AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳು ಸಿನಿಮಾ ರೀಮೇಕ್​ನಲ್ಲಿ ಆಮಿರ್ ಖಾನ್ ಪುತ್ರ: ಸಹಾಯ ಮಾಡಿಲ್ಲ ಎಂದ ಆಮಿರ್

ಆಮಿರ್ ಖಾನ್ ಪುತ್ರ ಝುನೈದ್ ಖಾನ್ ದಕ್ಷಿಣ ಭಾರತದ ಹಿಟ್ ಸಿನಿಮಾ ಒಂದರ ರೀಮೇಕ್​ನಲ್ಲಿ ನಟಿಸುತ್ತಿದ್ದಾರೆ. ಝುನೈದ್ ಖಾನ್ ಬಾಲಿವುಡ್​ಗೆ ಕಾಲಿಡುವಲ್ಲಿ ತಾವು ಯಾವ ಸಹಾಯವನ್ನು ಮಾಡಿಲ್ಲ ಎಂದಿದ್ದಾರೆ ಆಮಿರ್ ಖಾನ್.

ತಮಿಳು ಸಿನಿಮಾ ರೀಮೇಕ್​ನಲ್ಲಿ ಆಮಿರ್ ಖಾನ್ ಪುತ್ರ: ಸಹಾಯ ಮಾಡಿಲ್ಲ ಎಂದ ಆಮಿರ್
ಆಮಿರ್ ಖಾನ್-ಝುನೈದ್ ಖಾನ್
ಮಂಜುನಾಥ ಸಿ.
|

Updated on: Mar 25, 2023 | 7:01 PM

Share

ಬಾಲಿವುಡ್​ನಲ್ಲಿ (Bollywood) ನೆಪೊಟಿಸಮ್ (Nepotism) ಚರ್ಚೆ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಅದರಲ್ಲಿಯೂ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕವಂತೂ ಈ ಚರ್ಚೆ ಜೋರಾಗಿದೆ. ಹಲವು ಸ್ಟಾರ್​ಗಳ ಮಕ್ಕಳು, ಕೆಲವರ ಮೊಮ್ಮಕಳು ಸಹ ಚಿತ್ರರಂಗಕ್ಕೆ ಎಂಟ್ರಿ ನೀಡಿ ಆಗಿದೆ. ಇದೀಗ ನಟ ಆಮಿರ್ ಖಾನ್ ಪುತ್ರ ಝುನೈದ್ ಖಾನ್ ಸಹ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾ ಮುಗಿಸಿರುವ ಜುನೈದ್, ದಕ್ಷಿಣ ಭಾರತ ಸಿನಿಮಾದ ರೀಮೇಕ್ ಅನ್ನು ತಮ್ಮ ಎರಡನೇ ಸಿನಿಮಾ ಆಗಿ ಆರಿಸಿಕೊಂಡಿದ್ದಾರೆ.

ಝುನೈದ್ ಖಾನ್ ಈಗಾಗಲೇ ಮಹಾರಾಜ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಅದಾಗಲೇ ಜುನೈದ್​ಗೆ ಎರಡನೇ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದ್ದು, ಆ ಸಿನಿಮಾವು ತಮಿಳಿನ ಇತ್ತೀಚೆಗಿನ ಸೂಪರ್ ಹಿಟ್ ಸಿನಿಮಾ ಲವ್ ಟುಡೆಯ ರೀಮೇಕ್ ಆಗಿದೆ. ಆದರೆ ತಮ್ಮ ಮಗನ ಸಿನಿಮಾ ಜರ್ನಿಗೆ ತಾವು ಯಾವುದೇ ಸಹಾಯವನ್ನೂ ಮಾಡಿಲ್ಲವೆಂದು ಆಮಿರ್ ಖಾನ್ ಹೇಳಿಕೊಂಡಿದ್ದಾರೆ.

ಝುನೈದ್ ಖಾನ್​ ಮುಖ್ಯ ಪಾತ್ರದಲ್ಲಿ ನಟಿಸಲಿರುವ ಲವ್ ಟುಡೆ ಸಿನಿಮಾದ ರೀಮೇಕ್​ನಲ್ಲಿ ಬೋನಿ ಕಪೂರ್ ಎರಡನೇ ಪುತ್ರಿ ಖುಷಿ ನಾಯಕಿ. ಖುಷಿ ಕಪೂರ್, ಬಾಲಿವುಡ್​ನ ಜನಪ್ರಿಯ ಯುವನಟಿ ಜಾಹ್ನವಿ ಕಪೂರ್ ಸಹೋದರಿಯೂ ಹೌದು. ಖುಷಿಗೆ ಇದು ಮೂರನೇ ಸಿನಿಮಾ. ಝುನೈದ್ ಖಾನ್ ಈಗಾಗಲೇ ಮಹಾರಾಜ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾವನ್ನು ಯಶ್ ರಾಜ್ ಬ್ಯಾನರ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಶರ್ವರಿ ವಾಘ್ ನಾಯಕಿ.

ಝುನೈದ್ ಖಾನ್​ಗೆ ಮೊದಲ ಸಿನಿಮಾ ದೊರೆತಾಗ ಮಾಧ್ಯಮವೊಂದರ ಸಂದರ್ಶನದಲ್ಲಿ ನೆಪೊಟಿಸಮ್ ಬಗ್ಗೆ ಮಾತನಾಡಿದ್ದ ಆಮಿರ್ ಖಾನ್, ”ನನ್ನ ಪುತ್ರ ಝುನೈದ್ ಖಾನ್ ಸಹ ಬಾಲಿವುಡ್​ಗೆ ಕಾಲಿಡುತ್ತಿದ್ದಾನೆ. ಅವನು ಮೊದಲು ಕೆಲವು ನಟನಾ ತರಬೇತಿ ಕೇಂದ್ರಗಳಿಗೆ ಸೇರಿ ನಟನೆ ಕಲಿತ ಬಳಿಕ ನಾಟಕಗಳಲ್ಲಿ ನಟಿಸಿದ. ಬಳಿಕ ಪ್ರತಿದಿನವೂ ಆಡಿಷನ್​ಗಳಿಗಾಗಿ ಹೋಗಿ ಆಡಿಷನ್ ನೀಡಿ ಬರುತ್ತಿದ್ದ. ಈಗ ಒಂದು ಸಿನಿಮಾಕ್ಕೆ ಆಯ್ಕೆ ಆಗಿದ್ದಾನೆ. ಆದರೆ ಅದಕ್ಕೆ ಮೊದಲು ಸುಮಾರು ಹದಿನೈದು ಬಾರಿ ರಿಜೆಕ್ಟ್ ಆಗಿದ್ದಾನೆ. ಯಾರಿಗಾದರೂ ಕರೆ ಮಾಡಿ ಅವನಿಗೆ ಅವಕಾಶ ಕೊಡಿ ಎಂದು ನಾನು ಹೇಳಿದ್ದಿದ್ದರೆ ಅವಕಾಶ ಸುಲಭವಾಗಿ ಸಿಗುತ್ತಿತ್ತು. ಆದರೆ ನಾನು ಹಾಗೆ ಮಾಡಲಿಲ್ಲ. ನನ್ನ ನಂಬಿಕೆ ಏನೆಂದರೆ ಯಾರಿಗೆ ಪ್ರತಿಭೆ ಇರುತ್ತದೆಯೋ ಅವರಿಗೆ ಕೆಲಸ ಸಿಕ್ಕೇ ಸಿಗುತ್ತದೆ. ಪ್ರತಿಭೆ ಇರುವವರು ಆ ಕೆಲಸವನ್ನು ಹಾಗೆಯೇ ಉಳಿಸಿಕೊಂಡು ಹೋಗುತ್ತಾರೆ” ಎಂದಿದ್ದರು ಆಮಿರ್ ಖಾನ್.

ಆಮಿರ್ ಖಾನ್​ರ ಪುತ್ರಿ ಇರಾ ಖಾನ್ ಸಹ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ ಆದರೆ ನಟಿಯಾಗಿ ಅಲ್ಲ ಬದಲಿಗೆ ನಿರ್ದೇಶಕಿ ಆಗಿ. ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ನಟನೆಯ ಸಿನಿಮಾವನ್ನು ಇರಾ ಖಾನ್ ನಿರ್ದೇಶನ ಮಾಡುತ್ತಿದ್ದಾರೆ. ಇರಾ ಖಾನ್ ತಮ್ಮ ಲವ್ ಸ್ಟೋರಿಯಿಂದಲೂ ಬಹಳ ಜನಪ್ರಿಯತೆ ಗಳಿಸಿದ್ದಾರೆ. ಆಮಿರ್ ಖಾನ್​ರ ಫಿಸಿಕಲ್ ಟ್ರೈನರ್ ಅನ್ನೇ ಪ್ರೇಮಿಸಿ ಲಿವಿನ್ ಟು ಗೆದರ್ ರಿಲೇಶನ್​ಶಿಪ್​ನಲ್ಲಿದ್ದಾರೆ ಇರಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಶಿಲ್ಲಾಂಗ್-ಸಿಲ್ಚಾರ್ ಕಾರಿಡಾರ್​​ಗೆ ಪ್ರಧಾನಿ ಮೋದಿ ಶಿಲಾನ್ಯಾಸ
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಎಲ್​ಪಿಜಿ ಗ್ಯಾಸ್ ಹಾಹಾಕಾರ;ವೀಕೆಂಡ್​ನಲ್ಲಿಯೂ ಬಂದ್ ಆದ ಹೋಟೆಲ್ಸ್ !
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
ಗಂಡು ಮಕ್ಕಳಿಲ್ಲದಿದ್ದರೇನು? ಅಂತ್ಯಕ್ರಿಯೆ ನಡೆಸಿದ ಇಬ್ಬರು ಹೆಣ್ಣು ಮಕ್ಕಳು!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
1700 ರೂ. ಬೆಲೆಯ ಸಿಲಿಂಡರ್ 5000 ರೂ. ಗೆ ಮಾರಾಟ!
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಶ್ರೀ ಗಂಧದ ಗುಡಿ ಧಾರಾವಾಹಿ ಬಿಟ್ಟಿದ್ದೇಕೆ? ವಿಡಿಯೋ ಮೂಲಕ ವಿವರಿಸಿದ ಸಂಜನಾ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ
ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದ ಯುವಕರಿಗೆ ಹಿಗ್ಗಾಮುಗ್ಗಾ ಥಳಿಸಿದ ಜನ