AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನನ್ನು ತೆಗೆದು ಹಾಕಲಾಯಿತು’; ಬಿಗ್ ಬಜೆಟ್​ ಸಿನಿಮಾದಿಂದ ಹೊರಗಿಟ್ಟಿದ್ದಕ್ಕೆ ಅಕ್ಷಯ್ ಬೇಸರ

ಅಕ್ಷಯ್ ಕುಮಾರ್ ಅವರು ಭೂಲ್ ಭುಲಯ್ಯ 2 ಮತ್ತು 3 ರಲ್ಲಿ ನಟಿಸದಿರುವುದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ಅವರನ್ನು ಚಿತ್ರದಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಚಿತ್ರದ ನಿರ್ದೇಶಕ ಅನೀಸ್ ಬಾಜ್ಮಿ ಅವರು ಅಕ್ಷಯ್ ಅವರೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದು, ಭವಿಷ್ಯದಲ್ಲಿ ಅವರೊಂದಿಗೆ ಚಿತ್ರ ನಿರ್ಮಿಸುವ ಬಗ್ಗೆ ಚರ್ಚಿಸಿದ್ದಾರೆ. ಭೂಲ್ ಭುಲಯ್ಯ ಸರಣಿಯ ಯಶಸ್ಸು ಮತ್ತು ಅಕ್ಷಯ್ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ.

‘ನನ್ನನ್ನು ತೆಗೆದು ಹಾಕಲಾಯಿತು’; ಬಿಗ್ ಬಜೆಟ್​ ಸಿನಿಮಾದಿಂದ ಹೊರಗಿಟ್ಟಿದ್ದಕ್ಕೆ ಅಕ್ಷಯ್ ಬೇಸರ
ಅಕ್ಷಯ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 23, 2025 | 11:00 AM

Share

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನ ಸ್ಟಾರ್ ಹೀರೋ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ವರ್ಷಕ್ಕೆ ಮೂರರಿಂದ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತವೆ. ಅವರ ಸಿನಿಮಾಗಳು ಸತತ ಸೋಲು ಕಂಡರೂ ಸಿನಿಮಾ ಮಡೋದನ್ನು ಮಾತ್ರ ಅವರು ನಿಲ್ಲಿಸಿಲ್ಲ. ಅವರು ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿಸಿದ್ದರು. ಆದರೆ, ‘ಭೂಲ್ ಭುಲಯ್ಯ’ ಎರಡು ಹಾಗೂ ಮೂರನೇ ಭಾಕ್ಕೆ ಅಕ್ಷಯ್ ಕುಮಾರ್ ಬದಲು ಕಾರ್ತಿಕ್ ಆರ್ಯನ್ ನಟಿಸಿದರು. ಈ ಬಗ್ಗೆ ಅಕ್ಷಯ್ ಉತ್ತರಿಸಿದ್ದಾರೆ.

ಅಕ್ಷಯ್ ಕುಮಾರ್ ಅವರು ಬಾಲಿವುಡ್​ನ ಸ್ಟಾರ್ ನಟ ಹೌದು. ಆದರೆ, ಅವರ ಸಿನಿಮಾಗಳು ಹೀನಾಯ ಕಲೆಕ್ಷನ್ ಮಾಡುತ್ತಿವೆ. ನಿರ್ಮಾಪಕರಿಗೆ ಅವರಿಂದ ನಷ್ಟವೇ ಹೆಚ್ಚು. ಅಲ್ಲದೆ ಅವರು ದೊಡ್ಡ ಮೊತ್ತದಲ್ಲಿ ಸಂಭಾವನೆ ಪಡೆಯುತ್ತಾರೆ. ಈ ಕಾರಣದಿಂದಲೇ ಅವರನ್ನು ‘ಭೂಲ್ ಭುಲಯ್ಯ 2’ ಚಿತ್ರದಿಂದ ಹೊರಕ್ಕೆ ಇಡಲಾಯಿತು ಎನ್ನುವ ಮಾತಿದೆ. ಈ ಬಗ್ಗೆ ಕೊನೆಗೂ ಅಕ್ಷಯ್ ಮೌನ ಮುರಿದಿದ್ದಾರೆ.

ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ಅವಕಾಶ ಪಡೆದರು. ಈ ವೇಳೆ ಓರ್ವ ಅಭಿಮಾನಿ, ‘ನೀವಿಲ್ಲ ಎಂಬ ಕಾರಣಕ್ಕೆ ಭೂಲ್ ಬುಲಯ್ಯ 2 ಹಾಗೂ ‘ಭೂಲ್ ಭುಲಯ್ಯ 3 ಚಿತ್ರವನ್ನು ವೀಕ್ಷಿಸಿಲ್ಲ’ ಎಂದರು. ಇದಕ್ಕೆ ಅಕ್ಷಯ್ ಉತ್ತರಿಸಿ, ‘ಅವರು ನನ್ನನ್ನು ತೆಗೆದು ಹಾಕಿದರು, ಅಷ್ಟೇ’ ಎಂದಿದ್ದಾರೆ. ಅಕ್ಷಯ್ ಕುಮಾರ್​ಗೆ ಈ ಬಗ್ಗೆ ಬೇಸರ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ 18 ಶೂಟ್​ಗೆ ತಡವಾಗಿ ಬಂದ ಸಲ್ಮಾನ್; ಸಿಟ್ಟಿನಿಂದ ಹೊರ ನಡೆದ ಅಕ್ಷಯ್ ಕುಮಾರ್?

1993ರಲ್ಲಿ ಬಂದ ಮಲಯಾಳಂನ ‘ಮಣಿಚಿತ್ರತಳು’ ಸಿನಿಮಾದ ರಿಮೇಕ್ ಆಗಿದೆ. ಇದನ್ನು ಹಿಂದಿಗೆ ‘ಭೂಲ್ ಭುಲಯ್ಯ’ ಹೆಸರಲ್ಲಿ ರಿಮೇಕ್ ಮಾಡಲಾಯಿತು. ಅಕ್ಷಯ್ ಕುಮಾರ್ ಅವರು ಡಾಕ್ಟರ್ ಆದಿತ್ಯ ಶ್ರಿವಾಸ್ತವ್ ಹೆಸರಿನ ಪಾತ್ರ ಮಾಡಿದ್ದರು. ಆದರೆ, ಎರಡನೇ ಪಾರ್ಟ್​ನಲ್ಲಿ ಅವರ ಬದಲು ಕಾರ್ತಿಕ್ ಬಂದರು. ಈ ಚಿತ್ರ ಹಿಟ್ ಆಯಿತು. ಮೂರನೇ ಪಾರ್ಟ್​ ವಿಮರ್ಶೆಯಲ್ಲಿ ಸೋತಿದೆ. ಆದರೆ, ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಈ ಚಿತ್ರದ ನಿರ್ದೇಶಕ ಅನೀಸ್ ಬಾಜ್ಮಿ ಅವರು ಅಕ್ಷಯ್ ಜೊತೆ ಒಳ್ಳೆಯ ಗೆಳೆತನ ಇದ್ದು ಮುಂದಿನ ದಿನಗಳಲ್ಲಿ ಸಿನಿಮಾ ಮಾಡೋದಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:59 am, Thu, 23 January 25

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!