Aamir Khan Ad: ಮದುವೆ ಪದ್ದತಿ ಬದಲಾಯಿಸೋಣ ಎಂದ ಆಮಿರ್​ ಖಾನ್​ ವಿರುದ್ಧ ಸಿಡಿದೆದ್ದ ನೆಟ್ಟಿಗರು; ಇಲ್ಲಿದೆ ಕಾರಣ..

| Updated By: ಮದನ್​ ಕುಮಾರ್​

Updated on: Oct 13, 2022 | 10:02 AM

Aamir Khan New Advertisement: ಈ ಜಾಹೀರಾತಿನಲ್ಲಿ ಆಮಿರ್​ ಖಾನ್​ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಈಗತಾನೇ ಮದುವೆ ಆದ ದಂಪತಿಯ ಪಾತ್ರದಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಅದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Aamir Khan Ad: ಮದುವೆ ಪದ್ದತಿ ಬದಲಾಯಿಸೋಣ ಎಂದ ಆಮಿರ್​ ಖಾನ್​ ವಿರುದ್ಧ ಸಿಡಿದೆದ್ದ ನೆಟ್ಟಿಗರು; ಇಲ್ಲಿದೆ ಕಾರಣ..
ಕಿಯಾರಾ ಅಡ್ವಾಣಿ, ಆಮಿರ್ ಖಾನ್
Follow us on

ನಟ ಆಮಿರ್​ ಖಾನ್​ (Aamir Khan) ಅವರಿಗೆ ಚಿತ್ರರಂಗದಲ್ಲಿ ಹಿನ್ನಡೆ ಉಂಟಾಗಿದೆ. ಅವರು ಬಹಳ ನಿರೀಕ್ಷೆ ಇಟ್ಟುಕೊಂಡು ಮಾಡಿದ್ದ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಹೀನಾಯವಾಗಿ ಸೋತಿತು. ಅಲ್ಲದೇ ಅವರ ಕೊರಳಿಗೆ ಆಗಾಗ ವಿವಾದ ಸುತ್ತಿಕೊಳ್ಳುತ್ತಲೇ ಇದೆ. ಈಗ ಅವರು ನಟಿಸಿರುವ ಒಂದು ಜಾಹೀರಾತು (Aamir Khan Advertisement) ಸಖತ್​ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ. ಮದುವೆಯ ಪದ್ದತಿಯನ್ನು ಬದಲಾಯಿಸೋಣ ಎಂಬ ಸಂದೇಶ ಈ ಜಾಹೀರಾತಿನಲ್ಲಿ ಇದೆ. ಅದನ್ನು ನೋಡಿದ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ, ಆಮಿರ್ ಖಾನ್​ ಅವರು ಹಿಂದೂಗಳ (Hindu) ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಒಂದಷ್ಟು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಜಾಹೀರಾತಿನಲ್ಲಿ ಆಮಿರ್​ ಖಾನ್​ ಮತ್ತು ಕಿಯಾರಾ ಅಡ್ವಾಣಿ ನಟಿಸಿದ್ದಾರೆ. ಈಗತಾನೇ ಮದುವೆ ಆದ ದಂಪತಿಯ ಪಾತ್ರದಲ್ಲಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಅದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಮದುವೆ ಆದ ಬಳಿಕ ಗಂಡಿನ ಮನೆಗೆ ಹೆಣ್ಣು ಬರುವುದು ಸಂಪ್ರದಾಯ. ಗಂಡನ ಮನೆಯ ಹೊಸ್ತಿಲಿನಲ್ಲಿ ಇಟ್ಟಿರುವ ಅಕ್ಕಿಯ ಸೇರನ್ನು ಒದ್ದು ಆಕೆ ಎಂಟ್ರಿ ನೀಡುತ್ತಾಳೆ. ಆದರೆ ಈಗ ಆಮಿರ್​ ಖಾನ್​ ಅವರ ಈ ಜಾಹೀರಾತಿನಲ್ಲಿ ಅದನ್ನು ಉಲ್ಟಾ ತೋರಿಸಲಾಗಿದೆ.

ಇದನ್ನೂ ಓದಿ
‘ಲಾಲ್ ಸಿಂಗ್ ಚಡ್ಡಾ’ದಿಂದ ಆಮಿರ್ ಖಾನ್​ಗೆ 100 ಕೋಟಿ ರೂಪಾಯಿ ನಷ್ಟ​? ಸೋಲಿನ ಹೊಣೆ ಹೊತ್ತ ನಟ
ಆಮಿರ್ ಖಾನ್​ಗೆ ಬೆಂಬಲ ನೀಡಿದ್ದೇ ತಪ್ಪಾಯ್ತು; ಹೃತಿಕ್ ರೋಷನ್​ಗೆ ಎದುರಾಯ್ತು ಸಂಕಷ್ಟ
Aamir Khan: ದೇಶದ ಜನರ ಕ್ಷಮೆ ಕೇಳಿದ ಆಮಿರ್ ಖಾನ್​; ‘ಲಾಲ್​ ಸಿಂಗ್ ಚಡ್ಡಾ’ ರಿಲೀಸ್​ ವೇಳೆ ಹೊಸ ಹೇಳಿಕೆ
ಪ್ರೀತಿಸಿದ ಹುಡುಗಿ ರಿಜೆಕ್ಟ್​ ಮಾಡಿದ್ದಕ್ಕೆ ತಲೆ ಬೋಳಿಸಿಕೊಂಡಿದ್ದ ಆಮಿರ್ ಖಾನ್​; ಹಳೆ ಘಟನೆ ನೆನೆದ ನಟ

ಆಮಿರ್​ ಖಾನ್​ ಅವರು ಪತ್ನಿಯ ಕುಟುಂಬಕ್ಕೆ ಪ್ರವೇಶ ಮಾಡುತ್ತಾರೆ. ಹೆಣ್ಣಿನ ಮನೆಯ ಹೊಸ್ತಿಲಿನಲ್ಲಿ ಇಟ್ಟ ಅಕ್ಕಿಯ ಸೇರನ್ನು ಒದ್ದು ಅವರು ಒಳಗೆ ಬರುತ್ತಾರೆ. ಪತ್ನಿಯ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಅವರು ವಹಿಸಿಕೊಳ್ಳಲು ಸಿದ್ಧರಿದ್ದಾರೆ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಇದನ್ನು ನೋಡಿರುವ ಕೆಲವರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಧ್ಯಪ್ರದೇಶದ ಸಚಿವ ನರೋತ್ತಮ್​ ಮಿಶ್ರಾ ಅವರು ಈ ಬಗ್ಗೆ ತಕರಾರು ತೆಗೆದಿದ್ದಾರೆ. ‘ಆಮಿರ್​ ಖಾನ್​ ನಟಿಸಿರುವ ಖಾಸಗಿ ಬ್ಯಾಂಕ್​ನ ಜಾಹೀರಾತನ್ನು ನಾನು ನೋಡಿದ್ದೇನೆ. ಭಾರತೀಯ ಸಂಪ್ರದಾಯವನ್ನು ತಲೆಯಲ್ಲಿ ಇಟ್ಟುಕೊಂಡು ಜಾಹೀರಾತು ಮಾಡುವಂತೆ ನಾನು ಅವರಲ್ಲಿ ವಿನಂತಿಕೊಳ್ಳುತ್ತೇನೆ. ಈಗ ಅವರು ಮಾಡಿರುವ ಜಾಹೀರಾತು ಸರಿಯಿಲ್ಲ. ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವ ಅಧಿಕಾರ ಅವರಿಗೆ ಇಲ್ಲ’ ಎಂದು ನರೋತ್ತಮ್​ ಮಿಶ್ರಾ ಹೇಳಿದ್ದಾರೆ.

ಆಮಿರ್​ ಖಾನ್​ ಮಾಡುವ ಎಲ್ಲ ಕೆಲಸದಲ್ಲೂ ತಪ್ಪು ಕಂಡು ಹಿಡಿಯಲು ಒಂದಷ್ಟು ಮಂದಿ ಕಾದು ಕುಳಿತಿರುತ್ತಾರೆ. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ಅವರು ಹೇಳಿದ ಕೆಲವು ಡೈಲಾಗ್​ಗಳ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ಹೀಗೆ ಆಮಿರ್​ ಖಾನ್​ ಅವರು ಪದೇಪದೇ ವಿವಾದಗಳಿಗೆ ಸಿಲುಕುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.