ಇಲ್ಲಿದ್ದವರೆಲ್ಲಾ​ ಬುಕ್​ ಆಗಿದಾರೆ, ನನಗೆ ಯಾರೂ ಇಲ್ಲ; ಸುದೀಪ್​ ಮುಂದೆ ಶಮಂತ್​ ಬೇಸರ

ಹುಡುಗಿಯರನ್ನು ಹೇಗೆ ಬೀಳಿಸಿಕೊಳ್ಳಬೇಕು ಎಂಬುದನ್ನು ಪ್ರಶಾಂತ್​ ಹೇಳಿಕೊಟ್ಟರು. ಏನೆಲ್ಲ ಮಾಡಿಕೊಡಬೇಕು ಎಂಬುದನ್ನೂ ಹೇಳಿದರು ಎಂದು ಪ್ರಶಾಂತ್​ ಮಾತನ್ನು ಶಮಂತ್​ ಪುನರುಚ್ಛರಿಸಿದರು.

ಇಲ್ಲಿದ್ದವರೆಲ್ಲಾ​ ಬುಕ್​ ಆಗಿದಾರೆ, ನನಗೆ ಯಾರೂ ಇಲ್ಲ; ಸುದೀಪ್​ ಮುಂದೆ ಶಮಂತ್​ ಬೇಸರ
ಬಿಗ್​ಬಾಸ್​ ಸ್ಪರ್ಧಿ ಶಮಂತ್​
Follow us
| Updated By: ಮದನ್​ ಕುಮಾರ್​

Updated on: Apr 05, 2021 | 4:08 PM

ಪ್ರತೀ ವೀಕೆಂಡ್​ ವೇಳೆ ಬಿಗ್​ ಬಾಸ್​ ಮನೆಯಲ್ಲಿ  ಕಿಚ್ಚ ಸುದೀಪ್​ ಅವರು ಸ್ಪರ್ಧಿಗಳ ಜತೆ ಮಾತನಾಡುತ್ತಾರೆ. ಈ ವೇಳೆ ಸುದೀಪ್​ ಎದುರು ಅವರೆಲ್ಲ ಕಷ್ಟ-ಸುಖ ತೋಡಿಕೊಳ್ಳುತ್ತಾರೆ. ಈಗ ಶಮಂತ್​ ಕೂಡ ವೀಕೆಂಡ್​ನಲ್ಲಿ ಸುದೀಪ್​ ಎದುರು ತಮ್ಮ ಕಷ್ಟ ಹಂಚಿಕೊಂಡಿದ್ದಾರೆ. ನಮಗೆ ಯಾವ ಹುಡುಗಿಯೂ ಸಿಗುತ್ತಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಎಲ್ಲರೂ ಬುಕ್​ ಆಗಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್ ಸಂಬರಗಿ ಅವರು ಹುಡುಗಿಯರ ವಿಚಾರದಲ್ಲಿ ಶಮಂತ್​ ಬ್ರೋ ಗೌಡಗೆ ಕೆಲ ಟಿಪ್ಸ್​ ನೀಡಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಹುಡುಗಿಯರನ್ನು ಬೀಳಿಸಿಕೊಳ್ಳೋದು ಹೇಗೆ ಎಂಬ ಟೆಕ್ನಿಕ್​ ಹೇಳಿದ್ದರು. ಈ ವಿಚಾರವನ್ನು ಸುದೀಪ್​ ಕೂಡ ಪ್ರಸ್ತಾಪ ಮಾಡಿದರು. ಆಗ ಶಮಂತ್​, ಪ್ರಶಾಂತ್​ ಏನೆಲ್ಲ ಹೇಳಿದ್ದರು ಎಂಬುದನ್ನು ಸುದೀಪ್​ ಎದುರು ಹೇಳಿಕೊಂಡರು.

ಹುಡುಗಿಯರನ್ನು ಹೇಗೆ ಬೀಳಿಸಿಕೊಳ್ಳಬೇಕು ಎಂಬುದನ್ನು ಪ್ರಶಾಂತ್​ ಹೇಳಿಕೊಟ್ಟರು. ಏನೆಲ್ಲ ಮಾಡಿಕೊಡಬೇಕು ಎಂಬುದನ್ನೂ ಅವರು ಹೇಳಿದರು ಎಂದು ಪ್ರಶಾಂತ್​ ಮಾತನ್ನು ಪುನರುಚ್ಛರಿಸಿದರು. ಆಗ ಸುದೀಪ್​, ಅವರು ಹೇಳಿಕೊಟ್ಟ ಟಿಪ್ಸ್​ ಕೆಲಸ ಮಾಡ್ತಾ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಶಮಂತ್​, ಇಲ್ಲಿ ಎಲ್ಲರೂ ಬುಕ್​ ಆಗಿ ಬಿಟ್ಟಿದ್ದಾರೆ. ನಂಗೆ ಇಲ್ಲಿ ಹುಡ್ಕೊಳೋಕೆ ಯಾರು ಇಲ್ಲ ಎಂದು ನಕ್ಕರು. ಆಗ ಸುದೀಪ್​, ಬುಕ್​ ಆಗಿರೋದು ಅಂದ್ರಲ್ಲ ಅದು ಯಾವ್​ ತರ ಎಂದು ಪ್ರಶ್ನೆ ಮಾಡಿದಾಗ ಶಮಂತ್​ಗೆ ಉತ್ತರಿಸೋದೆ ಕಷ್ಟವಾಗಿ ಹೋಗಿತ್ತು. ಏನು ಹೇಳಬೇಕು ಎಂಬುದು ಗೊತ್ತಾಗದೆ ತಡವರಿಸಿದರು. ಇತ್ತೀಚೆಗೆ ಅರವಿಂದ್​-ದಿವ್ಯಾ ಉರುಡುಗ ಗರ್ಲ್​ಫ್ರೆಂಡ್​ ಎಂದು ಹೇಳಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್​ ವಿರುದ್ಧ ದಿವ್ಯಾ ಉರುಡುಗ ಜಗಳವಾಡಿದ್ದರು. ಇದನ್ನು ನೆನಪು ಮಾಡಿಕೊಂಡು ಹೆಸರು ಹೇಳೋಕೆ ಶಮಂತ್​​ ಭಯಪಟ್ಟರು.

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್ ಕೇಳಿದ 10 ಜನರಲ್​ ನಾಲೆಡ್ಜ್​ ಪ್ರಶ್ನೆಗೆ ಉತ್ತರಿಸದೇ ಸೋತ ಶಮಂತ್​! ನಿಮಗೆ ಉತ್ತರ ಗೊತ್ತಾ?

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ