AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪೂರ್ಣ ಪಟ್ಟಿ: ದಕ್ಷಿಣ ಭಾರತ ಚಿತ್ರರಂಗದ್ದೆ ಮೇಲುಗೈ

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 2022ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದ್ದು, ಪ್ರಶಸ್ತಿ ಪಡೆದ ಸಿನಿಮಾ ಹಾಗೂ ತಂತ್ರಜ್ಞರು, ನಟ-ನಟಿಯರ ಪಟ್ಟಿ ಇಲ್ಲಿದೆ.

ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪೂರ್ಣ ಪಟ್ಟಿ: ದಕ್ಷಿಣ ಭಾರತ ಚಿತ್ರರಂಗದ್ದೆ ಮೇಲುಗೈ
ಮಂಜುನಾಥ ಸಿ.
|

Updated on:Aug 16, 2024 | 4:41 PM

Share
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆಗಸ್ಟ್ 16 ರಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಬಾರಿಯೂ ಸಹ ದಕ್ಷಿಣ ಭಾರತ ಚಿತ್ರರಂಗವೇ ಮೇಲುಗೈ ಸಾಧಿಸಿದೆ. ಹಲವು ಪ್ರಮುಖ ಪ್ರಶಸ್ತಿಗಳನ್ನು ದಕ್ಷಿಣ ಭಾರತ ಚಿತ್ರರಂಗ ಬಾಚಿಕೊಂಡಿದೆ. ಅತ್ಯುತ್ತಮ ನಟ ಮತ್ತು ನಟಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ ಅಂಥಹಾ ಪ್ರಮುಖ ಪ್ರಶಸ್ತಿಗಳು ದಕ್ಷಿಣ ಭಾರತ ಚಿತ್ರರಂಗದ ಪಾಲಾಗಿವೆ.
ಫೀಚರ್ ಫಿಲಂ ಕ್ಯಾಟಗರಿಯಲ್ಲಿ ಬರೋಬ್ಬರಿ 32 ಭಾಷೆಗಳ 309 ಸಿನಿಮಾಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದವು. ಫೀಚರ್ ಸಿನಿಮಾ ಕ್ಯಾಟಗರಿಯಲ್ಲಿ 27 ಪ್ರಶಸ್ತಿಗಳನ್ನು ನೀಡಲಾಗಿದ್ದು, ಪ್ರತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾ, ತಂತ್ರಜ್ಞರು, ನಟ-ನಟಿಯರ ಹೆಸರು ಇಲ್ಲಿದೆ.

ಫೀಚರ್ ಫಿಲಂ ಕ್ಯಾಟಗರಿ

ತೀರ್ಪುಗಾರರ ವಿಶೇಷ ಪ್ರಶಸ್ತಿ: ಮನೋಜ್ ಬಾಜ್ಪೇಯಿ (ಗುಲ್​ಮೊಹರ್-ಹಿಂದಿ ಸಿನಿಮಾ)
                                                    ಸಂಗೀತ ನಿರ್ದೇಶಕ ಸಂಜಯ್ ಸಲೀಲ್, (ಕದಿಕನ್- ಮಲಯಾಳಂ)
ಅತ್ಯುತ್ತಮ ಟೀವಾ ಸಿನಿಮಾ: ಸಿಕಾಸಿಲ್ (ಬಾಬಿ ಶರ್ಮಾ ಬರೂಹ್)
ಅತ್ಯುತ್ತಮ ತೆಲುಗು ಸಿನಿಮಾ: ಕಾರ್ತಿಕೇಯ 2 (ಚಂದೂ ಮೊಂಡೇಟಿ)
ಅತ್ಯುತ್ತಮ ತಮಿಳು ಸಿನಿಮಾ: ಪೊನ್ನಿಯಿನ್ ಸೆಲ್ವನ್ 1 (ಮಣಿರತ್ನಂ)
ಅತ್ಯುತ್ತಮ ಪಂಜಾಬಿ ಸಿನಿಮಾ: ಭಾಗಿ ದೀ ಧೀ (ಮುಖೇಶ್ ಗೌತಮ್)
ಅತ್ಯುತ್ತಮ ಒಡಿಯಾ ಸಿನಿಮಾ: ದಮನ್ (ವಿಶಾಲ್-ದೇಬಿ)
ಅತ್ಯುತ್ತಮ ಮಲಯಾಳಂ ಸಿನಿಮಾ: ಸೌದಿ ವೆಲಕ್ಕ ಸಿಸಿ 225/2009 (ತರುಣ್ ಮೂರ್ತಿ)
ಅತ್ಯುತ್ತಮ ಮರಾಠಿ ಸಿನಿಮಾ: ವಾಲ್ವಿ (ಪರೇಶ್ ಮೊಕಾಶಿ)
ಅತ್ಯುತ್ತಮ ಕನ್ನಡ ಸಿನಿಮಾ: ಕೆಜಿಎಫ್ 2 (ಪ್ರಶಾಂತ್ ನೀಲ್)
ಅತ್ಯುತ್ತಮ ಹಿಂದಿ ಸಿನಿಮಾ: ಗುಲ್​ಮೊಹರ್ (ರಾಹುಲ್ ಚಿತ್ತಾಲ)
ಅತ್ಯುತ್ತಮ ಬೆಂಗಾಲಿ ಸಿನಿಮಾ: ಕಬೇರಿ ಅಂತರ್ಧನ (ಕೌಶಿಕ್ ಗಂಗೂಲಿ)
ಅತ್ಯುತ್ತಮ ಅಸ್ಸಾಮಿ ಸಿನಿಮಾ: ಎಮುತಿ ಮುತಿ (ಕುಲನಂದಿ)
ಅತ್ಯುತ್ತಮ ಆಕ್ಷನ್ : ಅನ್ಬರಿವ್ (ಕೆಜಿಎಫ್ 2)
ಅತ್ಯುತ್ತಮ ನೃತ್ಯ: ಜಾನಿ ಮಾಸ್ಟರ್-ಸತೀಶ್ (ತಿರುಚಿತ್ರಂಬಳಂ-ತಮಿಳು)
ಅತ್ಯುತ್ತಮ ಸಾಹಿತ್ಯ: ನೌಶದ್ ಸಾದರ್ ಖಾನ್ (ಫೌಜಾ-ಹರಿಯಾಣ)
ಅತ್ಯುತ್ತಮ ಸಂಗೀತ (ಹಾಡು): ಪ್ರೀತಂ (ಬ್ರಹ್ಮಾಸ್ತ್ರ-ಹಿಂದಿ)
ಅತ್ಯುತ್ತಮ ಹಿನ್ನೆಲೆ ಸಂಗೀತ: ಎಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ 1)
ಅತ್ಯುತ್ತಮ ಮೇಕಪ್: ಸೋಮನಾಥ್ ಕುಂಡು (ಅಪರಾಜಿತೊ-ಬೆಂಗಾಲಿ)
ಅತ್ಯುತ್ತಮ ವಸ್ತ್ರ ವಿನ್ಯಾಸ: ನಿಕ್ಕಿ ಜೋಶಿ (ಕಚ್ ಎಕ್ಸ್​ಪ್ರೆಸ್-ಗುಜರಾತಿ)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಆನಂದ್ ಅಧ್ಯಾಯ (ಅಪರಾಜಿತೊ-ಬೆಂಗಾಲಿ)
ಅತ್ಯುತ್ತಮ ಸಂಕಲನ: ಮಹೇಶ್ ಭುವನೇಂದ್ (ಆಟಂ-ಮಲಯಾಳಂ)
ಅತ್ಯುತ್ತಮ ಶಬ್ದ ವಿನ್ಯಾಸ: ಆನಂದ್ ಕೃಷ್ಣಮೂರ್ತಿ (ಪೊನ್ನಿಯಿನ್ ಸೆಲ್ವನ್ 1-ತಮಿಳು)
ಅತ್ಯುತ್ತಮ ಚಿತ್ರಕತೆ: ಆನಂದ್ ಎಕರ್ಶಿ (ಆಟಂ-ಮಲಯಾಳಂ)
ಅತ್ಯುತ್ತಮ ಸಂಭಾಷಣೆ: ಅರ್ಪಿತಾ-ರಾಹುಲ್ (ಗುಲ್​ಮೊಹರ್-ಹಿಂದಿ)
ಅತ್ಯುತ್ತಮ ಸಿನಿಮಾಟೊಗ್ರಫಿ: ರವಿ ವರ್ಮ (ಪೊನ್ನಿಯಿನ್ ಸೆಲ್ವನ್ 1-ತಮಿಳು)
ಅತ್ಯುತ್ತಮ ಗಾಯಕಿ: ಬಾಂಬೆ ಜಯಶ್ರೀ (ಚಾಯುಂ ವೆಲ್ಲಿ, ‘ಸೌದಿ ವೆಲ್ಲಕ’ ಮಲಯಾಳಂ ಸಿನಿಮಾ)
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಕೇಸರಿಯಾ-ಬ್ರಹ್ಮಾಸ್ತ್ರ ಸಿನಿಮಾ-ಹಿಂದಿ)
ಅತ್ಯುತ್ತಮ ಬಾಲನಟ: ಶ್ರೀಪತ್ (ಮಲ್ಲಿಕಾಪುರಂ-ಮಲಯಾಳಂ)
ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ (ಊಂಚಾಯಿ-ಹಿಂದಿ)
ಅತ್ಯುತ್ತಮ ಪೋಷಕ ನಟ: ಪವನ್ ರಾಜ್ ಮಲ್ಹೋತ್ರಾ (ಫೌಜಾ-ಹರಿಯಾಣ್ವಿ)
ಅತ್ಯುತ್ತಮ ನಟಿ: ನಿತ್ಯಾ ಮೆನನ್ (ತಿರುಚಿತ್ರಬಲಂ-ತಮಿಳು)
                               ಮಾನಸಿ ಪಾರೆಖ್ (ಕಚ್ ಎಕ್ಸ್​ಪ್ರೆಸ್ -ಗುಜರಾತಿ)
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ-ಕನ್ನಡ)
ಅತ್ಯುತ್ತಮ ನಿರ್ದೇಶಕ: ಸೂರಜ್ ಬರ್ಜಾತಿಯಾ (ಊಂಚಾಯಿ)
ಅತ್ಯುತ್ತಮ ಅನಿಮೇಷನ್: ಬ್ರಹ್ಮಾಸ್ತ್ರ-ಹಿಂದಿ
ಅತ್ಯುತ್ತಮ ಸಾಮಾಜಿಕ ಸಂದೇಶ ಸಿನಿಮಾ: ಕಚ್ ಎಕ್ಸ್​ಪ್ರೆಸ್-ಗುಜರಾತ್
ಅತ್ಯುತ್ತಮ ಸಿನಿಮಾ (ಮನೊರಂಜನೆ): ಕಾಂತಾರ-ಕನ್ನಡ
ಅತ್ಯುತ್ತಮ ಹೊಸ ನಿರ್ದೇಶಕ: ಪ್ರಮೋದ್ (ಫೌಜ-ಹರಿಯಾಣ್ವಿ)
ಅತ್ಯುತ್ತಮ ಸಿನಿಮಾ:  ಆಟಂ-ಮಲಯಾಳಂ
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Fri, 16 August 24

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ