಈಗ ತಾವೇ ಬೈಯ್ಸಿಕೊಂಡರೂ ಸೈಲೆಂಟ್​ ಆಗಿದ್ದಾರೆ!

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನಮಗೆ ಒತ್ತಡ ಹೇರುತ್ತಾರೆ! ಶಂಕರ್​ ಅಶ್ವತ್ಥ್​ ಹೀಗೆ ಹೇಳಿದ್ದು ಯಾಕೆ?

ಬಿಗ್​ ಬಾಸ್​ನಲ್ಲಿ ಗುಟ್ಟಾಗಿ ನಡೆಯುತ್ತಿದ್ದ ನಾಮಿನೇಷನ್​ ಈಗ ಬಟಾಬಯಲು! ಯಾರಿಗೆಲ್ಲ ಕಾದಿದೆ ಅಪಾಯ?

(Bigg Boss Kannada: Nidhi Subbaiah makes derogatory comment on Prashanth Sambargi in BBK8)

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ