ವಿದೇಶಕ್ಕೆ ಹೋಗಿ ಎಲ್ಲ ಬಟ್ಟೆ ಕಳೆದುಕೊಂಡ ಪೂಜಾ ಹೆಗ್ಡೆ; ಕೊನೇ ಕ್ಷಣದಲ್ಲಿ ನಟಿ ಮಾಡಿದ್ದೇನು?

Pooja Hegde: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕುವುದಕ್ಕೂ ಮುನ್ನ ಪೂಜಾ ಹೆಗ್ಡೆ ಬಟ್ಟೆ ಮತ್ತು ಮೇಕಪ್​ ಪರಿಕರಗಳನ್ನು ಕಳೆದುಕೊಂಡಿದ್ದು ಈಗ ಗೊತ್ತಾಗಿದೆ. ಈ ಕಹಿ ಅನುಭವದಿಂದಾಗಿ ಅವರಿಗೆ ಗಾಬರಿ ಆಗಿತ್ತು.

ವಿದೇಶಕ್ಕೆ ಹೋಗಿ ಎಲ್ಲ ಬಟ್ಟೆ ಕಳೆದುಕೊಂಡ ಪೂಜಾ ಹೆಗ್ಡೆ; ಕೊನೇ ಕ್ಷಣದಲ್ಲಿ ನಟಿ ಮಾಡಿದ್ದೇನು?
ಪೂಜಾ ಹೆಗ್ಡೆ
Follow us
| Updated By: ಮದನ್​ ಕುಮಾರ್​

Updated on: May 21, 2022 | 1:09 PM

ನಟಿಯರು ತಮ್ಮ ಉಡುಗೆ ತೊಡುಗೆ ಬಗ್ಗೆ ಸಖತ್​ ಕಾಳಜಿ ವಹಿಸುತ್ತಾರೆ. ಚಿಕ್ಕ ಕಾರ್ಯಕ್ರಮದಲ್ಲಿ ಭಾಗವಹಿಸುವಾಗಲೂ ಕೂಡ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಾರೆ. ಸಮಾರಂಭದ ಥೀಮ್​ಗೆ ಅನುಗುಣವಾದ ಬಟ್ಟೆ ಧರಿಸಿ, ಅದಕ್ಕೆ ಒಪ್ಪುವಂತಹ ಹೇರ್​ ಸ್ಟೈಲ್​ ಮತ್ತು ಮೇಕಪ್​ ಮಾಡಿಕೊಳ್ಳುತ್ತಾರೆ. ಅಂಥದ್ದರಲ್ಲಿ ಒಂದು ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಎಷ್ಟೆಲ್ಲ ತಯಾರಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಊಹಿಸುವುದು ಸುಲಭವಲ್ಲ. ಹಾಗೆ ಮಾಡಿಕೊಂಡ ಪೂರ್ವ ತಯಾರಿಯೆಲ್ಲ ಒಂದೇ ನಿಮಿಷದಲ್ಲಿ ಹಾಳಾಗಿಬಿಟ್ಟರೆ? ದಿಕ್ಕೇ ತೋಚದಂತಾಗುತ್ತದೆ. ನಟಿ ಪೂಜಾ ಹೆಗ್ಡೆ ಅವರಿಗೆ ಇತ್ತೀಚೆಗೆ ಹಾಗೆಯೇ ಆಯಿತು. ಆ ಅನುಭವವನ್ನು ಅವರೀಗ ಹಂಚಿಕೊಂಡಿದ್ದಾರೆ. 75ನೇ ವರ್ಷದ ಪ್ರತಿಷ್ಠಿತ ಕಾನ್​ ಚಿತ್ರೋತ್ಸವಕ್ಕೆ (Cannes Film Festival) ಅವರು ಅತಿಥಿಯಾಗಿ ತೆರೆಳಿದ್ದಾರೆ. ರೆಡ್​ ಕಾರ್ಪೆಟ್ (Red Carpet) ಮೇಲೆ ಹೆಜ್ಜೆ ಹಾಕಲು ಅವರು ಸೂಕ್ತ ತಯಾರಿ ಮಾಡಿಕೊಂಡು ಭಾರತದಿಂದ ಹೊರಟರು. ಆದರೆ ಫ್ರಾನ್ಸ್​ಗೆ ಹೋಗಿ ನೋಡಿದಾಗ ಅವರಿಗೆ ಆತಂಕ ಕಾದಿತ್ತು. ಪೂಜಾ ಹೆಗ್ಡೆ (Pooja Hegde) ಅವರು ಎಲ್ಲ ಬಟ್ಟೆಗಳು, ಮೇಕಪ್​ ಸಾಮಾಗ್ರಿಗಳು ಕಾಣೆ ಆಗಿದ್ದವು. ಆ ಸಂದರ್ಭದಲ್ಲಿ ಅವರ ಇಡೀ ತಂಡ ಗಾಬರಿಗೆ ಒಳಗಾಗಿತ್ತು.

ಇದೇ ಮೊದಲ ಬಾರಿಗೆ ಪೂಜಾ ಹೆಗ್ಡೆ ಅವರು ಕಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗವಹಿಸಿದ್ದಾರೆ. ಚೊಚ್ಚಲ ಅನುಭವದ ಬಗ್ಗೆ ಯಾವಾಗಲೂ ಎಗ್ಸೈಟ್​ಮೆಂಟ್​ ಇರುತ್ತದೆ. ಆದರೆ ಈ ಕಹಿ ಅನುಭವದಿಂದಾಗಿ ಪೂಜಾ ಹೆಗ್ಡೆಗೆ ಗಾಬರಿ ಆಗಿತ್ತು. ಬಟ್ಟೆ ಮತ್ತು ಮೇಕಪ್​ ಪರಿಕರಗಳನ್ನು ಕಳೆದುಕೊಂಡಿದ್ದು ಮಾತ್ರವಲ್ಲದೇ ಅವರ ಹೇರ್​ ಸ್ಟೈಲಿಸ್ಟ್​ ಒಬ್ಬರಿಗೆ ಫುಡ್​ ಪಾಯಿಸನ್​ ಆಗಿ ಆರೋಗ್ಯ ಕೂಡ ಕೈ ಕೊಟ್ಟಿತ್ತು. ಬಟ್ಟೆಬರೆ ತುಂಬಿಕೊಂಡು ಬಂದಿದ್ದ ಬ್ಯಾಗ್​ ಚೆಕ್​-ಇನ್​ ಸಮಯದಲ್ಲಿ ಭಾರತದಲ್ಲೇ ಉಳಿದುಕೊಂಡಿತು. ಹೀಗೆ ಬ್ಯಾಕ್​ ಟು ಬ್ಯಾಕ್​ ವಿಘ್ನಗಳು ಅವರನ್ನು ಬಾಧಿಸಿದವು.

ಏನೋ ಪುಣ್ಯಕ್ಕೆ ಪೂಜಾ ಹೆಗ್ಡೆ ಅವರು ತಮ್ಮ ಹ್ಯಾಂಡ್​ ಬ್ಯಾಗ್​ನಲ್ಲಿ ಕೆಲವು ಆಭರಣಗಳನ್ನು ಇಟ್ಟುಕೊಂಡಿದ್ದರು. ಅದಕ್ಕೆ ಒಪ್ಪುವಂತಹ ಬಟ್ಟೆಯನ್ನು ಕೂಡಲೇ ಪಡೆದುಕೊಳ್ಳಲಾಯಿತು. ಒಟ್ಟಾರೆ ಟೆನ್ಷನ್​ಗೆ ಆ ದಿನವಿಡೀ ಪೂಜಾ ಹೆಗ್ಡೆ ಅವರು ಊಟ, ತಿಂಡಿ ಏನನ್ನೂ ಮಾಡಲಿಲ್ಲ. ಕಾಸ್ಟ್ಯೂಮ್​ ಮತ್ತು ಮೇಕಪ್​ಗೆ ಹೇಗೋ ವ್ಯವಸ್ಥೆ ಮಾಡಿಕೊಂಡು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ ನಂತರವೇ ಅವರು ಮತ್ತು ಅವರ ಇಡೀ ತಂಡ ನಿಟ್ಟುಸಿರು ಬಿಟ್ಟಿದ್ದು. ಇಷ್ಟೆಲ್ಲ ಆದರೂ ಕೂಡ ಪೂಜಾ ಹೆಗ್ಡೆ ಅವರು ನೂರಾರು ಕ್ಯಾಮೆರಾಗಳ ಎದುರಿನಲ್ಲಿ ಕೂಲ್​ ಆಗಿ ಕಾಣಿಸುತ್ತಿದ್ದರು ಎಂಬುದು ಗಮನಿಸಬೇಕಾದ ವಿಚಾರ.

ಇದನ್ನೂ ಓದಿ
Image
ಹ್ಯಾಟ್ರಿಕ್ ಸೋಲಿನ ಬಗ್ಗೆ ಪೂಜಾ ಹೆಗ್ಡೆಗೆ ಇಲ್ಲ ಬೇಸರ; ಮೊದಲ ಬಾರಿಗೆ ಮೌನ ಮುರಿದ ನಟಿ
Image
ಗುಲಾಬಿ ಬಣ್ಣದ ಗೌನ್​ ಧರಿಸಿ ಕಾನ್​ ಚಿತ್ರೋತ್ಸವದಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ; ಫೋಟೋ ವೈರಲ್​
Image
Cannes 2022: ಕಾನ್ ಚಿತ್ರೋತ್ಸವದಲ್ಲಿ ಭಾರತೀಯ ಚಿತ್ರರಂಗಕ್ಕೆ ಗೌರವ; ಮೆಚ್ಚುಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ
Image
ಎಷ್ಟೇ ಸಿನಿಮಾ ಸೋತ್ರೂ ಪೂಜಾ ಹೆಗ್ಡೆಗೆ ಸಿಕ್ತಿದೆ ಹೊಸ ಆಫರ್ಸ್​; ಈಗ ವಿಜಯ್​ ಜತೆ ‘ಜನ ಗಣ ಮನ’

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿರುವ ಪೂಜಾ ಹೆಗ್ಡೆ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಒಂದು ಕಾಲದಲ್ಲಿ ಬ್ಯಾಕ್​ ಟು ಬ್ಯಾಕ್​ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದ ಅವರ ಬದುಕಿನಲ್ಲಿ ಈಗ ಯಾಕೋ ಕೊಂಚ ಅದೃಷ್ಟ ಕೈಕೊಟ್ಟಿದೆ. ಅವರು ನಟಿಸಿದ ‘ರಾಧೆ ಶ್ಯಾಮ್​’, ‘ಬೀಸ್ಟ್​’ ಮತ್ತು ‘ಆಚಾರ್ಯ’ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಿಲ್ಲ. ಆದರೂ ಕೂಡ ಪೂಜಾ ಹೆಗ್ಡೆ ಅವರ ಡಿಮ್ಯಾಂಡ್​ ಕಮ್ಮಿ ಆಗಿಲ್ಲ. ಸಲ್ಮಾನ್​ ಖಾನ್​ ನಟನೆಯ ‘ಕಭಿ ಈದ್​ ಕಭಿ ದಿವಾಲಿ’ ಚಿತ್ರಕ್ಕೆ ಅವರು ನಾಯಕಿ ಆಗಿದ್ದಾರೆ. ಇತ್ತೀಚೆಗಷ್ಟೇ ಆ ಸಿನಿಮಾದ ಶೂಟಿಂಗ್​ ಆರಂಭ ಆಗಿತ್ತು. ಅದರ ನಡುವೆ ಬ್ರೇಕ್​ ಪಡೆದುಕೊಂಡು ಕಾನ್​ ಚಿತ್ರೋತ್ಸವದ ಸಲುವಾಗಿ ಪೂಜಾ ಹೆಗ್ಡೆ ಫ್ರಾನ್ಸ್​ಗೆ ತೆರಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ