Sign In

By signing in or creating an account, you agree with Associated Broadcasting Company's Terms & Conditions and Privacy Policy.

Pooja Hegde: ‘ಬಜರಂಗಿ ಭಾಯಿಜಾನ್​’ ಚಿತ್ರದ ಸೀಕ್ವೆಲ್​ನಲ್ಲಿ ಕರೀನಾ ಕಪೂರ್​ ಖಾನ್​ ಬದಲಿಗೆ ಪೂಜಾ ಹೆಗ್ಡೆ?

Bajrangi Bhaijaan 2 | Kareena Kapoor Khan: ಕರೀನಾ ಕಪೂರ್​ ಬದಲಿಗೆ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಗಾಸಿಪ್​ ಹಬ್ಬಿದೆ. ಯಾವ ಕಾರಣಕ್ಕಾಗಿ ಇಂಥ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.

Pooja Hegde: ‘ಬಜರಂಗಿ ಭಾಯಿಜಾನ್​’ ಚಿತ್ರದ ಸೀಕ್ವೆಲ್​ನಲ್ಲಿ ಕರೀನಾ ಕಪೂರ್​ ಖಾನ್​ ಬದಲಿಗೆ ಪೂಜಾ ಹೆಗ್ಡೆ?
ಪೂಜಾ ಹೆಗ್ಡೆ, ಕರೀನಾ ಕಪೂರ್
Follow us
ಮದನ್​ ಕುಮಾರ್​
|

Updated on:Mar 26, 2023 | 12:13 PM

ನಟ ಸಲ್ಮಾನ್​ ಖಾನ್​ (Salman Khan) ವೃತ್ತಿಜೀವನದ ಬೆಸ್ಟ್​ ಸಿನಿಮಾಗಳ ಪಟ್ಟಿಯಲ್ಲಿ ‘ಬಜರಂಗಿ ಭಾಯಿಜಾನ್​’ ಚಿತ್ರಕ್ಕೂ ಸ್ಥಾನವಿದೆ. ಕಬೀರ್​ ಖಾನ್​ ನಿರ್ದೇಶನ ಆ ಸಿನಿಮಾ 2015ರಲ್ಲಿ ತೆರೆಕಂಡು ಧೂಳೆಬ್ಬಿಸಿತ್ತು. ಸಲ್ಮಾನ್​ ಖಾನ್​ ನಟನೆಗೆ ಫ್ಯಾನ್ಸ್​ ಫಿದಾ ಆಗಿದ್ದರು. ಈ ಸಿನಿಮಾಗೆ ಸೀಕ್ವೆಲ್​ ಸಿದ್ಧವಾಗುವುದು ಖಚಿತ ಎಂದು ಈ ಮೊದಲೇ ಸುದ್ದಿ ಆಗಿತ್ತು. ಅಲ್ಲದೇ ಸೀಕ್ವೆಲ್​ಗೆ ‘ಪವನ್​ ಪುತ್ರ’ (Pawan Putra) ಎಂದು ಶೀರ್ಷಿಕೆ ಇಡಲಾಗುವುದು ಎಂದು ಸ್ವತಃ ಸಲ್ಮಾನ್​ ಖಾನ್​ ತಿಳಿಸಿದ್ದರು. ಈಗ ಈ ಸಿನಿಮಾ ಬಗ್ಗೆ ಒಂದು ಗಾಸಿಪ್​ ಕೇಳಿಬಂದಿದೆ. ‘ಪವನ್​ ಪುತ್ರ’ ಚಿತ್ರದಲ್ಲಿ ಕರೀನಾ ಕಪೂರ್​ ಖಾನ್​ (Kareena Kapoor Khan) ಬದಲಿಗೆ ಪೂಜಾ ಹೆಗ್ಡೆ ಅವರು ನಾಯಕಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.

‘ಬಜರಂಗಿ ಭಾಯಿಜಾನ್​’ ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​ ಅವರ ಪಾತ್ರಕ್ಕೆ ಮಹತ್ವ ನೀಡಲಾಗಿತ್ತು. ಆ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದರು. ಈಗ ಸೀಕ್ವೆಲ್​ನಲ್ಲಿ ಕರೀನಾ ಕಪೂರ್​ ಬದಲಿಗೆ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಗಾಸಿಪ್​ ಹಬ್ಬಿದೆ. ಯಾವ ಕಾರಣಕ್ಕಾಗಿ ಇಂಥ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Pooja Hegde: ಒಂದೇ ವರ್ಷ ಪೂಜಾ ಹೆಗ್ಡೆ ನಟನೆಯ ನಾಲ್ಕು ಸಿನಿಮಾಗಳು ಫ್ಲಾಪ್​; ಮುಂದೇನು?

ಇದನ್ನೂ ಓದಿ
Image
Pooja Hegde: ನ್ಯೂಯಾರ್ಕ್​​ನಲ್ಲಿ ಪೂಜಾ ಹೆಗ್ಡೆ ಮಸ್ತಿ; ಇಲ್ಲಿವೆ ಫೋಟೋಗಳು
Image
Pooja Hegde: ಇಂಡಿಗೋ ವಿಮಾನದಲ್ಲಿ ಪೂಜಾ ಹೆಗ್ಡೆಗೆ ಕೆಟ್ಟ ಅನುಭವ; ಕ್ಷಮೆ ಕೇಳಿದ ಸಂಸ್ಥೆ
Image
JGM Movie: ‘ಜೆಜಿಎಮ್​’ ಚಿತ್ರೀಕರಣ ಆರಂಭ; ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಳ್ಳಲಿರುವ ಪೂಜಾ ಹೆಗ್ಡೆ
Image
ವಿದೇಶಕ್ಕೆ ಹೋಗಿ ಎಲ್ಲ ಬಟ್ಟೆ ಕಳೆದುಕೊಂಡ ಪೂಜಾ ಹೆಗ್ಡೆ; ಕೊನೇ ಕ್ಷಣದಲ್ಲಿ ನಟಿ ಮಾಡಿದ್ದೇನು?

ಈ ಕುರಿತಾಗಿ ಮೂಲಗಳು ಪ್ರತಿಕ್ರಿಯೆ ನೀಡಿರುವುದಾಗಿ ಇಟೈಮ್ಸ್​ ವರದಿ ಮಾಡಿದೆ. ‘ಚಿತ್ರದ ಶೀರ್ಷಿಕೆ ಪವನ್​ ಪುತ್ರ ಎಂಬುದು ಸರಿ. ಆದರೆ ಬಾಕಿ ಎಲ್ಲವೂ ಊಹಾಪೋಹ. ಸ್ಕ್ರಿಪ್ಟ್​ ಇನ್ನೂ ಸಿದ್ಧವಾಗಿಲ್ಲ. ಈ ಹಂತದಲ್ಲಿ ಕಲಾವಿದರನ್ನು ಬದಲಾಯಿಸಲು ಹೇಗೆ ಸಾಧ್ಯ? ಈ ಸಿನಿಮಾದ ಶೂಟಿಂಗ್ ಆರಂಭವಾಗಲು ಇನ್ನೂ ಸಾಕಷ್ಟು ಸಮಯ ಇದೆ. ಹೀಗಿರುವಾಗ ಕರೀನಾ ಬದಲಿಗೆ ಪೂಜಾ ಹೆಗ್ಡೆ ಆಯ್ಕೆ ಆಗುತ್ತಾರೆ ಎಂಬುದು ಅಸಾಧ್ಯ’ ಅಂತ ಮೂಲಗಳು ಹೇಳಿವೆ ಎಂದು ವರದಿ ಆಗಿದೆ.

ಇದನ್ನೂ ಓದಿ: Kareena Kapoor: ‘ಬೇರೆ ಯಾವ ನಟಿಯೂ ಮದುವೆ ಆಗದಿದ್ದಾಗ ಸೈಫ್​ ಜತೆ ನಾನು ವಿವಾಹವಾದೆ’: ಕರೀನಾ ಕಪೂರ್​ ಖಾನ್​

ಇತ್ತೀಚಿನ ವರ್ಷಗಳಲ್ಲಿ ಪೂಜಾ ಹೆಗ್ಡೆ ನಟಿಸಿದ ಯಾವ ಸಿನಿಮಾಗಳೂ ಗೆಲ್ಲುತ್ತಿಲ್ಲ. ಅವರಿಗೆ ಸತತವಾಗಿ ಸೋಲು ಎದುರಾಗಿದೆ. ಹಾಗಿದ್ದರೂ ಕೂಡ ಹೊಸ ಹೊಸ ಅವಕಾಶಗಳನ್ನು ಅವರು ಪಡೆದುಕೊಳ್ಳುತ್ತಿದ್ದಾರೆ. ಸಲ್ಮಾನ್​ ಖಾನ್​ ನಟನೆಯ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ.

ಇನ್ನು, ಕರೀನಾ ಕಪೂರ್​ ಕೂಡ ಚಿತ್ರರಂಗದಲ್ಲಿ ಬೇಡಿಕೆ ಕಳೆದುಕೊಂಡಿಲ್ಲ. ಸಿನಿಮಾಗಳ ವಿಚಾರದಲ್ಲಿ ಅವರು ಹೆಚ್ಚು ಚ್ಯೂಸಿ ಆಗಿದ್ದಾರೆ. ‘ದಿ ಬಕ್ಕಿಂಗ್​ಹ್ಯಾಮ್​ ಮರ್ಡರ್ಸ್​’ ಮತ್ತು ‘ದಿ ಡಿವೋಷನ್​ ಆಫ್​ ಸಸ್ಪೆಕ್ಟ್​ ಎಕ್ಸ್​’ ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:13 pm, Sun, 26 March 23

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ