AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕಾಗಲ್ಲ ಅಲ್ವಾ?; ಸುದೀಪ್​ ನೇರ ಪ್ರಶ್ನೆಗೆ ಶಮಂತ್​ ತಬ್ಬಿಬ್ಬು

ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆಯ ಕೊನೆಯಲ್ಲಿ ಉಳಿದುಕೊಂಡಿದ್ದು ಶಮಂತ್​ ಮತ್ತು ಶಂಕರ್​ ಅಶ್ವತ್ಥ್​. ಶಮಂತ್​ ಕೊನೆಯ ಕ್ಷಣದಲ್ಲಿ ಬಚಾವ್​ ಆಗಿದ್ದು, ಶಂಕರ್​ ಅಶ್ವತ್ಥ್​ ಎಲಿಮಿನೇಟ್​ ಆಗಿದ್ದಾರೆ.

ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕಾಗಲ್ಲ ಅಲ್ವಾ?; ಸುದೀಪ್​ ನೇರ ಪ್ರಶ್ನೆಗೆ ಶಮಂತ್​ ತಬ್ಬಿಬ್ಬು
ಶಮಂತ್-ಕಿಚ್ಚ ಸುದೀಪ್​
ರಾಜೇಶ್ ದುಗ್ಗುಮನೆ
| Edited By: |

Updated on: Apr 05, 2021 | 4:57 PM

Share

ಬಿಗ್​ ಬಾಸ್​ ಮನೆಯಲ್ಲಿರುವ ಶಮಂತ್​ ಬ್ರೋ ಗೌಡ ತುಂಬಾನೇ ವೀಕ್​ ಸ್ಪರ್ಧಿ ಎಂಬುದು ಮನೆಯವರೆಲ್ಲರ ನಂಬಿಕೆ. ಇದಕ್ಕಾಗಿಯೇ ಸಮಯ ಸಿಕ್ಕಾಗೆಲ್ಲ ಮನೆಯ ಬಹುತೇಕ ಸ್ಪರ್ಧಿಗಳು ಶಮಂತ್​ ಮೈನಸ್​ ಪಾಯಿಂಟ್​ ಬಗ್ಗೆ ಹೇಳುತ್ತಲೇ ಇರುತ್ತಾರೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಶಮಂತ್​ಗೆ ಸುದೀಪ್​ ನೇರ ಪ್ರಶ್ನೆ ಕೇಳಿದ್ದಾರೆ. ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದು ಶಮಂತ್​ ಮತ್ತು ಶಂಕರ್​ ಅಶ್ವತ್ಥ್​. ಶಮಂತ್​ ಕೊನೆಯ ಕ್ಷಣದಲ್ಲಿ ಬಚಾವ್​ ಆಗಿದ್ದು, ಶಂಕರ್​ ಅಶ್ವತ್ಥ್​ ಎಲಿಮಿನೇಟ್​ ಆಗಿದ್ದಾರೆ. ವೇದಿಕೆ ಮೇಲೆ ಬಂದ ಶಂಕರ್​, ಆರನೇ ವಾರ ಎಲಿಮಿನೇಟ್​ ಆಗೋದು ಶಮಂತ್​ ಎಂದು ಭವಿಷ್ಯ ನುಡಿದರು.

ಇದಕ್ಕೂ ಮೊದಲು ಶಮಂತ್​ ಮಾಡಿದ ತಪ್ಪೊಂದು ಜಗತ್​ ಜಾಹೀರಾಗಿದೆ. ಅದು ಕಿಚ್ಚ ಸುದೀಪ್​ ಎದುರೇ ಅನ್ನೋದು ವಿಶೇಷ. ಕಿಚ್ಚ ಸುದೀಪ್​ ಮನೆಯ ಸದಸ್ಯರಿಗೆ ಪ್ರಶ್ನೆ ಒಂದನ್ನು ಕೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಚೆನ್ನಾಗಿ ಅಡುಗೆ ಮಾಡುತ್ತಾರೆ. ಇದಕ್ಕೆ ಹೌದು ಅಥವಾ ಇಲ್ಲ ಎನ್ನುವ ಉತ್ತರವನ್ನು ಸ್ಪರ್ಧಿಗಳು ನೀಡಬೇಕು.

ಬಹುತೇಕರು ಹೌದು ಎಂದು ಉತ್ತರಿಸಿದರೆ, ಕೆಲವೇ ಕೆಲವು ಮಂದಿ ಮಾತ್ರ ಇಲ್ಲ ಎನ್ನುವ ಉತ್ತರ ನೀಡಿದರು. ಶಮಂತ್​ ಅವರು ವೈಷ್ಣವಿ ಚೆನ್ನಾಗಿ ಅಡುಗೆ ಮಾಡುತ್ತಾರೆ ಎಂದು ಬಾಯ್ತುಂಬ ಹೊಗಳಿದರು. ವೈಷ್ಣವಿ ಅವರು ತುಂಬಾನೇ ಚೆನ್ನಾಗಿ ಅಡುಗೆ ಮಾಡುತ್ತಾರೆ. ಊಟ ವಿಳಂಬವಾಗುತ್ತದೆ ಎಂದಾಗ ಮಧ್ಯೆ ಹೊಟ್ಟೆ ಹಸಿಯದಂತೆ ನೋಡಿಕೊಳ್ಳಲು ಸಣ್ಣ-ಪುಟ್ಟ ಅಡುಗೆ ಮಾಡಿ ಕೊಡ್ತಾರೆ. ಮೊನ್ನೆ ಕದ್ದು ತಿಂದ.. ಎಂದು ಹೇಳುವಾಗ ಶಮಂತ್​ಗೆ ತಪ್ಪಿನ ಅರಿವಾಗಿ ಮಾತನ್ನು ನುಂಗಿದ್ದಾರೆ.

ಐದನೇ ವಾರ ಬಿಗ್​ ಬಾಸ್​ ಮನೆಯಲ್ಲಿ ಶಮಂತ್, ವೈಷ್ಣವಿ ಮೊದಲಾದವರು ನಿಪ್ಪಟ್ಟಿಗೆ ಟೊಮ್ಯಾಟೋ ಹಾಕಿಕೊಂಡು ಅದನ್ನು ಕದ್ದು ತಿಂದಿದ್ದರು. ಇದು ಮನೆಯಲ್ಲಿ ಅನೇಕರಿಗೆ ಗೊತ್ತಿಲ್ಲ. ಅದು ವೀಕೆಂಡ್​ನಲ್ಲಿ ಶಮಂತ್ ಬಾಯಿಯಿಂದಲೇ ಹೊರ ಬಿದ್ದಿದೆ. ಈ ವೇಳೆ ಸುದೀಪ್​, ‘ಮಾಡಿದ ತಪ್ಪನ್ನು ಜಾಸ್ತಿ ದಿನ ಮುಚ್ಚಿಡೋಕೆ ಆಗಲ್ಲ ಅಲ್ವಾ’ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಶಮಂತ್ ತಬ್ಬಿಬ್ಬಾಗಿದ್ದಾರೆ.

ಇದನ್ನೂ ಓದಿ: ಇಲ್ಲಿದ್ದವರೆಲ್ಲಾ​ ಬುಕ್​ ಆಗಿದಾರೆ, ನನಗೆ ಯಾರೂ ಇಲ್ಲ; ಸುದೀಪ್​ ಮುಂದೆ ಶಮಂತ್​ ಬೇಸರ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ