ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಸೌತ್ ನಿರ್ದೇಶಕ; ಹಳೆಯ ಘಟನೆ ನೆನೆದ ಆಮಿರ್​ ಖಾನ್

ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ಮಾಡುವಾಗ ಯಾವುದಾದರೂ ಶೂಟ್​ಗಳನ್ನು ಇಂಪ್ರೂವ್ ಮಾಡಬೇಕು ಎನಿಸಿದರೆ ಅದನ್ನು ಹೀರೋಗಳು ನಿರ್ದೇಶಕರಿಗೆ ಹೇಳುತ್ತಾರೆ. ನಿರ್ದೇಶಕರಿಗೆ ಐಡಿಯಾ ಇಷ್ಟ ಆದರೆ ಅದನ್ನು ಒಪ್ಪಿಕೊಳ್ಳುತ್ತಾರೆ, ಇಷ್ಟ ಆಗಿಲ್ಲ ಎಂದರೆ ವಿನಮ್ರತೆಯಿಂದ ಬೇಡ ಎನ್ನುತ್ತಾರೆ. ಆದರೆ, ಮುರುಗದಾಸ್ ಈ ರೀತಿ ಅಲ್ಲ.

ಮುಖಕ್ಕೆ ಹೊಡೆದಂತೆ ಹೇಳುತ್ತಿದ್ದ ಸೌತ್ ನಿರ್ದೇಶಕ; ಹಳೆಯ ಘಟನೆ ನೆನೆದ ಆಮಿರ್​ ಖಾನ್
ಆಮಿರ್ ಖಾನ್
Edited By:

Updated on: May 01, 2024 | 8:35 AM

ಆಮಿರ್ ಖಾನ್ (Aamir Khan) ಅವರು ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಕೆಲವು ನಿರ್ದೇಶಕರು ಬೆಸ್ಟ್ ಎನಿಸಿದರೆ, ಇನ್ನೂ ಕೆಲವರ ಜೊತೆ ಕೆಲಸ ಮಾಡೋದು ಅವರಿಗೆ ಖುಷಿ ನೀಡಿಲ್ಲ. ಅವರಿಗೆ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ಅವರು ವಿಶೇಷ ಎನಿಸಿದ್ದಾರೆ. ಈ ಬಗ್ಗೆ ಆಮಿರ್ ಖಾನ್ ಅವರು ಇತ್ತೀಚೆಗೆ ಮಾತನಾಡಿದ್ದಾರೆ. ಯಾವುದೇ ವಿಚಾರ ಇದ್ದರೂ ಅದನ್ನು ನೇರವಾಗಿ, ಮುಖಕ್ಕೆ ಹೊಡೆದಂತೆ ಹೇಳುವ ಸ್ವಭಾವ ಮುರುಗದಾಸ್ ಅವರದ್ದಂತೆ. ಇದನ್ನು ಆಮಿರ್ ತಮ್ಮದೇ ಸ್ಟೈಲ್​ನಲ್ಲಿ ವಿವರಿಸಿದ್ದಾರೆ.

ಕಪಿಲ್ ಶರ್ಮಾ ಅವರು ‘ದಿ ಗ್ರೇಟ್ ಇಂಡಿಯ್ ಕಪಿಲ್ ಶೋ’ ನಡೆಸಿಕೊಡುತ್ತಿದ್ದಾರೆ. ಇದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋಗೆ ಆಮಿರ್ ಖಾನ್ ಅವರು ಅತಿಥಿಯಾಗಿ ಆಗಮಿಸಿದ್ದರು. ಅವರು ತಮ್ಮ ಜೀವನದ ಅನುಭವಗಳನ್ನು ವೀಕ್ಷಕರ ಎದುರು ತೆಗೆದಿಟ್ಟಿದ್ದಾರೆ. ಈ ವೇಳೆ ಅವರು ಮುರುಗದಾಸ್ ಬಗ್ಗೆಯೂ ಹೇಳಿಕೊಂಡಿದ್ದಾರೆ.

‘ಘಜಿನಿ’ ಸಿನಿಮಾ ತಮಿಳಿನಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಮುರುಗದಾಸ್ ಅವರು. ಇದರ ಹಿಂದಿ ವರ್ಷನ್​ಗೂ ಮುರುಗದಾಸ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದರು. ಆಮಿರ್ ಖಾನ್ ಅವರು ಇದರಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಡೂಪಟ್ ಹಿಟ್ ಆಯಿತು. ಈ ಚಿತ್ರದ ಶೂಟಿಂಗ್ ದಿನಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾ ಶೂಟಿಂಗ್ ಮಾಡುವಾಗ ಯಾವುದಾದರೂ ಶೂಟ್​ಗಳನ್ನು ಇಂಪ್ರೂವ್ ಮಾಡಬೇಕು ಎನಿಸಿದರೆ ಅದನ್ನು ಹೀರೋಗಳು ನಿರ್ದೇಶಕರಿಗೆ ಹೇಳುತ್ತಾರೆ. ನಿರ್ದೇಶಕರಿಗೆ ಐಡಿಯಾ ಇಷ್ಟ ಆದರೆ ಅದನ್ನು ಒಪ್ಪಿಕೊಳ್ಳುತ್ತಾರೆ, ಇಷ್ಟ ಆಗಿಲ್ಲ ಎಂದರೆ ವಿನಮ್ರತೆಯಿಂದ ಬೇಡ ಎನ್ನುತ್ತಾರೆ. ಆದರೆ, ಮುರುಗದಾಸ್ ಈ ರೀತಿ ಅಲ್ಲ. ‘ಮುರುಗದಾಸ್ ಅವರು ಭಿನ್ನ ವ್ಯಕ್ತಿ. ಅವರು ಯಾವಾಗಲೂ ಫಿಲ್ಟರ್ ಇಲ್ಲದೆ ಮಾತನಾಡುತ್ತಾರೆ. ದೃಶ್ಯದ ಬಗ್ಗೆ ನಾವು ಯಾವುದಾದರೂ ಐಡಿಯಾ ಕೊಟ್ಟರೆ ಅದರ ಬಗ್ಗೆ ಮುರುಗದಾಸ್ ಅವರು ಫಿಲ್ಟರ್ ಇಲ್ಲದೆ ಪ್ರತಿಕ್ರಿಯಿಸುತ್ತಿದ್ದರು. ಆ ಬಗ್ಗೆ ಅವರಿಗೆ ಯಾವುದೇ ಭಯ ಕೂಡ ಇರುತ್ತಿರಲಿಲ್ಲ. ಎದುರಿದ್ದ ವ್ಯಕ್ತಿ ಯಾರು ಎಂಬುದನ್ನೂ ಅವರು ನೋಡುತ್ತಿರಲಿಲ್ಲ’ ಎಂದಿದ್ದಾರೆ ಆಮಿರ್ ಖಾನ್.

‘ಮುರುದಾಸ್​ಗೆ ಐಡಿಯಾ ಇಷ್ಟ ಆಯ್ತು ಎಂದುಕೊಳ್ಳಿ ಸೂಪರ್ ಹಿಟ್ ಸರ್ ಸೂಪರ್ ಹಿಟ್ ಎನ್ನುತ್ತಿದ್ದರು. ಅವರಿಗೆ ಯಾವುದೇ ಫಿಲ್ಟರ್ ಇಲ್ಲ. ನಾನು ಈ ಗುಣವನ್ನು ಅವರಿಂದ ಕಲಿತೆ’ ಎಂದಿದ್ದಾರೆ ಆಮಿರ್ ಖಾನ್. ಆಮಿರ್ ಖಾನ್ ಅವರು ಆದಷ್ಟು ಫಿಲ್ಟರ್ ಇಲ್ಲದೆ ಮಾತನಾಡಲು ಪ್ರಯತ್ನಿಸುತ್ತಾರಂತೆ.

ಇದನ್ನೂ ಓದಿ: ‘ಘಜಿನಿ 2’ ಬಗ್ಗೆ ಆಸೆ ಇಟ್ಟುಕೊಂಡಿದ್ದ ಸಿನಿಪ್ರಿಯರಿಗೆ ನಿರಾಸೆ; ಮುಂದಿನ ಪ್ಲ್ಯಾನ್​ ತಿಳಿಸಿದ ಎ.ಆರ್​. ಮುರುಗದಾಸ್​

ಮುರುಗದಾಸ್ ಅವರು ಬಾಲಿವುಡ್​ಗೆ ಮರಳಿದ್ದಾರೆ. ‘ಸಲ್ಮಾನ್ ಖಾನ್’ ನಟನೆಯ ‘ಸಿಖಂದರ್’ ಸಿನಿಮಾನ ಅವರು ನಿರ್ದೇಶನ ಮಾಡುತ್ತಿದ್ದಾರೆ. 2025ರ ಈದ್​​ಗೆ ಸಿನಿಮಾ ರಿಲೀಸ್ ಆಗಲಿದೆ ಎಂದು ಈಗಾಗಲೇ ಘೋಷಣೆ ಆಗಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ. ಆಮಿರ್ ಖಾನ್ ಅವರು ಕೂಡ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಇದಕ್ಕೆ ‘ಸಿತಾರೆ ಜಮೀನ್​ಪರ್’ ಎಂದು ಟೈಟಲ್ ಕೊಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:08 am, Wed, 1 May 24

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us