AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀರಿಯಲ್​ ನೋಡಿ ದೇವ್ರೇ ಕಾಪಾಡಪ್ಪ ಎಂದ ಅನಿತಾ ಭಟ್​! ಅಂಥದ್ದೇನಿದೆ ಈ ದೃಶ್ಯದಲ್ಲಿ?

ಕಿಂಚಿತ್ತೂ ಲಾಜಿಕ್​ ಇಲ್ಲದ ಧಾರಾವಾಹಿ ದೃಶ್ಯಗಳು ಆಗಾಗ ವೈರಲ್​ ಆಗುತ್ತಿರುತ್ತವೆ. ಅವುಗಳ ಪೈಕಿ ಈ ವಿಡಿಯೋಗೆ ಅಗ್ರಸ್ಥಾನ ಸಿಗಲೇಬೇಕು. ಅಷ್ಟು ಫನ್ನಿಯಾಗಿದೆ ಈ ದೃಶ್ಯ!

ಸೀರಿಯಲ್​ ನೋಡಿ ದೇವ್ರೇ ಕಾಪಾಡಪ್ಪ ಎಂದ ಅನಿತಾ ಭಟ್​! ಅಂಥದ್ದೇನಿದೆ ಈ ದೃಶ್ಯದಲ್ಲಿ?
(ಧಾರಾವಾಹಿ ವೈರಲ್​ ವಿಡಿಯೋ - ಅನಿತಾ ಭಟ್​)
ಮದನ್​ ಕುಮಾರ್​
| Edited By: |

Updated on: Apr 07, 2021 | 5:24 PM

Share

ಸೀರಿಯಲ್​ಗಳ ಲೋಕವೇ ಬೇರೆ ರೀತಿ ಇರುತ್ತದೆ. ಪ್ರತಿದಿನ ವೀಕ್ಷಕರನ್ನು ಸೆಳೆಯಲು ಏನೇನೋ ತಂತ್ರಗಳನ್ನು ಮಾಡಬೇಕಾಗುತ್ತದೆ. ಆದರೆ ಅವು ಒಂದು ಗಡಿಯನ್ನು ದಾಟಿದ ಬಳಿಕ ನಗೆಪಾಟಲಿಗೆ ಈಡಾಗಬೇಕಾಗುತ್ತದೆ. ಸದ್ಯ ಅಂಥದ್ದೊಂದು ಧಾರಾವಾಹಿಯ ದೃಶ್ಯ ಇಂಟರ್​ನೆಟ್​ನಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದ ಎಲ್ಲರ ತಲೆ ಗಿರಗಿರ ಎನ್ನುತ್ತಿದೆ. ಕನ್ನಡದ ನಟಿ ಅನಿತಾ ಭಟ್​ ಕೂಡ ಈ ಸೀರಿಯಲ್​ ಸೀನ್​ ನೋಡಿ ಸುಸ್ತಾಗಿದ್ದಾರೆ!

ಆ ದೃಶ್ಯದಲ್ಲಿ ಏನಿದೆ? ಒಬ್ಬಳು ಹುಡುಗಿಯನ್ನು ಒಲಿಸಿಕೊಳ್ಳಲು ಇಬ್ಬರು ಹುಡುಗರ ನಡುವೆ ಪೈಪೋಟಿ ಏರ್ಪಡುತ್ತದೆ. ಚಂದ್ರನ ಚೂರನ್ನು ಮುರಿದು ತಂದವರಿಗೆ ಆ ಹುಡುಗಿ ಸಿಗುತ್ತಾಳೆ ಎಂಬ ನಿಯಮ ಹಾಕಲಾಗುತ್ತದೆ. ಆಗ ಆ ಇಬ್ಬರು ಹುಡುಗರು ಚಂದ್ರನ ಚೂರನ್ನು ಭೂಮಿಗೆ ತರುವ ಪ್ರಯತ್ನ ಮಾಡುತ್ತಾರೆ. ಅದು ಎಷ್ಟು ಕಾಮಿಡಿ ಆಗಿದೆಯೆಂದರೆ, ನೋಡಿದವರೆಲ್ಲ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ. ಅನಿತಾ ಭಟ್​ ಅವರು ಆ ದೃಶ್ಯವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡು ‘ದೇವ್ರೇ ನನ್ನ ಕಾಪಾಡಪ್ಪ’ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಸ್ಟಾರ್​ ಪ್ಲಸ್​ ವಾಹಿನಿಯ ‘ಯೇ ಜಾದೂ ಹೈ ಜಿನ್​ ಕಾ’ ಧಾರಾವಾಹಿಯ ದೃಶ್ಯವಿದು. ಮೊದಲ ಸೀಸನ್​ ಯಶಸ್ವಿ ಆದ ಬಳಿಕ ಈಗ 2ನೇ ಸೀಸನ್​ ಪ್ರಸಾರ ಆಗುತ್ತಿದೆ. ಇದೊಂದು ಫ್ಯಾಂಟಸಿ ಕಥೆಯುಳ್ಳ ಧಾರಾವಾಹಿ. ಪ್ರಸ್ತುತ ವೈರಲ್​ ಆಗಿರುವ ದೃಶ್ಯ ಒಂದು ಸ್ವಯಂವರದ್ದು. ಮುಖ್ಯ ಪಾತ್ರಧಾರಿ ರೋಷನಿ (ಅದಿತಿ ಶರ್ಮಾ) ತನ್ನನ್ನು ಮದುವೆ ಆಗುವ ಹುಡುಗನು ಚಂದ್ರನ ಚೂರನ್ನು ಭೂಮಿಗೆ ತರಬೇಕು ಎಂದು ಸವಾಲು ಹಾಕುತ್ತಾಳೆ. ಆಗ ಒಬ್ಬ ಹುಡುಗ ಚಂದ್ರನಿಗೆ ಹಗ್ಗ ಹಾಕಿ ಎಳೆಯಲು ಪ್ರಯತ್ನಿಸುತ್ತಾನೆ. ಮತ್ತೊಬ್ಬನಂತೂ ಕಾರಿನಲ್ಲೇ ಚಂದ್ರಲೋಕಕ್ಕೆ ಹೋಗುತ್ತಾನೆ!

ಇಂಥದ್ದನ್ನೆಲ್ಲ ನೋಡಿದರೆ ಯಾರಿಗೆ ನಗು ಬರುವುದಿಲ್ಲ ಹೇಳಿ? ಹಾಗಾಗಿ ಇಂಟರ್​ನೆಟ್​ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದರ ಮೇಲೆ ಹಲವು ಬಗೆಯ ಮೀಟ್​ಗಳನ್ನು ರಚಿಸಿ ಹರಿಬಿಡಲಾಗುತ್ತಿದೆ. ‘ಈ ವಿಡಿಯೋವನ್ನು ನೀವು ನಾಸಾದವರಿಗೆ ಫಾರ್ವರ್ಡ್​ ಮಾಡುವುದಿಲ್ಲ ಎಂದು ನನಗೆ ಪ್ರಮಾಣ ಮಾಡಿ’ ಎಂಬಂತಹ ಫನ್ನಿ ಕ್ಯಾಪ್ಷನ್​ಗಳೊಂದಿಗೆ ಜನರು ಇದನ್ನು ಶೇರ್​ ಮಾಡುತ್ತಿದ್ದಾರೆ. ‘ದೇವ್ರೇ ನನ್ನ ಕಾಪಾಡಪ್ಪ’ ಎಂದು ಕನ್ನಡದ ನಟಿ ಅನಿತಾ ಭಟ್​ ಕೈ ಮುಗಿದಿದ್ದಾರೆ.

ಇದನ್ನೂ ಓದಿ: Naagini 2: ಮದುವೆ ಆದ್ರೂ ನಾವು ಗಂಡ-ಹೆಂಡತಿ ಅಲ್ಲ ಎಂದ ನಾಗಿಣಿ ನಟ-ನಟಿ! ಏನಿದರ ಅಸಲಿ ಕಥೆ?

‘ನಾಗಿಣಿ’ ತ್ರಿಶೂಲ್​-ಶಿವಾನಿ ಅದ್ದೂರಿ ಮದುವೆ! ಸಾವಿರಾರು ಫ್ಯಾನ್ಸ್​ ಎದುರು ಆರತಕ್ಷತೆ

(Anita Bhat shares a funny viral video of Yehh Jadu Hai Jinn Ka serial on twitter)

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ