AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಕಳ್ಳ​ ನನ್ಮಗ ಎಂದು ಪ್ರಶಾಂತ್​ಗೆ ಬೈಯ್ದ ನಿಧಿ! ಅಚ್ಚರಿ ಹುಟ್ಟಿಸಿದ ಸಂಬರಗಿ ಪ್ರತಿಕ್ರಿಯೆ

Nidhi Subbaiah: ಹೆಜ್ಜೆ ಹೆಜ್ಜೆಗೂ ಪ್ರಶಾಂತ್​ ಸಂಬರಗಿ ಸುಳ್ಳು ಹೇಳುತ್ತಾರೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದು ನಿಧಿಗೆ ಕಿಂಚಿತ್ತೂ ಇಷ್ಟ ಆಗುತ್ತಿಲ್ಲ. ಹಾಗಾಗಿ ಪ್ರಶಾಂತ್​ಗೆ ‘ಕಳ್ಳ ನನ್ಮಗ’ ಎಂದು ಅವರು ಬೈಯ್ದಿದ್ದಾರೆ.

Bigg Boss Kannada: ಕಳ್ಳ​ ನನ್ಮಗ ಎಂದು ಪ್ರಶಾಂತ್​ಗೆ ಬೈಯ್ದ ನಿಧಿ! ಅಚ್ಚರಿ ಹುಟ್ಟಿಸಿದ ಸಂಬರಗಿ ಪ್ರತಿಕ್ರಿಯೆ
ನಿಧಿ ಸುಬ್ಬಯ್ಯ - ಪ್ರಶಾಂತ್​ ಸಂಬರಗಿ
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on: Apr 07, 2021 | 3:47 PM

Share

ಬಿಗ್​ ಬಾಸ್​ ಮನೆಯಲ್ಲೀಗ ಆಟ ತೀವ್ರವಾಗಿದೆ. ತಮ್ಮ ಉಳಿವಿಗಾಗಿ ಎಲ್ಲರೂ ಸಿಕ್ಕಾಪಟ್ಟೆ ಹಣಾಹಣಿ ನಡೆಸುತ್ತಿದ್ದಾರೆ. ಟಾಸ್ಕ್​ನಲ್ಲಿ ಗೆಲ್ಲುವುದು ಮಾತ್ರವಲ್ಲದೆ ಕಿರಿಕ್​ಗಳನ್ನೂ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಈ ಸಂದರ್ಭದಲ್ಲಿ ಪ್ರಶಾಂತ್​ ಸಂಬರಗಿ ಅವರ ನಡೆ ಅಚ್ಚರಿ ಮೂಡಿಸುತ್ತಿದೆ. ಅವರನ್ನು ಎಲ್ಲರೂ ಟಾರ್ಗೆಟ್​ ಮಾಡುತ್ತಿದ್ದಾರೆ. ಹಾಗೆ ಟಾರ್ಗೆಟ್​ ಆಗುವ ರೀತಿಯಲ್ಲೇ ಪ್ರಶಾಂತ್​ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಟಿ ನಿಧಿ ಸುಬ್ಬಯ್ಯ ಅವರು ಮುಖಕ್ಕೆ ಹೊಡೆದಂತೆ ಪ್ರಶಾಂತ್​ ಸಂಬರಗಿಗೆ ಬೈಯ್ದಿದ್ದಾರೆ!

ಹೆಜ್ಜೆ ಹೆಜ್ಜೆಗೂ ಪ್ರಶಾಂತ್​ ಸಂಬರಗಿ ಸುಳ್ಳು ಹೇಳುತ್ತಾರೆ ಎಂಬುದು ಈಗಾಗಗಲೇ ಸಾಬೀತಾಗಿದೆ. ವೀಕ್ಷಕರ ಗಮನಕ್ಕೂ ಅದು ಬಂದಿದೆ. ಮೊದಲು ತಪ್ಪು ಮಾಡಿ, ಆಮೇಲೆ ತನ್ನಿಂದ ತಪ್ಪೇ ಆಗಿಲ್ಲ ಎಂದು ವಾದಿಸುವ ಚಾಳಿ ಪ್ರಶಾಂತ್​ ಅವರದ್ದು. ಇದು ನಿಧಿಗೆ ಕಿಂಚಿತ್ತೂ ಇಷ್ಟ ಆಗಿಲ್ಲ. ಇದೇ ವಿಚಾರವಾಗಿ ಅಡುಗೆ ಮನೆಯಲ್ಲಿ ಚರ್ಚೆ ಆಗುತ್ತಿತ್ತು. ಈ ವೇಳೆ ಪ್ರಶಾಂತ್​ಗೆ ‘ಕಳ್ಳ ನನ್ಮಗ’ ಎಂದು ನಿಧಿ ಬೈಯ್ದರು.

‘ಅರ್ಧ ಚಮಚ ತುಪ್ಪದ ವಿಚಾರಕ್ಕೆ ಮನೆಯವರನ್ನು ನೋಡಿ ಇಡೀ ಕರ್ನಾಟಕ ನಗುವಂತೆ ಮಾಡಿದ್ರಲ್ಲ ಅಂತ ಸುದೀಪ್​ ಹೇಳಿದ್ರು’ ಎಂದು ಅಡುಗೆ ಮನೆಯಲ್ಲಿ ಚಂದ್ರಚೂಡ್​ಗೆ ಪ್ರಶಾಂತ್​ ಹೇಳುತ್ತಿದ್ದರು. ಆ ಮಾತಿಗೆ ನಿಧಿ ವಿರೋಧ ವ್ಯಕ್ತಪಡಿಸಿದರು. ಸುದೀಪ್​ ಆ ರೀತಿ ಹೇಳಿಯೇ ಇಲ್ಲ ಎಂದು ನಿಧಿ ವಾದಿಸಿದರು. ಆದರೂ ಹಠ ಬಿಡಿದೇ ಪ್ರಶಾಂತ್​ ಮಾತು ಮುಂದುವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನಿಧಿ, ‘ಯಾಕೆ ಸುಳ್ಳು ಹೇಳುತ್ತೀರಿ? ಮಾತು ಮಾತಿಗೆ ತಾಯಾಣೆ ಹಾಕೋದು. ಕಳ್​ ನನ್ಮಗ’ ಎಂದು ಹೇಳಿದರು.

‘ಕಳ್​ ನನ್ಮಗ’ ಎಂದು ನಿಧಿ ಹೇಳಿದ್ದು ಪ್ರಶಾಂತ್​ಗೆ ಸ್ಪಷ್ಟವಾಗಿ ಕೇಳಿಸಿತು. ಅವರು ಅರ್ಧ ಸೆಕೆಂಡ್​ ಮೌನವಾದರೇ ಹೊರತು ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ. ಇದು ಎಲ್ಲರಿಗೂ ಅಚ್ಚರಿ ಮೂಡಿಸುತ್ತಿದೆ. ಚಿಕ್ಕ ಪುಟ್ಟ ವಿಚಾರಗಳಿಗೆ ನೇರಾನೇರ ಜಗಳ ಮಾಡುವ ಪ್ರಶಾಂತ್​ ಸಂಬರಗಿ ಅವರು ‘ಕಳ್​ ನನ್ಮಗ’ ಎಂಬ ಬೈಯ್ಗುಳವನ್ನು ಕೇಳಿಸಿಕೊಂಡು ಯಾಕೆ ಸುಮ್ಮನಾದರೂ? ಈ ಪ್ರಶ್ನೆ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿದೆ.

ನಿಧಿ ಹೀಗೆ ಹೀನಾಮಾನ ಬೈಯ್ದಿದ್ದನ್ನು ಕೇಳಿಸಿಕೊಂಡು ಸುಮ್ಮನಿರುವ ವ್ಯಕ್ತಿತ್ವ ಪ್ರಶಾಂತ್​ ಸಂಬರಗಿ ಅವರದ್ದು ಅಲ್ಲವೇ ಅಲ್ಲ. ಆದರೂ ಅವರು ಸೈಲೆಂಟ್​ ಆಗಿದ್ದಾರೆ ಎಂದರೆ ಅದರ ಹಿಂದೆ ಏನೋ ಸ್ಟ್ರಾಟಜಿ ಇದೆ ಎಂಬುದು ಖಂಡಿತ. ‘ನಿಧಿ ಕಳ್ ನನ್ಮಗ ಎಂದು ಬೈಯ್ದಳು. ನನಗೆ ಸ್ಪಷ್ಟವಾಗಿ ಕೇಳಿಸಿತು’ ಎಂದು ಚಕ್ರವರ್ತಿ ಚಂದ್ರಚೂಡ್​ ಕೂಡ ಆ ಘಟನೆಯನ್ನು ಪ್ರಶಾಂತ್​ಗೆ ಮತ್ತೆ ನೆನಪಿಸಿದರು. ಆದರೂ ಪ್ರಶಾಂತ್​ ಹೆಚ್ಚೇನೂ ಕೆರಳಿಲ್ಲ. ಇದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. ಮನೆ ಹೊರಗೆ ಇದ್ದಾಗ ತಮಗೆ ಸಂಬಂಧವೇ ಇಲ್ಲದ ವಿಚಾರಗಳಲ್ಲಿ ತಲೆಹಾಕಿ ಕೂಗಾಡುತ್ತಿದ್ದ ಸಂಬರಗಿ, ಈಗ ತಾವೇ ಬೈಯ್ಸಿಕೊಂಡರೂ ಸೈಲೆಂಟ್​ ಆಗಿದ್ದಾರೆ!

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನಮಗೆ ಒತ್ತಡ ಹೇರುತ್ತಾರೆ! ಶಂಕರ್​ ಅಶ್ವತ್ಥ್​ ಹೀಗೆ ಹೇಳಿದ್ದು ಯಾಕೆ?

ಬಿಗ್​ ಬಾಸ್​ನಲ್ಲಿ ಗುಟ್ಟಾಗಿ ನಡೆಯುತ್ತಿದ್ದ ನಾಮಿನೇಷನ್​ ಈಗ ಬಟಾಬಯಲು! ಯಾರಿಗೆಲ್ಲ ಕಾದಿದೆ ಅಪಾಯ?

(Bigg Boss Kannada: Nidhi Subbaiah makes derogatory comment on Prashanth Sambargi in BBK8)

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್