AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿದ್ದವರೆಲ್ಲಾ​ ಬುಕ್​ ಆಗಿದಾರೆ, ನನಗೆ ಯಾರೂ ಇಲ್ಲ; ಸುದೀಪ್​ ಮುಂದೆ ಶಮಂತ್​ ಬೇಸರ

ಹುಡುಗಿಯರನ್ನು ಹೇಗೆ ಬೀಳಿಸಿಕೊಳ್ಳಬೇಕು ಎಂಬುದನ್ನು ಪ್ರಶಾಂತ್​ ಹೇಳಿಕೊಟ್ಟರು. ಏನೆಲ್ಲ ಮಾಡಿಕೊಡಬೇಕು ಎಂಬುದನ್ನೂ ಹೇಳಿದರು ಎಂದು ಪ್ರಶಾಂತ್​ ಮಾತನ್ನು ಶಮಂತ್​ ಪುನರುಚ್ಛರಿಸಿದರು.

ಇಲ್ಲಿದ್ದವರೆಲ್ಲಾ​ ಬುಕ್​ ಆಗಿದಾರೆ, ನನಗೆ ಯಾರೂ ಇಲ್ಲ; ಸುದೀಪ್​ ಮುಂದೆ ಶಮಂತ್​ ಬೇಸರ
ಬಿಗ್​ಬಾಸ್​ ಸ್ಪರ್ಧಿ ಶಮಂತ್​
ರಾಜೇಶ್ ದುಗ್ಗುಮನೆ
| Edited By: |

Updated on: Apr 05, 2021 | 4:08 PM

Share

ಪ್ರತೀ ವೀಕೆಂಡ್​ ವೇಳೆ ಬಿಗ್​ ಬಾಸ್​ ಮನೆಯಲ್ಲಿ  ಕಿಚ್ಚ ಸುದೀಪ್​ ಅವರು ಸ್ಪರ್ಧಿಗಳ ಜತೆ ಮಾತನಾಡುತ್ತಾರೆ. ಈ ವೇಳೆ ಸುದೀಪ್​ ಎದುರು ಅವರೆಲ್ಲ ಕಷ್ಟ-ಸುಖ ತೋಡಿಕೊಳ್ಳುತ್ತಾರೆ. ಈಗ ಶಮಂತ್​ ಕೂಡ ವೀಕೆಂಡ್​ನಲ್ಲಿ ಸುದೀಪ್​ ಎದುರು ತಮ್ಮ ಕಷ್ಟ ಹಂಚಿಕೊಂಡಿದ್ದಾರೆ. ನಮಗೆ ಯಾವ ಹುಡುಗಿಯೂ ಸಿಗುತ್ತಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಎಲ್ಲರೂ ಬುಕ್​ ಆಗಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ಅವರು ಹುಡುಗಿಯರ ವಿಚಾರದಲ್ಲಿ ಶಮಂತ್​ ಬ್ರೋ ಗೌಡಗೆ ಕೆಲ ಟಿಪ್ಸ್​ ನೀಡಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಹುಡುಗಿಯರನ್ನು ಬೀಳಿಸಿಕೊಳ್ಳೋದು ಹೇಗೆ ಎಂಬ ಟೆಕ್ನಿಕ್​ ಹೇಳಿದ್ದರು. ಈ ವಿಚಾರವನ್ನು ಸುದೀಪ್​ ಕೂಡ ಪ್ರಸ್ತಾಪ ಮಾಡಿದರು. ಆಗ ಶಮಂತ್​, ಪ್ರಶಾಂತ್​ ಏನೆಲ್ಲ ಹೇಳಿದ್ದರು ಎಂಬುದನ್ನು ಸುದೀಪ್​ ಎದುರು ಹೇಳಿಕೊಂಡರು.

ಹುಡುಗಿಯರನ್ನು ಹೇಗೆ ಬೀಳಿಸಿಕೊಳ್ಳಬೇಕು ಎಂಬುದನ್ನು ಪ್ರಶಾಂತ್​ ಹೇಳಿಕೊಟ್ಟರು. ಏನೆಲ್ಲ ಮಾಡಿಕೊಡಬೇಕು ಎಂಬುದನ್ನೂ ಅವರು ಹೇಳಿದರು ಎಂದು ಪ್ರಶಾಂತ್​ ಮಾತನ್ನು ಪುನರುಚ್ಛರಿಸಿದರು. ಆಗ ಸುದೀಪ್​, ಅವರು ಹೇಳಿಕೊಟ್ಟ ಟಿಪ್ಸ್​ ಕೆಲಸ ಮಾಡ್ತಾ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಶಮಂತ್​, ಇಲ್ಲಿ ಎಲ್ಲರೂ ಬುಕ್​ ಆಗಿ ಬಿಟ್ಟಿದ್ದಾರೆ. ನಂಗೆ ಇಲ್ಲಿ ಹುಡ್ಕೊಳೋಕೆ ಯಾರು ಇಲ್ಲ ಎಂದು ನಕ್ಕರು. ಆಗ ಸುದೀಪ್​, ಬುಕ್​ ಆಗಿರೋದು ಅಂದ್ರಲ್ಲ ಅದು ಯಾವ್​ ತರ ಎಂದು ಪ್ರಶ್ನೆ ಮಾಡಿದಾಗ ಶಮಂತ್​ಗೆ ಉತ್ತರಿಸೋದೆ ಕಷ್ಟವಾಗಿ ಹೋಗಿತ್ತು. ಏನು ಹೇಳಬೇಕು ಎಂಬುದು ಗೊತ್ತಾಗದೆ ತಡವರಿಸಿದರು. ಇತ್ತೀಚೆಗೆ ಅರವಿಂದ್​-ದಿವ್ಯಾ ಉರುಡುಗ ಗರ್ಲ್​ಫ್ರೆಂಡ್​ ಎಂದು ಹೇಳಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್​ ವಿರುದ್ಧ ದಿವ್ಯಾ ಉರುಡುಗ ಜಗಳವಾಡಿದ್ದರು. ಇದನ್ನು ನೆನಪು ಮಾಡಿಕೊಂಡು ಹೆಸರು ಹೇಳೋಕೆ ಶಮಂತ್​​ ಭಯಪಟ್ಟರು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?

Follow Us
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ